News Kadaba

ಕಾರು ಖರೀದಿದಾರರಿಗೆ ವರ್ಷಾಂತ್ಯದ ಆಫರ್ ► ಕೇವಲ ಒಂದು ರೂ. ನೀಡಿ ಟಾಟಾ ಕಾರು ಮನೆಗೊಯ್ಯುವ ಅವಕಾಶ

(ನ್ಯೂಸ್ ಕಡಬ) newskadaba.com ನವದೆಹಲಿ, ಡಿ.11. ಈ ವರ್ಷ ಹೊಸ ಕಾರು ಖರೀದಿಸಲು ಯೋಜನೆ ರೂಪಿಸಿರುವವರಿಗೆ ಸಂತೋಷದ ವಿಷಯವೊಂದಿದ್ದು, ಟಾಟಾ ಮೋಟಾರ್ಸ್ ಕಂಪನಿಯು ಭಾರತದ ಕಾರು ಖರೀದಿದಾರರಿಗೆ ವರ್ಷಾಂತ್ಯದ ಆಫರ್ ಮೂಲಕ ಕೇವಲ 1.00 ರೂ.ನಲ್ಲಿ ಕಾರನ್ನು ನೀಡಲು ಮುಂದಾಗಿದೆ. ತನ್ನ ‘ಮೆಗಾ ಆಫರ್ ಮ್ಯಾಕ್ಸ್ ಸೆಲೆಬ್ರೇಷನ್ ಕ್ಯಾಂಪೇನ್’ ಅಡಿಯಲ್ಲಿ, ಖರೀದಿದಾರರು ಕೇವಲ ರೂ. 1.00 ನೀಡುವ ಮೂಲಕ ಟಾಟಾ ಕಾರನ್ನು ತಮ್ಮ ಮನೆಗೆ ತೆಗೆದುಕೊಂಡು ಹೋಗಬಹುದಾಗಿದೆ. ಕೇವಲ ಒಂದು ರೂಪಾಯಿ ಡೌನ್‌ಪೇಮೆಂಟ್ ಮಾಡುವ ಮೂಲಕ ಟಾಟಾ […]

ಕಾರು ಖರೀದಿದಾರರಿಗೆ ವರ್ಷಾಂತ್ಯದ ಆಫರ್ ► ಕೇವಲ ಒಂದು ರೂ. ನೀಡಿ ಟಾಟಾ ಕಾರು ಮನೆಗೊಯ್ಯುವ ಅವಕಾಶ Read More »

ರಾಷ್ಟ್ರೀಯ ನ್ಯೂಸ್

ಸಹೋದ್ಯೋಗಿಯ ಕೊಲೆಗೆ ಸುಪಾರಿ ನೀಡಿದ ಆರೋಪ ► ಪತ್ರಕರ್ತ ರವಿ ಬೆಳಗೆರೆಗೆ ಜೈಲು

(ನ್ಯೂಸ್ ಕಡಬ) newskadaba.com ಬೆಂಗಳೂರು, ಡಿ.11. ಸಹೋದ್ಯೋಗಿಯ ಕೊಲೆಗೆ ಸುಪಾರಿ ನೀಡಿದ ಆರೋಪದಲ್ಲಿ ಹಾಯ್ ಬೆಂಗಳೂರು ಪತ್ರಿಕೆಯ ಸಂಪಾದಕ ರವಿ ಬೆಳಗೆರೆ ಅವರಿಗೆ ನ್ಯಾಯಾಂಗ ಬಂಧನ ವಿಧಿಸಲಾಗಿದೆ. ರವಿ ಬೆಳಗೆರೆ ಅವರನ್ನು ಒಂದನೇ ಎಸಿಎಂಎಂ ನ್ಯಾಯಾಲಯಕ್ಕೆ ಸಿಸಿಬಿ ಪೊಲೀಸರು ಇಂದು ಹಾಜರುಪಡಿಸಿದಾಗ ನ್ಯಾಯಾಧೀಶ ಜಗದೀಶ್ ಅವರು ರವಿಬೆಳೆಗೆರೆಗೆ ಡಿ.23 ರ ವರೆಗೆ ನ್ಯಾಯಾಂಗ ಬಂಧನ ವಿಧಿಸಿ ಆದೇಶಿಸಿದ್ದಾರೆ‌. ರವಿ ಬೆಳಗೆರೆಯವರ ವಕೀಲರ ತಂಡವು ಬುಧವಾರದಂದು ನ್ಯಾಯಾಲಯಕ್ಕೆ ಜಾಮೀನು ಕೋರಿ ಅರ್ಜಿ ಸಲ್ಲಿಸುವ ನಿರೀಕ್ಷೆ ಇದೆ.

ಸಹೋದ್ಯೋಗಿಯ ಕೊಲೆಗೆ ಸುಪಾರಿ ನೀಡಿದ ಆರೋಪ ► ಪತ್ರಕರ್ತ ರವಿ ಬೆಳಗೆರೆಗೆ ಜೈಲು Read More »

ಕರ್ನಾಟಕ

?ಎಚ್‌ಐವಿ/ಏಡ್ಸ್ ಪ್ರಕರಣ ► ದಕ್ಷಿಣ ಕನ್ನಡ ಜಿಲ್ಲೆಗೆ ಮೂರನೇ ಸ್ಥಾನ

(ನ್ಯೂಸ್ ಕಡಬ) newskadaba.com ಮಂಗಳೂರು, ಡಿ,11. ಎಚ್‌ಐವಿ ಪೀಡಿತ ರೋಗಿಗಳ ಸಂಖ್ಯೆ ಈ ವರ್ಷ ಶೇ 50 ರಷ್ಟು ಕಡಿಮೆಯಾಗಿದ್ದು, ರಾಜ್ಯದಲ್ಲಿ ದಕ್ಷಿಣ ಕನ್ನಡ ಜಿಲ್ಲೆ ಮೂರನೇ ಸ್ಥಾನದಲ್ಲಿದೆ ಎಂದು ಏಡ್ಸ್‌ ನಿಯಂತ್ರಣ ಅಧಿಕಾರಿ ಡಾ. ಬದ್ರುದ್ದೀನ್‌ ತಿಳಿಸಿದರು. ಪತ್ರಿಕಾಗೋಷ್ಠಿಯಲ್ಲಿ ಈ ವಿಷಯ ತಿಳಿಸಿದ ಅವರು, ಬಾಗಲಕೋಟೆ ಜಿಲ್ಲೆ ಮೊದಲ ಸ್ಥಾನದಲ್ಲಿದ್ದರೆ, ಬೆಂಗಳೂರು ಗ್ರಾಮಾಂತರ ಜಿಲ್ಲೆ ಎರಡನೇ ಸ್ಥಾನದಲ್ಲಿದೆ ಎಂದರು. ವರ್ಷದಿಂದ ವರ್ಷಕ್ಕೆ ರೋಗಿಗಳ ಸಂಖ್ಯೆ ಕಡಿಮೆಯಾಗುತ್ತಿದೆ. ಈ ವರ್ಷ ಜನವರಿಯಿಂದ ಅಕ್ಟೋಬರ್‌ವರೆಗೆ ಒಟ್ಟು 512 ಜನರಲ್ಲಿ ರೋಗ ಪತ್ತೆಯಾಗಿದೆ ಎಂದ

?ಎಚ್‌ಐವಿ/ಏಡ್ಸ್ ಪ್ರಕರಣ ► ದಕ್ಷಿಣ ಕನ್ನಡ ಜಿಲ್ಲೆಗೆ ಮೂರನೇ ಸ್ಥಾನ Read More »

ಕರಾವಳಿ

ಇಂದು ಹಸೆಮಣೆ ಏರಬೇಕಿದ್ದ ಯುವತಿ ನಾಪತ್ತೆ ► ಚಿನ್ನಾಭರಣಗಳೊಂದಿಗೆ ಪರಾರಿ

(ನ್ಯೂಸ್ ಕಡಬ) newskadaba.com ಮೂಡಬಿದಿರೆ, ಡಿ.11. ವಿದೇಶದಲ್ಲಿ ಉದ್ಯೋಗದಲ್ಲಿದ್ದ ಯುವಕನ ಜೊತೆ ಇಂದು ಹಸೆಮಣೆ ಏರಬೇಕಿದ್ದ ಯುವತಿಯೋರ್ವಳು ಮದುವೆ ಮನೆಯಿಂದಲೇ ಪರಾರಿಯಾದ ಘಟನೆ ಮೂಡಬಿದಿರೆಯಲ್ಲಿ ಭಾನುವಾರದಂದು ನಡೆದಿದೆ. ಇಲ್ಲಿನ ಧರೆಗುಡ್ಡೆ ನಿವಾಸಿ ಪ್ರೀಯಾಂಕಳಿಗೆ ವಿದೇಶದಲ್ಲಿ ನೌಕರಿ ಮಾಡುವ ಯುವಕನ ಜೊತೆ ಮದುವೆ ನಿಶ್ಚಯ ವಾಗಿತದ್ದು, ಸೋಮವಾರದಂದು ಮದುವೆ ನಡೆಯಲಿತ್ತು. ಅದರೆ ಪ್ರಿಯಾಂಕ ಮಾತ್ರ 10 ಪವನ್ ಚಿನ್ನಾಭರಣ, ಪಾಸ್ ಪೋರ್ಟ್, ಆಧಾರ್ ಕಾರ್ಡ್,ಇತರ ವಸ್ತುಗಳೊಂದಿಗೆ ಪರಾರಿಯಾಗಿದ್ದಾಳೆ. ತಂದೆ ಇಲ್ಲದ ಮಗಳನ್ನು ತಾಯಿ ಕಷ್ಟಪಟ್ಟು ಸಾಕಿದ್ದು ಈಗ ಮಗಳೇ

ಇಂದು ಹಸೆಮಣೆ ಏರಬೇಕಿದ್ದ ಯುವತಿ ನಾಪತ್ತೆ ► ಚಿನ್ನಾಭರಣಗಳೊಂದಿಗೆ ಪರಾರಿ Read More »

ಕರಾವಳಿ

ಮಂಗಳೂರು: ನದಿಗಿಳಿದ ಕಾರು ► ಯುವತಿಯರಿಬ್ಬರು ಅಪಾಯದಿಂದ ಪಾರು

(ನ್ಯೂಸ್ ಕಡಬ) newskadaba.com ಮಂಗಳೂರು, ಡಿ.10. ಮರವೂರು ವೆಟೆಂಡ್ ಡ್ಯಾಂ ಬಳಿಯ ರಸ್ತೆಯಲ್ಲಿ ಮಹಿಳೆಯೋರ್ವರು ಅತೀ ವೇಗದಲ್ಲಿ ಚಲಾಯಿಸುತ್ತಿದ್ದ ಕಾರೊಂದು ನದಿಗೆ ಬಿದ್ದ ಘಟನೆ ಭಾನುವಾರದಂದು ನಡೆದಿದೆ. ಘಟನೆಯಲ್ಲಿ ಎಜೆ ವೈದ್ಯಕೀಯ ಕಾಲೇಜಿನಲ್ಲಿ ಕಲಿಯುತ್ತಿರುವ ಕೇರಳ ಮೂಲದ ವಿದ್ಯಾರ್ಥಿನಿ ಪ್ರತೀಕ್ಷಾ ಮತ್ತು ಬಜಪೆ ಕೊಳಂಬೆ ನಿವಾಸಿ ನಿಶಾ ಆಚಾರ್ಯ ಅವರು ಸಣ್ಣಪುಟ್ಟ ಗಾಯಗಳೊಂದಿಗೆ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಕಾರು ನದಿಗೆ ಉರುಳುವುದನ್ನು ಕಂಡ ಸ್ಥಳೀಯರು ನದಿಯಿಂದ ಯುವತಿಯರನ್ನು ಮೇಲಕ್ಕೆತ್ತಿ ಪಾರು ಮಾಡಿದ್ದಾರೆ.

ಮಂಗಳೂರು: ನದಿಗಿಳಿದ ಕಾರು ► ಯುವತಿಯರಿಬ್ಬರು ಅಪಾಯದಿಂದ ಪಾರು Read More »

ಕರಾವಳಿ

ನೂಜಿಬಾಳ್ತಿಲ ಬೆಥನಿ ವಿದ್ಯಾಸಂಸ್ಥೆ ► ಬೆಳ್ಳಿಹಬ್ಬದ ಸಂಭ್ರಮ, ರಜತ ಮಹೋತ್ಸವ ಕಾರ್ಯಕ್ರಮ

(ನ್ಯೂಸ್ ಕಡಬ) newskadaba.com ಕಡಬ, ಡಿ.10. ನೂಜಿಬಾಳ್ತಿಲ ಬೆಥನಿ ಸಂಯುಕ್ತ ಪ.ಪೂ. ಮಹಾವಿದ್ಯಾಲಯದಲ್ಲಿ ಡಿ.7 ರಂದು ಬೆಳ್ಳಿಹಬ್ಬದ ಸಮಾರೋಪ ಸಮಾರಂಭ ಹಾಗೂ ವಾರ್ಷಿಕೋತ್ಸವ ಸಂಭ್ರಮ ಆಚರಿಸಲಾಯಿತು. ಪುತ್ತೂರು ಧರ್ಮಪ್ರಾಂತ್ಯದ ಧರ್ಮಾಧ್ಯಕ್ಷರಾದ ಪರಮಪುಜ್ಯ ಡಾ|ಗೀ| ವರ್ಗೀಸ್ ಮಾರ್ ಮಕಾರಿಯೋಸ್ ಕಾರ್ಯಕ್ರಮವನ್ನು ಜ್ಯೋತಿ ಬೆಳಗಿಸಿ ಉದ್ಘಾಟಿಸಿ ಆಶೀರ್ವಚನ ನೀಡಿ, ಶಿಕ್ಷಣವು ಸಮಭಾವನೆಯನ್ನು ಸದ್ಭಾವನೆಯನ್ನು ರೂಪಿಸಬೇಕು. ತನ್ನ ಬಾಲ್ಯ ಕೌಮಾರ್ಯಗಳನ್ನು ಇಲ್ಲಿಯೇ ಕಳೆದವನಾಗಿದ್ದು  ಈ ಪರಿಸರ ತುಳುನಾಡ ಸಂಸ್ಕೃತಿಯನ್ನು ಅಪಾರವಾಗಿ ಮೆಚ್ಚಿಕೊಂಡವನಾಗಿರುತ್ತೇನೆ. ವಿದ್ಯಾಸಂಸ್ಥೆಯನ್ನು ಸ್ಥಾಪಿಸಿ ಅದರ ಉನ್ನತಿಗಾಗಿ ಹಗಲಿರುಳು ದುಡಿದಿರುವ ಬೆಥನಿ

ನೂಜಿಬಾಳ್ತಿಲ ಬೆಥನಿ ವಿದ್ಯಾಸಂಸ್ಥೆ ► ಬೆಳ್ಳಿಹಬ್ಬದ ಸಂಭ್ರಮ, ರಜತ ಮಹೋತ್ಸವ ಕಾರ್ಯಕ್ರಮ Read More »

ಕರಾವಳಿ

ಕಡಬ: ಕಾಮಕೇಳಿಯಲ್ಲಿ ತೊಡಗಿದ್ದ ನಾಲ್ವರು ಪೊಲೀಸ್ ವಶಕ್ಕೆ ► ಇಬ್ಬರು ಪರಾರಿ

(ನ್ಯೂಸ್ ಕಡಬ) newskadaba.com ಕಡಬ, ಡಿ.09. ಒಬ್ಬಾಕೆ ಮಹಿಳೆಯೊಂದಿಗೆ ಆರು ಯುವಕರು ಕಾಮಕೇಳಿಯಲ್ಲಿ ತೊಡಗಿ ನಾಲ್ವರು ಕಡಬ ಪೊಲೀಸರ ಅತಿಥಿಗಳಾದ ಘಟನೆ ಠಾಣಾ ವ್ಯಾಪ್ತಿಯ ನಾಡೋಳಿ ಎಂಬಲ್ಲಿ ಶನಿವಾರದಂದು ನಡೆದಿದೆ. ನಾಡೋಳಿಯಲ್ಲಿ ಹರಿಯುವ ಗುಂಡ್ಯ ನದಿಯ ದಡದಲ್ಲಿ ಕಡಬ ಸಮೀಪದ ಕಳಾರದ ಕೆಲವು ಯುವಕರು ಮಜಾ ಉಡಾಯಿಸುವಾಗ ಸಿಕ್ಕಿಬಿದ್ದಿದ್ದಾರೆ. ಮಹಿಳೆಯನ್ನು ಕೋಲಾರ ಮೂಲದವರೆಂದು ಹೇಳಲಾಗಿದ್ದು. ಈಕೆ ಕಲ್ಲಡ್ಕದಲ್ಲಿ ತನ್ನ ತಂಗಿಯ ಮದುವೆಗೆಂದು ದೇಣಿಗೆ ಸಂಗ್ರಹಿಸುತ್ತಿದ್ದ ವೇಳೆ ಕಳಾರದ ಯುವಕರ ಕಣ್ಣಿಗೆ ಬಿದ್ದಿದ್ದಾಳೆ. ಈಕೆಯನ್ನು ಪಟಾಯಿಸಿದ ಯುವಕರು ತಮ್ಮೂರಿನ ಹತ್ತಿರ

ಕಡಬ: ಕಾಮಕೇಳಿಯಲ್ಲಿ ತೊಡಗಿದ್ದ ನಾಲ್ವರು ಪೊಲೀಸ್ ವಶಕ್ಕೆ ► ಇಬ್ಬರು ಪರಾರಿ Read More »

ಕರಾವಳಿ

ನಕಲಿ ಸಹಿ ಮಾಡಿ ಸಂಬಳ ಪಡೆದಿರುವ ಆರೋಪ ► ನೆಟ್ಟಣ KFDC ಸಿಬ್ಬಂದಿಯ ವಿರುದ್ಧ ಕ್ರಮಕ್ಕೆ ಆಗ್ರಹ

(ನ್ಯೂಸ್ ಕಡಬ) newskadaba.com ಕಡಬ, ಡಿ.08. ಕರ್ನಾಟಕ ಅರಣ್ಯ ಅಭಿವೃದ್ಧಿ ನಿಗಮದ ಸಬ್ರಹ್ಮಣ್ಯ ವಿಭಾಗದ ನೆಟ್ಟಣದಲ್ಲಿ ನಿಗಮದ ಸಿಬಂದಿಯೊಬ್ಬರು ನಕಲಿ ಸಹಿ ಮಾಡಿ ಇನ್ನೊಬ್ಬರ ಸಂಬಳ ಪಡೆದಿದ್ದು, ಅವರ ವಿರುದ್ಧ ತಕ್ಷಣ ಕ್ರಮ ಜರಗಿಸಬೇಕು ಎಂದು ಯುನೈಟೆಡ್ ಪ್ಲಾಂಟೇಷನ್ ವರ್ಕರ್ಸ್‌ ಯೂನಿಯನ್ನ ಸುಬ್ರಹ್ಮಣ್ಯ ಘಟಕದ ಪ್ರಧಾನ ಕಾರ್ಯದರ್ಶಿ ಸೆಲ್ವಕುಮಾರ್ ಅಗ್ರಹಿಸಿದರು. ಅವರು ಶುಕ್ರವಾರ ಕಡಬ ಪ್ರೆಸ್ ಕ್ಲಬ್‌ನಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ ಮರುನಾಟಿ ರಬ್ಬರ್ ತೋಟದಲ್ಲಿ ನಕಲಿ ಹಾಜರಿ ಹಾಕಿ ಸಂಬಳ ಸ್ವೀಕರಿಸಲಾಗಿದೆ ಎಂದು ಆರೋಪಿಸಿದರು. 2015-16 ನೇ

ನಕಲಿ ಸಹಿ ಮಾಡಿ ಸಂಬಳ ಪಡೆದಿರುವ ಆರೋಪ ► ನೆಟ್ಟಣ KFDC ಸಿಬ್ಬಂದಿಯ ವಿರುದ್ಧ ಕ್ರಮಕ್ಕೆ ಆಗ್ರಹ Read More »

ಕರಾವಳಿ

ಹೆತ್ತವರೊಂದಿಗೆ ಕೂಲಿ ಮಾಡುತ್ತಿದ್ದಾತ ಇದೀಗ ಕೊಣಾಜೆ ಠಾಣೆಯ ಎಸ್ಐ ► ಯುವಕರಿಗೆ ರೋಲ್ ಮಾಡೆಲ್ ಆದ ಸಾಧಕನ ಯಶೋಗಾಥೆ

(ನ್ಯೂಸ್ ಕಡಬ) newskadaba.com ಮಂಗಳೂರು, ಡಿ.09. ಸುಮಾರು 13 ವರ್ಷಗಳ ಹಿಂದೆ ಬಂಜರು ಭೂಮಿಯಲ್ಲಿ ಬೆಳೆ ಬೆಳೆಯಲಾಗದೆ ಬಾಗಲಕೋಟೆಯಿಂದ ಕುಟುಂಬ ಸಮೇತರಾಗಿ ಮಂಗಳೂರಿಗೆ ಬಂದ ಪೀರು ಪವಾರ್‌‌ ಎಂಬಾತ ತನ್ನ ಮಗನಿಂದಾಗಿ ಕನಸಲ್ಲೂ ಅಂದುಕೊಳ್ಳದ ಎತ್ತರಕ್ಕೆ ಬೆಳೆದು ನಿಂತಿದ್ದಾರೆಂದರೆ ನಿಜಕ್ಕೂ ಆಶ್ಚರ್ಯವಾದೀತು. ಹಾಗಾದರೆ ಅವರು ಮಾಡಿದ ಸಾಧನೆ ಏನು ಗೊತ್ತಾ? ಈ ಯಶೋಗಾಥೆಯ ಡೀಟೈಲ್ಸ್‌ ಇಲ್ಲಿದೆ. ಬಾಗಲಕೋಟೆ ಜಿಲ್ಲೆಯ ಬೀಳಗಿ ತಾಲೂಕಿನ ಸುನಗ ಗ್ರಾಮದ ಪೀರು ಪವಾರ್‌ ಹಾಗೂ ಸುಮಿತ್ರಾ ಅವರ ನಾಲ್ವರು ಮಕ್ಕಳಲ್ಲಿ ಓರ್ವನಾದ ರವಿ

ಹೆತ್ತವರೊಂದಿಗೆ ಕೂಲಿ ಮಾಡುತ್ತಿದ್ದಾತ ಇದೀಗ ಕೊಣಾಜೆ ಠಾಣೆಯ ಎಸ್ಐ ► ಯುವಕರಿಗೆ ರೋಲ್ ಮಾಡೆಲ್ ಆದ ಸಾಧಕನ ಯಶೋಗಾಥೆ Read More »

ಕರಾವಳಿ

ಡಿ.24 ರಂದು ಕಡಬ ಸಿ.ಎ. ಬ್ಯಾಂಕ್ ನೂತನ ಕಟ್ಟಡ ಉದ್ಘಾಟನೆ ► 2 ಕೋಟಿ ವೆಚ್ಚದಲ್ಲಿ ನಿರ್ಮಾಣವಾದ ‘ಯೋಗಕ್ಷೇಮ’ ಸಹಕಾರ ಸೌಧ

(ನ್ಯೂಸ್ ಕಡಬ) newskadaba.com ಕಡಬ, ಡಿ.08. ಕಡಬ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ನೂತನ ಕಟ್ಟಡ ‘ಯೋಗಕ್ಷೇಮ’ ಸಹಕಾರ ಸೌಧದ ಉದ್ಘಾಟನಾ ಸಮಾರಂಭ ಡಿಸೆಂಬರ್ 24 ನೇ ಭಾನುವಾರದಂದು ನಡೆಯಲಿದೆ ಎಂದು ಸಂಘದ ಅಧ್ಯಕ್ಷ ಸುಂದರ ಗೌಡ ಮಂಡೆಕರ ಹೇಳಿದರು. ಅವರು ಶುಕ್ರವಾರ ಕಟ್ಟಡದ ಉದ್ಘಾಟನಾ ಸಮಾರಂಭದ ಆಮಂತ್ರಣ ಪತ್ರಿಕೆಯನ್ನು ಕಡಬ ಶ್ರೀಕಂಠ ಸ್ವಾಮಿ ಮಹಾಗಣಪತಿ ದೇವಸ್ಥಾನದಲ್ಲಿ ಬಿಡುಗಡೆಗೊಳಿಸಿದ ಬಳಿಕ ಬ್ಯಾಂಕಿನ ಕಛೇರಿಯಲ್ಲಿ ನಡೆದ ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿದರು. ಸಂಘದ ನೂತನ ಕಟ್ಟಡ ಸುಮಾರು ಎರಡು ಕೋಟಿ

ಡಿ.24 ರಂದು ಕಡಬ ಸಿ.ಎ. ಬ್ಯಾಂಕ್ ನೂತನ ಕಟ್ಟಡ ಉದ್ಘಾಟನೆ ► 2 ಕೋಟಿ ವೆಚ್ಚದಲ್ಲಿ ನಿರ್ಮಾಣವಾದ ‘ಯೋಗಕ್ಷೇಮ’ ಸಹಕಾರ ಸೌಧ Read More »

ಕರಾವಳಿ
Scroll to Top