Kadaba

ಶಬರಿಮಲೆ: ಅಯ್ಯಪ್ಪ ದೇವಸ್ಥಾನಕ್ಕೆ ಪ್ರವೇಶಿಸಿದ ಮಹಿಳೆಯರು ► ಮಹಿಳೆಯರನ್ನು ಪ್ರವೇಶಿಸಿದ ಕೇರಳ ಸರಕಾರವನ್ನು ವಜಾಗೊಳಿಸಲು ರಾಷ್ಟ್ರಪತಿಗೆ ಮನವಿ

(ನ್ಯೂಸ್ ಕಡಬ) newskadaba.com.ಕಡಬ,ಜ. 4. ಶಬರಿಮಲೆ ಅಯ್ಯಪ್ಪ ಸ್ವಾಮೀ ದೇವಸ್ಥಾನಕ್ಕೆ 10ರಿಂದ 50ವರ್ಷದ ಒಳಗಿನ ಮಹಿಳೆಯರ ಪ್ರವೇಶ ನಿಷಿದ್ದ ಎಂಬ ಸಂಪ್ರದಾಯ ಇರುವಾಗ ಪಿನರಾಯಿ ನೇತೃತ್ವದ ಕಮ್ಯೂನಿಸ್ಟ್ ಸರಕಾರ ಮಹಿಳೆಯರನ್ನು ಭದ್ರತೆಯಲ್ಲಿ ಪ್ರವೇಶಿಸಿದ್ದು ಘೋರ ಅನ್ಯಾಯ ಈ ಸರಕಾರವನ್ನು ವಜಾಗೊಳಿಸಿ ಅಲ್ಲಿ ರಾಷ್ಟ್ರಪತಿ ಆಡಳಿತವನ್ನು ಹೇರಬೇಕೆಂದು ಆಗ್ರಹಿಸಿ ಕಡಬ ವಿ.ಹಿಂ.ಪ ನೇತೃತ್ವದಲ್ಲಿ ಕಡಬ ತಹಸೀಲ್ದಾರ್ ಮೂಲಕ ರಾಷ್ಟಪತಿಗೆ ಮನವಿ ಸಲ್ಲಿಸಲಾಗಿದೆ.   ಈ ಸಂದರ್ಭದಲ್ಲಿ ವಿ.ಹಿಂ.ಪ ಗೌರವಾಧ್ಯಕ್ಷ ಜನಾರ್ದನ ರಾವ, ಅಧ್ಯಕ್ಷ ರಾಧಾಕೃಷ್ಣ ಕೋಲ್ಪೆ, ಕಾರ್ಯದರ್ಶಿ ಪ್ರಮೋದ್ ರೈ […]

ಶಬರಿಮಲೆ: ಅಯ್ಯಪ್ಪ ದೇವಸ್ಥಾನಕ್ಕೆ ಪ್ರವೇಶಿಸಿದ ಮಹಿಳೆಯರು ► ಮಹಿಳೆಯರನ್ನು ಪ್ರವೇಶಿಸಿದ ಕೇರಳ ಸರಕಾರವನ್ನು ವಜಾಗೊಳಿಸಲು ರಾಷ್ಟ್ರಪತಿಗೆ ಮನವಿ Read More »

ಕರಾವಳಿ

29 ವರ್ಷಗಳ ಬಳಿಕ ಕೂರ ಅಂಗನವಾಡಿ ಕೇಂದ್ರಕ್ಕೆ ಸಿಗಲಿದೆ ಆರ್.ಟಿ.ಸಿ.

(ನ್ಯೂಸ್ ಕಡಬ) newskadaba.com.ಕಡಬ,ಜ. 4. 1989ರಲ್ಲಿ ಸ್ಥಾಪನೆಗೊಂಡ ಕುದ್ಮಾರು ಗ್ರಾಮದ ಕೂರ ಅಂಗವವಾಡಿ ಕೇಂದ್ರಕ್ಕೆ 29 ವರ್ಷಗಳ ಬಳಿಕ ಆರ್‍ಟಿಸಿ ದೊರೆಯಲಿದೆ. ಆರ್‍ಟಿಸಿ ರಚನೆ ಕುರಿತಂತೆ ಪೂರಕ ಪ್ರಕ್ರಿಯೆಗಳಿಗೆ ಇದೀಗ ವೇಗ ದೊರೆತಿದೆ. ಅಂಗನವಾಡಿ ಕಾರ್ಯಕರ್ತೆ ಕಳೆದ 25 ವರ್ಷಗಳಿಂದ ಗ್ರಾಮಸಭೆ ಸೇರಿದಂತೆ ಸಂಬಂಧಪಟ್ಟ ಎಲ್ಲರಿಗೂ ಆರ್‍ಟಿಸಿ ಮಾಡಿಕೊಡುವಂತೆ ಮನವಿ ನೀಡುತ್ತಾ ಬಂದಿದ್ದು, ಇದೀಗ ಮನವಿಗೆ ಸ್ಪಂದನೆ ಸಿಕ್ಕಿದೆ. ಅಂಗನವಾಡಿ ಕೇಂದ್ರದ ಜಾಗವು ಲೋಕೋಪಯೋಗಿ ಇಲಾಖೆಗೆ ಒಳಪಟ್ಟಿದೆ ಎಂಬ ಗುಮಾನಿಯಿಂದಾಗಿ ಇದುವರೆಗೆ ಕೂರ ಅಂಗನವಾಡಿ ಕೇಂದ್ರಕ್ಕೆ ಆರ್‍ಟಿಸಿ ನೀಡುವಲ್ಲಿ ತೊಡಕಾಗಿ

29 ವರ್ಷಗಳ ಬಳಿಕ ಕೂರ ಅಂಗನವಾಡಿ ಕೇಂದ್ರಕ್ಕೆ ಸಿಗಲಿದೆ ಆರ್.ಟಿ.ಸಿ. Read More »

ಕರಾವಳಿ

ಗೃಹ ಕಾರ್ಮಿಕರ ಕನಿಷ್ಟ ವೇತನ ದರ ಸಿಗುತ್ತಿಲ್ಲವೇ? ಕಾರ್ಮಿಕ ಇಲಾಖೆಗೆ ದೂರು ನೀಡಿ

(ನ್ಯೂಸ್ ಕಡಬ) newskadaba.com.ಮಂಗಳೂರು,ಜ.2.ಗೃಹ ಕಾರ್ಮಿಕರಿಗೆ ಸರ್ಕಾರ ನಿಗಧಿಪಡಿಸಿದ ಕನಿಷ್ಟ ವೇತನವನ್ನು ಗೃಹ ಕೆಲಸಕ್ಕೆ ನೇಮಿಸಿಕೊಳ್ಳುವ ಕಾರ್ಮಿಕರಿಗೆ ಕಡ್ಡಾಯವಾಗಿ ನೀಡಬೇಕು.  ಗೃಹ ಕಾರ್ಮಿಕರಿಗೆ ಸರ್ಕಾರ ನಿಗಧಿಪಡಿಸಿದ ಕನಿಷ್ಟ ವೇತನದ ದರಗಳು ಇಂತಿವೆ: ತೊಳೆಯುವುದು, ಸ್ವಚ್ಛತೆ,  ತರಕಾರಿ ಅಥವಾ ಮಾಂಸಹಾರ ಅಡುಗೆ ತಯಾರಿಸುವುದು, ರುಬ್ಬುವುದು, ಅಡುಗೆ ತಯಾರಿಸುವುದು ಮತ್ತು ಅಡುಗೆ ಮನೆ ಸ್ವಚ್ಛಗೊಳಿಸುವುದು ದಿನಕೂಲಿ ರೂ. 496. 20/-, ತಿಂಗಳಿಗೆ ರೂ. 13,421. 20/-.ಬಟ್ಟೆಒಗೆಯುವುದು, ಪಾತ್ರೆ ತೊಳೆಯುವುದು, ಮನೆ ಸ್ವಚ್ಛಗೊಳಿಸುವುದು, ಮನೆಕೆಲಸ ಹಾಗೂ ಮಕ್ಕಳನ್ನು ನೋಡಿಕೊಳ್ಳುವುದು. ದಿನಕೂಲಿ ರೂ. 456. 20/-,

ಗೃಹ ಕಾರ್ಮಿಕರ ಕನಿಷ್ಟ ವೇತನ ದರ ಸಿಗುತ್ತಿಲ್ಲವೇ? ಕಾರ್ಮಿಕ ಇಲಾಖೆಗೆ ದೂರು ನೀಡಿ Read More »

ಕರಾವಳಿ

ರಿವರ್ ಫೆಸ್ಟಿವಲ್ ಲೋಗೋ ಬಿಡುಗಡೆ ► ಜನವರಿ 12 ಮತ್ತು 13ರಂದು ಮೂರು ಕಿನಾರೆಗಳಲ್ಲಿ ರಿವರ್ ಫೆಸ್ಟಿವಲ್

(ನ್ಯೂಸ್ ಕಡಬ) newskadaba.com.ಮಂಗಳೂರು,ಜ.2. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ನದಿ ಹಾಗೂ ನದಿ ಕಿನಾರೆಗಳನ್ನು ಅಭಿವೃದ್ಧಿಪಡಿಸಲು ಮತ್ತು ಪ್ರವಾಸೋದ್ಯಮ ತಾಣವಾಗಿ ಆಕರ್ಷಿಸಲು ರಿವರ್ ಫೆಸ್ಟಿವಲ್ ನಡೆಸಲು ನಿರ್ಧರಿಸಲಾಗಿದೆ ಎಂದು ನಗರಾಭಿವೃದ್ಧಿ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ಯು.ಟಿ.ಖಾದರ್ ಹೇಳಿದ್ದಾರೆ. ಇಂದು ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ನದಿ ಉತ್ಸವದ ಲೋಗೋ ಬಿಡುಗಡೆಗೊಳಿಸಿ ಮಾತನಾಡಿದ ಅವರು, ಜನವರಿ 12 ಮತ್ತು 13ರಂದು ಉತ್ಸವ ಮೂರು ಕಿನಾರೆಗಳಲ್ಲಿ ನಡೆಯಲಿದೆ.  ನದಿ ತೀರಗಳನ್ನು, ದ್ವೀಪಗಳನ್ನು ಹೊಂದಿರುವ ತಾಲೂಕು ಮಟ್ಟದಲ್ಲೂ ಉತ್ಸವಗಳನ್ನು ಮಾಡಲು ಜಿಲ್ಲಾ ಮಟ್ಟದ ಕಾರ್ಯಕ್ರಮ ಮಾದರಿಯಾಗಿರಲಿ ಎಂದು

ರಿವರ್ ಫೆಸ್ಟಿವಲ್ ಲೋಗೋ ಬಿಡುಗಡೆ ► ಜನವರಿ 12 ಮತ್ತು 13ರಂದು ಮೂರು ಕಿನಾರೆಗಳಲ್ಲಿ ರಿವರ್ ಫೆಸ್ಟಿವಲ್ Read More »

ಕರಾವಳಿ

ಉಪ್ಪಿನಂಗಡಿ: ವರ್ಷದ ಹಿಂದೆ ಪ್ರೇಮಿಸಿ ವಿವಾಹವಾಗಿದ್ದ ತರುಣಿ ವಿಷಸೇವಿಸಿ ಆತ್ಮಹತ್ಯೆ

(ನ್ಯೂಸ್ ಕಡಬ) newskadaba.com.ಉಪ್ಪಿನಂಗಡಿ, ಜ.1. ವರ್ಷದ ಹಿಂದೆಯಷ್ಟೇ ಪ್ರೇಮ ವಿವಾಹವಾಗಿದ್ದ ಯುವತಿ ವಿಷ ಸೇವಿಸಿ ಸಾವನ್ನಪ್ಪಿದ್ದ ಘಟನೆ ಜ.1 ರಂದು ಮಂಗಳವಾರ ಉಪ್ಪಿನಂಗಡಿಯ ಹಿರೇಬಂಡಾಡಿಯಲ್ಲಿ ನಡೆದಿದೆ. ತವರು ಮನೆಯಲ್ಲಿದ್ದ ದಿವ್ಯಾ ಪೂಜಾರಿ ಉಪ್ಪಿನಂಗಡಿಯ ಹಿರೇಬಂಡಾಡಿಯಲ್ಲಿರುವ ಗಂಡನ ಮನೆಗೆ ಡಿ.31 ರಂದು ತೆರಳಿದ್ದರು. ಆದರೆ ಜ.1 ರಂದು ಮುಂಜಾನೆ ವಿಷ ಪದಾರ್ಥ ಸೇವಿಸಿ ಆತ್ಮಹತ್ಯೆ ಪ್ರಯತ್ನಿಸಿದ್ದಾರೆ. ಸುಮಾರು 10 ಗಂಟೆ ವೇಳೆಗೆ ತಾವು ವಿಷ ಸೇವನೆ ಮಾಡಿರುವುದಾಗಿ ಗಂಡನ ಮನೆಯವರಿಗೆ ತಿಳಿಸಿದ್ದು ತಕ್ಷಣ ಮನೆ ಮಂದಿ ಪುತ್ತೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದಾರೆ.

ಉಪ್ಪಿನಂಗಡಿ: ವರ್ಷದ ಹಿಂದೆ ಪ್ರೇಮಿಸಿ ವಿವಾಹವಾಗಿದ್ದ ತರುಣಿ ವಿಷಸೇವಿಸಿ ಆತ್ಮಹತ್ಯೆ Read More »

ಕರಾವಳಿ

ಕುಟ್ರುಪಾಡಿ: ಉ.ಹಿ.ಪ್ರಾ.ಶಾಲಾ ಕ್ರೀಡಾಕೂಟ

(ನ್ಯೂಸ್ ಕಡಬ) newskadaba.com. ಕಡಬ,ಡಿ.28.ಕುಟ್ರುಪಾಡಿಉ.ಹಿ.ಪ್ರಾ ಶಾಲಾ ವಾರ್ಷಿಕೋತ್ಸವ ಕ್ರೀಡೋತ್ಸವ ಶಾಲಾ ಕ್ರೀಡಾಂಗಣದಲ್ಲಿನಡೆಯಿತು.ಕ್ರೀಡೋತ್ಸವವನ್ನು ಉದ್ಘಾಟಿಸಿ ಮಾತನಾಡಿದ ಕುಟ್ರುಪಾಡಿ ಗ್ರಾ.ಪಂ.ಅದ್ಯಕ್ಷೆ ವಿದ್ಯಾ ಗೋಗಟೆ, ಅಜ್ಞಾನವೆಂಬ ಕತ್ತಲನ್ನು ಹೋಗಲಾಡಿಸಿ ಜ್ಞಾನವೆಂಬ ಬೆಳಕನ್ನು ಚೆಲ್ಲುವ ಮೂಲಕ ಪ್ರತಿಯೊಬ್ಬರ ಪ್ರತಿಭೆಯನ್ನು ಹೊರ ಹೊಮ್ಮಲು ಶಿಕ್ಷಣ ಮಹತ್ವವಾಗಿದ್ದು, ಕ್ರೀಡೆಯಲ್ಲಿ ಭಾಗವಹಿಸಿ ತಮ್ಮ ದೈಹಿಕ ಸಾಮಥ್ರ್ಯತೆಯನ್ನು ವೃದ್ಧಿಸಿಕೊಳ್ಳುವುದರೊಂದಿಗೆ ತನ್ನ ಕ್ರೀಡಾ ಪ್ರತಿಭೆಯನ್ನು ಕೂಡಾ ಹೊರಗೆಡಹಲು ಇಂತಹ ಕ್ರೀಡಾಕೂಟಗಳು ಸಹಕಾರಿಯಾಗಿವೆ ಎಂದರು. ಹಿರಿಯ ವಿದ್ಯಾರ್ಥಿ ಸಂಘದ ಮಾಜಿ ಅಧ್ಯಕ್ಷ ಕ್ರೀಡಾ ಮಾರ್ಗದರ್ಶಕ ಕುಟ್ರುಪಾಡಿ ಸಿ.ಎ.ಬ್ಯಾಂಕಿನ ನಿರ್ದೇಶಕ ಶಶಾಂಕ್ ಗೋಖಲೆ

ಕುಟ್ರುಪಾಡಿ: ಉ.ಹಿ.ಪ್ರಾ.ಶಾಲಾ ಕ್ರೀಡಾಕೂಟ Read More »

ಕರಾವಳಿ

ಕೋಡಿಂಬಾಳ: ಮೂರಾಜೆ ಅಡೀಲು ಪರಿಶಿಷ್ಟ ಕಾಲೋನಿ ರಸ್ತೆ ಸಂಪರ್ಕಕ್ಕೆ ಮನವಿ

(ನ್ಯೂಸ್ ಕಡಬ) newskadaba.com.ಕಡಬ, ಡಿ.28. ಕೋಡಿಂಬಾಳ ಗ್ರಾಮದ ಮೂರಾಜೆ ಅಡೀಲು ದಲಿತ ಕಾಲೋನಿಗೆ ಸಂಪರ್ಕ ರಸ್ತೆ ನಿರ್ಮಿಸುವಂತೆ ಅಡೀಲು ಕಾಲೋನಿ ನಿವಾಸಿಗಳು ಪುತ್ತೂರು ಸಹಾಯಕ ಕಮಿಷ್‍ನರ್ , ಕಡಬ ತಹಶೀಲ್ದಾರ್ ಹಾಗೂ ಕಡಬ ಗ್ರಾ.ಪಂ ಗೆ ಮನವಿ ನೀಡಿ ಶೀಘ್ರ ರಸ್ತೆ ಮಾಡಿಸುವಂತೆ ಆಗ್ರಹಿಸಿದ ಘಟನೆ ನಡೆದಿದೆ. ದಲಿತ ಒಕ್ಕೂಟಗಳ ಕಡಬ ತಾಲೂಕು ಅಧ್ಯಕ್ಷ ವಸಂತ ಕುಬುಲಾಡಿಯವರ ನೇತೃತ್ವದಲ್ಲಿ ಅಡೀಲು ದಲಿತ ನಿವಾಸಿಗಳು ಕಡಬ ತಹಶೀಲ್ದಾರರಿಗೆ ಹಾಗೂ ಕಡಬ ಗ್ರಾ.ಪಂ ಪಿಡಿಒ ರವರಿಗೆ ಮನವಿ ಸಲ್ಲಿಸಿ ಹಲವಾರು ವರ್ಷಗಳ

ಕೋಡಿಂಬಾಳ: ಮೂರಾಜೆ ಅಡೀಲು ಪರಿಶಿಷ್ಟ ಕಾಲೋನಿ ರಸ್ತೆ ಸಂಪರ್ಕಕ್ಕೆ ಮನವಿ Read More »

ಕರಾವಳಿ

ಕಡಬ ಸಿಎ ಬ್ಯಾಂಕ್‍ನ ಕೊಣಾಜೆ ಶಾಖೆಗೆ ಮಠಂದೂರು ಭೇಟಿ

(ನ್ಯೂಸ್ ಕಡಬ) newskadaba.com.ಕಡಬ, ಡಿ.28. ಕಡಬ ಪ್ರಾಥಮಿಕ ಕೃಷಿಪತ್ತಿನ ಸಹಕಾರಿ ಸಂಘದ ಕೊಣಾಜೆ ಶಾಖಾ ಕಛೇರಿಗೆ ಪುತ್ತೂರು ಶಾಸಕ ಸಂಜೀವ ಮಠಂದೂರು ಗುರುವಾರ ಭೇಟಿ ನೀಡಿದರು.ಕಾರ್ಯಕ್ರಮವೊಂದಕ್ಕೆ ಆಗಮಿಸಿದ್ದ ಶಾಸಕರು ಕೊಣಾಜೆ ಶಾಖೆಗೆ ಭೇಟಿ ನೀಡಿದ ಸಂದರ್ಭದಲ್ಲಿ ಆಡಳಿತ ಮಂಡಳಿ ಹಾಗೂ ಸಿಬಂದಿವರ್ಗ ಶಾಸಕರನ್ನು ಆತ್ಮೀಯವಾಗಿ ಬರಮಾಡಿಕೊಂಡು ಗೌರವಿಸಿದರು. ಈ ಸಂದರ್ಭದಲ್ಲಿ ಪುತ್ತೂರು ಪಿ.ಎಲ್.ಡಿ.ಬ್ಯಾಂಕಿನ ಅಧ್ಯಕ್ಷ ಎ.ಬಿ.ಮನೋಹರ ರೈ, ಕಡಬ ಪ್ರಾಥಮಿಕ ಕೃಷಿಪತ್ತಿನ ಸಹಕಾರಿ ಸಂಘದ ಉಪಾಧ್ಯಕ್ಷ ರಘುಚಂದ್ರ ಗೌಡ ಕೆ, ಸಂಘದ ಮಾಜಿ ನಿರ್ದೆಶಕ ಶಿವಪ್ಪ ಗೌಡ, ಕೊಣಾಜೆ

ಕಡಬ ಸಿಎ ಬ್ಯಾಂಕ್‍ನ ಕೊಣಾಜೆ ಶಾಖೆಗೆ ಮಠಂದೂರು ಭೇಟಿ Read More »

ಕರಾವಳಿ

ಕಡಬದಲ್ಲಿ ದೀಪ ಜ್ಯೋತಿ ಕಾರ್ಯಕ್ರಮ-ಮೆರವಣಿಗೆ

(ನ್ಯೂಸ್ ಕಡಬ) newskadaba.com.ಕಡಬ , ಡಿ. 28.  ಶಬರಿಮಲೆ ಶ್ರೀ ಅಯ್ಯಪ್ಪ ದೇವಸ್ಥಾನಕ್ಕೆ ಮಹಿಳೆಯರ ಪ್ರವೇಶ ವಿಚಾರ ಕುರಿತು ಕೇರಳದಾದ್ಯಂತ ನಡೆಯುತ್ತಿರುವ ಪ್ರತಿಭಟನೆಯ ಅಂಗವಾಗಿ ಕಡಬದಲ್ಲಿ ಮಹಿಳೆಯರಿಂದ ದೀಪ ಜ್ಯೋತಿ ಕಾರ್ಯಕ್ರಮ ಡಿ.26ರ ಸಂಜೆ ನಡೆಯಿತು. ಕಡಬ ಶ್ರೀ ದುರ್ಗಾಂಬಿಕಾ ದೇವಸ್ಥಾನದಲ್ಲಿ ಹಣತೆಗಳನ್ನು ಉರಿಸಿ ಕಡಬ ಪೇಟೆಯಲ್ಲಿ ಅಯ್ಯಪ್ಪ ಭಕ್ತರು ಹಾಗೂ ಮಹಿಳೆಯರು ಮೆರವಣಿಗೆ ನಡೆಸಿದರು. ಬಳಿಕ ಕಡಬ ಶ್ರೀ ದುರ್ಗಾಂಬಿಕಾ ದೇವಸ್ಥಾನದಲ್ಲಿ ನಡೆದ ಸಭೆಯಲ್ಲಿ ಕಡಬ ವಿಶ್ವ ಹಿಂದೂ ಪರಿಷದ್‍ನ ಗೌರವಾಧ್ಯಕ್ಷ ಎ. ಜನಾರ್ದನ ರಾವ್ ಮಾತನಾಡಿದರು.

ಕಡಬದಲ್ಲಿ ದೀಪ ಜ್ಯೋತಿ ಕಾರ್ಯಕ್ರಮ-ಮೆರವಣಿಗೆ Read More »

ಕರಾವಳಿ

ಗೃಹರಕ್ಷಕ ದಳದ ಘಟಕಾಧಿಕಾರಿಗಳ ಸಭೆ

(ನ್ಯೂಸ್ ಕಡಬ) newskadaba.com. ಮಂಗಳೂರು, ಡಿ. 26. ದಕ್ಷಿಣ ಕನ್ನಡ ಜಲ್ಲಾ ಗೃಹರಕ್ಷಕದಳದ 14 ಘಟಕಗಳ ಘಟಕಾಧಿಕಾರಿಗಳ ಸಭೆ ನಗರದ ಮೇರಿಹಿಲ್‍ನಲ್ಲಿರುವ ಗೃಹರಕ್ಷಕ ದಳದ ಕಛೇರಿಯಲ್ಲಿ ದಿನಾಂಕ: 23-12-2018ರಂದು ಜರುಗಿತು. ಇದು 2018ನೇ ಇಸವಿಯ 04ನೇ ಸಭೆಯಾಗಿದ್ದು ಗೃಹರಕ್ಷದಳದ ಸಮಾದೇಷ್ಠರಾದ ಡಾ|| ಮುರಲೀ ಮೋಹನ ಚೂಂತಾರು ಇವರ ಅಧ್ಯಕ್ಷತೆಯಲ್ಲಿ ಜರುಗಿತು.ಈ ಸಂದರ್ಭದಲ್ಲಿ ಜಿಲ್ಲೆಯಲ್ಲಿ ಖಾಲಿ ಇರುವ 75 ಮಂದಿ ಗೃಹರಕ್ಷಕರನ್ನು ಆದಷ್ಟು ಬೇಗ ಭರ್ತಿ ಮಾಡಲು ಘಟಕಾಧಿಕಾಧಿಕಾರಿಗಳಿಗೆ ಆದೇಶ ನೀಡಲಾಯಿತು. ಪ್ರಸಕ್ತ ಮಂಜೂರಾತಿಯಾದ 1000 ಗೃಹರಕ್ಷಕರಲ್ಲಿ 925 ಮಂದಿ

ಗೃಹರಕ್ಷಕ ದಳದ ಘಟಕಾಧಿಕಾರಿಗಳ ಸಭೆ Read More »

ಕರಾವಳಿ
Scroll to Top