Kadaba

ಕಡಬ: ಗ್ರಾ.ಪಂ. ಸಾಮಾಜಿಕ ಪರಿಶೋಧನಾ ಗ್ರಾಮಸಭೆ

(ನ್ಯೂಸ್ ಕಡಬ) newskadaba.com.ಕಡಬ,ಜ.12. ಕಡಬ ಗ್ರಾ.ಪಂ.ನ 2018-19ನೇ ಸಾಲಿನ ದ್ವಿತೀಯ ಹಂತದ ಸಾಮಾಜಿಕ ಪರಿಶೋಧನಾ ಗ್ರಾಮ ಸಭೆ ಜ.7ರಂದು ಕಡಬ ಗ್ರಾ.ಪಂ.ಸಭಾಂಗಣದಲ್ಲಿ ನಡೆಯಿತು.ಸಾಮಾಜಿಕ ಲೆಕ್ಕಪರಿಶೋಧನಾ ಗ್ರಾಮಸಭಾ ನೋಡೆಲ್ ಅಧಿಕಾರಿಯಾಗಿ ಆಗಮಿಸಿದ್ದ ತಾಲೂಕು ಯುವಜನ ಸಬಳೀಕರಣ ಮತ್ತು ಕ್ರೀಡಾಧಿಕಾರಿ ಮಾಮಚ್ಚನ್ ರವರು ಅಧ್ಯಕ್ಷತೆ ವಹಿಸಿದ್ದರು. ಗ್ರಾ.ಪಂ.ಅಧ್ಯಕ್ಷ ಬಾಬು ಮುಗೇರ, ಜಿ.ಪಂ.ಸದಸ್ಯ ಪಿ.ಪಿ.ವರ್ಗೀಸ್, ತಾ.ಪಂ.ಸದಸ್ಯ ಫಝಲ್ ಕೋಡಿಂಬಾಳ, ಗ್ರಾ.ಪಂ.ಉಪಾಧ್ಯಕ್ಷೆ ಜ್ಯೋತಿ ಡಿ. ಕೋಲ್ಪೆ, ತಾಲೂಕು ಎನ್.ಆರ್.ಇ.ಜಿ. ಸಹಾಯಕ ನಿರ್ದೇಶಕ ನವೀನ್ ಭಂಡಾರಿ, ಗ್ರಾ.ಪಂ.ಸದಸ್ಯರಾದ ಅಶ್ರಫ್ ಶೇಡಿಗುಂಡಿ, ಎ.ಎಸ್.ಶೆರೀಪ್, ಯಶೋಧಾ, ಇಂದಿರಾ, ರೇವತಿ, […]

ಕಡಬ: ಗ್ರಾ.ಪಂ. ಸಾಮಾಜಿಕ ಪರಿಶೋಧನಾ ಗ್ರಾಮಸಭೆ Read More »

ಕರಾವಳಿ

ವಾಹನ ಚಾಲಕರಿಗೆ ಕಾದಿದೆ ಬಿಗ್ ಶಾಕ್ ►ವಾಹನಗಳ ಬಣ್ಣ, ಸ್ವರೂಪ ಬದಲಾವಣೆ ಶಿಕ್ಷಾರ್ಹ ಅಪರಾಧ: ‘ಸುಪ್ರೀಂ’ ಆದೇಶ

(ನ್ಯೂಸ್ ಕಡಬ) newskadaba.com.ನವದೆಹಲಿ,ಜ.11. ವಾಹನಗಳನ್ನು ಮನಬಂದಂತೆ ಬದಲಾವಣೆ ಮಾಡುವ ಕುರಿತು ಸುಪ್ರೀಂ ಕೋರ್ಟ್ ಮಹತ್ವದ ತೀರ್ಪು ಪ್ರಕಟಿಸಿದ್ದು, ವಾಹನ ತಯಾರಿಕಾ ಸಂಸ್ಥೆ ನೋಂದಣಿಯಲ್ಲಿ ನಮೂದಿಸಿದ ಮೂಲ ಸೌಲಭ್ಯಗಳಲ್ಲಿನ ಯಾವುದೇ ಅಂಶವೂ ಬದಲಾವಣೆ ಆಗಬಾರದು ಎಂದು ಆದೇಶಿಸಿದೆ.ಸುಪ್ರೀಂ ಕೋರ್ಟಿನ ನ್ಯಾಯಮೂರ್ತಿಗಳಾದ ಅರುಣ್ ಮಿಶ್ರಾ ಮತ್ತು ವಿನೀತ್ ಶರಣ್ ಅವರನ್ನೊಳಗೊಂಡ ದ್ವಿಸದಸ್ಯಪೀಠ ಪ್ರಕರಣದ ವಿಚಾರಣೆ ನಡೆಸಿದ್ದು, ಕೇರಳ ಹೈಕೋರ್ಟ್ ನೀಡಿದ ತೀರ್ಪನ್ನು ರದ್ದುಪಡಿಸಿ ಮೋಟಾರು ವಾಹನ ಕಾಯ್ದೆ ಸೆಕ್ಷನ್ 52(1) ಅಡಿ ವಾಹನ ತಯಾರಿಕಾ ಸಂಸ್ಥೆ ನೋಂದಣಿಯಲ್ಲಿ ನಮೂದಿಸಿದ ಮೂಲ ಸೌಲಭ್ಯಗಳು

ವಾಹನ ಚಾಲಕರಿಗೆ ಕಾದಿದೆ ಬಿಗ್ ಶಾಕ್ ►ವಾಹನಗಳ ಬಣ್ಣ, ಸ್ವರೂಪ ಬದಲಾವಣೆ ಶಿಕ್ಷಾರ್ಹ ಅಪರಾಧ: ‘ಸುಪ್ರೀಂ’ ಆದೇಶ Read More »

ರಾಷ್ಟ್ರೀಯ ನ್ಯೂಸ್

ಸುಳ್ಯ: ಇಂದು ನಾಳೆ ಮದ್ಯ ಮಾರಾಟ ಕೇಂದ್ರ ಬಂದ್

 (ನ್ಯೂಸ್ ಕಡಬ) newskadaba.com.ಮಂಗಳೂರು,ಜ.11. ಸುಳ್ಯ ಶ್ರೀ ಚೆನ್ನಕೇಶವ ದೇವರ ವರ್ಷಾವಧಿ ಜಾತ್ರೋತ್ಸವವು ಜನವರಿ 13ರವರೆಗೆ ನಡೆಯಲಿದೆ. ಈ ಸಮಯ ಜಿಲ್ಲೆಯಲ್ಲಿ ಸಾರ್ವಜನಿಕ ಶಾಂತಿ, ಕಾನೂನು, ಸುವ್ಯವಸ್ಥೆ ಹಾಗೂ ಸುರಕ್ಷತೆಯನ್ನು ಕಾಪಾಡುವ ಸಾರ್ವಜನಿಕ ಹಿತದೃಷ್ಟಿಯಿಂದ ಕರ್ನಾಟಕ ಅಬಕಾರಿ ಕಾಯಿದೆ 1965 ಸೆಕ್ಷನ್ 21(1) ರ ಅಡಿಯಲ್ಲಿ ದತ್ತವಾಗಿರುವ ಅಧಿಕಾರವನ್ನು ಚಲಾಯಿಸಿ, ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ದಂಡಾಧಿಕಾರಿ ಬಾರ್ ಮತ್ತು ರೆಸ್ಟೋರೆಂಟ್ ಮತ್ತು ವೈನ್‍ಶಾಪ್, ಮದ್ಯ ಮಾರಾಟ ಕೇಂದ್ರಗಳನ್ನು ಜನವರಿ 10 ರಂದು ಮಧ್ಯರಾತ್ರಿ 12 ಗಂಟೆಯಿಂದ ಜನವರಿ

ಸುಳ್ಯ: ಇಂದು ನಾಳೆ ಮದ್ಯ ಮಾರಾಟ ಕೇಂದ್ರ ಬಂದ್ Read More »

ಕರಾವಳಿ

ವಿಕಲಚೇತನ ಫಲಾನುಭವಿಗಳಿಗೆ ಆಧಾರ್ ಯೋಜನೆಯಡಿ ► ಸಬ್ಸಿಡಿ ಸಹಿತ ಸಾಲ ಸೌಲಭ್ಯ

(ನ್ಯೂಸ್ ಕಡಬ) newskadaba.com.ಮಂಗಳೂರು,ಜ.10. ಜಿಲ್ಲಾ ವಿಕಲಚೇತನರ ಹಾಗೂ ಹಿರಿಯನಾಗರಿಕರ ಸಬಲೀಕರಣ ಇಲಾಖೆಯಿಂದ 2018-19ನೇ ಸಾಲಿಗೆ ಜಿಲ್ಲೆಯ ವಿಕಲಚೇತನ ಫಲಾನುಭವಿಗಳಿಂದ ‘ಆಧಾರ್’ಯೋಜನೆಯಡಿ ಅರ್ಜಿ ಆಹ್ವಾನಿಸಲಾಗಿದೆ.  ಅರ್ಹ ವಿಕಲಚೇತನರು ಅರ್ಜಿಯನ್ನು ಇಲಾಖೆಯಿಂದ ಕಚೇರಿ ವೇಳೆಯಲ್ಲಿ ಪಡೆದು ಜನವರಿ 25 ರೊಳಗಾಗಿ ಸಲ್ಲಿಸಬೇಕು.  ಷರತ್ತುಗಳು: ಅರ್ಜಿ ಸಲ್ಲಿಸುವ ವಿಕಲಚೇತನರು ಫಲಾನುಭವಿಯು ಶೇ.40 ಅಥವಾ ಅದಕ್ಕಿಂತ ಹೆಚ್ಚು ಅಂಗವಿಕಲತೆ ಇದ್ದು 18 ರಿಂದ 55 ವರ್ಷ ವಯಸ್ಸಿನೊಳಗಿನ ನಿರುದ್ಯೋಗಿಯಾಗಿರಬೇಕು ಹಾಗೂ ಕನಿಷ್ಠ ಕಳೆದ ಹತ್ತು ವರ್ಷಗಳಿಂದ ಕರ್ನಾಟಕರಾಜ್ಯದಲ್ಲಿ ವಾಸವಿರುವ ಬಗ್ಗೆ ತಹಸೀಲ್ದಾರ್‍ರವರಿಂದ ಧೃಢೀಕರಣ ಸಲ್ಲಿಸಬೇಕು.

ವಿಕಲಚೇತನ ಫಲಾನುಭವಿಗಳಿಗೆ ಆಧಾರ್ ಯೋಜನೆಯಡಿ ► ಸಬ್ಸಿಡಿ ಸಹಿತ ಸಾಲ ಸೌಲಭ್ಯ Read More »

ಕರಾವಳಿ

ಕೆಲಸದ ಒತ್ತಡದಿಂದಾಗಿ ಶಾಪಿಂಗ್ ಮಾಡಲು ಸಮಯ ಸಾಕಾಗುತ್ತಿಲ್ಲವೆ? ► ಇನ್ಮುಂದೆ ಕೆಲವು ರೈಲುಗಳಲ್ಲಿ ಇರಲಿವೆ ಶಾಪಿಂಗ್‌ ಮಾಲ್‌ಗಳು

(ನ್ಯೂಸ್ ಕಡಬ) newskadaba.com.ನವದೆಹಲಿ,ಜ.10. ಭಾರತೀಯ ರೈಲ್ವೆ ಸೇವೆಯನ್ನು ಉನ್ನತ ದರ್ಜೆಗೆ ಏರಿಸಲು ಶ್ರಮಿಸುತ್ತಿರುವ ಕೇಂದ್ರ ಸರ್ಕಾರ,  ಭಾರತದ ರೈಲ್ವೆ ಹೊಸ ಟಚ್‌ ಕೊಡಲು ಮುಂದಾಗಿದೆ. ಭಾರತದ ಕೆಲವು ರೈಲುಗಳಲ್ಲಿ ಪ್ರಯಾಣಿಕರು, ತಮ್ಮ ಪ್ರಯಾಣದ ಅವಧಿಯಲ್ಲೇ, ತಮಗೆ ಬೇಕಿರುವ ಸೌಂದರ್ಯ ವರ್ಧಕ ಉತ್ಪನ್ನಗಳು, ಫಿಟ್‌ನೆಸ್‌ ಹಾಗೂ ಅಡುಗೆ ಮನೆಗೆ ಅಗತ್ಯವಿರುವ ಪರಿಕರಗಳನ್ನು ಖರೀದಿಸಬಹುದಾಗಿದೆ. ಈ ಮೂಲಕ ಭಾರತದ ಕೆಲವು ರೈಲುಗಳು ಶಾಪಿಂಗ್‌ ಮಾಲ್‌ಗಳ ರೂಪ ಪಡೆಯಲಿವೆ.   16 ಮೇಲ್‌ ಮತ್ತು ಎಕ್ಸ್‌ಪ್ರೆಸ್‌ ರೈಲುಗಳಲ್ಲಿ 5 ವರ್ಷಗಳ ಕಾಲ ಸೌಂದರ್ಯವರ್ಧಕ,

ಕೆಲಸದ ಒತ್ತಡದಿಂದಾಗಿ ಶಾಪಿಂಗ್ ಮಾಡಲು ಸಮಯ ಸಾಕಾಗುತ್ತಿಲ್ಲವೆ? ► ಇನ್ಮುಂದೆ ಕೆಲವು ರೈಲುಗಳಲ್ಲಿ ಇರಲಿವೆ ಶಾಪಿಂಗ್‌ ಮಾಲ್‌ಗಳು Read More »

ರಾಷ್ಟ್ರೀಯ ನ್ಯೂಸ್

ಕುಟ್ರುಪಾಡಿ: ಹಾ.ಉ.ಸ.ಸಂಘದ ಅಧ್ಯಕ್ಷ, ಉಪಾಧ್ಯಕ್ಷರ ಅವಿರೋಧ ಆಯ್ಕೆ ►ಅಧ್ಯಕ್ಷರಾಗಿ 3ನೇ ಬಾರಿಗೆ ಕಿರಣ್ ಗೋಗಟೆ, ಉಪಾಧ್ಯಕ್ಷರಾಗಿ ವಿಶ್ವನಾಥ ರೈ ಆರ್ತಿಲ

(ನ್ಯೂಸ್ ಕಡಬ) newskadaba.com.ಕುಟ್ರುಪಾಡಿ,ಜ.09.  ಕುಟ್ರುಪಾಡಿ ಹಾಲು ಉತ್ಪಾದಕರ ಸಹಕಾರಿ ಸಂಘದ ಅಧ್ಯಕ್ಷ, ಉಪಾಧ್ಯಕ್ಷರ ಆಯ್ಕೆ ಸಂಘದ ಕಚೇರಿಯಲ್ಲಿ ಜ.6ರಂದು ನಡೆಯಿತು. ಅಧ್ಯಕ್ಷ,ಉಪಾಧ್ಯಕ್ಷರ ಆಯ್ಕೆ ಅವಿರೋಧವಾಗಿ ನಡೆದಿದೆ.ಸಂಘದ ಅಧ್ಯಕ್ಷರಾಗಿ ಸತತ ಮೂರನೇ ಬಾರಿಗೆ ಕಿರಣ್ ಗೋಗಟೆ, ಉಪಾಧ್ಯಕ್ಷರಾಗಿ ವಿಶ್ವನಾಥ ರೈ ಆರ್ತಿಲ ಮರು ಆಯ್ಕೆಯಾಗಿದ್ದಾರೆ. ಅಧ್ಯಕ್ಷ, ಉಪಾಧ್ಯಕ್ಷರ ಆಯ್ಕೆಗೆ ಇವರೀರ್ವರೇ ನಾಮಪತ್ರ ಸಲ್ಲಿಸಿರುವುದರಿಂದ ಚುನಾವಣೆ ನಡೆಯದೇ ಅವಿರೋಧ ಆಯ್ಕೆ ನಡೆದಿದೆ. ರಿಟರ್ನಿಂಗ್ ಅಧಿಕಾರಿ ಆನಂದ ಎ. ರವರು ಆಯ್ಕೆ ಪ್ರಕ್ರಿಯೆ ನಡೆಸಿಕೊಟ್ಟು, ಅಧ್ಯಕ್ಷ, ಉಪಾಧ್ಯಕ್ಷ, ನಿರ್ದೇಶಕರಿಗೆ ಪ್ರಮಾಣ ಪತ್ರ

ಕುಟ್ರುಪಾಡಿ: ಹಾ.ಉ.ಸ.ಸಂಘದ ಅಧ್ಯಕ್ಷ, ಉಪಾಧ್ಯಕ್ಷರ ಅವಿರೋಧ ಆಯ್ಕೆ ►ಅಧ್ಯಕ್ಷರಾಗಿ 3ನೇ ಬಾರಿಗೆ ಕಿರಣ್ ಗೋಗಟೆ, ಉಪಾಧ್ಯಕ್ಷರಾಗಿ ವಿಶ್ವನಾಥ ರೈ ಆರ್ತಿಲ Read More »

ಕರಾವಳಿ

ಕೊೈಲ :ಸೌಹಾರ್ದ ವೇದಿಕೆ ಪೂರ್ವ ಅಧ್ಯಕ್ಷ ಹೈದರ್ ಕೊೈಲ ನಿಧನ

(ನ್ಯೂಸ್ ಕಡಬ) newskadaba.com.ಉಪ್ಪಿನಂಗಡಿ,  ಜ.09. ಉಪ್ಪಿನಂಗಡಿ: ಕೊೈಲ ನಿವಾಸಿ, ದಿವಂಗತ ಇಬ್ರಾಹಿಂ ಎಂಬವರ ಪುತ್ರ, ಹೈದರ್ ಕೊೈಲ (37 ವ.) ಕೆಲ ದಿನಗಳ ಹಿಂದೆ ಅನಾರೋಗ್ಯದಿಂದ ಬಳಲುತ್ತಿದ್ದರು. ಜ. 8ರಂದು ತನ್ನ ಮನೆಯಲ್ಲಿ ನಿಧನ ಹೊಂದಿದರು. ಕೊೈಲದಲ್ಲಿ ಅಟೋ ಚಾಲಕರಾಗಿದ್ದ ಹೈದರ್ ಕೊೈಲ ಸೌಹಾರ್ದ ವೇದಿಕೆ ಕೊೈಲ ಇದರ ಅಧ್ಯಕ್ಷರಾಗಿ, ನೂರುಲ್ ಹುದಾ ಮದ್ರಸ ನೀರಾಜೆ ಹಾಗೂ ಯಂಗ್‍ಮೆನ್ಸ್ ಸಂಸ್ಥೆಯಲ್ಲಿ ಸಕ್ರೀಯರಾಗಿ ತನ್ನ ಸಾಮಾಜಿಕ ಕಳಕಳಿಯ ಸೇವೆಯಿಂದ ಸಕ್ರೀಯರಾಗಿ ಚಿರಪರಿಚಿತರಾಗಿದ್ದರು.ಮೃತರು ಪತ್ನಿ ಬುಶ್ರಾ, ಪುತ್ರಿಯರಾದ ಅಫೀಝ, ಅಫ್ರೀನ್‍ರನ್ನು

ಕೊೈಲ :ಸೌಹಾರ್ದ ವೇದಿಕೆ ಪೂರ್ವ ಅಧ್ಯಕ್ಷ ಹೈದರ್ ಕೊೈಲ ನಿಧನ Read More »

ಕರಾವಳಿ

ಉಪ್ಪಿನಂಗಡಿ: ಬಡ ಯುವಕನಿಗೆ ದಾನಿಗಳ ನೆರವು ಬೇಕಾಗಿದೆ

(ನ್ಯೂಸ್ ಕಡಬ) newskadaba.comಉಪ್ಪಿನಂಗಡಿ,  ಜ.09. ಉಪ್ಪಿನಂಗಡಿ: ಕೂಲಿ ಕೆಲಸದ ಮಾಡಿಕೊಂಡು ಮನೆಗೆ ಆಧಾರ ಸ್ತಂಭವಾಗಿದ್ದ ಯುವಕನೀಗ ತನ್ನೆರಡೂ ಕಿಡ್ನಿ ವೈಫಲ್ಯಗೊಂಡಿದ್ದರಿಂದ ದುಡಿಯಲಾರದ ಸ್ಥಿತಿ ತಲುಪಿದ್ದಾನೆ. ತನ್ನ ಕಿಡ್ನಿ ನೀಡಿ ಮಗನಿಗೆ ಬದುಕು ನೀಡಲು ಮುಂದಾದ ತಾಯಿಯೀಗ ಅದಕ್ಕೆ ತಗಲುವ ವೈದ್ಯಕೀಯ ವೆಚ್ಚ ಭರಿಸಲಾಗದೆ ಕಂಗಾಲಾಗಿದ್ದು, ದಾನಿಗಳಲ್ಲಿ ಮಗನ ವೈದ್ಯಕೀಯ ಚಿಕಿತ್ಸಾ ವೆಚ್ಚಕ್ಕಾಗಿ ಸಹಾಯ ಯಾಚಿಸಿದ್ದಾರೆ. ಪುತ್ತೂರು ತಾಲೂಕಿನ ಹಿರೇಬಂಡಾಡಿ ಗ್ರಾಮದ ಹರಿನಗರ ನಿವಾಸಿ ಜಯಂತಿ ಅವರ ಕುಟುಂಬದ ಕರುಣಾಜನಕ ಕಥೆ. ಕೂಲಿ ಮಾಡಿ ಜೀವಿಸುವ ತೀರಾ ಬಡಕುಟುಂಬದ ಜಯಂತಿ

ಉಪ್ಪಿನಂಗಡಿ: ಬಡ ಯುವಕನಿಗೆ ದಾನಿಗಳ ನೆರವು ಬೇಕಾಗಿದೆ Read More »

ಕರಾವಳಿ

ಜನವರಿ 8 ಮತ್ತು 9 ರಂದು ಭಾರತ್ ಬಂದ್ ಗೆ ಕಾರಣಗಳೇನು ಗೊತ್ತೆ?

(ನ್ಯೂಸ್ ಕಡಬ)newskadaba.com.ಬೆಂಗಳೂರು,ಜ.7. ಜನವರಿ 8 ಮತ್ತು 9 ರಂದು ಭಾರತ್ ಬಂದ್ ಗೆ ವಿವಿಧ ಕಾರ್ಮಿಕ ಸಂಘಟನೆಗಳು ಕರೆನೀಡಿವೆ. ಒಟ್ಟು 12 ಬೇಡಿಕೆಗಳನ್ನು ಮುಂದಿಟ್ಟುಕೊಂಡು ದೇಶವ್ಯಾಪಿ ಮುಷ್ಕರ ನಡೆಸಲಾಗುತ್ತಿದ್ದು, ಜನವರಿ 8 ರ ಬೆಳಿಗ್ಗೆ 6 ರಿಂದ ಜನವರಿ 9 ರ ಸಂಜೆ 5 ರವರೆಗೆ ಬಂದ್ ನಡೆಯಲಿದೆ. ಯಾವ ಯಾವ ಸೌಲಭ್ಯಗಳಿಗೆ ಬಂದ್ ಇರುವುದಿಲ್ಲ: ತುರ್ತು ಸೇವೆಗಳಾದ ಆಸ್ಪತ್ರೆ, ಮೆಡಿಕಲ್ ಶಾಪ್, ಆಂಬುಲೆನ್ಸ್ ಸೇವೆಗಳಲ್ಲಿ ಯಾವುದೇ ಬದಲಾವಣೆ ಇರುವುದಿಲ್ಲಸಾರ್ವಜನಿಕರಿಗೆ  ದೈನಂದಿನಂತೆ ವ್ಯವಹಾರ ನಡೆಯುತ್ತದೆ. ಯಾವ  ಯಾವ ಕಾರಣಕ್ಕೆ

ಜನವರಿ 8 ಮತ್ತು 9 ರಂದು ಭಾರತ್ ಬಂದ್ ಗೆ ಕಾರಣಗಳೇನು ಗೊತ್ತೆ? Read More »

ಕರಾವಳಿ

ಗೃಹರಕ್ಷಕರ ಪಶ್ವಿಮ ವಲಯ ವೃತ್ತಿಪರ ಕ್ರೀಡಾಕೂಟದ ಉದ್ಘಾಟನಾ ಸಮಾರಂಭ

(ನ್ಯೂಸ್ ಕಡಬ)newskadaba.com.ಮಂಗಳೂರು,ಜ.4.ಗೃಹರಕ್ಷಕರ ವಲಯ ಮಟ್ಟದ ವೃತ್ತಿಪರ ಕ್ರೀಡಾಕೂಟದ 2018 ಇದರ ಉದ್ಘಾಟನಾ ಸಮಾರಂಭ ದಿನಾಂಕ:04.01.2019, ಶುಕ್ರವಾರದಂದು ಪೊಲೀಸ್ ಪೇರೇಡ್ ಮೈದಾನದಲ್ಲಿ ನಡೆಯಿತು. ತುಕಡಿ ನಾಯಕರಾದ ಶ್ರೀ ವಸಂತ್ ಕುಮಾರ್ ಇವರ ನೇತೃತ್ವದಲ್ಲಿ ಅತಿಥಿಗಳಿಗೆ ಗೌರವ ವಂದನೆಯನ್ನು ನೀಡಲಾಯಿತು. ಕ್ರೀಡಾ ಜ್ಯೋತಿಯ ಆಗಮನವನ್ನು ಶ್ರೀ ಚೇತನ್, ಮೆಟಲ್ ಸಂಖ್ಯೆ 5, ಮಂಗಳೂರು ಘಟಕ ಇವರು ನಿರ್ವಹಿಸಿದರು. ಉಪ ಸಮಾದೇಷ್ಟರಾದ ಶ್ರೀ ರಮೇಶ್ ಇವರು ಪ್ರತಿಜ್ಞಾ ವಿಧಿ ಭೋದಿಸಿದರು. ಕಾರ್ಯಕ್ರಮದ ಉದ್ಘಾಟನೆಯನ್ನು ಶ್ರೀ ಟಿ.ಎನ್.ಶಿವಶಂಕರ, ಮುಖ್ಯ ಅಗ್ನಿಶಾಮಕಾಧಿಕಾರಿ, ಮಂಗಳೂರು ಪ್ರಾಂತ್ಯ

ಗೃಹರಕ್ಷಕರ ಪಶ್ವಿಮ ವಲಯ ವೃತ್ತಿಪರ ಕ್ರೀಡಾಕೂಟದ ಉದ್ಘಾಟನಾ ಸಮಾರಂಭ Read More »

ಕರಾವಳಿ
Scroll to Top