ಮರ್ದಾಳ-ಕೊಣಾಜೆ ರಸ್ತೆಯಲ್ಲಿ ಮೈಲುಗಲ್ಲುಗಳೇ ಉಲ್ಟಾ-ಪಲ್ಟಾ

(ನ್ಯೂಸ್ ಕಡಬ) newskadaba.com ಕಡಬ, ಜು.28. ಮರ್ದಾಳದಿಂದ ಕೊಣಾಜೆಗೆ ಸಂಪರ್ಕ ಕಲ್ಪಿಸುವ ರಸ್ತೆಯಲ್ಲಿ ಹೊಸದಾಗಿ ಅಳವಡಿಸಿರುವ ಮೈಲುಗಲ್ಲಿನಲ್ಲಿ ಕಿ.ಮೀ. ನಮೂದಿಸುವಾಗ ಎಡವಟ್ಟು ಮಾಡಲಾಗಿದೆ. ಮರ್ದಾಳ-ಕೊಣಾಜೆ ರಸ್ತೆಯು “ನಮ್ಮ ಗ್ರಾಮ ನಮ್ಮ ರಸ್ತೆ” ಯೋಜನೆಯಡಿಯಲ್ಲಿ ಬ್ರಾಂತಿಕಟ್ಟೆಯಿಂದ ಸುಳ್ಯ ತನಕ ಡಾಮರೀಕರಣಗೊಂಡಿದ್ದು ಇದೀಗ ನೂತನವಾಗಿ ಅಳವಡಿಸಲಾದ ಮೈಲುಗಲ್ಲು ತಪ್ಪು ಮಾಹಿತಿ ನೀಡುವಂತಾಗಿದೆ. ಉಪ್ಪಿನಂಗಡಿ-ಸುಬ್ರಹ್ಮಣ್ಯ ರಾಜ್ಯ ಹೆದ್ದಾರಿಯಿಂದ ಕೊಣಾಜೆ ರಸ್ತೆಗೆ ತಿರುಗುವಲ್ಲಿ ಐತ್ತೂರು 3 ಕಿ.ಮೀ. ಎಂದು ಬರೆಯಲಾಗಿದೆ. ಅಲ್ಲಿ ಬೆತ್ತೋಡಿ 3. ಕಿ.ಮೀ ಎಂದಾಗಬೇಕು ಹಾಗೂ ಸುಳ್ಯ ಸಮೀಪ ಐತ್ತೂರು 3. ಕಿ.ಮೀ […]

ಮರ್ದಾಳ-ಕೊಣಾಜೆ ರಸ್ತೆಯಲ್ಲಿ ಮೈಲುಗಲ್ಲುಗಳೇ ಉಲ್ಟಾ-ಪಲ್ಟಾ Read More »

ಕರಾವಳಿ

ದೇರಾಜೆಕ್ರಾಸ್ – ಗಾಣದಕೊಟ್ಟಿಗೆ ಸಂಪರ್ಕ ರಸ್ತೆಗೆ ತಡೆ ► ಸ್ಥಳೀಯರಿಂದ ಕಡಬ ತಹಶೀಲ್ದಾರ್‍ಗೆ ದೂರು

(ನ್ಯೂಸ್ ಕಡಬ) newskadaba.com ಕಡಬ, ಜು.28. ಕುಟ್ರುಪ್ಪಾಡಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬಲ್ಯ ಗ್ರಾಮದ ದೇರಾಜೆಕ್ರಾಸ್ – ಗಾಣದಕೊಟ್ಟಿಗೆ ಸಂಪರ್ಕ ರಸ್ತೆಯ ಗಾಣದಕೊಟ್ಟಿಗೆ ಎಂಬಲ್ಲಿ ರಸ್ತೆಯಲ್ಲಿ ಹರಿಯುತ್ತಿರುವ ನೀರನ್ನು ಖಾಸಗಿ ವ್ಯಕ್ತಿಗಳಿಬ್ಬರು ತಮ್ಮ ಸ್ವಹಿತಕ್ಕಾಗಿ ತಡೆಹಿಡಿದ ಪರಿಣಾಮ ರಸ್ತೆಯಲ್ಲಿ ನೀರು ನಿಂತು ಸಂಚರಿಸಲು ಅಸಾಧ್ಯವಾಗಿದೆ ಎಂದು ಆರೋಪಿಸಿ ಗಾಣದಕೊಟ್ಟಿಗೆ ನಿವಾಸಿಗಳು ಕಡಬ ತಹಶೀಲ್ದಾರ್ ಜಾನ್ ಪ್ರಕಾಶ್ ಅವರಿಗೆ ಲಿಖಿತ ದೂರು ನೀಡಿ ಕ್ರಮಕೈಗೊಳ್ಳುವಂತೆ ಆಗ್ರಹಿಸಿದ್ದಾರೆ. ಸ್ಥಳಿಯಾಡಳಿತ ಅಧೀನದ ಈ ರಸ್ತೆಯನ್ನು ಸುಮಾರು 100ಕ್ಕೂ ಹೆಚ್ಚು ಕುಟುಂಬಗಳು ಉಪಯೋಗಿಸುತ್ತಿವೆ. ಈ

ದೇರಾಜೆಕ್ರಾಸ್ – ಗಾಣದಕೊಟ್ಟಿಗೆ ಸಂಪರ್ಕ ರಸ್ತೆಗೆ ತಡೆ ► ಸ್ಥಳೀಯರಿಂದ ಕಡಬ ತಹಶೀಲ್ದಾರ್‍ಗೆ ದೂರು Read More »

ಕರಾವಳಿ

ಇನ್ಮುಂದೆ ವರದಕ್ಷಿಣೆ ದೂರು ನೀಡಿದಾಕ್ಷಣ ಯಾರನ್ನೂ ಬಂಧಿಸುವಂತಿಲ್ಲ ► ಕಾರಣವೇನೆಂದು ಗೊತ್ತೇ…?

(ನ್ಯೂಸ್ ಕಡಬ) newskadaba.com ನವದೆಹಲಿ, ಜು.28. 1983ರಲ್ಲಿ ರಚನೆಯಾದ ವರದಕ್ಷಿಣೆ ವಿರೋಧಿ ಕಾನೂನನ್ನು ಹಲವು ಮಹಿಳೆಯರು ದುರ್ಬಳಕೆ ಮಾಡಿಕೊಳ್ಳುತ್ತಿದ್ದಾರೆಂದು ಹಲವು ವರ್ಷಗಳಿಂದ ದೂರುಗಳು ದಾಖಲಾಗಿರೋ ಹಿನ್ನೆಲೆಯಲ್ಲಿ ವರದಕ್ಷಿಣೆ ಪ್ರಕರಣಗಳಲ್ಲಿ ಪ್ರಾಥಮಿಕ ತನಿಖೆ ನಡೆಸದೆ ಇನ್ಮುಂದೆ ಯಾರನ್ನೂ ಶೀಘ್ರವೇ ಬಂಧಿಸುವಂತಿಲ್ಲ ಎಂದು ಸುಪ್ರೀಂಕೋರ್ಟ್ ಆದೇಶ ಹೊರಡಿಸಿದೆ. ವಿವಾಹಿತ ಮಹಿಳೆಗೆ ಪತಿ ಅಥವಾ ಆತನ ಕುಟುಂಬದಿಂದಾಗುವ ಹಿಂಸೆಯನ್ನು ತಡೆಯುವ ಸಲುವಾಗಿ ವರದಕ್ಷಿಣೆ ವಿರೋಧಿ ಕಾನೂನನ್ನು ಜಾರಿಗೆ ತರಲಾಗಿದ್ದು, ಕಾನೂನಿನ ದುರ್ಬಳಕೆ ಆಗುತ್ತಿರುವುದರಿಂದ ದೇಶದಾದ್ಯಂತ ಪ್ರತಿ ಜಿಲ್ಲೆಯಲ್ಲೂ ಕುಟುಂಬ ಕಲ್ಯಾಣ ಸಮಿತಿಗಳನ್ನ ಸ್ಥಾಪಿಸಬೇಕು ಎಂದು ನ್ಯಾ. ಎ.ಕೆ

ಇನ್ಮುಂದೆ ವರದಕ್ಷಿಣೆ ದೂರು ನೀಡಿದಾಕ್ಷಣ ಯಾರನ್ನೂ ಬಂಧಿಸುವಂತಿಲ್ಲ ► ಕಾರಣವೇನೆಂದು ಗೊತ್ತೇ…? Read More »

ರಾಷ್ಟ್ರೀಯ ನ್ಯೂಸ್

ಅಕ್ರಮ ಗಾಂಜಾ ಸಾಗಾಟ: ಆರೋಪಿ ಪೊಲೀಸ್ ಬಲೆಗೆ

(ನ್ಯೂಸ್ ಕಡಬ) newskadaba.com ಉಡುಪಿ, ಜು.28. ಅಕ್ರಮವಾಗಿ ಗಾಂಜಾ ಸಾಗಿಸುತ್ತಿದ್ದ ವ್ಯಕ್ತಿಯೊಬ್ಬನನ್ನು ಉಡುಪಿ ಡಿಸಿಐಬಿ ಪೊಲೀಸರು ಕಲ್ಸಂಕ ರಾಯಲ್ ಗಾರ್ಡನ್ ಬಳಿ ಬಂಧಿಸಿದ್ದಾರೆ. ಬಂದಿತನ್ನು ಕಾಪು ಮಲ್ಲಾರು ಕೋಟೆ ರಸ್ತೆಯ ಉಬೇದುಲ್ಲಾ ಯಾನೆ ಮುಹಮ್ಮದ್ ಖಾಸಿಮ್(53) ಎಂದು ಗುರುತಿಸಲಾಗಿದೆ. ಈತನಿಂದ 45,000ರೂ. ವೌಲ್ಯದ 1,450 ಗ್ರಾಂ ಗಾಂಜಾ, ಬೈಕ್, ಎರಡು ಮೊಬೈಲ್, 2200ರೂ. ನಗದನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಉಡುಪಿ ಜಿಲ್ಲಾ ಪೊಲೀಸ್ ಅಧೀಕ್ಷಕ ಕೆ.ಟಿ.ಬಾಲಕೃಷ್ಣ ನಿರ್ದೇಶನದಲ್ಲಿ ಉಡುಪಿ ಡಿವೈಎಸ್ಪಿ ಎಸ್.ಜೆ.ಕುಮಾರಸ್ವಾಮಿ ಮಾರ್ಗದರ್ಶನದಲ್ಲಿ ಉಡುಪಿ ಡಿಸಿಐಬಿ ನಿರೀಕ್ಷಕ ಸಂಪತ್

ಅಕ್ರಮ ಗಾಂಜಾ ಸಾಗಾಟ: ಆರೋಪಿ ಪೊಲೀಸ್ ಬಲೆಗೆ Read More »

ಕರ್ನಾಟಕ

‘ಬಿಜೆಪಿ ಮುಕ್ತ ಭಾರತ’ ಕರ್ನಾಟಕದಿಂದಲೇ ಆರಂಭ: ಸಿಎಂ ಸಿದ್ದರಾಮಯ್ಯ

(ನ್ಯೂಸ್ ಕಡಬ) newskadaba.com ಬೆಂಗಳೂರು, ಜು.28. ಕೇಂದ್ರದಲ್ಲಿ ಅಧಿಕಾರದಲ್ಲಿರುವ ಬಿಜೆಪಿಯು ‘ಕಾಂಗ್ರೆಸ್ ಮುಕ್ತ ಭಾರತ’ ಘೋಷಣೆಯಡಿ ಕಾಂಗ್ರೆಸ್ ಪಕ್ಷವನ್ನು ದೇಶದಿಂದ ನಿರ್ಮೂಲನೆ ಮಾಡಲು ಪ್ರಯತ್ನಿಸುತ್ತಿರುವ ಬೆನ್ನಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಬಿಜೆಪಿಗೆ ಸವಾಲು ಹಾಕಿದ್ದಾರೆ. ದೇಶದಲ್ಲಿ ‘ಬಿಜೆಪಿ ಮುಕ್ತ ಭಾರತ’ ನಿರ್ಮಾಣ ಆಗಲಿದ್ದು, ಆ ಕಾರ್ಯವು ಕರ್ನಾಟಕದಿಂದಲೇ ಆರಂಭವಾಗಲಿದೆ ಎಂದು ಘೋಷಿಸಿದ್ದಾರೆ. ಇದಕ್ಕಾಗಿ ರಾಜ್ಯದಲ್ಲಿ ಯಾವುದೇ ಪಕ್ಷದೊಂದಿಗೆ ಹೊಂದಾಣಿಕೆ ಮಾಡಿಕೊಳ್ಳುವ ಪ್ರಶ್ನೆಯೇ ಇಲ್ಲ ಎಂದು ತಿಳಿಸಿದ್ದಾರೆ. ಅವರು ನಗರದ ವಿಮಾನ ನಿಲ್ದಾಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಮುಂದಿನ ವಿಧಾನಸಭೆ ಹಾಗೂ

‘ಬಿಜೆಪಿ ಮುಕ್ತ ಭಾರತ’ ಕರ್ನಾಟಕದಿಂದಲೇ ಆರಂಭ: ಸಿಎಂ ಸಿದ್ದರಾಮಯ್ಯ Read More »

ಕರ್ನಾಟಕ

ತಾಯಿ-ಮಗುವಿನ ಪ್ರಾಣ ಉಳಿಸಲು ಗ್ರಾ.ಪಂ. ನೌಕರರಿಂದ ಧನ ಸಹಾಯ

(ನ್ಯೂಸ್ ಕಡಬ) newskadaba.com ಮಂಗಳೂರು, ಜು.28. ಕಳೆದ ಹಲವು ವರ್ಷಗಳಿಂದ ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ವೇಣೂರು ಗ್ರಾಮ ಪಂಚಾಯತ್‍ನಲ್ಲಿ ಕನಿಷ್ಠ ವೇತನದಲ್ಲಿ ಸೇವೆ ಸಲ್ಲಿಸುತ್ತಿರುವ ಪುಷ್ಪಾವತಿ ಎಂಬಾಕೆಯು ಹೆಚ್1ಎನ್1 ಜ್ವರದಿಂದ ಬಳಲುತ್ತಿದ್ದು 10 ದಿನಗಳ ಹಿಂದೆ ನಗರದ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದರು. ತುಂಬು ಗರ್ಭಿಣಿಯಾಗಿದ್ದ ಅವರಿಗೆ ವಾರದ ಹಿಂದೆ ವಿಪರೀತ ಜ್ವರ ಬಂದ ಕಾರಣ ತುರ್ತು ಶಸ್ತ್ರಚಿಕಿತ್ಸೆ ಮೂಲಕ ಮಗುವನ್ನು ಹೊರತೆಗೆದು ಹೆಚ್ಚಿನ ಚಿಕಿತ್ಸೆಗೆ ಮಗುವನ್ನು ಹಾಗೂ ಪುಷ್ಪಾವತಿಯವರನ್ನು ತೀವ್ರ ನಿಗಾ ಘಟಕದಲ್ಲಿ ಇರಿಸಿಲಾಗಿತ್ತು. ರಾಜ್ಯ ಸರಕಾರದ ಪಂಚಾಯತ್

ತಾಯಿ-ಮಗುವಿನ ಪ್ರಾಣ ಉಳಿಸಲು ಗ್ರಾ.ಪಂ. ನೌಕರರಿಂದ ಧನ ಸಹಾಯ Read More »

ಕರಾವಳಿ

ರಾಜ್ಯವನ್ನು ತಲ್ಲಣಗೊಳಿಸಿದ್ದ ಭಾಸ್ಕರ ಶೆಟ್ಟಿ ಕೊಲೆ ಪ್ರಕರಣಕ್ಕೆ ಒಂದು ವರ್ಷ ► ಇನ್ನೂ ಆರಂಭವಾಗದ ವಿಚಾರಣೆ

(ನ್ಯೂಸ್ ಕಡಬ) newskadaba.com ಉಡುಪಿ, ಜು.27. ರಾಜ್ಯವನ್ನೇ ಬೆಚ್ಚಿಬೀಳಿಸಿದ್ದ ಅನಿವಾಸಿ ಭಾರತೀಯ ಉದ್ಯಮಿ ಕೋಟ್ಯಾಧಿಪತಿ ಉಡುಪಿಯ ದುರ್ಗಾ ಇಂಟರ್‌ನ್ಯಾಶನಲ್ ಹೊಟೇಲ್‌ ಮಾಲಕ ಭಾಸ್ಕರ್ ಶೆಟ್ಟಿ(52)ಯವರನ್ನು ಹೋಮ ಕುಂಡದಲ್ಲಿಟ್ಟು ಕರ್ಪೂರ, ತುಪ್ಪ, ಪೆಟ್ರೋಲ್ ನಿಂದ ಸುಟ್ಟು ಕೊಲೆಗೈದ ಪ್ರಕರಣಕ್ಕೆ ಶುಕ್ರವಾರಕ್ಕೆ ಒಂದು ವರ್ಷ ತುಂಬಿದೆ. ನಿಗೂಢ ರೀತಿಯಲ್ಲಿ ಕಣ್ಮರೆಯಾದ ಭಾಸ್ಕರ ಶೆಟ್ಟಿಯವರನ್ನು ಕೊಲೆ ಮಾಡಲಾಗಿದೆ ಎಂದು ಅವರ ತಾಯಿ ನೀಡಿದ್ದ ದೂರಿ‌ನ ಜಾಡು ಹಿಡಿದ ಪೊಲೀಸರು ವಿವಿಧ ಆಯಾಮಗಳಲ್ಲಿ ತನಿಖೆ ನಡೆಸಿ ಅವರ ಪತ್ನಿ, ಪುತ್ರ ಹಾಗೂ ಸ್ಥಳೀಯ ಜ್ಯೋತಿಷಿಯೋರ್ವನನ್ನು

ರಾಜ್ಯವನ್ನು ತಲ್ಲಣಗೊಳಿಸಿದ್ದ ಭಾಸ್ಕರ ಶೆಟ್ಟಿ ಕೊಲೆ ಪ್ರಕರಣಕ್ಕೆ ಒಂದು ವರ್ಷ ► ಇನ್ನೂ ಆರಂಭವಾಗದ ವಿಚಾರಣೆ Read More »

ಕರ್ನಾಟಕ

ಶ್ರೀ.ಕ್ಷೇ.ಧ.ಗ್ರಾ.ಯೋ. ಬಿಳಿನೆಲೆ ವಲಯದ ವತಿಯಿಂದ ವನ ಮಹೋತ್ಸವ

(ನ್ಯೂಸ್ ಕಡಬ) newskadaba.com ಕಡಬ, ಜು.28. ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃಧ್ದಿ ಯೋಜನೆ ಬಿಳಿನೆಲೆ ವಲಯದ, 102ನೇ ನೆಕ್ಕಿಲಾಡಿ ಓಕ್ಕೂಟದ ವತಿಯಿಂದ ಶ್ರಿ ಕ್ಷೇತ್ರ ನಡುಮಜಲು ಶ್ರೀ ಮಹಾವಿಷ್ಣು ದೇವಸ್ಥಾನ ಹೊಸಮ್ಮ ದೇವಿ ಹಾಗೂ ಪರಿವಾರ ದೈವಸ್ಥಾನದಲ್ಲಿ ವನವಹೋತ್ಸವ ಕಾರ್ಯಕ್ರಮವು ಇತ್ತೀಚೆಗೆ ನಡೆಯಿತು. ಈ ಕಾರ್ಯಕ್ರಮದಲ್ಲಿ ಬಿಳಿನೆಲೆ ವಲಯ ಮೆಲ್ವಿಚಾರಕರಾದ ರಾಜು ಗೌಡ, ಬಿಳಿನೆಲೆ ಪ್ರಗತಿ ಬಂದು, ಸ್ವಸಹಾಯ ಸಂಘಗಳ ವಲಯಾಧ್ಯಕ್ಷರಾದ ಭವಾನಿ ಶಂಕರ್ ಬಿ., ಸೇವಾ ಪ್ರತಿನಿಧಿ ಸತಿಶ್.ಎ., ದೇವಸ್ಥಾನದ ಪ್ರಧಾನ ಅರ್ಚಕರಾದ ಗೋಪಾಲಕೃಷ್ಣ ಕೆದಿಲಾಯ,

ಶ್ರೀ.ಕ್ಷೇ.ಧ.ಗ್ರಾ.ಯೋ. ಬಿಳಿನೆಲೆ ವಲಯದ ವತಿಯಿಂದ ವನ ಮಹೋತ್ಸವ Read More »

ಕರಾವಳಿ

ಕಡಬದ ಶೆರ್ಲಿ ಮನೋಜ್ ಜೇಸಿ ವಲಯ ತರಬೇತುದಾರರಾಗಿ ಆಯ್ಕೆ

(ನ್ಯೂಸ್ ಕಡಬ) newskadaba.com ಕಡಬ, ಜು.27. ಇತ್ತೀಚೆಗೆ ಜೇಸಿಐ ಇಂಡಿಯಾವು ಕುಕ್ಕೆ ಸುಬ್ರಹ್ಮಣ್ಯದಲ್ಲಿ ನಡೆಸಿದ ವಲಯ ತರಬೇತುದಾರರ ಕಮ್ಮಟದಲ್ಲಿ ಜೇಸಿಐ ಉಡುಪಿ-ಇಂದ್ರಾಳಿಯ ಅಧ್ಯಕ್ಷೆ, ಮಣಿಪಾಲದ ಶೆಫಿನ್ಸ್‌ ಸಮೂಹದ ಸಹ ನಿರ್ದೇಶಕಿ, ಕಡಬ ಇಚಿಲಂಪಾಡಿಯ ಥಾಮಸ್ ರವರ ಪುತ್ರಿ ಶ್ರೀಮತಿ ಶೆರ್ಲಿ ಮನೋಜ್ ರವರು ವಲಯ ತರಬೇತುದಾರರಾಗಿ ಮೂಡಿ ಬಂದಿದ್ದಾರೆ. ಇವರು ಮೂಲತಃ ಕಡಬದ ಕಳಾರ ನಿವಾಸಿ ಮನೋಜ್ ಪಿ.ಯಂ.ರವನ್ನು ವರಿಸಿ ಸುಮಾರು 29 ವರ್ಷಗಳಿಂದ ಉಡುಪಿಯ ಮಣಿಪಾಲದಲ್ಲಿ ನೆಲೆಸಿರುತ್ತಾರೆ. ಪ್ರಸಕ್ತ ಜೇಸಿಯ ವಲಯಾಧಿಕಾರಿಯಾಗಿರುವ ಇವರು ಉಡುಪಿ ಪರಿಸರದಲ್ಲಿ ಮತ್ತು ಜೇಸಿ

ಕಡಬದ ಶೆರ್ಲಿ ಮನೋಜ್ ಜೇಸಿ ವಲಯ ತರಬೇತುದಾರರಾಗಿ ಆಯ್ಕೆ Read More »

ಕರ್ನಾಟಕ

ಆಧಾರ್ ಕಾರ್ಡಿನ ವೆಬ್‍ಸೈಟಿಗೆ ಕನ್ನ ► ಕೋಟ್ಯಂತರ ಜನರ ಗೌಪ್ಯ ಮಾಹಿತಿ ಸೋರಿಕೆ

(ನ್ಯೂಸ್ ಕಡಬ) newskadaba.com ಬೆಂಗಳೂರು, ಜು.27. ಆಧಾರ್ ಕಾರ್ಡ್ ಬಗ್ಗೆ ಕೆಲವು ದಿನಗಳಿಂದ ಸುಪ್ರೀಂಕೋರ್ಟ್ ನಲ್ಲಿ ವಾದ-ಪ್ರತಿವಾದ ನಡೆಯುತ್ತಿರುವ ಬೆನ್ನಲ್ಲೇ, ಆಧಾರ್ ವೆಬ್‍ಸೈಟ್ uidai.gov.in ನ್ನು ಬೆಂಗಳೂರಿನ ಕಂಪೆನಿಯೊಂದು ಹ್ಯಾಕ್ ಮಾಡಿದೆ ಎನ್ನುವ ಆಘಾತಕಾರಿ ವಿಷಯ ಗುರುವಾರ ಸಂಜೆ ತಿಳಿದುಬಂದಿದೆ. ಇ-ಕೆವೈಸಿ ಆ್ಯಂಡ್ರಾಯ್ಡ್ ಅಪ್ಲಿಕೇಶನ್ ಮೂಲಕ ಬೆಂಗಳೂರಿನ ಕ್ವರ್ಥ್ ಟೆಕ್ನಾಲಜೀಸ್ ಪ್ರೈವೇಟ್ ಲಿಮಿಟೆಡ್ ಎನ್ನುವ ಕಂಪನಿಯು ಆಧಾರ್‍ನ ಅಧಿಕೃತ ವೆಬ್‍ಸೈಟ್ uidai.gov.in ನ್ನು ಹ್ಯಾಕ್ ಮಾಡಿ ಗೌಪ್ಯ ಮಾಹಿತಿಯನ್ನ ಕಲೆಹಾಕಿದೆ ಎಂದು ಹೇಳಲಾಗುತ್ತಿದೆ. ಈ ಬಗ್ಗೆ ಬೆಂಗಳೂರಿನ ಹೈಗ್ರೌಂಡ್ಸ್ ಪೊಲೀಸ್ ಠಾಣೆಗೆ ಆಧಾರ್

ಆಧಾರ್ ಕಾರ್ಡಿನ ವೆಬ್‍ಸೈಟಿಗೆ ಕನ್ನ ► ಕೋಟ್ಯಂತರ ಜನರ ಗೌಪ್ಯ ಮಾಹಿತಿ ಸೋರಿಕೆ Read More »

ರಾಷ್ಟ್ರೀಯ ನ್ಯೂಸ್
Scroll to Top