ಕಡಬ: ಬೈಕ್-ಆಂಬ್ಯುಲೆನ್ಸ್ ಢಿಕ್ಕಿ ► ಓರ್ವ ಗಂಭೀರ – ಸವಾರನಿಗೆ ಗಾಯ

(ನ್ಯೂಸ್ ಕಡಬ) newskadaba.com ಕಡಬ, ಆ.01. ಇಲ್ಲಿನ ಪಂಜ ರಸ್ತೆಯ ಅಜ್ಜಿಕಟ್ಟೆ ಎಂಬಲ್ಲಿ ಸೇರಿದ ಆಂಬ್ಯುಲೆನ್ಸ್ ಹಾಗೂ ಬೈಕ್ ನಡುವೆ ಢಿಕ್ಕಿ ಸಂಭವಿಸಿದ ಪರಿಣಾಮ ಸವಾರರಿಬ್ಬರು ಗಾಯಗೊಂಡ ಘಟನೆ ಮಂಗಳವಾರ ಸಂಜೆ ನಡೆದಿದೆ. ಗಾಯಾಳುಗಳನ್ನು 102 ನೇ ನೆಕ್ಕಿಲಾಡಿ ಗ್ರಾಮದ N.Coop ನಿವಾಸಿಗಳಾದ ವಿಶ್ವನಾಥ್(18) ಹಾಗೂ ಅಲಗರಾಜ್(48) ಎಂದು ಗುರುತಿಸಲಾಗಿದೆ. ಅಲಗರಾಜ್ ರವರ ಸ್ಥಿತಿ ಗಂಭೀರವಾಗಿದೆ ಎಂದು ತಿಳಿದುಬಂದಿದೆ. ಕಡಬದಿಂದ ಕೋಡಿಂಬಾಳ ಕಡೆಗೆ ತೆರಳುತ್ತಿದ್ದ ಬೈಕಿಗೆ ಕಡಬಕ್ಕೆ ಆಗಮಿಸುತ್ತಿದ್ದ ಕರ್ನಾಟಕ ರಾಜ್ಯ ರಬ್ಬರ್ ಅಭಿವೃದ್ಧಿ ನಿಗಮಕ್ಕೆ ಸೇರಿದ ತೂಫಾನ್ […]

ಕಡಬ: ಬೈಕ್-ಆಂಬ್ಯುಲೆನ್ಸ್ ಢಿಕ್ಕಿ ► ಓರ್ವ ಗಂಭೀರ – ಸವಾರನಿಗೆ ಗಾಯ Read More »

ಕರಾವಳಿ

ಸ್ಯಾಂಡಲ್‌ವುಡ್‌ ನಟ ಧ್ರುವ ಶರ್ಮಾ ಮೃತ್ಯು ► ಧ್ರುವ ಶರ್ಮಾ ಆತ್ಮಹತ್ಯೆ ಮಾಡಿಕೊಂಡರೇ…?

(ನ್ಯೂಸ್ ಕಡಬ) newskadaba.com ಬೆಂಗಳೂರು, ಆ.01. ಸ್ಯಾಂಡಲ್‌ವುಡ್‌ ನಟ ಹಾಗೂ ಸಿಸಿಎಲ್‌ ಟೂರ್ನಿ ಕರ್ನಾಟಕ ಬುಲ್ಡೋಜರ್ಸ್ ತಂಡದ ಆಟಗಾರ ಧ್ರುವ ಶರ್ಮಾ (35) ಬೆಂಗಳೂರಿನ ಹೆಬ್ಬಾಳದ ಕೊಲಂಬಿಯಾ ಏಷ್ಯಾ ಖಾಸಗಿ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ. ಆದರೆ ಧ್ರುವ ಶರ್ಮಾ ಅವರು ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ಅವರ ತಂದೆ ಸುರೇಶ್ ಶರ್ಮಾ ಪೊಲೀಸರಿಗೆ ದೂರು ನೀಡಿದ್ದಾರೆ. ಕಂಪೆನಿಯಲ್ಲಿ ನಷ್ಟ ಮತ್ತು ಸಾಲದ ಬಾಧೆಯ ಹಿನ್ನೆಲೆಯಲ್ಲಿ ಧ್ರುವ ಶರ್ಮಾ ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ಪೊಲೀಸರಿಗೆ ನೀಡಿರುವ ದೂರಿನಲ್ಲಿ ಉಲ್ಲೇಖಿಸಿರುವುದಾಗಿ ತಿಳಿದು ಬಂದಿದೆ. ಆತ್ಮಹತ್ಯೆಗೆ ಯತ್ನಿಸಿದ್ದ ಧ್ರುವ ಅವರನ್ನು ಶನಿವಾರ ಬೆಂಗಳೂರಿನ

ಸ್ಯಾಂಡಲ್‌ವುಡ್‌ ನಟ ಧ್ರುವ ಶರ್ಮಾ ಮೃತ್ಯು ► ಧ್ರುವ ಶರ್ಮಾ ಆತ್ಮಹತ್ಯೆ ಮಾಡಿಕೊಂಡರೇ…? Read More »

ಕರ್ನಾಟಕ

ಶೀಘ್ರದಲ್ಲೇ ಬರಲಿದೆ ಹೆಚ್ಡಿಕೆ ಮಾಲಕತ್ವದ ಕ್ಯಾಬ್ ಸರ್ವೀಸ್ ► ‘ನಮ್ಮ ಟೈಗರ್’ ಆ್ಯಪ್ ಆಧಾರಿತ ಕ್ಯಾಬ್ ಸೇವೆ

(ನ್ಯೂಸ್ ಕಡಬ) newskadaba.com ಬೆಂಗಳೂರು, ಆ.01. ಓಲಾ, ಉಬರ್ ನಂತಹ ಆ್ಯಪ್ ಆಧಾರಿತ ಟ್ಯಾಕ್ಸಿ ಸೇವೆಯ ಸಂಸ್ಥೆಗಳಿಗೆ ಸಡ್ಡು ಹೊಡೆದು ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಮಾರ್ಗದರ್ಶನದಲ್ಲಿ ಚಾಲಕರೇ ಸೇರಿ ಆರಂಭಿಸುತ್ತಿರುವ ಆ್ಯಪ್ ಆಧಾರಿತ ಕ್ಯಾಬ್ ಸೇವೆ ‘ನಮ್ಮ ಟೈಗರ್‘ ಶೀಘ್ರದಲ್ಲೇ ಆರಂಭವಾಗಲಿದೆ. ಈ ಮೊದಲು HDK Cab ಎಂದು ಹೆಸರಿಡಲು ಚಾಲಕ ಮುಖಂಡರು ನಿರ್ಧರಿಸಿದ್ದರು. ಆದರೆ ಎಚ್.ಡಿ. ಕುಮಾರಸ್ವಾಮಿಯವರ ನಿರ್ದೇಶನದಂತೆ ತಮ್ಮ ಹೆಸರಿನ ಬದಲು ‘ನಮ್ಮ ಟೈಗರ್’ ಎಂದು ಹೆಸರಿಸಲಾಗಿದೆ. ಈ ನೂತನ ಕ್ಯಾಬ್ ಸೇವೆ ಆಗಸ್ಟ್ 15ರೊಳಗೆ ಸಾರ್ವಜನಿಕ

ಶೀಘ್ರದಲ್ಲೇ ಬರಲಿದೆ ಹೆಚ್ಡಿಕೆ ಮಾಲಕತ್ವದ ಕ್ಯಾಬ್ ಸರ್ವೀಸ್ ► ‘ನಮ್ಮ ಟೈಗರ್’ ಆ್ಯಪ್ ಆಧಾರಿತ ಕ್ಯಾಬ್ ಸೇವೆ Read More »

ಕರ್ನಾಟಕ

ನಿಮ್ಮ ಮಕ್ಕಳು ಮೊಬೈಲಿನಲ್ಲಿ ಆಡುತ್ತಾರೆಯೇ…?? ► ಎಚ್ಚರ… ಮಕ್ಕಳ ಜೀವವನ್ನು ಕೊನೆಯಾಗಿಸಬಹುದು ಈ ಆಟ

(ನ್ಯೂಸ್ ಕಡಬ) newskadaba.com ಮುಂಬೈ, ಆ.01. ನಿಮ್ಮ ಮಕ್ಕಳು ಇಂಟರ್ನೆಟ್‍ನಲ್ಲಿ ಹೆಚ್ಚು ಹೊತ್ತು ಆಟ ಆಡುತ್ತಿರುತ್ತಾರಾ…?  ಇಂಟರ್ನೆಟ್ ನ ಹುಚ್ಚಿನಲ್ಲಿ ನಿಮ್ಮ ಮಗ ಪ್ರಾಣವನ್ನೇ ತೆಗೆದುಕೊಳ್ಳಬಹುದು. ಬ್ಲೂ ವೇಲ್ ಚಾಲೆಂಜ್ ಎಂಬ ಆನ್ ಲೈನ್ ಕ್ರೀಡೆಗೆ ಬಲಿಯಾಗಿ ಪ್ರಾಣತೆತ್ತ ದೇಶದ ಮೊದಲ ಬಾಲಕ ಈ ಮನ್ ಪ್ರೀತ್ ಸಹಾನ್ಸ್. ಮುಂಬೈಯಿಯ ಪೂರ್ವ ಅಂಧೇರಿಯ ಮನ್ ಪ್ರೀತ್ ಕೌರ್ ಎಂಬ 14 ವರ್ಷದ ಹುಡುಗ ಮುಂಬೈನಲ್ಲಿ ತನ್ನ ಪೋಷಕರ ಜೊತೆ ವಾಸವಿದ್ದ ಕಟ್ಟಡದಿಂದ ಜಿಗಿದು ತನ್ನ ಪ್ರಾಣವನ್ನೇ ಕಳೆದುಕೊಂಡಿದ್ದಾನೆ. ಇದಕ್ಕೆ ಕಾರಣವಾಗಿದ್ದು ಇಂಟರ್ನೆಟ್. ರಷ್ಯಾ

ನಿಮ್ಮ ಮಕ್ಕಳು ಮೊಬೈಲಿನಲ್ಲಿ ಆಡುತ್ತಾರೆಯೇ…?? ► ಎಚ್ಚರ… ಮಕ್ಕಳ ಜೀವವನ್ನು ಕೊನೆಯಾಗಿಸಬಹುದು ಈ ಆಟ Read More »

ರಾಷ್ಟ್ರೀಯ ನ್ಯೂಸ್

ಪುತ್ತಿಗೆ: ಬಾವಿಯಲ್ಲಿ‌ ನವಜಾತ ಶಿಶುವಿನ ಶವ ಪತ್ತೆ ► ಭಾನುವಾರದಂದು ಬಾವಿಗೆ ಹಾರಿ ಆತ್ಮಹತ್ಯೆಗೆ ಯತ್ನಿಸಿದ್ದ ಅವಿವಾಹಿತ ಯುವತಿ

(ನ್ಯೂಸ್ ಕಡಬ) newskadaba.com ಮಂಗಳೂರು, ಆ.01. ನವಜಾತ ಶಿಶುವಿನ ಮೃತದೇಹ ಬಾವಿಯೊಂದರಲ್ಲಿ ಪತ್ತೆಯಾದ ಘಟನೆ ಇಲ್ಲಿನ ಪುತ್ತಿಗೆ ಗ್ರಾಮದ ನೆಲ್ಲಿಗುಡ್ಡೆ ನೀರಪಲ್ಕೆ ಎಂಬಲ್ಲಿ ಮಂಗಳವಾರದಂದು ಬೆಳಿಗ್ಗೆ ನಡೆದಿದೆ. ಪುತ್ತಿಗೆ ಗ್ರಾಮದ ಅವಿವಾಹಿತ ಯುವತಿಯೊಬ್ಬಳು ಭಾನುವಾರದಂದು ಇದೇ ಬಾವಿಗೆ ಹಾರಿ ಆತ್ಮಹತ್ಯೆಗೆ ಯತ್ನಿಸಿದ್ದಳು. ಬಾವಿಗೆ ಹಾರಿರುವುದನ್ನು ತಿಳಿದ ಸ್ಥಳೀಯರು ಆಕೆಯನ್ನು ರಕ್ಷಣೆ ಮಾಡಿ‌ ಮಂಗಳೂರಿನ ಅಸ್ಪತ್ರೆಗೆ ದಾಖಲಿಸಿದ್ದರು. ಅಕೆ ಗರ್ಭಿಣಿಯಾಗಿದ್ದು ಇದೇ ಕಾರಣಕ್ಕಾಗಿ ಬಾವಿಗೆ ಹಾರಿ ಆತ್ಮಹತ್ಯೆ ಯತ್ನಿಸಿರಬಹುದೆಂದು‌ ಅಂದಾಜಿಸಲಾಗಿದೆ. ಬಾವಿಗೆ ಹಾರಿದ ಸಂದರ್ಭದಲ್ಲಿ ಗರ್ಭಪಾತವಾಗಿರಬಹುದೆಂದು ಅಂದಾಜಿಸಲಾಗಿದೆ.

ಪುತ್ತಿಗೆ: ಬಾವಿಯಲ್ಲಿ‌ ನವಜಾತ ಶಿಶುವಿನ ಶವ ಪತ್ತೆ ► ಭಾನುವಾರದಂದು ಬಾವಿಗೆ ಹಾರಿ ಆತ್ಮಹತ್ಯೆಗೆ ಯತ್ನಿಸಿದ್ದ ಅವಿವಾಹಿತ ಯುವತಿ Read More »

ಕರಾವಳಿ

ಕಾರವಾರ: ಬೆಂಕಿಗಾಹುತಿಯಾದ ಟವೇರಾ ► ಸಣ್ಣಪುಟ್ಟ ಗಾಯಗಳೊಂದಿಗೆ ಅಪಾಯದಿಂದ ಪಾರಾದ ಚಾಲಕ

(ನ್ಯೂಸ್ ಕಡಬ) newskadaba.com ಕಾರವಾರ, ಆ.01. ಶಾರ್ಟ್ ಸರ್ಕ್ಯೂಟ್ ಉಂಟಾದ ಪರಿಣಾಮ ಟವೇರಾ ಕಾರೊಂದು ಬೆಂಕಿಗಾಹುತಿಯಾಗಿ ಸಂಪೂರ್ಣ ಭಸ್ಮವಾದ ಘಟನೆ ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರ ತಾಲೂಕಿನ ಉಮ್ಮಚಗಿ ಎಂಬಲ್ಲಿ ಮಂಗಳವಾರ ಬೆಳಗ್ಗಿನ ಜಾವ ನಡೆದಿದೆ. ಘಟನೆಯಿಂದ ಮುಂಡಗೋಡು ನಿವಾಸಿ ಕಾರು ಚಾಲಕ ಪ್ರಭು  ಸಣ್ಣ ಪುಟ್ಟ ಗಾಯಗಳೊಂದಿಗೆ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಅವರು ಕಾರಿನಲ್ಲಿ ಯಲ್ಲಾಪುರದ ಉಮ್ಮಚಗಿಯಿಂದ  ತನ್ನ ಊರಿಗೆ ತೆರಳುತ್ತಿದ್ದ ಸಂದರ್ಭದಲ್ಲಿ ಈ ಘಟನೆ ನಡೆದಿದೆ. ಸ್ಥಳಕ್ಕೆ ಯಲ್ಲಾಪುರ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಈ

ಕಾರವಾರ: ಬೆಂಕಿಗಾಹುತಿಯಾದ ಟವೇರಾ ► ಸಣ್ಣಪುಟ್ಟ ಗಾಯಗಳೊಂದಿಗೆ ಅಪಾಯದಿಂದ ಪಾರಾದ ಚಾಲಕ Read More »

ಕರ್ನಾಟಕ

ಖಾಸಗಿ ಬಸ್ – ಕ್ವಾಲಿಸ್ ಢಿಕ್ಕಿ ► ಜೆಡಿಎಸ್ ತಾಲೂಕು ಅಧ್ಯಕ್ಷ ಸೇರಿ ತಂದೆ ಮಗ ಮೃತ್ಯು

(ನ್ಯೂಸ್ ಕಡಬ) newskadaba.com  ತುಮಕೂರು, ಆ.01.  ಕ್ವಾಲಿಸ್ ಕಾರು ಹಾಗೂ ಖಾಸಗಿ ಬಸ್ ನಡುವೆ ಢಿಕ್ಕಿ ಸಂಭವಿಸಿದ ಪರಿಣಾಮ ಕ್ವಾಲಿಸ್ ವಾಹನದಲ್ಲಿದ್ದ ತಂದೆ-ಮಗ ಸ್ಥಳದಲ್ಲೇ ಮೃತಪಟ್ಟ ಹೃದಯವಿದ್ರಾವಕ ಘಟನೆ ತುಮಕೂರಿನ ನರುಗನಹಳ್ಳಿ ಕ್ರಾಸ್ ಬಳಿ ನಡೆದಿದೆ. ಘಟನೆಯಲ್ಲಿ ಜೆಡಿಎಸ್ ತಾಲೂಕು ಅಧ್ಯಕ್ಷ ಎಚ್.ಸಿ. ಕುಮಾರ್ ಹಾಗೂ ಅವರ ಪುತ್ರ ಜೀವನ್ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಹೊನ್ನುಡಿಕೆಯಿಂದ ತುಮಕೂರಿಗೆ ಬರುತಿದ್ದ ಕಾರಿಗೆ ಕುಣಿಗಲ್ ಕಡೆಗೆ ತೆರಳುತ್ತಿದ್ದ ಎಸ್‍ಆರ್‍ಎಸ್ ಖಾಸಗಿ ಬಸ್ ಚಾಲಕ ತನ್ನ ಮುಂದಿದ್ದ ವಾಹನವನ್ನು ಓವರ್ ಟೇಕ್ ಮಾಡುವ ಸಂದರ್ಭದಲ್ಲಿ ಢಿಕ್ಕಿಯಾಗಿದೆ.

ಖಾಸಗಿ ಬಸ್ – ಕ್ವಾಲಿಸ್ ಢಿಕ್ಕಿ ► ಜೆಡಿಎಸ್ ತಾಲೂಕು ಅಧ್ಯಕ್ಷ ಸೇರಿ ತಂದೆ ಮಗ ಮೃತ್ಯು Read More »

ಕರ್ನಾಟಕ

ಎಸ್ಸಿ ಘಟಕದ ಅಧ್ಯಕ್ಷ ಗುರುವಪ್ಪ ಕಲ್ಲುಗುಡ್ಡೆ ಕಾಂಗ್ರೇಸಿಗೆ ರಾಜೀನಾಮೆ

(ನ್ಯೂಸ್ ಕಡಬ) newskadaba.com ಕಡಬ, ಜು.31. ಕಾಂಗ್ರೆಸ್ ಪಕ್ಷದಿಂದ ದಲಿತರಿಗೆ ಅನ್ಯಾಯವಾಗಿದೆ ಎಂದು ಆರೋಪಿಸಿ ಕಡಬ ಬ್ಲಾಕ್ ಕಾಂಗೇಸ್ ಸಮಿತಿಯ ಎಸ್ಸಿ ಘಟಕದ ಅಧ್ಯಕ್ಷ ಗುರುವಪ್ಪ ಕಲ್ಲುಗುಡ್ಡೆ ಅವರ ತಮ್ಮ ಸ್ಥಾನಕ್ಕೆ ಹಾಗೂ ಪಕ್ಷಕ್ಕೆ ರಾಜಿನಾಮೆ ನೀಡಿದ ಘಟನೆ ಸೋಮವಾರದಂದು ನಡೆದಿದೆ. ಪಕ್ಷದ ಸಮಾವೇಶಕ್ಕೆ ಆಗಮಿಸಿದ್ದ ಪಕ್ಷದ ನೂತನ ಜಿಲ್ಲಾಧ್ಯಕ್ಷ ಹರೀಶ್ ಕುಮಾರ್ ಅವರಿಗೆ ಗುರುವಪ್ಪನವರು ತಮ್ಮ ರಾಜಿನಾಮೆ ಪತ್ರವನ್ನು ಸಲ್ಲಿಸಿದರು. ತಾನು ಹಲವಾರು ವರ್ಷಗಳಿಂದ ಕಾಂಗ್ರೇಸ್ ಪಕ್ಷದ ಸಂಘಟನೆಗಾಗಿ ಹಗಲಿರುಳು ದುಡಿದಿದ್ದು, ಎರಡು ಎಸ್ಸಿ ಘಟಕದ

ಎಸ್ಸಿ ಘಟಕದ ಅಧ್ಯಕ್ಷ ಗುರುವಪ್ಪ ಕಲ್ಲುಗುಡ್ಡೆ ಕಾಂಗ್ರೇಸಿಗೆ ರಾಜೀನಾಮೆ Read More »

ಕರಾವಳಿ

ಸರಿಯಾದ ದಾಖಲೆ ನೀಡಿದರೂ ಪರವಾನಿಗೆ ನೀಡಲು ವಿಳಂಬ ಧೋರಣೆ ► ಬಿಳಿನೆಲೆ ಗ್ರಾ.ಪಂ. ಅಧ್ಯಕ್ಷರಿಂದ ಲಂಚದ ಬೇಡಿಕೆ: ಕೆ.ಟಿ. ತೋಮ್ಸನ್ ಆರೋಪ

(ನ್ಯೂಸ್ ಕಡಬ) newskadaba.com ಕಡಬ, ಜು.31. ಬಿಳಿನೆಲೆ ಗ್ರಾಮ ಪಂಚಾಯತ್ಗೆ ಕಟ್ಟಡ ಪರವಾನಿಗೆ ಪಡೆಯಲು ಸರಿಯಾದ ದಾಖಲೆಗಳನ್ನು ನೀಡಿದ್ದರೂ ಪಂಚಾಯತಿಯಲ್ಲಿ ಪರವಾನಿಗೆ ನೀಡಲು ವಿಳಂಬ ಧೋರಣೆ ಅನುಸರಿಸುತ್ತಿದ್ದಾರಲ್ಲದೆ ಬೇರೆಯವರ ವೈಯಕ್ತಿಯ ವಿಚಾರದಲ್ಲಿ ನನಗೆ ವಿನಾಃ ಕಾರಣ ಬಡಾವಣೆ ನಿರ್ಮಾಣ ಕೆಲಸಕ್ಕೆ ಅಡ್ಡಿಪಡಿಸಲಾಗುತ್ತಿದೆ ಎಂದು ಕೆ.ಟಿ. ತೋಮ್ಸನ್ ಆರೋಪಿಸಿದ್ದಾರೆ. ಅವರು ಸೋಮವಾರದಂದು ಕಡಬದಲ್ಲಿ ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿ, ಬಿಳಿನೆಲೆ ಗ್ರಾಮದ ಸ.ನಂ. 9/4ಎರಲ್ಲಿ 0/07 ಎಕ್ರೆ ಜಾಗವು ನನ್ನ ಪಟ್ಟಾ ಜಾಗವಾಗಿರುತ್ತದೆ. ಈ ಜಾಗವು ನೆಟ್ಟಣದಿಂದ ಸುಮಾರು 750 ಮೀಟರ್ ದೂರದಲ್ಲಿರುತ್ತದೆ.

ಸರಿಯಾದ ದಾಖಲೆ ನೀಡಿದರೂ ಪರವಾನಿಗೆ ನೀಡಲು ವಿಳಂಬ ಧೋರಣೆ ► ಬಿಳಿನೆಲೆ ಗ್ರಾ.ಪಂ. ಅಧ್ಯಕ್ಷರಿಂದ ಲಂಚದ ಬೇಡಿಕೆ: ಕೆ.ಟಿ. ತೋಮ್ಸನ್ ಆರೋಪ Read More »

ಕರಾವಳಿ

ಜಿಲ್ಲೆಯಲ್ಲಿ ಎಂಟು ಕ್ಷೇತ್ರದಲ್ಲೂ ಕಾಂಗ್ರೇಸ್ ಗೆಲುವು ನಮ್ಮ ಗುರಿ ► ಕಡಬ ಕಾಂಗ್ರೇಸ್ ಸಮಾವೇಶದಲ್ಲಿ ಎಐಸಿಸಿ ಕಾರ್ಯದರ್ಶಿ ವಿಷ್ಣುನಾಥನ್

(ನ್ಯೂಸ್ ಕಡಬ) newskadaba.com ಕಡಬ, ಜು.31. ರಾಜ್ಯದಲ್ಲಿ ಆಡಳಿತ ನಡೆಸುತ್ತಿರುವ ಕಾಂಗ್ರೇಸ್ ಸರಕಾರ ನೀಡಿರುವ ಭರವಸೆಯನ್ನು ಈಡೇರಿಸಿ ಜನರ ವಿಶ್ವಾಸ ಗಳಿಸಿ ಮತ್ತೊಮ್ಮೆ ಆಧಿಕಾರಕ್ಕೆ ಬರುವುದು ಖಚಿತವಾಗಿದ್ದು ದ.ಕ. ಜಿಲ್ಲೆಯ ಎಂಟು ಕ್ಷೇತ್ರದಲ್ಲಿ ಈಗಾಗಲೇ ಏಳು ಕ್ಷೇತ್ರ ನಮ್ಮ ಕೈಯಲ್ಲಿದ್ದು, ಮುಂದಿನ ಚುನಾವಣೆಯಲ್ಲಿ ಎಂಟರಲ್ಲಿ ಎಂಟು ಕ್ಷೇತ್ರವೂ ಕಾಂಗ್ರೇಸ್ ತೆಕ್ಕೆಗೆ ತರುವುದು ನಮ್ಮಲ್ಲೆರ ಗುರಿಯಾಗಬೇಕು ಎಂದು ಎಐಸಿಸಿ ಕಾರ್ಯದರ್ಶಿ ವಿಷ್ಣುನಾಥನ್ ಕರೆ ನೀಡಿದರು. ಅವರು ಸೋಮವಾರದಂದು ಕಡಬ ಅನುಗ್ರಹ ಸಭಾಭವನದಲ್ಲಿ ಕಡಬ ಬ್ಲಾಕ್ ಕಾಂಗ್ರೇಸ್ ಸಮಿತಿ ಆಶ್ರಯದಲ್ಲಿ ನಡೆದ

ಜಿಲ್ಲೆಯಲ್ಲಿ ಎಂಟು ಕ್ಷೇತ್ರದಲ್ಲೂ ಕಾಂಗ್ರೇಸ್ ಗೆಲುವು ನಮ್ಮ ಗುರಿ ► ಕಡಬ ಕಾಂಗ್ರೇಸ್ ಸಮಾವೇಶದಲ್ಲಿ ಎಐಸಿಸಿ ಕಾರ್ಯದರ್ಶಿ ವಿಷ್ಣುನಾಥನ್ Read More »

ಕರಾವಳಿ
Scroll to Top