ಸಿದ್ದರಾಮಯ್ಯರನ್ನು ಯುದ್ದರಾಮಯ್ಯ ಎಂದು ಬಣ್ಣಿಸಿದ ತೆಲುಗು ಚಾನೆಲ್

(ನ್ಯೂಸ್ ಕಡಬ) newskadaba.com ಆಂಧ್ರಪ್ರದೇಶ, ಆ.19. ಕರ್ನಾಟಕ ರಾಜ್ಯದ ಮುಖ್ಯಮಂತ್ರಿ ಸಿದ್ಧರಾಮಯ್ಯರನ್ನು ಎದುರಾಳಿಗಳು ಸಾಮಾಜಿಕ ಜಾಲತಾಣಗಳಲ್ಲಿ ನಿದ್ದೆರಾಮಯ್ಯ ಎಂದು ಗೇಲಿ ಮಾಡುವುದರ ನಡುವೆ ಸಿದ್ಧರಾಮಯ್ಯರು ಕರ್ನಾಟಕದ ಗಡಿಯನ್ನೂ ದಾಟಿ ಸದ್ದುಮಾಡುತ್ತಿದ್ದಾರೆ.

ಇಂದಿರಾ ಕ್ಯಾಂಟೀನ್ ಉದ್ಘಾಟನೆ ಸಂದರ್ಭದ ಅವರ ಭಾಷಣ ಮತ್ತು ಕಳೆದ ಆರು ತಿಂಗಳಲ್ಲಿ ಸಿದ್ಧರಾಮಯ್ಯ ಎದುರಾಳಿಗಳಲ್ಲಿ ಹುಟ್ಟಿಸಿರುವ ನಡುಕವನ್ನು ಬಿಡಿಬಿಡಿಯಾಗಿ ವಿವರಿಸಿದ ತೆಲುಗು ಚಾನಲೊಂದು ಸಿದ್ಧರಾಮಯ್ಯ ಅವರನ್ನು ಯುದ್ಧರಾಮಯ್ಯ ಎಂದು ಬಣ್ಣಿಸಿದೆ. ಕನ್ನಡ ಧ್ವಜ, ವೀರಶೈವ ಪ್ರತ್ಯೇಕ ಧರ್ಮ, ಗಡಿ ತಕರಾರು, ವಿವಿಧ ಆಂತರಿಕ ಭಿನ್ನಾಭಿಪ್ರಾಯಗಳು, ವಿರೋಧ ಪಕ್ಷದ ಕುಹಕ ಮಾತುಗಳನ್ನೆಲ್ಲ ನಿಭಾಯಿಸಿದ ರೀತಿ ಹಾಗೂ ಇಂದಿರಾ ಕ್ಯಾಂಟೀನ್ ಉದ್ಘಾಟನೆ ಸಂದರ್ಭದ ಅವರ ಭಾಷಣವನ್ನು ತೆಲುಗಿನ ABN ಎನ್ನುವ ನ್ಯೂಸ್ ಚಾನೆಲ್ ಯುದ್ಧರಾಮಯ್ಯ ಎಂದು ಬಣ್ಣಿಸಿದೆ.

error: Content is protected !!
Scroll to Top