ನಾಳೆ (ಫೆ.17) ಪಾಪ್ಯುಲರ್ ಫ್ರಂಟ್ ಡೇ ಪ್ರಯುಕ್ತ ಸುಳ್ಯದಲ್ಲಿ ಯುನಿಟಿ ಮಾರ್ಚ್ ಹಾಗೂ ಸಮಾವೇಶ ► ರಾಷ್ಟ್ರೀಯ ಸಮಿತಿ ಸದಸ್ಯ ಕೆ.ಎಂ. ಶರೀಫ್ ಸುಳ್ಯಕ್ಕೆ

ಸಾಂದರ್ಭಿಕ ಚಿತ್ರ (ನ್ಯೂಸ್ ಕಡಬ) newskadaba.com ಸುಳ್ಯ, ಫೆ.16. ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾದ 11 ನೇ ವರ್ಷಾಚರಣೆಯ ಅಂಗವಾಗಿ ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯದಲ್ಲಿ ಅಪರಾಹ್ನ 2.30 ಕ್ಕೆ ಯುನಿಟಿ ಮಾರ್ಚ್ ಹಾಗೂ ಸಂಜೆ 3.30 ಕ್ಕೆ ಬೃಹತ್ ಸಾರ್ವಜನಿಕ ಸಭೆಯು ನಡೆಯಲಿದೆ. ಕಾರ್ಯಕ್ರಮದ ಅಧ್ಯಕ್ಷತೆಯನ್ನು ರಾಜ್ಯ ಪ್ರಧಾನ ಕಾರ್ಯದರ್ಶಿ ಯಾಸಿನ್ ಹಸನ್ ವಹಿಸಲಿದ್ದು, ರಾಷ್ಟ್ರೀಯ ಸಮಿತಿ ಸದಸ್ಯರಾದ ಕೆ.ಎಂ. ಶರೀಫ್ ಮುಖ್ಯ ಪ್ರಭಾಷಣ ಮಾಡಲಿದ್ದಾರೆ. ಜ್ಞಾನ ಪ್ರಕಾಶ ಸ್ವಾಮೀಜಿ ಮೈಸೂರು, ಎಸ್ಡಿಪಿಐ ಉಪಾಧ್ಯಕ್ಷರಾದ ಅಬ್ದುಲ್ ಮಜೀದ್ […]

ನಾಳೆ (ಫೆ.17) ಪಾಪ್ಯುಲರ್ ಫ್ರಂಟ್ ಡೇ ಪ್ರಯುಕ್ತ ಸುಳ್ಯದಲ್ಲಿ ಯುನಿಟಿ ಮಾರ್ಚ್ ಹಾಗೂ ಸಮಾವೇಶ ► ರಾಷ್ಟ್ರೀಯ ಸಮಿತಿ ಸದಸ್ಯ ಕೆ.ಎಂ. ಶರೀಫ್ ಸುಳ್ಯಕ್ಕೆ Read More »

ಕರಾವಳಿ

ಹಲವು ದಶಕಗಳ ಬೇಡಿಕೆಯಿಂದ ಕೊನೆಗೂ ಬಂತು ಕಡಬಕ್ಕೆ ತಾಲೂಕು ಭಾಗ್ಯ ► ಮಾ. 18 ರಂದು ಕಂದಾಯ ಸಚಿವರಿಂದ ನೂತನ ಕಡಬ ತಾಲೂಕು ಉದ್ಘಾಟನೆ

(ನ್ಯೂಸ್ ಕಡಬ) newskadaba.com ಕಡಬ, ಫೆ.16. ರಾಜ್ಯ ಕಂದಾಯ ಸಚಿವ ಕಾಗೋಡು ತಿಮ್ಮಪ್ಪ ಅವರು ನೂತನ ಕಡಬ ತಾಲೂಕನ್ನು ಅಧಿಕೃತವಾಗಿ ಉದ್ಘಾಟಿಸಲು ಮಾ. 18 ರಂದು ದಿನ ನಿಗದಿಯಾಗಿದ್ದು, ತಾಲೂಕು ಅನುಷ್ಠಾನದ ಕುರಿತು ಕಡಬ ಪರಿಸರದ ಜನರ ಮನಸ್ಸಿನಲ್ಲಿ ಮೂಡಿದ್ದ ಆತಂಕಗಳು ದೂರವಾಗಿದೆ. ಫೆ. 14 ರಂದು ಬೈಂದೂರು, ಬ್ರಹ್ಮಾವರ ಹಾಗೂ ಕಾಪು ತಾಲೂಕುಗಳ ಉದ್ಘಾಟನೆಗೆ ಆಗಮಿಸಿದ್ದ ಕಂದಾಯ ಸಚಿವರನ್ನು ಜಿಲ್ಲಾ ಉಸ್ತುವಾರಿ ಸಚಿವ ಬಿ.ರಮಾನಾಥ ರೈ ಅವರ ಸೂಚನೆಯಂತೆ ಭೇಟಿ ಮಾಡಿದ ಕಡಬ ಜಿ.ಪಂ. ಕ್ಷೇತ್ರದ ಸದಸ್ಯ

ಹಲವು ದಶಕಗಳ ಬೇಡಿಕೆಯಿಂದ ಕೊನೆಗೂ ಬಂತು ಕಡಬಕ್ಕೆ ತಾಲೂಕು ಭಾಗ್ಯ ► ಮಾ. 18 ರಂದು ಕಂದಾಯ ಸಚಿವರಿಂದ ನೂತನ ಕಡಬ ತಾಲೂಕು ಉದ್ಘಾಟನೆ Read More »

ಕರಾವಳಿ

ಲಷ್ಕರ್ – ಎ – ತೋಯ್ಬಾ ಉಗ್ರರನ್ನು ಸದೆಬಡಿದ ತಂಡದಲ್ಲಿ ತುಳುನಾಡಿನ ವೀರ ಯೋಧ ► ಕಡಬ ತಾಲೂಕಿಗೆ ಹೆಮ್ಮೆಯ ಕಿರೀಟವನ್ನು ತಂದಿತ್ತ ವೀರ ಯೋಧ ಝುಬೈರ್ ನೇರೆಂಕಿ

(ನ್ಯೂಸ್ ಕಡಬ) newskadaba.com ಕಡಬ, ಫೆ.15. ಬಿಸಿಲು, ಮಳೆ, ಚಳಿಯನ್ನು ಲೆಕ್ಕಿಸದೆ ದೇಶದ ಗಡಿ ಕಾಯುವ ವೀರ ಯೋಧರು ಭಾರತೀಯರು ಎಂದು ಹೇಳಿಕೊಳ್ಳುವುದೇ ಒಂಥರಾ ಖುಷಿ. ಅವರು ನಮ್ಮ ರಾಜ್ಯದವರಾಗಿದ್ದರೆ ನಾವು ಹಮ್ಮೆ ಪಡುತ್ತೇವೆ. ಅಕಸ್ಮಾತ್ ನಮ್ಮ ಜಿಲ್ಲೆಯವರೇ ಆಗಿ ಬಿಟ್ಟರೆ ನಾವೇ ಭಯೋತ್ಪಾದಕರ ವಿರುದ್ಧ ಹೋರಾಡಿ ಗೆದ್ದಷ್ಟು ಸಂತಸ ಪಡುತ್ತೇವೆ. ಇಲ್ಲಿ ಆಗಿರುವುದೂ ಅದೇ. ನಾಲ್ಕು ದಿನಗಳ ಹಿಂದೆ ಜಮ್ಮು ಕಾಶ್ಮೀರದಲ್ಲಿ ಭಯೋತ್ಪಾದಕರನ್ನು ಸದೆಬಡಿಯುವಲ್ಲಿ ಯಶಸ್ವಿಯಾಗಿರುವ ವೀರ ಯೋಧರ ಪೈಕಿ ನಮ್ಮ ತುಳುನಾಡಿನ ಯೋಧರೊಬ್ಬರು ಇದ್ದಾರೆ.

ಲಷ್ಕರ್ – ಎ – ತೋಯ್ಬಾ ಉಗ್ರರನ್ನು ಸದೆಬಡಿದ ತಂಡದಲ್ಲಿ ತುಳುನಾಡಿನ ವೀರ ಯೋಧ ► ಕಡಬ ತಾಲೂಕಿಗೆ ಹೆಮ್ಮೆಯ ಕಿರೀಟವನ್ನು ತಂದಿತ್ತ ವೀರ ಯೋಧ ಝುಬೈರ್ ನೇರೆಂಕಿ Read More »

ಕರಾವಳಿ

ಇಂದು ರಾಜ್ಯ ಸರಕಾರದ ಕೊನೆಯ ಬಜೆಟ್ ► ರೈತರ ಸಾಲ ಮನ್ನಾದತ್ತ ಸಿದ್ದರಾಮಯ್ಯ ಚಿತ್ತ

(ನ್ಯೂಸ್ ಕಡಬ) newskadaba.com ಬೆಂಗಳೂರು, ಫೆ.16. ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರದ ಕೊನೆಯ ಬಜೆಟನ್ನು ಶುಕ್ರವಾರ ಮಂಡಿಸಲಾಗುತ್ತಿದ್ದು, ರೈತರು, ಕೈಗಾರಿಕೋದ್ಯಮಿಗಳು, ಜನಸಾಮಾನ್ಯರಲ್ಲಿ ಹತ್ತು ಹಲವಾರು ನಿರೀಕ್ಷೆಗಳ ಹುಟ್ಟಿಕೊಂಡಿವೆ. ಸದ್ಯದಲ್ಲೇ ರಾಜ್ಯ ವಿಧಾನಸಭೆಗೆ ಚುನಾವಣೆ ನಡೆಯಲಿದ್ದು, 13ನೇ ಬಜೆಟ್‌ ಮಂಡಿಸಲಿರುವ ಸಿದ್ದರಾಮಯ್ಯ ಅವರಿಗೆ ಜನಪ್ರಿಯ ಯೋಜನೆಗಳ ಘೋಷಣೆ ಅನಿವಾರ್ಯವಾಗಿದ್ದು, ಈ ಬಾರಿಯ ಬಜೆಟ್‌ನಲ್ಲಿ ಭಾಗ್ಯಗಳ ಸರಣಿ ಮುಂದುವರಿಯಲಿದ್ದು “ಅಹಿಂದ’ ವರ್ಗದ ಸರ್ಕಾರ ಎಂಬ “ಹಣೆಪಟ್ಟಿ’ಯಿಂದ ಪಾರಾಗಲು ಅಹಿಂದ ಜತೆ ಇತರೆ ಸಮುದಾಯ ಸೆಳೆಯಲು ಭರಪೂರ ಘೋಷಣೆಗಳು ಇರಬಹುದು

ಇಂದು ರಾಜ್ಯ ಸರಕಾರದ ಕೊನೆಯ ಬಜೆಟ್ ► ರೈತರ ಸಾಲ ಮನ್ನಾದತ್ತ ಸಿದ್ದರಾಮಯ್ಯ ಚಿತ್ತ Read More »

ಕರ್ನಾಟಕ

ಆಲಂಕಾರು: ಮನೆಯಿಂದ ಹೊರಹೋದ ವ್ಯಕ್ತಿ ನಾಪತ್ತೆ

(ನ್ಯೂಸ್ ಕಡಬ) newskadaba.com‌ ಕಡಬ, ಫೆ.15. ಠಾಣಾ ವ್ಯಾಪ್ತಿಯ ಆಲಂಕಾರು ಗ್ರಾಮದ ಪಟ್ಟೆ ಮಜಲು ನಿವಾಸಿ ಶೀನಪ್ಪ ಪೂಜಾರಿ ಎಂಬವರ ಪುತ್ರ ರಾಜೀವ ಪೂಜಾರಿ (42) ಎಂಬವರು ಮನೆಯಿಂದ ಹೊರ ಹೋದವರು ಹಿಂತಿರುಗಿ ಬಾರದೆ ಕಾಣೆಯಾಗಿದ್ದಾರೆ ಎಂದು ಕಡಬ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.     ಇತ್ತೀಚೆಗೆ ಕಲ ಸಮಯದಿಂದ ಮಾನಸಿಕವಾಗಿ ವರ್ತಿಸುತ್ತಿದ್ದ ರಾಜೀವ್ ಪೂಜಾರಿ, ಆಗಾಗ ಕೆಲವು ಬಾರಿ ಮನೆ ಬಿಟ್ಟು ಹೋಗಿ ಬರುತ್ತಿದ್ದರು. ಫೆಬ್ರವರಿ 07 ರಂದು ಮತ್ತೊಮ್ಮೆ ಮನೆ ಬಿಟ್ಟು ಹೋದವರು ವಾಪಾಸು

ಆಲಂಕಾರು: ಮನೆಯಿಂದ ಹೊರಹೋದ ವ್ಯಕ್ತಿ ನಾಪತ್ತೆ Read More »

ಕರಾವಳಿ

ಕುಕ್ಕೇ ಸುಬ್ರಹ್ಮಣ್ಯಕ್ಕೆ ಭೇಟಿ ನೀಡಿದ ಮಲಯಾಳಂ ಸೂಪರ್ ಸ್ಟಾರ್ ಮೋಹನ್ ಲಾಲ್

(ನ್ಯೂಸ್ ಕಡಬ) newskadaba.com ಕಡಬ, ಫೆ.15. ಬಹು ನಿರೀಕ್ಷಿತ ‘ಕಾಯಂಕುಳಂ ಕೊಚ್ಚುನ್ನಿ’ ಚಿತ್ರದಲ್ಲಿ ನಟಿಸಲು ಕಡಬ ತಾಲೂಕಿಗೆ ಆಗಮಿಸಿರುವ ಕೇರಳದ ಸಿನಿಮಾ ಸೂಪರ್ ಸ್ಟಾರ್ ಮೋಹನ್ ಲಾಲ್ ಗುರುವಾರದಂದು ದಕ್ಷಿಣ ಭಾರತದ ಪ್ರಮುಖ ದೇವಸ್ಥಾನ ಕುಕ್ಕೇ ಸುಬ್ರಹ್ಮಣ್ಯಕ್ಕೆ ಭೇಟಿ ನೀಡಿ ದೇವರ ದರ್ಶನ ಪಡೆದರು. ಗುರುವಾರ ಬೆಳಿಗ್ಗೆ ತಾನು ವಾಸ್ತವ್ಯವಿರುವ ಸುಬ್ರಹ್ಮಣ್ಯದ ಲಾಡ್ಜ್ ನಿಂದ ನೇರವಾಗಿ ದೇವಸ್ಥಾನಕ್ಕೆ ಆಗಮಿಸಿದ ಮೋಹನ್ ಲಾಲ್, ನಂತರ ಕಡಬ ತಾಲೂಕಿನ ಬಲ್ಯದಲ್ಲಿ ನಡೆಯುತ್ತಿರುವ ಚಿತ್ರೀಕರಣದಲ್ಲಿ ಪಾಲ್ಗೊಳ್ಳಲು ತೆರಳಿದರು. ರೋಷನ್ ಆಂಡ್ರೋಸ್ ನಿರ್ದೇಶನದಲ್ಲಿ

ಕುಕ್ಕೇ ಸುಬ್ರಹ್ಮಣ್ಯಕ್ಕೆ ಭೇಟಿ ನೀಡಿದ ಮಲಯಾಳಂ ಸೂಪರ್ ಸ್ಟಾರ್ ಮೋಹನ್ ಲಾಲ್ Read More »

ಕರಾವಳಿ

ಕಡಬ: ದ್ವಿಚಕ್ರ ವಾಹನಕ್ಕೆ ಹಿಂಬದಿಯಿಂದ ಜೀಪ್ ಢಿಕ್ಕಿ ► ಮಹಿಳೆ ಗಂಭೀರ

(ನ್ಯೂಸ್ ಕಡಬ) newskadaba.com ಕಡಬ, ಫೆ.15. ಜೀಪೊಂದು ದ್ವಿಚಕ್ರ ವಾಹನಕ್ಕೆ ಹಿಂಬದಿಯಿಂದ ಢಿಕ್ಕಿ ಹೊಡೆದ ಪರಿಣಾಮ ಮಹಿಳೆಯೋರ್ವರು ಗಂಭೀರ ಗಾಯಗೊಂಡ ಘಟನೆ ಕಡಬದ ಹಳೇಸ್ಟೇಷನ್ ಎಚ್.ಪಿ‌. ಪೆಟ್ರೋಲ್ ಬಂಕ್ ಸಮೀಪ ಗುರುವಾರದಂದು ನಡೆದಿದೆ. ಕಡಬದಿಂದ ಮರ್ಧಾಳ ಕಡೆಗೆ ತೆರಳುತ್ತಿದ್ದ ದ್ವಿಚಕ್ರ ವಾಹನಕ್ಕೆ ಹಿಂಭಾಗದಿಂದ ಜೀಪ್ ಢಿಕ್ಕಿ ಹೊಡೆದುದರಿಂದ ಸವಾರ ಲಿಂಗಪ್ಪ ಪೂಜಾರಿ ಸಣ್ಣಪುಟ್ಟ ಗಾಯಗಳೊಂದಿಗೆ ಪಾರಾಗಿದ್ದು, ಗಂಭೀರ ಗಾಯಗೊಂಡಿರುವ ಸಹ ಸವಾರೆ ಲಿಂಗಪ್ಪ ಪೂಜಾರಿಯವರ ಪತ್ನಿ ಸುಜಾತಾ(43) ರವರನ್ನು ಮಂಗಳೂರಿನ ಎ.ಜೆ. ಆಸ್ಪತ್ರೆಗೆ ದಾಖಲಿಸಲಾಗಿದೆ. ಸ್ಥಳಕ್ಕೆ ಕಡಬ

ಕಡಬ: ದ್ವಿಚಕ್ರ ವಾಹನಕ್ಕೆ ಹಿಂಬದಿಯಿಂದ ಜೀಪ್ ಢಿಕ್ಕಿ ► ಮಹಿಳೆ ಗಂಭೀರ Read More »

ಕರಾವಳಿ

ಮಾಣಿ: ಬೈಕಿಗೆ ಢಿಕ್ಕಿ ಹೊಡೆದು ಸಿನಿಮೀಯ ಶೈಲಿಯಲ್ಲಿ ಪಲ್ಟಿಯಾದ ಕಾರು ► ಬೈಕ್ ಸವಾರ ಅಪಾಯದಿಂದ ಪಾರು

(ನ್ಯೂಸ್ ಕಡಬ) newskadaba.com ವಿಟ್ಲ, ಫೆ.15. ಮಾಣಿಯಿಂದ ಮಂಗಳೂರು ಕಡೆಗೆ ತೆರಳುತ್ತಿದ್ದ ಕಾರೊಂದು ಮಾಣಿ ಸಮೀಪದ ಹಳೀರ ಎಂಬಲ್ಲಿ ಸಿನಿಮೀಯ ಶೈಲಿಯಲ್ಲಿ ಬೈಕಿಗೆ ಢಿಕ್ಕಿ ಹೊಡೆದು ಪಲ್ಟಿಯಾದ ಘಟನೆ ಗುರುವಾರದಂದು ನಡೆದಿದೆ. ಮಾಣಿಯಿಂದ ಮಂಗಳೂರಿನ ಕಡೆ ಹೋಗುತ್ತಿದ್ದ ಕಾರು ಚಾಲಕನ ನಿಯಂತ್ರಣ ತಪ್ಪಿ ಹೊಂಡಕ್ಕೆ ಇಳಿದಿದ್ದು, ರಸ್ತೆಯಲ್ಲಿ ಪಲ್ಟಿ ಹೊಡೆದು ಬೈಕ್ ಗೆ ಢಿಕ್ಕಿಯಾದ ಪರಿಣಾಮ ಬೈಕ್ ಸವಾರ ಸಣ್ಣಪುಟ್ಟ ಗಾಯಗಳೊಂದಿಗೆ ಅಪಾಯದಿಂದ ಪಾರಾಗಿದ್ದಾರೆ. ಘಟನೆಯಿಂದ ಕಾರು ಉಲ್ಟಾ ಬಿದ್ದಿದ್ದು, ಕಾರಿನಲ್ಲಿದ್ದ ಕ್ಯಾನುಗಳೆಲ್ಲಾ ರಸ್ತೆಯಲ್ಲಿ ಚೆಲ್ಲಾಪಿಲ್ಲಿಯಾಗಿ ಬಿದ್ದಿತ್ತು.

ಮಾಣಿ: ಬೈಕಿಗೆ ಢಿಕ್ಕಿ ಹೊಡೆದು ಸಿನಿಮೀಯ ಶೈಲಿಯಲ್ಲಿ ಪಲ್ಟಿಯಾದ ಕಾರು ► ಬೈಕ್ ಸವಾರ ಅಪಾಯದಿಂದ ಪಾರು Read More »

ಕರಾವಳಿ

ಪಂಜ: ಪತ್ನಿಯ ಮೇಲೆಯೇ ತನ್ನ ಸ್ನೇಹಿತನನ್ನು ಅತ್ಯಾಚಾರವೆಸಗಲು ಕುಮ್ಮಕ್ಕು ► ಆರೋಪಿಗಳಿಬ್ಬರ ಬಂಧನ

(ನ್ಯೂಸ್ ಕಡಬ) newskadaba.com ಸುಬ್ರಹ್ಮಣ್ಯ, ಫೆ.15. ತನ್ನ ಪತ್ನಿಯ ಮೇಲೆಯೇ ತನ್ನ ಸ್ನೇಹಿತನನ್ನು ಅತ್ಯಾಚಾರವೆಸಗಲು ಕುಮ್ಮಕ್ಕು ನೀಡಿದ ಆರೋಪದಲ್ಲಿ ಆರೋಪಿಗಳಿಬ್ಬರನ್ನು ಬಂಧಿಸಿದ ಘಟನೆ ಸುಬ್ರಹ್ಮಣ್ಯ ಠಾಣಾ ವ್ಯಾಪ್ತಿಯ ಕೂತ್ಕುಂಜ ಎಂಬಲ್ಲಿ ಬುಧವಾರದಂದು ನಡೆದಿದೆ. ಫೆಬ್ರವರಿ 12 ಸೋಮವಾರದಂದು ರಾತ್ರಿ ತನ್ನ ಪತಿ ತಿರುಮಲೇಶ್ ಎಂಬಾತನ ಕುಮ್ಮಕ್ಕಿನಿಂದ ಆತನ ಸ್ನೇಹಿತ ಶಶಿಕುಮಾರ್ ಎಂಬಾತ ಅತ್ಯಾಚಾರವೆಸಗಿದ್ದಾಗಿ ಸುಳ್ಯ ತಾಲೂಕಿನ ಕೂತ್ಕುಂಜ ಗ್ರಾಮದ ಪುತ್ಯ ನಿವಾಸಿ ಮಹಿಳೆಯೋರ್ವರು ಸುಬ್ರಹ್ಮಣ್ಯ ಠಾಣೆಗೆ ಬುಧವಾರದಂದು ದೂರು ನೀಡಿದ್ದು, ಈ ಹಿನ್ನೆಲೆಯಲ್ಲಿ ಸುಬ್ರಹ್ಮಣ್ಯ ಎಸ್ಐ ಗೋಪಾಲ್

ಪಂಜ: ಪತ್ನಿಯ ಮೇಲೆಯೇ ತನ್ನ ಸ್ನೇಹಿತನನ್ನು ಅತ್ಯಾಚಾರವೆಸಗಲು ಕುಮ್ಮಕ್ಕು ► ಆರೋಪಿಗಳಿಬ್ಬರ ಬಂಧನ Read More »

ಕರಾವಳಿ

ಅತೀ ಹೆಚ್ಚು ಬಜೆಟ್ ಮಂಡನೆ ಮಾಡಿದ ಕೀರ್ತಿಗೆ ಪಾತ್ರರಾಗಲಿರುವ ಸಿ.ಎಂ ಸಿದ್ದರಾಮಯ್ಯ ► ಯಾರೆಲ್ಲ ಈ ಪಟ್ಟಿಯಲ್ಲಿದ್ದಾರೆಂದು ಗೊತ್ತೇ‌‌..‌.?

(ನ್ಯೂಸ್ ಕಡಬ) newskadaba.com ಬೆಂಗಳೂರು, ಫೆ.15. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಶುಕ್ರವಾರ 13 ನೇ ಬಜೆಟ್ ಮಂಡಿಸುವ ಮೂಲಕ ರಾಜ್ಯದ ಇತಿಹಾಸದಲ್ಲಿ ಅತಿ ಹೆಚ್ಚು ಬಜೆಟ್ ಮಂಡಿಸಿದವರ ಪಟ್ಟಿಯಲ್ಲಿ ಮುಖ್ಯಮಂತ್ರಿ ದಿವಂಗತ ರಾಮಕೃಷ್ಣ ಹೆಗಡೆ ಜೊತೆ ಮೊದಲ ಸ್ಥಾನವನ್ನು ಹಂಚಿಕೊಳ್ಳಲಿದ್ದಾರೆ. ರಾಜ್ಯದಲ್ಲಿ ಅತಿ ಹೆಚ್ಚು ಬಜೆಟ್ ಮಂಡಿಸಿದ ದಾಖಲೆ ಇಂದಿಗೂ ಮುಖ್ಯಮಂತ್ರಿ ದಿವಂಗತ ರಾಮಕೃಷ್ಣ ಹೆಗಡೆ ಅವರ ಹೆಸರಿನಲ್ಲಿದೆ. ಅವರು ಒಟ್ಟಾರೆ 13 ಬಾರಿ ಬಜೆಟ್ ಮಂಡಿಸಿದ್ದಾರೆ. ಹೆಗಡೆ ಅವರು ದಿವಂಗತ ಎಸ್.ನಿಜಲಿಂಗಪ್ಪ ಮತ್ತು ವೀರೇಂದ್ರ ಪಾಟೀಲ್

ಅತೀ ಹೆಚ್ಚು ಬಜೆಟ್ ಮಂಡನೆ ಮಾಡಿದ ಕೀರ್ತಿಗೆ ಪಾತ್ರರಾಗಲಿರುವ ಸಿ.ಎಂ ಸಿದ್ದರಾಮಯ್ಯ ► ಯಾರೆಲ್ಲ ಈ ಪಟ್ಟಿಯಲ್ಲಿದ್ದಾರೆಂದು ಗೊತ್ತೇ‌‌..‌.? Read More »

ಕರ್ನಾಟಕ
Scroll to Top