ರಾಷ್ಟ್ರೀಯ ನ್ಯೂಸ್

ನರ್ಮದಾ ನದಿಗೆ ಬಿದ್ದ ಬಸ್ ➤ 12 ಮಂದಿ ದುರ್ಮರಣ

(ನ್ಯೂಸ್ ಕಡಬ) newskadaba.com ಮಧ್ಯಪ್ರದೇಶ, ಜು. 18. ಸೇತುವೆಯ ಮೇಲಿಂದ ನರ್ಮದಾ ನದಿಗೆ ಮಹಾರಾಷ್ಟ್ರದ ಬಸ್ ವೊಂದು ಉರುಳಿ ಬಿದ್ದು 12 ಪ್ರಯಾಣಿಕರು ಮೃತಪಟ್ಟ ಘಟನೆ ಮಧ್ಯ ಪ್ರದೇಶದ ಧರ್ ಜಿಲ್ಲೆಯಲ್ಲಿ ಇಂದು ಬೆಳಂಬೆಳಗ್ಗೆ ನಡೆದಿದೆ. ಇಂದೋರ್’ನಿಂದ ಪುಣೆಗೆ ತೆರಳುತ್ತಿದ್ದ ಬಸ್ ಖಲ್ಘಾಟ್ ಸಂಜಯ್ ಸೇತುವೆಯಿಂದ ನರ್ಮದಾ ನದಿಗೆ ಉರುಳಿ ಬಿದ್ದಿದೆ. ಪರಿಣಾಮ 12 ಮಂದಿ ಮೃತಪಟ್ಟಿದ್ದು, 15 ಮಂದಿಯನ್ನು ರಕ್ಷಿಸಲಾಗಿದೆ ಎಂದು ಮಧ್ಯ ಪ್ರದೇಶದ ಸಚಿವ ನರೋತ್ತಮ್ ಮಿಶ್ರಾ ತಿಳಿಸಿದ್ದಾರೆ ಎಂಬ ಮಾಹಿತಿ ದೊರೆತಿದೆ.

ನರ್ಮದಾ ನದಿಗೆ ಬಿದ್ದ ಬಸ್ ➤ 12 ಮಂದಿ ದುರ್ಮರಣ Read More »

ಕ್ರೈಮ್ ನ್ಯೂಸ್, ಬ್ರೇಕಿಂಗ್ ನ್ಯೂಸ್, ರಾಷ್ಟ್ರೀಯ ನ್ಯೂಸ್

ಧರ್ಮಸ್ಥಳದ ಧರ್ಮಾಧಿಕಾರಿ ಡಾ| ಡಿ.ವೀರೇಂದ್ರ ಹೆಗ್ಗಡೆಯವರನ್ನು ರಾಜ್ಯಸಭೆಗೆ ನಾಮ ನಿರ್ದೇಶನ ➤ ಈ ಮೂಲಕ ಕರಾವಳಿಗೆ ಕೊಡುಗೆ ನೀಡಿದ ಕೇಂದ್ರ ಸರಕಾರ

(ನ್ಯೂಸ್ ಕಡಬ) newskadaba.com ನವದೆಹಲಿ, ಜು.06. ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ| ಡಿ. ವೀರೇಂದ್ರ ಹೆಗ್ಗಡೆ ಸೇರಿದಂತೆ ನಾಲ್ವರನ್ನು ಕೇಂದ್ರ ಸರಕಾರವು ರಾಜ್ಯಸಭೆಗೆ ನಾಮನಿರ್ದೇಶನ ಮಾಡಿದೆ. ಈ ಬಗ್ಗೆ ಪ್ರಧಾನಿ ನರೇಂದ್ರ ಮೋದಿಯವರ ಅಧಿಕೃತ ಟ್ವಿಟರ್ ಖಾತೆಯಿಂದ ಟ್ವೀಟ್ ಮಾಡಲಾಗಿದ್ದು, ಧರ್ಮಸ್ಧಳದ ಧರ್ಮಾಧಿಕಾರಿ ಡಾ.ವೀರೇಂದ್ರ ಹೆಗಡೆ, ಜನಪ್ರಿಯ ಸಂಗೀತ ಸಂಯೋಜಕ ಇಳಯರಾಜಾ, ಮಾಜಿ ಒಲಿಂಪಿಕ್ ಅಥ್ಲೀಟ್ ಪಿ.ಟಿ.ಉಷಾ, ಹಾಗೂ ವಿ.ವಿಜಯೇಂದ್ರ ಪ್ರಸಾದ್ ಸೇರಿದಂತೆ ನಾಲ್ವರನ್ನು ರಾಜ್ಯಸಭೆಗೆ ನಾಮನಿರ್ದೇಶನ ಮಾಡಲಾಗಿದೆ. ಹೆಗ್ಗಡೆಯವರನ್ನು ನಾಮ ನಿರ್ದೇಶನಗೊಳಿಸುವ ಮೂಲಕ‌ ದಕ್ಷಿಣ

ಧರ್ಮಸ್ಥಳದ ಧರ್ಮಾಧಿಕಾರಿ ಡಾ| ಡಿ.ವೀರೇಂದ್ರ ಹೆಗ್ಗಡೆಯವರನ್ನು ರಾಜ್ಯಸಭೆಗೆ ನಾಮ ನಿರ್ದೇಶನ ➤ ಈ ಮೂಲಕ ಕರಾವಳಿಗೆ ಕೊಡುಗೆ ನೀಡಿದ ಕೇಂದ್ರ ಸರಕಾರ Read More »

ರಾಷ್ಟ್ರೀಯ ನ್ಯೂಸ್

ಅಕ್ರಮವಾಗಿ 3500 ಪ್ಯಾಕೆಟ್ ಪಾನ್ ಮಸಾಲ ಉತ್ಪನ್ನಗಳ ಸಾಗಾಟ ➤ ಓರ್ವ ಅರೆಸ್ಟ್

(ನ್ಯೂಸ್ ಕಡಬ) newskadaba.com ಕಾಸರಗೋಡು, ಜು. 06. ಕಾರಿನಲ್ಲಿ ಅಕ್ರಮವಾಗಿ ಸಾಗಿಸುತ್ತಿದ್ದ ಮಸಾಲ ಉತ್ಪನ್ನಗಳನ್ನು ಬದಿಯಡ್ಕ ಪೊಲೀಸರು ವಶಕ್ಕೆ ಪಡೆದಿರುವ ಘಟನೆ ಇಂದು ನಡೆದಿದೆ. ಬಂಧಿತ ಆರೋಪಿಯನ್ನು ಮುಂಡಿತ್ತಡ್ಕ ಯೂಸುಫ್ ಶರೀಫ್ ಎಂದು ಗುರುತಿಸಲಾಗಿದೆ. ಪೆರ್ಲದಲ್ಲಿ ವಾಹನ ತಪಾಸಣಾ ನಿರತರಾಗಿದ್ದ ಪೊಲೀಸರು ಈತ ಚಲಾಯಿಸಿಕೊಂಡು ಬರುತ್ತಿದ್ದ ಕಾರನ್ನು ಪರಿಶೀಲಿಸಿದಾಗ 3,500 ಪ್ಯಾಕೆಟ್ ಪಾನ್ ಮಸಾಲ ಉತ್ಪನ್ನಗಳನ್ನು ಅಕ್ರಮವಾಗಿ ಸಾಗಾಟ ಮಾಡುತ್ತಿದ್ದುದು ಬೆಳಕಿಗೆ ಬಂದಿದೆ.

ಅಕ್ರಮವಾಗಿ 3500 ಪ್ಯಾಕೆಟ್ ಪಾನ್ ಮಸಾಲ ಉತ್ಪನ್ನಗಳ ಸಾಗಾಟ ➤ ಓರ್ವ ಅರೆಸ್ಟ್ Read More »

ಕ್ರೈಮ್ ನ್ಯೂಸ್, ಬ್ರೇಕಿಂಗ್ ನ್ಯೂಸ್, ರಾಷ್ಟ್ರೀಯ ನ್ಯೂಸ್

LPG ಸಿಲಿಂಡರ್ ಬೆಲೆ ಮತ್ತೆ 50 ರೂ. ಏರಿಕೆ

(ನ್ಯೂಸ್ ಕಡಬ) newskadaba.com ನವದೆಹಲಿ, ಜು. 06. ಹಣದುಬ್ಬರದಿಂದ ಕಂಗಾಲಾಗಿರುವ ಜನರಿಗೆ ಮತ್ತೆ ಬೆಲೆ ಏರಿಕೆ ಶಾಕ್ ನೀಡಿದ್ದು, ಗೃಹ ಬಳಕೆಯ 14.2 ಕೆ.ಜಿ LPG ಸಿಲಿಂಡರ್ ಬೆಲೆಯು 50 ರೂಪಾಯಿ ಏರಿಕೆಯಾಗಿದೆ. ಇಂದಿನಿಂದಲೇ ಈ ದರವು ದೇಶದಾದ್ಯಂತ ಜಾರಿಗೆ ಬರಲಿದೆ.

LPG ಸಿಲಿಂಡರ್ ಬೆಲೆ ಮತ್ತೆ 50 ರೂ. ಏರಿಕೆ Read More »

ರಾಷ್ಟ್ರೀಯ ನ್ಯೂಸ್

ಆಸ್ಪತ್ರೆಗೆ ನುಗ್ಗಿ ನವಜಾತ ಶಿಶುವನ್ನು ಎಳೆದೊಯ್ದು ಕಚ್ಚಿ ಕೊಂದ ಬೀದಿನಾಯಿ..!!

(ನ್ಯೂಸ್ ಕಡಬ) newskadaba.com ಪಾಣಿಪತ್, ಜೂ. 29. ಬೀದಿ ನಾಯಿಯೊಂದು ನವಜಾತ ಶಿಶುವನ್ನು ಎಳೆದೊಯ್ದು ಕಚ್ಚಿದ ಪರಿಣಾಮ ಶಿಶು ಮೃತಪಟ್ಟ ಘಟನೆ ಪಾಣಿಪತ್ ನ ಖಾಸಗಿ ಆಸ್ಪತ್ರೆಯಲ್ಲಿ ನಡೆದಿದೆ. ಎರಡು ದಿನಗಳ ಗಂಡು ಶಿಶುವೊಂದು ಆಸ್ಪತ್ರೆಯಲ್ಲಿ ಅಜ್ಜಿಯ ಪಕ್ಕದಲ್ಲಿ ಮಲಗಿದ್ದ ವೇಳೆ, ಒಳನುಗ್ಗಿದ ಬೀದಿ ನಾಯಿಯೊಂದು ಮಗುವನ್ನು ಹೊರಗಡೆ ಎಳೆದೊಯ್ದು ಕಚ್ಚಿ ಗಾಯಗೊಳಿಸಿದೆ. ಈ ಘಟನೆ ಯಾರ ಗಮನಕ್ಕೂ ಬಾರದೇ ತಡವಾಗಿ ಬೆಳಕಿಗೆ ಬಂದಿದೆ. ಆದರೆ ಅದಾಗಲೇ ಮಗು ಮೃತಪಟ್ಟಿತ್ತು. ಸಿಸಿಟಿವಿ ಪರಿಶೀಲಿಸಿದಾಗ ತಡರಾತ್ರಿ ಎರಡು ಗಂಟೆಯ

ಆಸ್ಪತ್ರೆಗೆ ನುಗ್ಗಿ ನವಜಾತ ಶಿಶುವನ್ನು ಎಳೆದೊಯ್ದು ಕಚ್ಚಿ ಕೊಂದ ಬೀದಿನಾಯಿ..!! Read More »

ಕ್ರೈಮ್ ನ್ಯೂಸ್, ರಾಷ್ಟ್ರೀಯ ನ್ಯೂಸ್

ನನಗೊಂದು “ವಧುಬೇಕು” ಎಂದು ಬೀದಿಗಳಲ್ಲಿ ಪೋಸ್ಟರ್ ಹಾಕಿಸಿದ ಯುವಕ….!! ➤ ಜಾಲತಾಣದಲ್ಲಿ ಫೋಟೊ ವೈರಲ್

(ನ್ಯೂಸ್ ಕಡಬ) newskadaba.com ಮಧುರೈ, ಜೂ. 27. ‘ನನಗೊಂದು ವಧುಬೇಕು’ ಎಂದು ಬೀದಿಗಳಲ್ಲಿ ಪೋಸ್ಟರ್ ಗಳನ್ನು ಅಂಟಿಸುವ ಮೂಲಕ ಯುವಕನೊಬ್ಬ ನಗರದಲ್ಲಿ ಸಂಚಲನ ಮೂಡಿಸಿದ ಘಟನೆ ವರದಿಯಾಗಿದೆ. ಇದೀಗ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟರ್ ಫೋಟೋ ವೈರಲ್ ಆಗಿದೆ. ವಿಲ್ಲಾಪುರಂನ 27 ವರ್ಷದ ಎಂ.ಎಸ್ ಜಗನ್ ಎಂಬಾತ ತನ್ನ ಸಂಗಾತಿಗಾಗಿ ಬೀದಿಗಳಲ್ಲಿ ಪೋಸ್ಟರ್ ಗಳನ್ನು ಹಾಕಿದ್ದಾನೆ. ಈ ಕುರಿತು ಪ್ರತಿಕ್ರಿಯಿಸಿದ ಆತ, ನಾನು ಮ್ಯಾನೇಜರ್ ಅಷ್ಟೇ ಅಲ್ಲದೇ ಪಾರ್ಟ್ ಟೈಮ್ ಡಿಸೈನರ್ ಕೂಡಾ ಆಗಿದ್ದೇನೆ. ಡಿಸೈನರ್ ಆಗಿ ಕೆಲಸ

ನನಗೊಂದು “ವಧುಬೇಕು” ಎಂದು ಬೀದಿಗಳಲ್ಲಿ ಪೋಸ್ಟರ್ ಹಾಕಿಸಿದ ಯುವಕ….!! ➤ ಜಾಲತಾಣದಲ್ಲಿ ಫೋಟೊ ವೈರಲ್ Read More »

ಬ್ರೇಕಿಂಗ್ ನ್ಯೂಸ್, ರಾಷ್ಟ್ರೀಯ ನ್ಯೂಸ್

ಸೇತುವೆಯಿಂದ ಉರುಳಿಬಿದ್ದ ಲಾರಿ ➤ ಓರ್ವ ಮೃತ್ಯು..!

(ನ್ಯೂಸ್ ಕಡಬ) newskadaba.com ಕಾಸರಗೋಡು, ಜೂ. 25. ಚಾಲಕನ ನಿಯಂತ್ರಣ ತಪ್ಪಿದ ಲಾರಿಯೊಂದು ತೋಡಿಗೆ ಬಿದ್ದು ಓರ್ವ ಮೃತಪಟ್ಟ ಘಟನೆ ನೀಲೇಶ್ವರ ಪರಪಚ್ಚಾಲ್ ಎಂಬಲ್ಲಿ ಇಂದು ಬೆಳಗ್ಗೆ ಸಂಭವಿಸಿದೆ. ಮೃತಪಟ್ಟವರನ್ನು ಪಾಲಕ್ಕಾಡ್ ಮಣ್ಣಾರಕಾಡ್ ನ ಹಬೀಬ್ ಎಂದು ಗುರುತಿಸಲಾಗಿದೆ. ಚಾಲಕ ರಹೀಂ ಗಾಯಗೊಂಡಿದ್ದಾರೆ. ನೀಲೇಶ್ವರದ ಕಡೆಗೆ ಸಿಮೆಂಟ್ ಸಾಗಿಸುತ್ತಿದ್ದ ಲಾರಿಯು ಪರಪಚ್ಚಾಲ್ ಎಂಬಲ್ಲಿ ಸೇತುವೆಯಿಂದ ತೋಡಿಗೆ ಬಿದ್ದಿದ್ದು, ಪರಿಣಾಮ ಅದರಲ್ಲಿದ್ದ ಇಬ್ಬರು ಲಾರಿಯಡಿಗೆ ಸಿಲುಕಿದ್ದರು. ತಕ್ಷಣವೇ ಸ್ಥಳೀಯ ನಿವಾಸಿಗಳು ಹಾಗೂ ಅಗ್ನಿಶಾಮಕದಳ ಸಿಬ್ಬಂದಿಗಳು ಇಬ್ಬರನ್ನೂ ಮೇಲಕ್ಕೆತ್ತಿ ಆಸ್ಪತ್ರೆಗೆ

ಸೇತುವೆಯಿಂದ ಉರುಳಿಬಿದ್ದ ಲಾರಿ ➤ ಓರ್ವ ಮೃತ್ಯು..! Read More »

ಕ್ರೈಮ್ ನ್ಯೂಸ್, ಬ್ರೇಕಿಂಗ್ ನ್ಯೂಸ್, ರಾಷ್ಟ್ರೀಯ ನ್ಯೂಸ್

ಕುಡಿದ ಮತ್ತಿನಲ್ಲಿ ವಧುವಿನ ಬದಲು ಆಕೆಯ ಅತ್ತಿಗೆಗೆ ಹಾರ ಹಾಕಿದ ವರ..! ➤ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್

(ನ್ಯೂಸ್ ಕಡಬ) newskadaba.com ಉತ್ತರಪ್ರದೇಶ, ಜೂ. 24. ಕಂಠಪೂರ್ತಿ ಕುಡಿದು ಮದುವೆ ಮಂಟಪಕ್ಕೆ ಬಂದ ವರನೋರ್ವ ವಧುವಿಗೆ ಹಾರ ಹಾಕುವ ಬದಲು ಆಕೆಯ ಅತ್ತಿಗೆಯ ಕೊರಳಿಗೆ ಹಾರ ಹಾಕಿದ ಘಟನೆ ಉತ್ತರಪ್ರದೇಶದ ಹಮೀರ್ ಪುರದಲ್ಲಿ ನಡೆದಿದೆ. ಕಂಠಪೂರ್ತಿ ಕುಡಿದು ತೂರಾಡುತ್ತಾ ಮದುವೆ ಮಂಟಪಕ್ಕೆ ಬಂದಿದ್ದ ಆತನನ್ನು ಹಿಂದಿನಿಂದ ವ್ಯಕ್ತಿಯೋರ್ವ ಹಿಡಿದುಕೊಂಡಿದ್ದು, ಈ ಸ್ಥಿತಿಯಲ್ಲೇ ಮದುವೆ ಶಾಸ್ತ್ರಗಳು ನಡೆದಿವೆ. ಈ ವೇಳೆ ವಧು ವರನ ಕುತ್ತಿಗೆಗೆ ಹಾರ ಹಾಕಿದ್ದು, ಬಳಿಕ ವರನಲ್ಲಿ ಹಾರ ಹಾಕುವಂತೆ ಹೇಳಿದಾಗ ಆತ ವಧುವಿನ

ಕುಡಿದ ಮತ್ತಿನಲ್ಲಿ ವಧುವಿನ ಬದಲು ಆಕೆಯ ಅತ್ತಿಗೆಗೆ ಹಾರ ಹಾಕಿದ ವರ..! ➤ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ Read More »

ಬ್ರೇಕಿಂಗ್ ನ್ಯೂಸ್, ರಾಷ್ಟ್ರೀಯ ನ್ಯೂಸ್

ಕೈದಿಗಳಿಗೆ ಮಾದಕ ದ್ರವ್ಯ ಪೂರೈಕೆ ➤ ಜೈಲು ಸಿಬ್ಬಂದಿ ಅರೆಸ್ಟ್..!!

(ನ್ಯೂಸ್ ಕಡಬ) newskadaba.com ಪಣಜಿ, ಜೂ. 24. ಕೈದಿಗಳಿಗೆ ಮಾದಕ ದ್ರವ್ಯ ಕೋಕೇನ್ ಪೂರೈಸುತ್ತಿದ್ದ ಆರೋಪಕ್ಕೆ ಸಂಬಂಧಿಸಿ ಜೈಲು ಸಿಬ್ಬಂದಿಯೋರ್ವನನ್ನು ಬಂಧಿಸಿದ ಘಟನೆ ನಡೆದಿದೆ. ಬಂಧಿತ ಜೈಲು‌ಸಿಬ್ಬಂದಿಯನ್ನು ಸೂರಜ್ ಗಾವಡೆ ಎಂದು ಗುರುತಿಸಲಾಗಿದೆ. ಜೈಲು ಸಿಬ್ಬಂದಿಗಳು ಪಿಐ ಪ್ರಶಾಂತ ಜೋಶಿರವರ ನೇತೃತ್ವದಲ್ಲಿ ತಪಾಸಣೆ ನಡೆಸುತ್ತಿದ್ದ ಸಂದರ್ಭ ಜೈಲು ಸಿಬ್ಬಂದಿ ಸೂರಜ್ ಗಾವಡೆ ಎಂಬಾತ ಅನುಮಾನಾಸ್ಪದವಾಗಿ ವಸ್ತುಗಳನ್ನು ತೆಗೆದುಕೊಂಡು ಹೋಗುತ್ತಿರುವುದು ಕಂಡುಬಂದಿದೆ. ಈ ಕುರಿತು ಪಿಐ ಸುಶಾಂತ್ ಜೋಶಿ ನೇತೃತ್ವದ ತಂಡ ಮಾಪ್ಸಾ ಪೋಲಿಸರಿಗೆ ಮಾಹಿತಿ ನೀಡಿದ ನಂತರ

ಕೈದಿಗಳಿಗೆ ಮಾದಕ ದ್ರವ್ಯ ಪೂರೈಕೆ ➤ ಜೈಲು ಸಿಬ್ಬಂದಿ ಅರೆಸ್ಟ್..!! Read More »

ಕ್ರೈಮ್ ನ್ಯೂಸ್, ಬ್ರೇಕಿಂಗ್ ನ್ಯೂಸ್, ರಾಷ್ಟ್ರೀಯ ನ್ಯೂಸ್

ಸಹೋದರಿಯ ಚಿತೆಗೆ ಹಾರಿ ಸಹೋದರ ಆತ್ಮಹತ್ಯೆ..!!

(ನ್ಯೂಸ್ ಕಡಬ) newskadaba.com ಭೋಪಾಲ್, ಜೂ. 13. ಯುವಕನೋರ್ವ ಮಹಿಳೆಯ ಅಂತ್ಯಸಂಸ್ಕಾರದ ವೇಳೆ ಚಿತೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಮಧ್ಯಪ್ರದೇಶದಲ್ಲಿ ನಡೆದಿದೆ.   ಸಾಗರ ಜಿಲ್ಲೆಯ ಮಝಗಾವನ್ ಎಂಬ ಗ್ರಾಮದಲ್ಲಿ ಜ್ಯೋತಿ ದಾಗಾ ಎಂಬ ಮಹಿಳೆಯೋರ್ವರು ಬಾವಿಗೆ ಬಿದ್ದು ಮೃತಪಟ್ಟಿದ್ದು, ಅವರ ಅಂತ್ಯಸಂಸ್ಕಾರದ ವೇಳೆ‌ ಸಹೋದರ ಕಿರಣ್ ಎಂಬಾತ ಚಿತೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ತಕ್ಷಣವೇ ಆತನನ್ನು ಆಸ್ಪತ್ರೆಗೆ ಕರೆದೊಯ್ಯಲಾಯಿತಾದರೂ ಯಾವುದೇ ಪ್ರಯೋಜನವಾಗಲಿಲ್ಲ ಎಂದು ಗ್ರಾಮ ಪಂಚಾಯತ್ ಸರಪಂಚ ಭರತ್ ಸಿಂಗ್ ಘೋಷಿಸಿದ್ದಾರೆ.

ಸಹೋದರಿಯ ಚಿತೆಗೆ ಹಾರಿ ಸಹೋದರ ಆತ್ಮಹತ್ಯೆ..!! Read More »

ಕ್ರೈಮ್ ನ್ಯೂಸ್, ರಾಷ್ಟ್ರೀಯ ನ್ಯೂಸ್
Scroll to Top