Kadaba

ನಾಳೆ (ಫೆ.20) ಬೇಲ್ಪಾಡಿ ದರ್ಗಾ ಶರೀಫಿನಲ್ಲಿ ಮಜ್ಲಿಸುನ್ನೂರ್ ಆಧ್ಯಾತ್ಮಿಕ ಸಂಗಮ

(ನ್ಯೂಸ್ ಕಡಬ) newskadaba.com ಕಡಬ. ಫೆ.19, ಇತಿಹಾಸ ಪ್ರಸಿದ್ಧವಾದ ಕುಂತೂರು ಬೇಲ್ಪಾಡಿ ಮಖಾಂ ಶರೀಫಿನಲ್ಲಿ ಪ್ರತೀ ತಿಂಗಳು ನಡೆಸಿಕೊಂಡು ಬರುತ್ತಿರುವ ಮಜ್ಲಿಸುನ್ನೂರ್ ಆಧ್ಯಾತ್ಮಿಕ ಸಂಗಮವು ಫೆ.20ರಂದು ಮಗ್ರಿಬ್ ನಮಾಝಿನ ಬಳಿಕ ನಡೆಯಲಿದೆ. ಕಾರ್ಯಕ್ರಮದಲ್ಲಿ ಸಯ್ಯದ್ ಅಬ್ದುಲ್ ರಶೀದಲಿ ಶಿಹಾಬ್ ತಂಙಳ್ ಪಾಣಕ್ಕಾಡ್ ರವರು ನೇತೃತ್ವ ನೀಡಲಿದ್ದು, ಸ್ಥಳೀಯ ಮಸೀದಿ ಖತೀಬರಾದ ಕೆ.ವಿ ಮಜೀದ್ ದಾರಿಮಿ ಪ್ರಾಸ್ತಾವಿಕ ಭಾಷಣ ಮಾಡಲಿದ್ದಾರೆ.

ನಾಳೆ (ಫೆ.20) ಬೇಲ್ಪಾಡಿ ದರ್ಗಾ ಶರೀಫಿನಲ್ಲಿ ಮಜ್ಲಿಸುನ್ನೂರ್ ಆಧ್ಯಾತ್ಮಿಕ ಸಂಗಮ Read More »

ಕರಾವಳಿ

ಆತೂರು: ಹಫ್ವಾ ಕುಟುಂಬ ಸಮ್ಮಿಲನ-2020 ➤ ಸಂಘಟಿತ ಕುಟುಂಬ ಸಂಬಂಧದಿಂದ ಸಮುದಾಯ ಸಬಲೀಕರಣ ಸಾಧ್ಯ-ಹೆಚ್. ಮಹಮ್ಮದ್ ಆಲಿ

(ನ್ಯೂಸ್ ಕಡಬ) newskadaba.com ಉಪ್ಪಿನಂಗಡಿ, ಫೆ.17. ಕುಟುಂಬ ಸಂಬಂಧವನ್ನು ಹತ್ತಿರ ಮಾಡಿಕೊಂಡು ಆ ಮೂಲಕ ಸಂಘಟಿತರಾಗಿ ಪರಸ್ಪರ ಸುಖ ದುಃಖಗಳಲ್ಲಿ ಕೈಜೋಡಿಸಿಕೊಂಡು ಬದುಕಿದರೆ ಸಮುದಾಯದ ಸಬಲೀಕರಣ ಸಾಧ್ಯ ಎಂದು ಪುತ್ತೂರು ನಗರ ಸಭೆಯ ಮಾಜಿ ಸದಸ್ಯ ಹೆಚ್. ಮಹಮ್ಮದ್ ಆಲಿ ಹೇಳಿದರು. ಅವರು ಫೆ. 16ರಂದು ಆತೂರುನಲ್ಲಿ ಹಫ್ವಾ ಕುಟುಂಬ ಸಮ್ಮಿಲನ-2020 ಸಮಾರಂಭದಲ್ಲಿ ಮಾತನಾಡಿ ಸಮುದಾಯದಲ್ಲಿ ಇಂತಹ ಕಾರ್ಯಕ್ರಮಗಳು ಹೆಚ್ಚು ಹೆಚ್ಚು ನಡೆದಾಗ ಈ ಮೂಲಕ ಸಮುದಾಯದಲ್ಲಿ ಕಾಡುವ ಇನ್ನಷ್ಟು ಸಮಸ್ಯೆಗಳಿಗೂ ಪರಿಹಾರ ಕಂಡುಕೊಳ್ಳಬಹುದಾಗಿದೆ ಎಂದರು. ಆತೂರು

ಆತೂರು: ಹಫ್ವಾ ಕುಟುಂಬ ಸಮ್ಮಿಲನ-2020 ➤ ಸಂಘಟಿತ ಕುಟುಂಬ ಸಂಬಂಧದಿಂದ ಸಮುದಾಯ ಸಬಲೀಕರಣ ಸಾಧ್ಯ-ಹೆಚ್. ಮಹಮ್ಮದ್ ಆಲಿ Read More »

ಕರಾವಳಿ

ಝೀರೋ ಟ್ರಾಫಿಕ್ ನಲ್ಲಿ ಬೆಂಗಳೂರಿಗೆ ತಲುಪಿದ ಹೃದ್ರೋಗಿ ಪುಟ್ಟ ಮಗು ➤ ನಿಗದಿತ ಸಮಯದಲ್ಲಿ ಆಸ್ಪತ್ರೆಗೆ ತಲುಪಿಸಿದ ಅಂಬ್ಯಲೆನ್ಸ್ ಚಾಲಕ

(ನ್ಯೂಸ್ ಕಡಬ) newskadaba.com ಬೆಂಗಳೂರು, ಫೆ.06. ಹೃದಯ ಸಂಬಂಧಿ ಕಾಯಿಲೆಯಿಂದ ಬಳಲುತ್ತಿದ್ದ 40 ದಿನದ ಪುಟ್ಟ ಕಂದಮ್ಮನನ್ನು ಝೀರೋ ಟ್ರಾಫಿಕ್ ವ್ಯವಸ್ಥೆಯಲ್ಲಿ ಐಸಿಯು ಆಂಬ್ಯುಲೆನ್ಸ್ ನಲ್ಲಿ ಮಂಗಳೂರಿನಿಂದ ಬೆಂಗಳೂರಿಗೆ ರವಾನಿಸಲಾಯಿತು. ಮಂಗಳೂರಿನ ಫಾದರ್ ಮುಲ್ಲರ್ ಆಸ್ಪತ್ರೆಯಲ್ಲಿ ತುರ್ತು ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಪುಟ್ಟ ಮಗುವನ್ನು ಶಸ್ತ್ರ ಚಿಕಿತ್ಸೆಗಾಗಿ ಐಸಿಯು ಆಂಬ್ಯುಲೆನ್ಸಿನಲ್ಲಿ ಬೆಂಗಳೂರಿನ ಜಯದೇವ ಆಸ್ಪತ್ರೆಗೆ ಝೀರೋ ಟ್ರಾಫಿಕ್ ನಲ್ಲಿ ರಸ್ತೆ ಮಾರ್ಗವಾಗಿ ಕರೆದೊಯ್ಯಲಾಯಿತು. ಮಂಗಳೂರಿನಿಂದ ಹೊರಟ ಆಂಬ್ಯುಲೆನ್ಸ್ ಬಿಸಿ.ರೋಡ್, ಕಲ್ಲಡ್ಕ, ಉಪ್ಪಿನಂಗಡಿ, ನೆಲ್ಯಾಡಿ, ಸಕಲೇಶಪುರ, ಹಾಸನ,

ಝೀರೋ ಟ್ರಾಫಿಕ್ ನಲ್ಲಿ ಬೆಂಗಳೂರಿಗೆ ತಲುಪಿದ ಹೃದ್ರೋಗಿ ಪುಟ್ಟ ಮಗು ➤ ನಿಗದಿತ ಸಮಯದಲ್ಲಿ ಆಸ್ಪತ್ರೆಗೆ ತಲುಪಿಸಿದ ಅಂಬ್ಯಲೆನ್ಸ್ ಚಾಲಕ Read More »

ಕರ್ನಾಟಕ, ಬ್ರೇಕಿಂಗ್ ನ್ಯೂಸ್

ಒರುಂಬಾಲು ರಸ್ತೆಗೆ ಶಾಸಕರಿಂದ ಗುದ್ದಲಿ ಪೂಜೆ

(ನ್ಯೂಸ್ ಕಡಬ) newskadaba.com, ಕಡಬ, ಜ.25    ನೂಜಿಬಾಳ್ತಿಲ ಗ್ರಾಮದ ತೀವ್ರ ಹದಗೆಟ್ಟಿದ್ದ ಬದಿಬಾಗಿಲು-ಒರುಂಬಾಲು ರಸ್ತೆಗೆ ಶಾಸಕರ 15 ಲಕ್ಷ ರೂ. ಅನುದಾನದಲ್ಲಿ ನಡೆಯಲಿರುವ ಕಾಂಕ್ರೀಟ್ ಕಾಮಗಾರಿಗೆ ಶುಕ್ರವಾರ ಸುಳ್ಯ ಶಾಸಕ ಎಸ್.ಅಂಗಾರ ಶಂಕುಸ್ಥಾಪನೆ ನೆರವೇರಿಸಿದರು. ಹಿರಿಯರಾದ ದೇಜಪ್ಪ ಪೂಜಾರಿ ಅವರು ದೀಪ ಬೆಳಗಿಸಿ, ಉದ್ಘಾಟಿಸಿದರು. ಶಾಸಕ ಎಸ್.ಅಂಗಾರ ತೆಂಗಿನ ಕಾಯಿ ಒಡೆದು ಕಾಮಗಾರಿಗೆ ಚಾಲನೆ ನೀಡಿ ಮಾತನಾಡಿ, 1994ರ ಬಳಿಕ ಸುಮಾರು 25 ವರ್ಷಗಳ ಬಳಿಕ ನೂಜಿಬಾಳ್ತಿಲ ಗ್ರಾ.ಪಂ. ವ್ಯಾಪ್ತಿಯಲ್ಲಿ ಹೆಚ್ಚಿನ ಅಭಿವೃದ್ಧಿ ಕಾರ್ಯಗಳು ನಡೆದು

ಒರುಂಬಾಲು ರಸ್ತೆಗೆ ಶಾಸಕರಿಂದ ಗುದ್ದಲಿ ಪೂಜೆ Read More »

ಕರಾವಳಿ

ಕಡಬ: ಮೈದುನನಿಂದ ಆ್ಯಸಿಡ್ ದಾಳಿ ➤ ಮಹಿಳೆ ಮತ್ತು ಮಗು ಗಂಭೀರ

(ನ್ಯೂಸ್ ಕಡಬ) newskadaba.com ಕಡಬ, ಜ.24. ಹಣಕಾಸು ಹಾಗೂ ಭೂ ವಿವಾದಕ್ಕೆ ಸಂಬಂಧಿಸಿ ಮಹಿಳೆಯೋರ್ವರ ಮುಖಕ್ಕೆ ಆಕೆಯ ಬಾವ ಆ್ಯಸಿಡ್ ಎರಚಿದ ಘಟನೆ ಕಡಬ ಠಾಣಾ ವ್ಯಾಪ್ತಿಯ ಕೋಡಿಂಬಾಳ ಎಂಬಲ್ಲಿ ಮಂಗಳವಾರ ಸಂಜೆ ನಡೆದಿದೆ. ಆಸಿಡ್ ಎರಚಿದ ಆರೋಪಿಯನ್ನು ಕೋಡಿಂಬಾಳ ಗ್ರಾಮದ ಕೊಠಾರಿ ನಿವಾಸಿ ಜಯಾನಂದ ಕೊಠಾರಿ(55) ಎಂದು ಗುರುತಿಸಲಾಗಿದೆ. ಕೃಷಿಕರಾಗಿರುವ ಜಯಾನಂದ ತನ್ನ ತಮ್ಮನ ಪತ್ನಿ ವಿಧವೆ ಸ್ವಪ್ನಾ(35) ಹಾಗೂ ಆಕೆಯ ಹೆಣ್ಣುಮಗಳ ಮುಖಕ್ಕೆ ರಬ್ಬರ್ ಶೀಟ್ ಗೆ ಬಳಸುವ ಆ್ಯಸಿಡ್ ಎರಚಿದ್ದಾರೆ‌. ಗಾಯಗೊಂಡಿರುವ ತಾಯಿ

ಕಡಬ: ಮೈದುನನಿಂದ ಆ್ಯಸಿಡ್ ದಾಳಿ ➤ ಮಹಿಳೆ ಮತ್ತು ಮಗು ಗಂಭೀರ Read More »

ಕ್ರೈಮ್ ನ್ಯೂಸ್, ಬ್ರೇಕಿಂಗ್ ನ್ಯೂಸ್

ದೆಹಲಿ ಚುನಾವಣಾ ಪ್ರಚಾರಕ್ಕೆ ಆಯ್ಕೆಯಾದ ಕಡಬದ ಯುವಕ ➤ ರಾಜ್ಯದ ಹತ್ತು ಜನರಲ್ಲಿ ಸ್ಥಾನ ಪಡೆದ ಅಬ್ದುಲ್ ರಝಾಕ್ ಮರ್ಧಾಳ

(ನ್ಯೂಸ್ ಕಡಬ) Newskadaba.com ಕಡಬ. ಜ.24. ಫೆಬ್ರವರಿ 08ರಂದು ನಡೆಯಲಿರುವ ದೆಹಲಿ ವಿಧಾನಸಭಾ ಚುನಾವಣೆಗೆ ಅರವಿಂದ್ ಕೇಜ್ರಿವಾಲ್ ಅವರ ಆಮ್ ಆದ್ಮಿ ಪಕ್ಷದ ಚುನಾವಣಾ ಪ್ರಚಾರಕ್ಕೆ ಕರ್ನಾಟಕದಿಂದ ಆಯ್ಕೆಯಾದ ಹತ್ತು ಜನರ ಪೈಕಿ ಮರ್ಧಾಳದ ಅಬ್ದುಲ್ ರಝಾಕ್ ಸೇರಿದ್ದಾರೆ. ಜನವರಿ 24ರಿಂದ ಫೆಬ್ರವರಿ 04ರ ವರೆಗೆ ನಡೆಯಲಿರುವ ದೆಹಲಿ ವಿಧಾನಸಭಾ ಚುನಾವಣೆಯ ಪ್ರಚಾರದಲ್ಲಿ ಭಾಗವಹಿಸಲಿದ್ದಾರೆ. ಇವರು ಈ ಬಾರಿಯ ಸರ್ವ ಕಾಲೇಜು ವಿದ್ಯಾರ್ಥಿ ಸಂಘ ದಕ್ಷಿಣ ಕನ್ನಡ ಇದರ ಜಿಲ್ಲಾ ಪ್ರಧಾನ ಕಾರ್ಯದರ್ಶಿಯಾಗಿ, ಪುತ್ತೂರಿನ ಸಂತ ಫಿಲೋಮಿನಾ

ದೆಹಲಿ ಚುನಾವಣಾ ಪ್ರಚಾರಕ್ಕೆ ಆಯ್ಕೆಯಾದ ಕಡಬದ ಯುವಕ ➤ ರಾಜ್ಯದ ಹತ್ತು ಜನರಲ್ಲಿ ಸ್ಥಾನ ಪಡೆದ ಅಬ್ದುಲ್ ರಝಾಕ್ ಮರ್ಧಾಳ Read More »

ಬ್ರೇಕಿಂಗ್ ನ್ಯೂಸ್, ರಾಷ್ಟ್ರೀಯ ನ್ಯೂಸ್

ಕಡಬ: ಪಿ ಎಫ್ ಐ ನಿಷೇಧಿಸುವಂತೆ ಮನವಿ

(ನ್ಯೂಸ್ ಕಡಬ) newskadaba.com, ಕಡಬ, ಜ.20  ಕರ್ನಾಟಕ ರಾಜ್ಯದಲ್ಲಿ ವಿಶ್ವ ಹಿಂದೂ ಪರಿಷತ್-ಭಜರಂಗದಳ ಮತ್ತು ಹಿಂದೂ ಮುಖಂಡರ ಹತ್ಯೆಗೆ ಸಂಚು ರೂಪಿಸುತ್ತಿರುವ ಮುಸ್ಲಿಂ ಸಂಘಟನೆಗಳಾದ ಕೆ ಎಫ್ ಡಿ, ಪಿ ಎಫ್ ಐ, ಎಸ್ ಡಿ ಪಿ ಐ ಮೊದಲಾದ ಸಂಘಟನೆಯನ್ನು ರಾಜ್ಯಾದ್ಯಂತ ನಿಷೇಧ ಮಾಡಬೇಕು ಎಂದು ಆಗ್ರಹಿಸಿ ವಿಶ್ವ ಹಿಂದು ಪರಿಷದ್ ಬಜರಂಗದಳ ಕಡಬ ಪ್ರಖಂಡದ ವತಿಯಿಂದ  ರಾಜ್ಯಪಾಲರು ಮತ್ತು ಗೃಹ ಸಚಿವರಿಗೆ ಕಡಬ ತಹಶೀಲ್ದಾರ ಜಾನ್ ಪ್ರಕಾಶ್ ರೋಡ್ರಿಗಸ್ ಮುಖಾಂತರ ಮನವಿ ಸಲ್ಲಿಸಲಾಯಿತು. ಈ

ಕಡಬ: ಪಿ ಎಫ್ ಐ ನಿಷೇಧಿಸುವಂತೆ ಮನವಿ Read More »

ಕರಾವಳಿ

ಜನವರಿ 10 ಏಣಿತಡ್ಕ ದೈವಗಳ ನೇಮೋತ್ಸವ

(ನ್ಯೂಸ್ ಕಡಬ) newskadaba.com,  ಕಡಬ, ಜ.9  ಕಡಬ ತಾಲೂಕಿನ ಕೊೈಲ ಗ್ರಾಮದ ಏಣಿತಡ್ಕದ ಗ್ರಾಮ ದೈವ ಶ್ರೀ ಶಿರಾಡಿ ದೈವ ಹಾಗೂ ಸಪರಿವಾರ ದೈವಗಳ ನೇಮೋತ್ಸವ ಜನವರಿ 10 ನೇ ಶುಕ್ರವಾರ ನಡೆಯಲಿದೆ. ಈಗಾಗಲೇ ಗೊನೆಮಹೋರ್ತ ನಡೆದಿದ್ದು, ಶುಕ್ರವಾರ ಬೆಳಿಗ್ಗೆ ಆಶ್ಲೇಷ ಬಲಿ, ನಾಗನಿಗೆ ಕ್ಷೀರಾಭಿಷೇಕ, ದೈವಗಳಿಗೆ ಕಲಶಾಭಿಷೇಕ ನಡೆದು ಮಧ್ಯಾಹ್ನ ಅನ್ನ ಸಂತರ್ಪಣೆ ನಡೆಯಲಿದೆ. ಸಂಜೆ ಶ್ರೀ ಶಿರಾಡಿ ಹಾಗೂ ಸಪರಿವಾರ ದೈವಗಳ ಭಂಡಾರ ತೆಗೆದು ರಾತ್ರಿ ನೇಮೋತ್ಸವ ನಡೆಲಿದೆ ಎಂದು ಇಲ್ಲಿನ ಆಡಳಿತ ಸಮಿತಿ

ಜನವರಿ 10 ಏಣಿತಡ್ಕ ದೈವಗಳ ನೇಮೋತ್ಸವ Read More »

ಕರಾವಳಿ

ಕ.ರ.ವೇ ಸ್ವಾಭಿಮಾನಿ ಬಣ ಕಡಬ ತಾಲೂಕು ಘೋಷಣಾ ಸಮಾವೇಷ

(ನ್ಯೂಸ್ ಕಡಬ) newskadaba.com, ಕಡಬ, ಡಿ.19   ಕ.ರ.ವೇ ಸ್ವಾಭಿಮಾನಿ ಬಣ ಕಡಬ ತಾಲೂಕು ಘೋಷಣಾ ಸಮಾವೇಷವು ಡಿ.17 ರಂದು ಕಡಬ ಅಂಬೇಡ್ಕರ್ ಭವನದಲ್ಲಿ ನಡೆಯಿತು.ಕ.ರ.ವೇ ಸ್ವಾಭಿಮಾನಿ ಬಣ ರಾಜ್ಯ ಅದ್ಯಕ್ಷ ಕೃಷ್ಣೇ ಗೌಡ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿ, ನಾಡಿನ ಕಟ್ಟಕಡೆಯ ಜನರನ್ನು ಮುಖ್ಯ ವಾಹಿನಿಗೆ ತರುವುದೇ ಸಂಘಟನೆಯ ಮುಖ್ಯ ಉದ್ದೇಶವಾಗಿದೆ. ಸಮಾಜದಲ್ಲಿ ನೊಂದ ಜನರ ಬದುಕನ್ನು ಕಟ್ಟಲು ನೆರವಾಗುವ ಮೂಲಕ ಸಂಘಟನೆಗಳು ತಮ್ಮ ಬದ್ದತೆಯನ್ನು ಕಾಯಬೇಕು.ಸಾಮಾಜಿಕವಾಗಿ ಹೋರಾಟ ಮಾಡಿ ಸಾಂತ್ವಿಕ ಅಂತ್ಯ ಕಂಡ ನಮ್ಮ ಸಂಘಟನೆ

ಕ.ರ.ವೇ ಸ್ವಾಭಿಮಾನಿ ಬಣ ಕಡಬ ತಾಲೂಕು ಘೋಷಣಾ ಸಮಾವೇಷ Read More »

ಕರಾವಳಿ

ಕಡಬ ತಾಲೂಕು ಸಮಸ್ತ ಸುನ್ನಿ ಮಹಲ್ಲಾ ಪೆಡರೇಶನ್ ರೂಪೀಕರಣ ಸಮಿತಿ ರಚನೆ

(ನ್ಯೂಸ್ ಕಡಬ) newskadaba.com, ಕಡಬ, ಡಿ.14   ನೂತನ ಕಡಬ ತಾಲೂಕು ಸಮಸ್ತ ಸುನ್ನೀ ಮಹಲ್ ಪೆಡರೇಶನ್ ಸಮಿತಿ ರಚಿಸಿ ಡಿ 13ರಂದು ಪದಾಧಿಕಾರಿಗಳನ್ನು ಹಾಗು ಕಾರ್ಯಕಾರಿ ಸದಸ್ಯರನ್ನು ಆಯ್ಕೆ ಮಾಡಲಾಯಿತು. ಮಂಗಳೂರು ಖಾಝೀ ತ್ವಾಖಾ ಅಹಮ್ಮದ್ ಮುಸ್ಲಿಯಾರ್ ನೂತನ ಸಮತಿಯನ್ನು ರಚಿಸಿ ಉತ್ತಮ ರೀತಿಯಲ್ಲಿ ಕಾರ್ಯಾಚರಿಸುವಂತೆ ಆಶಿರ್ವದಿಸಿದರು. ಕಡಬ ರಹಮ್ಮಾನಿಯ ಟೌನ್ ಜುಮ್ಮಾ ಮಸೀದಿಯ ಮುದರ್ರಿಸ್ ಹಾಜೀ ಪಿ.ಎಮ್ ಇಬ್ರಾಹಿಂ ದಾರಿಮೀ ಉದ್ಘಾಟಿಸಿದರು. ಅಡ್ ರೆಂಜಿಲಾಡಿ ಹುಸೈನ್ ದಾರಿಮಿ ಮಾತನಾಡಿ ಸಂಘಟಾತ್ಮಕವಾಗಿ ದೀನೀ ಪ್ರವರ್ತಣೆ ಗೈವ ಮೂಲಕ

ಕಡಬ ತಾಲೂಕು ಸಮಸ್ತ ಸುನ್ನಿ ಮಹಲ್ಲಾ ಪೆಡರೇಶನ್ ರೂಪೀಕರಣ ಸಮಿತಿ ರಚನೆ Read More »

ಕರಾವಳಿ
Scroll to Top