➤➤ Big Breaking News ಅಯೋಧ್ಯೆ ತೀರ್ಪಿಗೆ ಮುಹೂರ್ತ ಫಿಕ್ಸ್ ➤ ನಾಳೆ ಬೆಳಿಗ್ಗೆ 10.30 ಕ್ಕೆ ಅಂತಿಮ ತೀರ್ಪು



(ನ್ಯೂಸ್ ಕಡಬ) newskadaba.com ನವದೆಹಲಿ, ನ.08. ಅಯೋಧ್ಯೆಯ ರಾಮಮಂದಿರ ಮತ್ತು ಬಾಬರಿ ಮಸೀದಿ ವಿವಾದದ ಕುರಿತು ವಿಚಾರಣೆ ಮುಗಿಸಿರುವ ಸುಪ್ರೀಂಕೋರ್ಟ್​ ಶನಿವಾರ ಬೆಳಿಗ್ಗೆ 10.30ಕ್ಕೆ ತೀರ್ಪು ನೀಡಲಿದೆ.





ಅಯೋಧ್ಯೆಯ ತೀರ್ಪು ಮುಂದಿನ ಒಂದು ವಾರದಲ್ಲಿ ನೀಡಬಹುದೆಂದು ಹೇಳಲಾಗಿತ್ತಾದರೂ, ಶನಿವಾರ ಬೆಳಿಗ್ಗೆಯೇ ಸುಪ್ರೀಂಕೋರ್ಟ್​ನ ಮುಖ್ಯ ನ್ಯಾಯಮೂರ್ತಿ ರಂಜನ್​ ಗೊಗೊಯ್​ ನೇತೃತ್ವದ ನ್ಯಾಯ ಪೀಠವು ತೀರ್ಪು ಹೊರಡಿಸಲಿದೆ. ಆ ಪ್ರಯುಕ್ತ ಉತ್ತರ ಪ್ರದೇಶದಲ್ಲಿ ಹಾಗೂ ದೇಶಾದ್ಯಂತ ಕಟ್ಟೆಚ್ಚರ ವಹಿಸಲಾಗಿದೆ. ಆಯಕಟ್ಟಿನ ಪ್ರದೇಶಗಳಲ್ಲಿ ಹೆಚ್ಚಿನ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿದೆ. ತೀರ್ಪು ಯಾರ ಪರವಾಗಿ ಬಂದರೂ, ಅದನ್ನು ಸಂಯಮದಿಂದ ಸ್ವೀಕರಿಸುವಂತೆ ಉಭಯ ಧರ್ಮದ ಮುಖಂಡರೂ ಈಗಾಗಲೇ ತೀರ್ಮಾನಿಸಿದ್ದಾರೆ.






error: Content is protected !!
Scroll to Top