ಪಾಕ್ ನಿಂದ ಮತ್ತೆ ಕದನ ವಿರಾಮ ಉಲ್ಲಂಘನೆ ➤ ಇಬ್ಬರು ಯೋಧರು ಹುತಾತ್ಮ

(ನ್ಯೂಸ್ ಕಡಬ) newskadaba.com ಜಮ್ಮು ಕಾಶ್ಮೀರ, ಅ.20. ಮತ್ತೆ ಕದನ ವಿರಾಮ ಉಲ್ಲಂಘಿಸಿ ಗುಂಡಿನ ದಾಳಿ ನಡೆಸಿರುವ ಪಾಕಿಸ್ತಾನದ ಪಾಪಿ ಕೆಲಸದಿಂದಾಗಿ ಇಬ್ಬರು ಯೋಧರು ಹುತಾತ್ಮರಾದ ಘಟನೆ ಜಮ್ಮು ಕಾಶ್ಮೀರದಲ್ಲಿ ಭಾನುವಾರದಂದು ನಡೆದಿದೆ.

ಭಾರತ – ಪಾಕ್ ಗಡಿಯ ಕುಪ್ವಾರ ಎಂಬಲ್ಲಿ ಅನಿರೀಕ್ಷಿತ ಗುಂಡಿನ ದಾಳಿಯಿಂದ ಇಬ್ಬರು ಯೋಧರು ಹುತಾತ್ಮರಾದುದಲ್ಲದೆ, ಓರ್ವ ನಾಗರಿಕ ಮೃತಪಟ್ಟಿದ್ದು, ಮತ್ತಿಬ್ಬರು ಗಾಯಗೊಂಡಿದ್ದಾರೆ. ಶನಿವಾರ ರಾತ್ರಿಯಿಂದ ಆರಂಭಗೊಂಡ ಗುಂಡಿನ ಸುರಿಮಳೆಯು ಭಾನುವಾರ ಬೆಳಗ್ಗಿನವರೆಗೂ ನಡೆದಿದ್ದು, ಮೂವರು ಮೃತರಾಗುವುದರೊಂದಿಗೆ ಅಂತ್ಯಗೊಂಡಿದೆ ಎನ್ನಲಾಗಿದೆ.

Also Read  ಚಲಿಸುತ್ತಿದ್ದ ಬಸ್ ನ ಚಕ್ರದಡಿ ಸಿಲುಕಿ ಕಾಲೇಜು ವಿದ್ಯಾರ್ಥಿ ಮೃತ್ಯು..!

error: Content is protected !!
Scroll to Top