karnataka

ಮಲ್ಪೆ ಬೀಚ್ ಗುತ್ತಿಗೆದಾರನ ಮನೆ, ಸಂಸ್ಥೆ ಮೇಲೆ ಇಡಿ ದಾಳಿ..! ➤ ಸುದೇಶ್ ಶೆಟ್ಟಿ!!

(ನ್ಯೂಸ್ ಕಡಬ)Newskadaba.com ಉಡುಪಿ,ಏ.20 ಮಲ್ಪೆ ಬೀಚ್ ನಿರ್ವಾಹಣಾ ಗುತ್ತಿಗೆದಾರ ಸುದೇಶ್ ಶೆಟ್ಟಿಯವರ ಮನೆ, ಗೆಸ್ಟ್ ಹೌಸ್, ಹೊಟೇಲ್, ಅಂಗಡಿಗಳ ಮೇಲೆ ಇಡಿ ಅಧಿಕಾರಿಗಳ ತಂಡ ಏಕಕಾಲದಲ್ಲಿ ದಾಳಿ ನಡೆಸಿ ಪರಿಶೀಲನೆ ನಡೆಸಿದೆ. ಸುದೇಶ್ ಶೆಟ್ಟಿ ನಿರ್ವಹಿಸುತ್ತಿರುವ ಮಲ್ಪೆ ಬೀಚ್‌ನಲ್ಲಿರುವ ಗೆಸ್ಟ್ ಹೌಸ್ ಕಚೇರಿ, ರೆಸ್ಟೋರೆಂಟ್, ಅಂಗಡಿ ಹಾಗೂ ಮನೆ ಮತ್ತು ಇತರ ಕಡೆಗಳಿಗೆ 10ರಿಂದ 12 ಮಂದಿ ಇಡಿ ಅಧಿಕಾರಿಗಳು ದಾಳಿ ನಡೆಸಿ ಪರಿಶೀಲನೆ ನಡೆಸಿದ್ದಾರೆ ಎಂದು ತಿಳಿದುಬಂದಿದೆ.      

ಮಲ್ಪೆ ಬೀಚ್ ಗುತ್ತಿಗೆದಾರನ ಮನೆ, ಸಂಸ್ಥೆ ಮೇಲೆ ಇಡಿ ದಾಳಿ..! ➤ ಸುದೇಶ್ ಶೆಟ್ಟಿ!! Read More »

ಕರ್ನಾಟಕ

ಪಿಎಸ್‌ಐ ನೇಮಕಾತಿ ಹಗರಣ, ವಿಚಾರಣೆಗೆ ಹೈಕೋರ್ಟ್ ತಡೆ..!

(ನ್ಯೂಸ್ ಕಡಬ)Newskadaba.com ಬೆಂಗಳೂರು,ಏ.20  ಪೊಲೀಸ್ ಸಬ್ ಇನ್ಸ್‌ಪೆಕ್ಟರ್ (ಪಿಎಸ್‌ಐ) ನೇಮಕಾತಿ ಹಗರಣದ ಕಿಂಗ್‌ಪಿನ್‌ ಆಗಿರುವ ರುದ್ರಗೌಡ ಪಾಟೀಲ್ ಅಲಿಯಾಸ್ ಆರ್.ಡಿ. ಪಾಟೀಲ್ ವಿರುದ್ಧ ರಾಜ್ಯದ ವಿವಿಧ ಕಡೆ ದಾಖಲಾಗಿರುವ 11 ಪ್ರಕರಣಗಳ ಮುಂದಿನ ಪ್ರಕ್ರಿಯೆಗೆ ಹೈಕೋರ್ಟ್ ಮಧ್ಯಂತರ ತಡೆ ನೀಡಿದೆ. ಇದರಿಂದಾಗಿ ಪಾಟೀಲ್ ಸದ್ಯಕ್ಕೆ ವಿಚಾರಣೆಯಿಂದ ತಪ್ಪಿಸಿಕೊಂಡಿದ್ದಾರೆ. ಜೊತೆಗೆ ಬಲವಂತದ ಕ್ರಮ ಬೇಡ ಎಂದು ನ್ಯಾಯಾಲಯ ಆದೇಶಿಸಿದೆ.    

ಪಿಎಸ್‌ಐ ನೇಮಕಾತಿ ಹಗರಣ, ವಿಚಾರಣೆಗೆ ಹೈಕೋರ್ಟ್ ತಡೆ..! Read More »

ಕರ್ನಾಟಕ

‘ಸಿದ್ದರಾಮಯ್ಯ ಅವರಿಗೆ ಭಯ ಹುಟ್ಟಿಕೊಂಡಿದೆ’ ➤ ಸಿಎಂ ಬೊಮ್ಮಾಯಿ

(ನ್ಯೂಸ್ ಕಡಬ)newskadaba.com ಬೆಂಗಳೂರು, ಏ.20. ಒಳ ಮೈತ್ರಿ, ಹೊರ ಮೈತ್ರಿ ಎಂದು ಮಾತನಾಡುತ್ತಿರುವ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರಿಗೆ ಗೆ ಭಯ ಹುಟ್ಟಿಕೊಂಡಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು. ವರುಣಾದಲ್ಲಿ ಬಿಜೆಪಿ ಜೆಡಿಎಸ್ ಒಳಮೈತ್ರಿ ಎಂದು ಸಿದ್ದರಾಮಯ್ಯ ಅವರು ಮಾಡಿರುವ ಆರೋಪದ ಬಗ್ಗೆ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು. ಎಲ್ಲ ಪಕ್ಷಗಳಿಂದಲೂ ಅಭ್ಯರ್ಥಿಗಳು ಫಿಕ್ಸ್ ಆಗಿದಾರೆ ಎಂಬ ಭಯವಿದ್ದು,ಅವರಿಬ್ಬರೂ ಸೇರಿಕೊಂಡಿದಾರೆ ಎಂಬ ಭಯ ಬಂದಿದೆ ಎಂದ ಅವರು ಎಲ್ಲ ಅಭ್ಯರ್ಥಿಗಳೂ ತಾವೇ ಗೆಲ್ಲಬೇಕು ಎಂದು ಚುನಾವಣೆಯಲ್ಲಿ

‘ಸಿದ್ದರಾಮಯ್ಯ ಅವರಿಗೆ ಭಯ ಹುಟ್ಟಿಕೊಂಡಿದೆ’ ➤ ಸಿಎಂ ಬೊಮ್ಮಾಯಿ Read More »

ಕರ್ನಾಟಕ

ಮಹಿಳಾ ಪ್ರಯಾಣಿಕರೊಂದಿಗೆ ಅಸಭ್ಯ ವರ್ತನೆ..!   ➤ರೈಲ್ವೆ ಟೆಕೆಟ್ ಪರೀಕ್ಷಕ ಅಧಿಕಾರಿ ಸೇವೆಯಿಂದ ವಜಾ!!

(ನ್ಯೂಸ್ ಕಡಬ)Newskadaba.com ಬೆಂಗಳೂರು,ಏ.20  ಮಹಿಳಾ ಪ್ರಯಾಣಿಕರೊಂದಿಗೆ ಅನುಚಿತವಾಗಿ ವರ್ತಿಸಿದ ಕಾರಣಕ್ಕಾಗಿ ಬೆಂಗಳೂರು ರೈಲ್ವೆ ವಿಭಾಗದ ಹಿರಿಯ ರೈಲ್ವೆ ಟೆಕೆಟ್ ಪರೀಕ್ಷಕನನ್ನು ಸೇವೆಯಿಂದ ವಜಾಗೊಳಿಸಿರುವ ಬೆನ್ನಲ್ಲೇ, ಐಟಿ ವೃತ್ತಿಪರರನ್ನು ಅವಮಾನಿಸಿದ ಮತ್ತೊಂದು ಘಟನೆ ಬೆಳಕಿಗೆ ಬಂದಿದೆ.  

ಮಹಿಳಾ ಪ್ರಯಾಣಿಕರೊಂದಿಗೆ ಅಸಭ್ಯ ವರ್ತನೆ..!   ➤ರೈಲ್ವೆ ಟೆಕೆಟ್ ಪರೀಕ್ಷಕ ಅಧಿಕಾರಿ ಸೇವೆಯಿಂದ ವಜಾ!! Read More »

ಕರ್ನಾಟಕ

ಜೆಡಿಎಸ್ ಅಭ್ಯರ್ಥಿ ವೈಎಸ್​ವಿ ದತ್ತಾ ವಿರುದ್ಧ 41 ಚೆಕ್​ಬೌನ್ಸ್​ ಕೇಸ್​ ದಾಖಲು..!

(ನ್ಯೂಸ್ ಕಡಬ)Newskadaba.com ಚಿಕ್ಕಮಗಳೂರು,ಏ.20  ಚಿಕ್ಕಮಗಳೂರು ಜಿಲ್ಲೆಯ ಕಡೂರು ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ವೈಎಸ್​ವಿ ದತ್ತಾ ವಿರುದ್ಧ 41 ಚೆಕ್​ಬೌನ್ಸ್​ ಕೇಸ್​ಗಳು ದಾಖಲಾಗಿವೆ. ಚೆಕ್‌ ನಗದು ಆಗದಿರುವ ಕಾರಣ ಈ ಎಲ್ಲ ಪ್ರಕರಣಗಳು ನೆಗೋಷಿಯೇಬಲ್ ಇನ್‌ಸ್ಟ್ರುಮೆಂಟ್ಸ್ (ಎನ್‌ಐ) ಕಾಯ್ದೆ 1881 ರ ಕಲಂ 138ರ ಅಡಿಯಲ್ಲಿ ದಾಖಲಾಗಿವೆ.ರಾಜ್ಯ, ಹೊರ ರಾಜ್ಯಗಳಲ್ಲಿ ದತ್ತಾ ವಿರುದ್ಧ 2014 ರಿಂದ 2023ರ ವರೆಗೆ 41 ಚೆಕ್​​ಬೌನ್ಸ್​ ಪ್ರಕರಣಗಳು​ ದಾಖಲಾಗಿದ್ದು, ವಿಚಾರಣೆ ಹಂತದಲ್ಲಿವೆ.  

ಜೆಡಿಎಸ್ ಅಭ್ಯರ್ಥಿ ವೈಎಸ್​ವಿ ದತ್ತಾ ವಿರುದ್ಧ 41 ಚೆಕ್​ಬೌನ್ಸ್​ ಕೇಸ್​ ದಾಖಲು..! Read More »

ಕರ್ನಾಟಕ

ಆಟವಾಡುತ್ತಿದ್ದಾಗ ವಿದ್ಯುತ್ ಶಾಕ್ ತಗುಲಿ ಬಾಲಕರಿಬ್ಬರು ಮೃತ್ಯು

(ನ್ಯೂಸ್ ಕಡಬ)newskadaba.com ತುಮಕೂರು, ಏ.20. ವಿದ್ಯುತ್ ತಂತಿ ತಗುಲಿ ಇಬ್ಬರು ಬಾಲಕರು ಮೃತಪಟ್ಟ ಘಟನೆ ತಾಲೂಕಿನ ಬೆಳಗುಂಬ ಗ್ರಾಮದಲ್ಲಿ ನಡೆದಿದೆ. ನಿತೇಶ್(14), ಪ್ರಜ್ವಲ್(13) ಮೃತ ದುರ್ದೈವಿಗಳು ಎಂದು ಗುರುತಿಸಲಾಗಿದೆ. ಬಾಲಕರು ಮನೆ ಮೇಲೆ ಆಟವಾಡುತ್ತಿದ್ದಾಗ ತಂತಿ ತಗುಲಿ ಈ ದುರಂತ ಸಂಭವಿಸಿದ್ದು, ಕೆಇಬಿ ವಿರುದ್ಧ ಗ್ರಾಮಸ್ಥರು ಹಾಗೂ ಪೋಷಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ ಎಂದು ವರದಿ ತಿಳಿಸಿದೆ.

ಆಟವಾಡುತ್ತಿದ್ದಾಗ ವಿದ್ಯುತ್ ಶಾಕ್ ತಗುಲಿ ಬಾಲಕರಿಬ್ಬರು ಮೃತ್ಯು Read More »

ಕರ್ನಾಟಕ

ವರುಣಾದಲ್ಲಿ ಬಿಜೆಪಿ ಹಾಗೂ ಜೆಡಿಎಸ್ ಒಳಮೈತ್ರಿ ಮಾಡಿಕೊಂಡಿದ್ದಾರೆ.!   ➤ಮಾಜಿ ಸಿಎಂ ಸಿದ್ದರಾಮಯ್ಯ ಆರೋಪ.!

(ನ್ಯೂಸ್ ಕಡಬ)Newskadaba.com ಬೆಂಗಳೂರು,ಏ.20 ವರುಣಾದಲ್ಲಿ ಬಿಜೆಪಿ ಹಾಗೂ ಜೆಡಿಎಸ್ ಒಳಮೈತ್ರಿ ಮಾಡಿಕೊಂಡಿದ್ದಾರೆ ಎಂದು ಸಿದ್ದರಾಮಯ್ಯ ಆರೋಪಿಸಿದ್ದರು. ಈ ವಿಚಾರವಾಗಿ ಸಿಎಂ ಬೊಮ್ಮಾಯಿ ಪ್ರತ್ಯುತ್ತರ ನೀಡಿದ್ದಾರೆ.ಸಿದ್ದರಾಮಯ್ಯಗೆ ಸಿಎಂ ಕೌಂಟರ್ ನೀಡಿದ್ದು ‘ಎಲ್ಲ ಅಭ್ಯರ್ಥಿಗಳೂ ತಾವೇ ಗೆಲ್ಬೇಕು ಅಂತ ಚುನಾವಣೆಯಲ್ಲಿ ನಿಲ್ಲುವುದು. ಒಳ ಮೈತ್ರಿನಾ, ಹೊರ ಮೈತ್ರಿನಾ ಅಂತ ಮಾತಾಡ್ತಿದಾರೆ. ಅಲ್ಲಿ ಎಲ್ಲ ಪಕ್ಷಗಳಿಂದಲೂ ಅಭ್ಯರ್ಥಿಗಳು ಫಿಕ್ಸ್ ಆಗಿದ್ದಾರೆ. ಯಾರೇ ಸೇರಿಕೊಂಡರೂ ಸಿದ್ದರಾಮಯ್ಯ ಗೆ ಸ್ವಂತ ಬಲ ಇದ್ರೆ ಗೆಲ್ತಾರೆ.    

ವರುಣಾದಲ್ಲಿ ಬಿಜೆಪಿ ಹಾಗೂ ಜೆಡಿಎಸ್ ಒಳಮೈತ್ರಿ ಮಾಡಿಕೊಂಡಿದ್ದಾರೆ.!   ➤ಮಾಜಿ ಸಿಎಂ ಸಿದ್ದರಾಮಯ್ಯ ಆರೋಪ.! Read More »

ಕರ್ನಾಟಕ

ವಿಧಾನಸಭಾ ಚುನಾವಣೆ ಹಿನ್ನೆಲೆ.!   ➤ಆಸ್ತಿ ವಿವರದ ಜತೆಗೆ ಇಬ್ಬರು ಪತ್ನಿಯರು ಇರುವುದಾಗಿ ಘೋಷಿಸಿದ ಎಎಪಿ ಅಭ್ಯರ್ಥಿ! 

(ನ್ಯೂಸ್ ಕಡಬ)Newskadaba.com ವಿಜಯನಗರ,ಏ.20 ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ ಚುನಾವಣಾ ಕಣಕ್ಕಿಳಿದಿರುವ ಅಭ್ಯರ್ಥಿಗಳು ತಮ್ಮ ಆಸ್ತಿ ವಿವರಗಳ ಜತೆಗೆ ಇನ್ನಿತರ ಮಾಹಿತಿಗಳನ್ನು ನಾಮಪತ್ರದಲ್ಲಿ ಘೋಷಿಸಿಕೊಳ್ಳುತ್ತಿದ್ದಾರೆ. ಇದೀಗ ವಿಜಯನಗರ ಕ್ಷೇತ್ರದ ಆಮ್​ ಆದ್ಮಿ ಪಾರ್ಟಿ ಅಭ್ಯರ್ಥಿ ಆಸ್ತಿ ವಿವರದ ಜತೆ ಇಬ್ಬರು ಪತ್ನಿಯರು ಇರುವುದನ್ನು ಧೃಡಪಡಿಸಿಕೊಂಡಿದ್ದಾರೆ. ವಿಜಯನಗರ ವಿಧಾನಸಭಾ ಕ್ಷೇತ್ರದ ಎಎಪಿ ಅಭ್ಯರ್ಥಿ ದಾಸರ ಶಂಕರ್ ಅವರಿಗೆ ಇಬ್ಬರು ಪತ್ನಿಯರು ಹಾಗೂ ನಾಲ್ವರು ಮಕ್ಕಳಿದ್ದಾರೆ.    

ವಿಧಾನಸಭಾ ಚುನಾವಣೆ ಹಿನ್ನೆಲೆ.!   ➤ಆಸ್ತಿ ವಿವರದ ಜತೆಗೆ ಇಬ್ಬರು ಪತ್ನಿಯರು ಇರುವುದಾಗಿ ಘೋಷಿಸಿದ ಎಎಪಿ ಅಭ್ಯರ್ಥಿ!  Read More »

ಕರ್ನಾಟಕ

ಗೃಹ ಸಚಿವ ಆರಗ ಜ್ಞಾನೇಂದ್ರ ಆಸ್ತಿಯಲ್ಲಿ ಬಿಡಿಎ ನಿವೇಶನ..!

(ನ್ಯೂಸ್ ಕಡಬ)Newskadaba.com ಬೆಂಗಳೂರು,ಏ.20 ಸುಪ್ರೀಂ ಕೋರ್ಟ್‌ ಆದೇಶದಂತೆ ಹಂಚಿಕೆ ರದ್ದುಪಡಿಸಿ, ಬಿಡಿಎ ವಶಕ್ಕೆ ಸ್ವತ್ತನ್ನು ಹಿಂಪಡೆಯಲು ಪ್ರಕ್ರಿಯೆ ಆರಂಭಿಸಿರುವ ವಿವಾದಿತ ನಿವೇಶನವನ್ನೂ ಗೃಹ ಸಚಿವ ಆರಗ ಜ್ಞಾನೇಂದ್ರ ಅವರು ತಮ್ಮ ಆಸ್ತಿ ಪಟ್ಟಿಯಲ್ಲಿ ಉಲ್ಲೇಖಿಸಿದ್ದಾರೆ. ಗೃಹ ಸಚಿವರಿಗೆ ನೋಟಿಸ್‌ ಜಾರಿ ಮಾಡಿದ್ದ ಬಿಡಿಎ, ಸ್ವತ್ತನ್ನು ಪ್ರಾಧಿಕಾರದ ವಶಕ್ಕೆ ಮರಳಿಸುವಂತೆ ಸೂಚಿಸಿತ್ತು. ಬಳಿಕ ಮನವಿಯೊಂದನ್ನು ಸಲ್ಲಿಸಿದ್ದ ಸಚಿವರು, ‘ಬಿಡಿಎ ತಪ್ಪಿನಿಂದಲೇ ಸಮಸ್ಯೆ ಉದ್ಭವಿಸಿದೆ. ನನಗೆ ಬೇರೊಂದು ನಿವೇಶನ ಮಂಜೂರು ಮಾಡಿ’ ಎಂದು ಕೋರಿದ್ದರು.  

ಗೃಹ ಸಚಿವ ಆರಗ ಜ್ಞಾನೇಂದ್ರ ಆಸ್ತಿಯಲ್ಲಿ ಬಿಡಿಎ ನಿವೇಶನ..! Read More »

ಕರ್ನಾಟಕ

(ನ್ಯೂಸ್ ಕಡಬ)Newskadaba.com ಮೂಡಿಗೆರೆ,ಏ.20 ಅಧಿಕಾರ ಯಾರಿಗೂ ಶಾಶ್ವತ ಅಲ್ಲ, ಜನ ಒಂದು ದಿನ ಅಧಿಕಾರದಿಂದ ಇಳಿಸುತ್ತಾರೆ. ನನಗೂ ಅಧಿಕಾರ ಶಾಶ್ವತ ಅಲ್ಲ. ಸುಮಲತಾ ಅವರಿಗೆ 2019ರ ಚುನಾವಣೆಯ ಗುಂಗಿನ ದುರಹಂಕಾರ ಇನ್ನೂ ಕಡಿಮೆಯಾಗಿಲ್ಲ ಎಂದು ಮಾಜಿ ಸಿಎಂ ಎಚ್ಡಿಕೆ ವಾಗ್ದಾಳಿ ನಡೆಸಿದ್ದಾರೆ. ಪಟ್ಟಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾನು ರಾಮನಗರದಲ್ಲೇ ಸ್ಪರ್ಧಿಸುವುದು ಎಂದು ಹಲವು ಬಾರಿ ಸ್ಪಷ್ಟನೆ ನೀಡಿದ್ದೇನೆ. ಕಾರ್ಯಕರ್ತರು, ಅಭಿಮಾನಿಗಳು ಮಂಡ್ಯದಲ್ಲಿ ಕುಮಾರಸ್ವಾಮಿ ಸ್ಪರ್ಧಿಸುತ್ತಾರೆಂದು ಅಭಿಮಾನದಿಂದ ಹೇಳಿದ್ದಾರೆ. ಇದಕ್ಕೆ ಸುಮಲತಾ ಅವರು ಮಂಡ್ಯದಲ್ಲಿ ನನಗೆ ಸವಾಲು

Read More »

ಕರ್ನಾಟಕ
Scroll to Top