ಪಾಕ್ ನಿಂದ ಮತ್ತೆ ಕದನ ವಿರಾಮ ಉಲ್ಲಂಘನೆ ➤ ಇಬ್ಬರು ಯೋಧರು ಹುತಾತ್ಮ

(ನ್ಯೂಸ್ ಕಡಬ) newskadaba.com ಜಮ್ಮು ಕಾಶ್ಮೀರ, ಅ.20. ಮತ್ತೆ ಕದನ ವಿರಾಮ ಉಲ್ಲಂಘಿಸಿ ಗುಂಡಿನ ದಾಳಿ ನಡೆಸಿರುವ ಪಾಕಿಸ್ತಾನದ ಪಾಪಿ ಕೆಲಸದಿಂದಾಗಿ ಇಬ್ಬರು ಯೋಧರು ಹುತಾತ್ಮರಾದ ಘಟನೆ ಜಮ್ಮು ಕಾಶ್ಮೀರದಲ್ಲಿ ಭಾನುವಾರದಂದು ನಡೆದಿದೆ.

ಭಾರತ – ಪಾಕ್ ಗಡಿಯ ಕುಪ್ವಾರ ಎಂಬಲ್ಲಿ ಅನಿರೀಕ್ಷಿತ ಗುಂಡಿನ ದಾಳಿಯಿಂದ ಇಬ್ಬರು ಯೋಧರು ಹುತಾತ್ಮರಾದುದಲ್ಲದೆ, ಓರ್ವ ನಾಗರಿಕ ಮೃತಪಟ್ಟಿದ್ದು, ಮತ್ತಿಬ್ಬರು ಗಾಯಗೊಂಡಿದ್ದಾರೆ. ಶನಿವಾರ ರಾತ್ರಿಯಿಂದ ಆರಂಭಗೊಂಡ ಗುಂಡಿನ ಸುರಿಮಳೆಯು ಭಾನುವಾರ ಬೆಳಗ್ಗಿನವರೆಗೂ ನಡೆದಿದ್ದು, ಮೂವರು ಮೃತರಾಗುವುದರೊಂದಿಗೆ ಅಂತ್ಯಗೊಂಡಿದೆ ಎನ್ನಲಾಗಿದೆ.

error: Content is protected !!

Join the Group

Join WhatsApp Group