(ನ್ಯೂಸ್ ಕಡಬ) newskadaba.com ಕಡಬ, ಜು. 02. ಕಡಬ ತಾಲೂಕಿನ ಕೋಡಿoಬಾಳ ಗ್ರಾಮದ ಮೂರಾಜೆ ಅಂಗನವಾಡಿ ಕೇಂದ್ರವೊಂದರಲ್ಲಿನ ಪುಟಾಣಿ ಮಕ್ಕಳು ಮಳೆಗಾಲದಲ್ಲಿ ಒದ್ದೆಯಾಗಿಕೊಂಡು ಶೌಚಾಲಯಕ್ಕೆ ಹೋಗುತ್ತಿದ್ದು, ಶೌಚಾಲಯಕ್ಕೆ ತೆರಳುವಲ್ಲಿ ಮೇಲ್ಛಾವಣಿ ಮತ್ತು ನೆಲಕ್ಕೆ ಕಾಂಕ್ರೀಟ್ ಹಾಕುವಂತೆ ಕಡಬ ಪಟ್ಟಣ ಪಂಚಾಯತ್ ಮುಖ್ಯಾಧಿಕಾರಿಗೆ ಪತ್ರದ ಮೂಲಕ ಮನವಿ ಮಾಡಲಾಯಿತು.
ಈ ಸಂದರ್ಭ ಕಡಬ ಬ್ಲಾಕ್ ಕಾಂಗ್ರೆಸ್ ಉಪಾಧ್ಯಕ್ಷ ಡೆನ್ನಿಸ್ ಫೆರ್ನಾಂಡಿಸ್, ಅಂಗನವಾಡಿ ಶಿಕ್ಷಕಿ ವಿಮಲಾ ಮತ್ತು ಮುರಳಿ ಮೂರಾಜೆ ಜೊತೆಗಿದ್ದರು.









