ಸುರತ್ಕಲ್: ಇಂಜಿನ್ ವೈಫಲ್ಯಕ್ಕೊಳಗಾಗಿ ಸಮುದ್ರ ದಡ ಸೇರಿದ ಬೋಟ್

(ನ್ಯೂಸ್ ಕಡಬ) newskadaba.com ಸುರತ್ಕಲ್, . 05: ದಕ್ಷಿಣ ಕನ್ನಡ ಜಿಲ್ಲೆಯ ಪಣಂಬೂರು ಚಿತ್ರಾಪುರ ಬಳಿ ಮೀನುಗಾರಿಕಾ ದೋಣಿಯೊಂದು ಇಂಜಿನ್ ವೈಫಲ್ಯಕ್ಕೊಳಗಾಗಿ ಸಮುದ್ರ ದಡ ಸೇರಿದ ಘಟನೆ  ನಡೆದಿದೆ.

 

 

ಇಂಜಿನ್ ವೈಫಲ್ಯ ಉಂಟಾಗಿ ಗಾಳಿಯ ರಭಸಕ್ಕೆ ಸಮುದ್ರದಂಡೆಗೆ ಬಂದು ಅಪ್ಪಳಿಸಿದ್ದು, ಶ್ರೀ ಮಾರುತಿ ಎಂಬ ಹೆಸರಿನ ಬೋಟ್ ಆಳ ಸಮುದ್ರ ಮೀನುಗಾರಿಕೆಗೆ ತೆರಳಿದ್ದ ವೇಳೆ ಘಟನೆ ಸಂಭವಿಸಿದೆ. ಬೋಟ್ ನಲ್ಲಿ ನಾಲ್ಕು ಜನ ಮೀನುಗಾರರಿದ್ದು, ಎಲ್ಲರೂ  ಪ್ರಾಣಾಪಾಯದಿಂದ ಪಾರಾಗಿದ್ದಾರೆ.

 

 

Scroll to Top