(ನ್ಯೂಸ್ ಕಡಬ) newskadaba.com, ಜೂ.08: ಕೇರಳದ ಕಣ್ಣೂರು ಜಿಲ್ಲೆಯ ಕೊಟ್ಟಿಯೂರು ದೇವಸ್ಥಾನದ ‘ವೈಶಾಖ ಮಹೋತ್ಸವ‘ದಲ್ಲಿ ಭಕ್ತರ ನಿಯಂತ್ರಣ ತಪ್ಪಿ ನೂಕುನುಗ್ಗಲು ಉಂಟಾಗಿದೆ.ಕರ್ನಾಟಕದ ಭಕ್ತರನ್ನು ತಳ್ಳುವುದು ಹಾಗೂ ಭದ್ರತಾ ಸಿಬ್ಬಂದಿ ಅಸಭ್ಯವಾಗಿ ವರ್ತಿಸುತ್ತಿರುವ ವಿಡಿಯೋಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿವೆ.
1,000 ರೂ. ವಿಶೇಷ ಟಿಕೆಟ್ ಪಡೆದರೂ ಸೂಕ್ತ ದರ್ಶನ ನೀಡುತ್ತಿಲ್ಲ ಮತ್ತು ಕನ್ನಡಿಗರಿಗೆ ಗೌರವ ಸಿಗುತ್ತಿಲ್ಲ ಎಂದು ಭಕ್ತರು ಕಿಡಿಕಾರಿದ್ದಾರೆ.ದೇವಸ್ಥಾನದ ಆಡಳಿತ ಮಂಡಳಿಯ ಈ ಧೋರಣೆಯಿಂದ ಬೇಸತ್ತಿರುವ ಕನ್ನಡಿಗರು, “ಕರ್ನಾಟಕದ ಭಕ್ತರು ಸದ್ಯಕ್ಕೆ ಯಾರೂ ಇಲ್ಲಿಗೆ ಬರಬೇಡಿ” ಎಂದು ಮನವಿ ಮಾಡುತ್ತಿದ್ದಾರೆ.









