karnataka

ಕೊನೆಯ ಕ್ಷಣದಲ್ಲಿ ಅತಿವೃಷ್ಟಿ/ಪ್ರವಾಹ ಪೀಡಿತ ಪಟ್ಟಿಯಲ್ಲಿ ಸುಳ್ಯ ತಾಲೂಕು ಘೋಷಣೆ

(ನ್ಯೂಸ್ ಕಡಬ) newskadaba.com ಸುಳ್ಯ, ನ. 05: ತಿಂಗಳ ಹಿಂದೆ ಸರಕಾರದಿಂದ ಬಿಡುಗಡೆಗೊಂಡಿದ್ದ ಅತಿವೃಷ್ಟಿ/ಪ್ರವಾಹ ಪೀಡಿತ ತಾಲೂಕು ಪಟ್ಟಿಯಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯವನ್ನು ಹೊರತುಪಡಿಸಿ ಉಳಿದ ಎಲ್ಲಾ ತಾಲೂಕುಗಳನ್ನು ಆ ಪಟ್ಟಿಯಲ್ಲಿ ಸೇರ್ಪಡೆ ಮಾಡಲಾಗಿತ್ತು. ಇದೀಗ ಮತ್ತೆ ಸುಳ್ಯ ತಾಲೂಕನ್ನು ಸೇರ್ಪಡೆಗೊಳಿಸಿ ಸರಕಾರದಿಂದ ಆದೇಶ ಮಾಡಲಾಗಿದೆ.     ಸುಳ್ಯ ತಾಲೂಕಿನಲ್ಲಿ ಈ ಬಾರಿ ವಿಪರೀತ ಮಳೆಯಾಗಿದ್ದು, ಕೃಷಿ ಸೇರಿದಂತೆ, ಮನೆಗಳಿಗೂ ಹಾನಿಯಾಗಿತ್ತು. ಅತಿವೃಷ್ಟಿ ಪಟ್ಟಿಯಲ್ಲಿ ಸುಳ್ಯ ಸೇರದಿದ್ದುದರಿಂದ ತಾಲೂಕಿನಲ್ಲಿ ಆದ ನಷ್ಟಗಳಿಗೂ ಪರಿಹಾರ ಸಿಗದೆ ಸ್ಥಿತಿ […]

ಕೊನೆಯ ಕ್ಷಣದಲ್ಲಿ ಅತಿವೃಷ್ಟಿ/ಪ್ರವಾಹ ಪೀಡಿತ ಪಟ್ಟಿಯಲ್ಲಿ ಸುಳ್ಯ ತಾಲೂಕು ಘೋಷಣೆ Read More »

ಕರಾವಳಿ

ಸುಳ್ಯ :ನಗರ ಪಂಚಾಯತ್ ನೂತನ ಅಧ್ಯಕ್ಷ, ಉಪಾಧ್ಯಕ್ಷರ ಆಯ್ಕೆ

(ನ್ಯೂಸ್ ಕಡಬ) newskadaba.com ಬೆಂಗಳೂರು ನ. 05: ಸುಳ್ಯನಗರ ಪಂಚಾಯತ್ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಆಯ್ಕೆ ಪ್ರಕ್ರಿಯೆಯು ಇಂದು ನಡೆದಿದೆ. ಆಧ್ಯಕ್ಷ ಸ್ಥಾನವನ್ನು ವಿನಯ್ ಕುಮಾರ್ ಕುಂದಡ್ಕ ಅಲಂಕರಿಸಿದರೆ, ಉಪಾಧ್ಯಕ್ಷ ಸ್ಥಾನವನ್ನು ಸರೋಜಿನಿ ಪೆಲತ್ತಡ್ಕ ಮಾತ್ರ ನಾಮಪತ್ರ ಸಲ್ಲಿಸಿದ್ದರಿಂದ ಅವಿರೋಧವಾಗಿ ಆಯ್ಕೆಗೊಂಡಿದ್ದಾರೆ.     ಪಂಚಾಯತ್ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಆಯ್ಕೆ ಪ್ರಕ್ರಿಯೆಯ ಚುನಾವಣಾಧಿಕಾರಿಯಾಗಿ ತಹಶೀಲ್ದಾರ್ ಅನಂತ ಶಂಕರ್ ಕಾರ್ಯನಿರ್ವಹಿಸಿದರು. ಈ ಸಂದರ್ಭದಲ್ಲಿ ಶಾಸಕರಾದ ಎಸ್ ಅಂಗಾರ, ಉಪತಹಶೀಲ್ದಾರ್ ಚಂದ್ರಕಾಂತ್ ಕಂದಾಯ ನಿರೀಕ್ಷಕರು ಕೊರಗಪ್ಪ ಹೆಗಡೆ ಹಾಗೂ ನಗರ

ಸುಳ್ಯ :ನಗರ ಪಂಚಾಯತ್ ನೂತನ ಅಧ್ಯಕ್ಷ, ಉಪಾಧ್ಯಕ್ಷರ ಆಯ್ಕೆ Read More »

ಕರಾವಳಿ

ಬೆಳ್ತಂಗಡಿ :ಶ್ರವಣದೋಷದ ಕಂದಮ್ಮನ ಚಿಕಿತ್ಸೆಗೆ ಸಿಎಂ BSY ನಿಂದ ನೆರವು

(ನ್ಯೂಸ್ ಕಡಬ) newskadaba.com ಬೆಳ್ತಂಗಡಿ ನ. 05: ಬೆಳ್ತಂಗಡಿಯ ತಣ್ಣಿರು ಪಂತದಲ್ಲಿ ಶ್ರವಣದೋಷದಿಂದ ಮಾತನಾಡಲು ಸಾದ್ಯವಾಗದೆ ಸಮಸ್ಯೆ ಎದುರಿಸುತ್ತಿರುವ ಮೂರು ವರುಷ 7 ತಿಂಗಳ ಪುಟ್ಟ ಕಂದಮ್ಮನ ಚಿಕಿತ್ಸೆಗಾಗಿ ಸಿಎಂ ಬಿಎಸ್‍ವೈ ರವರು ವಿಶೇಷ ಪರಿಹಾರದಡಿಯಲ್ಲಿ 5 ಲಕ್ಷರೂ ಘೋಷಣೆ ಮಾಡಿದ್ದಾರೆ.       ತಣ್ಣೀರುಪಂತ ಗ್ರಾಮದ ದೇಸಿನ್ ಕೊಡಿ ರವಿ ಪೂಜಾರಿ ಅವರ ಮೂರು ವರುಷ 7 ತಿಂಗಳ ಪುಟ್ಟ ಕಂದಮ್ಮ ಆರಾಧ್ಯಳ ಚಿಕಿತ್ಸೆಗಾಗಿ ಇಂದು ಮಂಗಳೂರಿಗೆ ಆಗಮಿಸಿದ ಸಿಎಂ ಬಿ.ಎಸ್ ಯಡಿಯೂರಪ್ಪರವರನ್ನು ಶಾಸಕ

ಬೆಳ್ತಂಗಡಿ :ಶ್ರವಣದೋಷದ ಕಂದಮ್ಮನ ಚಿಕಿತ್ಸೆಗೆ ಸಿಎಂ BSY ನಿಂದ ನೆರವು Read More »

ಕರಾವಳಿ

ಸುರತ್ಕಲ್: ಇಂಜಿನ್ ವೈಫಲ್ಯಕ್ಕೊಳಗಾಗಿ ಸಮುದ್ರ ದಡ ಸೇರಿದ ಬೋಟ್

(ನ್ಯೂಸ್ ಕಡಬ) newskadaba.com ಸುರತ್ಕಲ್, ನ. 05: ದಕ್ಷಿಣ ಕನ್ನಡ ಜಿಲ್ಲೆಯ ಪಣಂಬೂರು ಚಿತ್ರಾಪುರ ಬಳಿ ಮೀನುಗಾರಿಕಾ ದೋಣಿಯೊಂದು ಇಂಜಿನ್ ವೈಫಲ್ಯಕ್ಕೊಳಗಾಗಿ ಸಮುದ್ರ ದಡ ಸೇರಿದ ಘಟನೆ  ನಡೆದಿದೆ.     ಇಂಜಿನ್ ವೈಫಲ್ಯ ಉಂಟಾಗಿ ಗಾಳಿಯ ರಭಸಕ್ಕೆ ಸಮುದ್ರದಂಡೆಗೆ ಬಂದು ಅಪ್ಪಳಿಸಿದ್ದು, ಶ್ರೀ ಮಾರುತಿ ಎಂಬ ಹೆಸರಿನ ಬೋಟ್ ಆಳ ಸಮುದ್ರ ಮೀನುಗಾರಿಕೆಗೆ ತೆರಳಿದ್ದ ವೇಳೆ ಘಟನೆ ಸಂಭವಿಸಿದೆ. ಬೋಟ್ ನಲ್ಲಿ ನಾಲ್ಕು ಜನ ಮೀನುಗಾರರಿದ್ದು, ಎಲ್ಲರೂ  ಪ್ರಾಣಾಪಾಯದಿಂದ ಪಾರಾಗಿದ್ದಾರೆ.    

ಸುರತ್ಕಲ್: ಇಂಜಿನ್ ವೈಫಲ್ಯಕ್ಕೊಳಗಾಗಿ ಸಮುದ್ರ ದಡ ಸೇರಿದ ಬೋಟ್ Read More »

ಕರಾವಳಿ

ಮಡಪ್ಪಾಡಿ ರಸ್ತೆ ಅಭಿವೃದ್ಧಿ ಮನವಿಗೆ ಸಚಿವ ಈಶ್ವರಪ್ಪ ಸ್ಪಂದನೆ ➤ 2 ಕೋಟಿ ರೂ. ಬಿಡುಗಡೆಗೆ ಮನವಿ

(ನ್ಯೂಸ್ ಕಡಬ) newskadaba.com ಸುಳ್ಯ, ನ. 05: ಮಡಪ್ಪಾಡಿ ಗ್ರಾಮದ ರಸ್ತೆ ಅಭಿವೃದ್ಧಿಗೆ ಹಲವು ವರ್ಷಗಳ ಕಾಲ ಬೇಡಿಕೆಯಾಗಿದ್ದು, ಇದೀಗ ಗ್ರಾಮೀಣಾಭಿವೃದ್ಧಿ ಸಚಿವ ಈಶ್ವರಪ್ಪ ನವರು ಸ್ಪಂದಿಸಿದ್ದಾರೆ. ರಸ್ತೆ ಅಭಿವೃದ್ಧಿಗೆ ಎರಡು ಕೋಟಿ ರೂ ಬಿಡುಗಡೆ ಮಾಡಲು ಅಧಿಕಾರಿಗಳಿಗೆ ಅವರು ಸೂಚಿಸಿದ್ದಾರೆ.     ಜನವರಿ ತಿಂಗಳಿನಲ್ಲಿ ಮಡಪ್ಪಾಡಿಯಲ್ಲಿ ನಡೆದ ಕಾರ್ಯನಿರತ ಪತ್ರಕರ್ತರ ಸಂಘದ ಗ್ರಾಮ ವಾಸ್ತವ್ಯದಲ್ಲಿ ರಸ್ತೆ ಸಮಸ್ಯೆ ಮತ್ತು ನೆಟ್ ವರ್ಕ್ ಸಮಸ್ಯೆ ಬಹುಬೇಡಿಕೆ ಇರುವುದರಿಂದ ಇಂದು ಮಂಗಳೂರಿನಲ್ಲಿ ನಡೆಯುತ್ತಿರುವ ರಾಜ್ಯ ಕಾರ್ಯಕಾರಣಿ ಸಭೆಗೆ

ಮಡಪ್ಪಾಡಿ ರಸ್ತೆ ಅಭಿವೃದ್ಧಿ ಮನವಿಗೆ ಸಚಿವ ಈಶ್ವರಪ್ಪ ಸ್ಪಂದನೆ ➤ 2 ಕೋಟಿ ರೂ. ಬಿಡುಗಡೆಗೆ ಮನವಿ Read More »

ಕರಾವಳಿ

ಕೋಡಿಂಬಾಳ: ವರದಿಗಾರ ಪ್ರಕಾಶ್ ಅವರಿಗೆ ಪಿತೃವಿಯೋಗ

(ನ್ಯೂಸ್ ಕಡಬ) newskadaba.com ಕಡಬ, ನ. 05: ಕೋಡಿಂಬಾಳ ಗ್ರಾಮದ ಗುಂಡಿಮಜಲು ನಿವಾಸಿ ಬೇಬಿ(63 ವ.) ಅವರು ಕಳೆದ ದಿನ ಹೃದಯಾಘಾತದಿಂದ ಮೃತಪಟ್ಟಿದ್ದಾರೆ.     ಹಲವಾರು ಸಮಯಗಳಿಂದ ಹೃದಯ ಸಂಬಂಧಿ ಕಾಯಿಲೆಗೆ ತುತ್ತಾಗಿದ್ದ ಅವರನ್ನು ಕಳೆದ ದಿನ ಅಸ್ವಸ್ಥಗೊಂಡ ಹಿನ್ನಲೆಯಲ್ಲಿ ಸಮುದಾಯ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಈ ವೇಳೆ ಅವರ ಮೃತಪಟ್ಟಿದ್ದಾರೆ. ಮೃತರು ಪತ್ನಿ ರೋಸಮ್ಮ, ಪುತ್ರರಾದ ಈಟಿವಿ ಭಾರತ್ ವೆಬ್ಸೈಟ್ನ ಕಡಬ, ಸುಳ್ಯ ವರದಿಗಾರ ಪ್ರಕಾಶ್ ಕೋಡಿಂಬಾಳ, ಪ್ರಸಾದ್, ಸೊಸೆಯಂದಿರು, ಮೊಮ್ಮಕ್ಕಳನ್ನು ಅಗಲಿದ್ದಾರೆ. ಮೃತರ ಅಂತ್ಯಸಂಸ್ಕಾರವು ಇಂದು

ಕೋಡಿಂಬಾಳ: ವರದಿಗಾರ ಪ್ರಕಾಶ್ ಅವರಿಗೆ ಪಿತೃವಿಯೋಗ Read More »

ಕರಾವಳಿ

ಉಡುಪಿಯಲ್ಲಿ ನಕಲಿ ದಂತ ವೈದ್ಯೆ ➤ ಆರೋಗ್ಯ ಇಲಾಖೆಯಿಂದ ಕ್ಲಿನಿಕ್ ಗೆ ಸೀಲ್

(ನ್ಯೂಸ್ ಕಡಬ) newskadaba.com ಉಡುಪಿ ನ. 05: ಕ್ಲಿನಿಕ್ ನಡೆಸುವ ಬದಲು ನಕಲಿ ದಂತ ವೈದ್ಯರೊಬ್ಬರು ನಗರದಲ್ಲಿ ನಡೆಸುತ್ತಿದ್ದ ಡೆಂಟಲ್ ಕ್ಲಿನಿಕ್ ಲ್ಯಾಬ್ ಅನ್ನು ಆರೋಗ್ಯ ಇಲಾಖೆಯ ಅಧಿಕಾರಿಗಳು ದಾಳಿ ನಡೆಸಿ ಸೀಲ್ ಮಾಡಿದ ಪ್ರಕರಣ ನಗರದ ಠಾಣೆಯಲ್ಲಿ ದಾಖಲಾಗಿದೆ.     ಉಡುಪಿ ಸಿಟಿ ನಿಲ್ದಾಣದಲ್ಲಿ ಖಾಸಗಿ ವೈದ್ಯಕೀಯ ಸಂಸ್ಥೆಗಳ ಅಧಿ ನಿಯಮ ಅಡಿಯಲ್ಲಿ ಶ್ವೇತಾ ಎಂಬುವವರಿಗೆ ಶಾಶ್ವತ್ ಡೆಂಟಲ್ ಕ್ಲಿನಿಕ್ ಲ್ಯಾಬ್ ಹೆಸರಿನ ವೈದ್ಯಕೀಯ ಸಂಸ್ಥೆಯನ್ನು ನಡೆಸಲು ಅನುಮತಿ ನೀಡಲಾಗಿತ್ತು. ಆದರೇ, ಇವರು ಕ್ಲಿನಿಕ್ ನಡೆಸುವ

ಉಡುಪಿಯಲ್ಲಿ ನಕಲಿ ದಂತ ವೈದ್ಯೆ ➤ ಆರೋಗ್ಯ ಇಲಾಖೆಯಿಂದ ಕ್ಲಿನಿಕ್ ಗೆ ಸೀಲ್ Read More »

ಕರಾವಳಿ

ಮಂಗಳೂರು: ಮಹತ್ವದ ಬಿಜೆಪಿ ರಾಜ್ಯ ಕಾರ್ಯಕಾರಣಿ ಸಭೆ

(ನ್ಯೂಸ್ ಕಡಬ) newskadaba.com ಮಂಗಳೂರು, ನ. 05: ಎರಡು ದಶಕಗಳ ನಂತರ ಬಿಜೆಪಿ ರಾಜ್ಯಕಾರಣಿ ಮಂಗಳೂರು ನಗರದ ರಮಣ ಪೈ ಸಭಾಂಗಣದಲ್ಲಿ ಇಂದು ಮೂಂಜಾನೆ ಸಿ.ಎಂ. ಯಡಿಯೂರಪ್ಪ ಸಹಿತ ರಾಜ್ಯ ಬಿಜೆಪಿ ನಾಯಕರ ಉಪಸ್ಥಿತಿಯಲ್ಲಿ ಕಾರ್ಯಕ್ರಮ ಪ್ರಾರಂಭಗೊಂಡಿತ್ತು.     ಕಾರ್ಯಕಾರಣಿಕೆಯ ಉದ್ಘಾಟನೆಯನ್ನು ಸಿ.ಎಂ.ಯಡಿಯೂರಪ್ಪನವರು ನೆರವೇರಿಸಿದರು. ಈ ಸಭೆಯು ಬೆಳಗ್ಗೆಯಿಂದ ಸಂಜೆ ವರೆಗೆ ನಡೆಯುತ್ತದೆ. ಕಾರ್ಯಕ್ರಮದಲ್ಲಿ ಬಿಜೆಪಿ ರಾಜ್ಯ ಅಧ್ಯಕ್ಷ ನಳಿನ್ ಕುಮಾರ್ ಕಟೀಲ್ ಅಧ್ಯಕ್ಷತೆ ವಹಿಸಿದ್ದರು. ಕೇಂದ್ರ ಸಚಿವರಾದ ಪ್ರಲ್ಹಾದ ಜೋಶಿ, ಡಿ.ವಿ ಸದಾನಂದ ಗೌಡ, ಉಪಮುಖ್ಯಮಂತ್ರಿ

ಮಂಗಳೂರು: ಮಹತ್ವದ ಬಿಜೆಪಿ ರಾಜ್ಯ ಕಾರ್ಯಕಾರಣಿ ಸಭೆ Read More »

ಕರಾವಳಿ

ಮಾಜಿ ಸಚಿವ, ಕಾಂಗ್ರೇಸ್ ಮುಖಂಡ ವಿನಯ್ ಕುಲಕರ್ಣಿ ಸಿಬಿಐ ವಶಕ್ಕೆ

(ನ್ಯೂಸ್ ಕಡಬ) newskadaba.com ಧಾರವಾಡ,  ನ. 05: 2016 ಜೂನ್ 15 ರಂದು ನಡೆದಿದ್ದ ಧಾರವಾಡ ಜಿ.ಪಂ. ಸದಸ್ಯ ಯೋಗೇಶ್ ಗೌಡ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಜಿ ಸಚಿವ ಹಾಗೂ ಕಾಂಗ್ರೇಸ್ ಮುಖಂಡ ವಿನಯ್ ಕುಲಕರ್ಣಿ ಅವರನ್ನು ಸಿಬಿಐ ಅಧಿಕಾರಿಗಳು ವಶಕ್ಕೆ ಪಡೆದುಕೊಂಡಿದ್ದಾರೆ.       ವಿನಯ್ ಕುಲಕರ್ಣಿ ಅವರನ್ನು ಧಾರವಾಡ ಉಪನಗರ ಠಾಣೆಗೆ ಕರೆದೊಯ್ದು ಅಲ್ಲಿ ವಿಚಾರಣೆ ನಡೆಸಿದ್ದಾರೆ. ಇದಕ್ಕೂ ಮುನ್ನ ಸೆಪ್ಟೆಂಬರ್ ಮಧ್ಯಭಾಗದಲ್ಲಿ ವಿನಯ್ ಕುಲಕರ್ಣಿ ಅವರ ಸಹೋದರ ವಿಜಯ್ ಕುಲಕರ್ಣಿ ಅವರನ್ನೂ ಸಿಬಿಐ

ಮಾಜಿ ಸಚಿವ, ಕಾಂಗ್ರೇಸ್ ಮುಖಂಡ ವಿನಯ್ ಕುಲಕರ್ಣಿ ಸಿಬಿಐ ವಶಕ್ಕೆ Read More »

ಕರ್ನಾಟಕ, ಕ್ರೈಮ್ ನ್ಯೂಸ್

ಸಿಎಂ BSY ಗೆ ಕಟೀಲು ದೇವಿಯ ಫಲಕ ನೀಡಲಿರುವ ನಳೀನ್ ಕುಮಾರ್ ಕಟೀಲ್

(ನ್ಯೂಸ್ ಕಡಬ) newskadaba.com ಮಂಗಳೂರು ನ. 05: ಇಂದು ಮಂಗಳೂರಿನಲ್ಲಿ ನಡೆಯಲಿರುವ ರಾಜ್ಯ ಬಿಜೆಪಿ ಕಾರ್ಯಕಾರಿಣಿ ಸಭೆಗೆ ಆಗಮಿಸಿರುವ ಸಿಎಂ ಬಿ. ಎಸ್ ಯಡಿಯೂರಪ್ಪ ರವರಿಗೆ , ಬಿಜೆಪಿ ರಾಜ್ಯಾಧ್ಯಕ್ಷರಾದ ನಳಿನ್ ಕುಮಾರ್ ಕಟೀಲ್ ಅವರು ಶ್ರೀ ದುರ್ಗಾಪರಮೇಶ್ವರಿಯ ಮೂರ್ತಿ ಇರುವ ಫಲಕವನ್ನು ನೀಡುವ ಮೂಲಕ ಗೌರವಿಸಲಿದ್ದಾರೆ. ಎರಡು ದಶಕಗಳ ನಂತರ ಬಿಜೆಪಿ ರಾಜ್ಯಕಾರಣಿ ಮಂಗಳೂರು ನಗರದ ರಮಣ ಪೈ ಸಭಾಂಗಣದಲ್ಲಿ ಇಂದು ಮೂಂಜಾನೆ ಸಿ.ಎಂ. ಯಡಿಯೂರಪ್ಪ ಸಹಿತ ರಾಜ್ಯ ಬಿಜೆಪಿ ನಾಯಕರ ಉಪಸ್ಥಿತಿಯಲ್ಲಿ ಕಾರ್ಯಕ್ರಮ ಪ್ರಾರಂಭಗೊಂಡಿತ್ತು. ಕಾರ್ಯಕಾರಣಿಕೆಯ ಉದ್ಘಾಟನೆಯನ್ನು

ಸಿಎಂ BSY ಗೆ ಕಟೀಲು ದೇವಿಯ ಫಲಕ ನೀಡಲಿರುವ ನಳೀನ್ ಕುಮಾರ್ ಕಟೀಲ್ Read More »

ಕರಾವಳಿ
Scroll to Top