ರಾಷ್ಟ್ರೀಯ ನ್ಯೂಸ್

ಅವಶೇಷಗಳಡಿ ಸಿಲುಕಿದ್ದ ಬಾಲಕಿಯನ್ನು ರಕ್ಷಿಸಿದ ಭಾರತೀಯ ಶ್ವಾನಗಳು !!!

(ನ್ಯೂಸ್ ಕಡಬ)newskadaba.com ಟರ್ಕಿ, ಫೆ.14. ಅವಶೇಷಗಳ‌ ಅಡಿ ಸಿಲುಕಿ ಒದ್ದಾಡುತ್ತಿದ್ದ ಬಾಲಕಿಯೋರ್ವಳನ್ನು ಭಾರತೀಯ ಶ್ವಾನಗಳು ರಕ್ಷಿಸಿದ ಘಟನೆ ಭೂಕಂಪ ಪೀಡಿತ ಟರ್ಕಿಯಿಂದ ವರದಿಯಾಗಿದೆ. ಭೂಕಂಪದಿಂದ ಹಾನಿಗೊಳಗಾದ ಪ್ರದೇಶವು ಕಟ್ಟಡದ ಅವಶೇಷಗಳಿಂದ ತುಂಬಿಕೊಂಡಿದೆ. ಯಂತ್ರೋಪಕರಣಗಳು ವೈಫಲ್ಯ ಕಂಡ ಜಾಗದಲ್ಲಿ ರೊಮಿಯೋ ಮತ್ತು ಜೂಲಿ ಎಂಬ ಶ್ವಾನ ಜೋಡಿ ಮೂಸುತ್ತಾ ಅವಶೇಷಗಳಡಿಯಲ್ಲಿ ಬಾಲಕಿ ಇರುವುದನ್ನು ಪತ್ತೆ ಹಚ್ಚುವಲ್ಲಿ ಯಶಸ್ವಿಯಾಗಿದೆ. ಟರ್ಕಿಯಲ್ಲಿ ಫೆಬ್ರುವರಿ 6ರಂದು ಪ್ರಬಲ ಭೂಕಂಪ ಸಂಭವಿಸಿತ್ತು. ಈಗ ಭೂಕಂಪ ಸಂಭವಿಸಿ ಒಂದು ವಾರ ಕಳೆದರೂ ಹಾನಿಗೊಳಗಾದ ಪ್ರದೇಶಗಳಲ್ಲಿ ಬದುಕುಳಿದವರನ್ನು […]

ಅವಶೇಷಗಳಡಿ ಸಿಲುಕಿದ್ದ ಬಾಲಕಿಯನ್ನು ರಕ್ಷಿಸಿದ ಭಾರತೀಯ ಶ್ವಾನಗಳು !!! Read More »

ರಾಷ್ಟ್ರೀಯ ನ್ಯೂಸ್

ಜೈಲಿನಲ್ಲೇ ಇದ್ದ ಆರೋಪಿಗಾಗಿ 20 ವರ್ಷದಿಂದ ಹುಡುಕಾಟ ನಡೆಸಿದ ಪೊಲೀಸರು !!!

(ನ್ಯೂಸ್ ಕಡಬ)newskadaba.com ಮುಂಬೈ, ಫೆ.14. 20 ವರ್ಷಗಳಿಂದ ಹುಡುಕಾಟ ನಡೆಸುತ್ತಿದ್ದ ಛೋಟಾ ಶಕೀಲ್‌ ಬಣದ ಶಾರ್ಪ್‌ ಶೂಟರ್‌ ಮಾಹಿರ್‌ ಸಿದ್ದಿಖಿ, 5 ವರ್ಷಗಳ ಕಾಲ ಜೈಲಿನಲ್ಲೇ ಇದ್ದರೂ ಪೊಲೀಸರಿಗೆ ಗೊತ್ತಾಗದಿರುವ ಘಟನೆಯೊಂದು ಮುಂಬೈನಲ್ಲಿ ನಡೆದಿದೆ ಎನ್ನಲಾಗಿದೆ. ಮಹಾರಾಷ್ಟ್ರ ಸಂಘಟಿತ ಅಪರಾಧ ನಿಯಂತ್ರಣ ಕಾಯ್ದೆ (ಎಂಸಿಒಸಿಎ) ನ್ಯಾಯಾಲಯದ ನ್ಯಾಯಾಧೀಶರೇ ಇದನ್ನು ಅಚ್ಚರಿಯಿಂದ ಪ್ರಶ್ನಿಸಿದ್ದು, ಈ ಬಗ್ಗೆ ಅಭಿಪ್ರಾಯ ನೀಡಿದ ನ್ಯಾ.ಎ.ಎಂ.ಪಾಟೀಲ್‌, 5 ವರ್ಷ ಜೈಲಿನಲ್ಲೇ ಇದ್ದರೂ ಪೊಲೀಸರಿಗೆ ಗೊತ್ತಾಗದ್ದೇ ಇದ್ದದ್ದು ಹೇಗೆ ? ಎಂದು ಕೇಳಿದ್ದಾರೆ ಎಂದು ವರದಿಯಾಗಿದೆ.  

ಜೈಲಿನಲ್ಲೇ ಇದ್ದ ಆರೋಪಿಗಾಗಿ 20 ವರ್ಷದಿಂದ ಹುಡುಕಾಟ ನಡೆಸಿದ ಪೊಲೀಸರು !!! Read More »

ರಾಷ್ಟ್ರೀಯ ನ್ಯೂಸ್

ಅಮ್ಮನ ಮೇಲೆ ಲೈಂಗಿಕ ದೌರ್ಜನ್ಯಕ್ಕೆ ಸೇಡು ತೀರಿಸಿಕೊಂಡ ಮಗ

(ನ್ಯೂಸ್ ಕಡಬ) newskadaba.com ಪುಣೆ, ಫೆ.13.ಕೆಳವು ವರ್ಷಗಳ ಹಿಂದೆ ಅಮ್ಮನ ಮೇಲೆ ಲೈಂಗಿಕ ದೌರ್ಜನ್ಯವೆಸಗಿದ್ದ ವ್ಯಕ್ತಿ ಹಾಗೂ ಆತನ ಪತ್ನಿಯನ್ನು ಮಹಿಳೆಯ ಪುತ್ರ ಗುದ್ದಲಿಯಿಂದ ಹೊಡೆದು ಕೊಂದ ಘಟನೆ ಮಹಾರಾಷ್ಟ್ರದ ಪುಣೆಯ ದಪೊಡಿ ಎಂಬಲ್ಲಿ ಈ ಘಟನೆ ಸಂಭವಿಸಿದೆ. ಘಟನೆಗೆ ಸಂಬಂಧಿಸಿದಂತೆ 32 ವರ್ಷ ಪ್ರಾಯದ ಪ್ರಸನ್ನ ಮುರುಗುಟ್ಕರ್‌ ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ.  60 ವರ್ಷದ ಶಂಕರ್ ಕಾಟೆ ಹಾಗೂ ಈತನ ಪತ್ನಿ 55 ವರ್ಷದ ಸಂಗೀತಾ ಕೊಲೆಯಾದವರು. ಪುಣೆಯ ದಪೊಡಿಯಲ್ಲಿರುವ ದಂಪತಿ ವಾಸವಿದ್ದ ಮಹದೇವ್ ಅಲಿ

ಅಮ್ಮನ ಮೇಲೆ ಲೈಂಗಿಕ ದೌರ್ಜನ್ಯಕ್ಕೆ ಸೇಡು ತೀರಿಸಿಕೊಂಡ ಮಗ Read More »

ರಾಷ್ಟ್ರೀಯ ನ್ಯೂಸ್

ಮಗುವಿಗೆ ಕಬ್ಬಿಣದ ರಾಡ್ ಕಾಯಿಸಿಟ್ಟ ನಕಲಿ ವೈದ್ಯ ➤ಮಗುವಿನ ಸ್ಥಿತಿ ಗಂಭೀರ

(ನ್ಯೂಸ್ ಕಡಬ) newskadaba.com ಗುಜರಾತ್, ಫೆ.13. ಎರಡು ತಿಂಗಳ ಹೆಣ್ಣು ಮಗುವಿನ ಕೆಮ್ಮು ವಾಸಿ ಮಾಡುತ್ತೇನೆಂದು ನಕಲಿ ವೈದ್ಯ ಬಿಸಿ ಕಬ್ಬಿಣದ ರಾಡ್‌ನಿಂದ ಕಾಯಿಸಿಟ್ಟ ಘಟನೆ ಗುಜರಾತ್ ನ‌ಲ್ಲಿ ಸಂಭವಿಸಿದೆ. ಘಟನೆಗೆ ಕುರಿತು ಮಗುವಿನ ತಾಯಿ ವಿರುದ್ಧ ಎಫ್‌ಐಆರ್ ದಾಖಲಿಸಲಾಗಿದೆ ಎಂದು ಉಪ ಪೊಲೀಸ್ ವರಿಷ್ಠಾಧಿಕಾರಿ ಸುರ್ಜೀತ್ ಮಹೇದು ತಿಳಿಸಿದ್ದಾರೆ.ಪೋರಬಂದರ್‌ನ ಆಸ್ಪತ್ರೆಯ ಐಸಿಯುನಲ್ಲಿ ವೈದ್ಯರು ಮಗುವನ್ನು ದಾಖಲಿಸಿದ್ದಾರೆ. ಮಗುವಿನ ಸ್ಥಿತಿ ಗಂಭೀರವಾಗಿದೆ ಎನ್ನಲಾಗಿದೆ.

ಮಗುವಿಗೆ ಕಬ್ಬಿಣದ ರಾಡ್ ಕಾಯಿಸಿಟ್ಟ ನಕಲಿ ವೈದ್ಯ ➤ಮಗುವಿನ ಸ್ಥಿತಿ ಗಂಭೀರ Read More »

ರಾಷ್ಟ್ರೀಯ ನ್ಯೂಸ್

 ಬಾಟಲಿಯಲ್ಲಿ ನೀರು ಕುಡಿದಿದ್ದಕ್ಕೆ ಶಾಲೆಯ ಪ್ರಾಂಶುಪಾಲರಿಂದ ದಲಿತ ವಿದ್ಯಾರ್ಥಿಗೆ ಥಳಿತ

(ನ್ಯೂಸ್ ಕಡಬ) newskadaba.com ಬಿಜ್ನೋರ್, ಫೆ.13. ಪ್ರಥಮ ಪಿಯುಸಿ ವಿದ್ಯಾರ್ಥಿಯೊಬ್ಬ ಮೇಜಿನ ಮೇಲೆ ಇಟ್ಟಿದ್ದ ಬಾಟಲಿಯಿಂದ ನೀರು ಕುಡಿದ ಕಾರಣಕ್ಕೆ ಆತನ ಶಾಲೆಯ ಪ್ರಾಂಶುಪಾಲರು ಥಳಿಸಿದ್ದಾರೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ದಲಿತ ವಿದ್ಯಾರ್ಥಿ ನೀಡಿದ ದೂರಿನ ಪ್ರಕಾರ, ನಡೆದ ದ್ವೀತಿಯ ಪಿಯುಸಿ ವಿದ್ಯಾರ್ಥಿಗಳ ಬೀಳ್ಕೊಡುಗೆ ಸಮಾರಂಭದಲ್ಲಿ ಈ ಘಟನೆ ಸಂಭವಿಸಿದೆ ಎಂದು ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ರಾಮ್ ಅರ್ಜ್ ತಿಳಿಸಿದ್ದಾರೆ. ವಿದ್ಯಾರ್ಥಿಯು ಮೇಜಿನ ಮೇಲೆ ಇಟ್ಟಿದ್ದ ಬಾಟಲಿಯಿಂದ ನೀರು ಕುಡಿದನು. ನಂತರ ಪ್ರಾಂಶುಪಾಲ ಯೋಗೇಂದ್ರ ಕುಮಾರ್

 ಬಾಟಲಿಯಲ್ಲಿ ನೀರು ಕುಡಿದಿದ್ದಕ್ಕೆ ಶಾಲೆಯ ಪ್ರಾಂಶುಪಾಲರಿಂದ ದಲಿತ ವಿದ್ಯಾರ್ಥಿಗೆ ಥಳಿತ Read More »

ರಾಷ್ಟ್ರೀಯ ನ್ಯೂಸ್

ಗೂಗಲ್ ಕಚೇರಿಗೆ ಹುಸಿ ಬಾಂಬ್ ಕರೆ!

(ನ್ಯೂಸ್ ಕಡಬ) newskadaba.com ಪುಣೆ, ಫೆ.13. ಮಹಾರಾಷ್ಟ್ರದ ಪುಣೆಯ ಗೂಗಲ್ ಕಂಪನಿ ಕಚೇರಿ ಆವರಣದಲ್ಲಿ ಬಾಂಬ್ ಇಡಲಾಗಿದೆ ಎಂಬ ಕರೆ ಬಂದ ನಂತರ ಕೆಲಕಾಲ ಆತಂಕದ ವಾತಾವರಣ ಸೃಷ್ಟಿಯಾಗಿತ್ತು. ಬಳಿಕ ಇದು ಸುಳ್ಳು ಕರೆ ಎಂಬುದು ದೃಢಪಟ್ಟಿತು ಎಂದು ಪೊಲೀಸರು ಹೇಳಿದ್ದಾರೆ.ಮದ್ಯದ ನಶೆಯಲ್ಲಿ ಈ ರೀತಿ ಕರೆ ಮಾಡಿದ ವ್ಯಕ್ತಿಯನ್ನು ಹೈದರಾಬಾದ್ ನಲ್ಲಿ ಪತ್ತೆ ಹಚ್ಚಿ ಬಂಧಿಸಲಾಗಿದೆ ಎಂದು ಅವರು ಮಾಹಿತಿ ನೀಡಿದ್ದಾರೆ. ಪುಣೆಯ ಮುಂಡ್ವಾ ಪ್ರದೇಶದಲ್ಲಿರುವ ಬಹು ಅಂತಸ್ತಿನ ವಾಣಿಜ್ಯ ಕಟ್ಟಡದ 11ನೇ ಮಹಡಿಯಲ್ಲಿದ್ದ ಗೂಗಲ್

ಗೂಗಲ್ ಕಚೇರಿಗೆ ಹುಸಿ ಬಾಂಬ್ ಕರೆ! Read More »

ರಾಷ್ಟ್ರೀಯ ನ್ಯೂಸ್

➤ ಆಂಧ್ರ ರಾಜ್ಯಪಾಲರಾಗಿ ಕನ್ನಡಿಗರಾದ ನಿವೃತ್ತ ನ್ಯಾ ಅಬ್ದುಲ್ ನಜೀರ್ ಆಯ್ಕೆ!

(ನ್ಯೂಸ್ ಕಡಬ) newskadaba.com. ಬೆಂಗಳೂರು. ಫೆ.13. ಆಂಧ್ರಪ್ರದೇಶದ ನೂತನ ರಾಜ್ಯಪಾಲರಾಗಿ ಸುಪ್ರೀಂ ಕೋರ್ಟ್ ನ ನಿವೃತ್ತ ನ್ಯಾಯಮೂರ್ತಿ ಅಬ್ದುಲ್ ನಜೀರ್ ಆಯ್ಕೆ ಯಾಗಿದ್ದಾರೆ. ರಾಷ್ಟ್ರಪತಿ ಭವನವು 12 ರಾಜ್ಯಗಳಿಗೆ  ನೂತನ ರಾಜ್ಯಪಾಲನ್ನು ಹೊಸದಾಗಿ ನೇಮಿಸಿ ಆದೇಶ ಹೊರಡಿಸಿದೆ. ಆಂಧ್ರಪ್ರದೇಶಕ್ಕೆ ರಾಜ್ಯಪಾಲರಾಗಿ ನೇಮಕಗೊಂಡಿರುವ ಸುಪ್ರೀಂ ಕೋರ್ಟ್ ನ ನಿವೃತ್ತ ನ್ಯಾಯಮೂರ್ತಿ ಎಸ್. ಅಬ್ದುಲ್ ನಜೀರ್ ಕರ್ನಾಟಕದವರಾಗಿದ್ದು, ಅವರ ಆಯ್ಕೆ ರಾಜ್ಯದ ಜನರಲ್ಲಿ ಹರ್ಷ ತಂದಿದೆ.

➤ ಆಂಧ್ರ ರಾಜ್ಯಪಾಲರಾಗಿ ಕನ್ನಡಿಗರಾದ ನಿವೃತ್ತ ನ್ಯಾ ಅಬ್ದುಲ್ ನಜೀರ್ ಆಯ್ಕೆ! Read More »

ಕರ್ನಾಟಕ, ರಾಷ್ಟ್ರೀಯ ನ್ಯೂಸ್

ಬಂಧನದ ಭೀತಿಯಿಂದ ನವವಿವಾಹಿತೆ ಯುವತಿ ಆತ್ಮಹತ್ಯೆ!

(ನ್ಯೂಸ್ ಕಡಬ) newskadaba.com ದಿಸ್ಪುರ್, ಫೆ.13. ತನ್ನ ಗಂಡನನ್ನು ಬಂಧಿಸುತ್ತಾರೆಂದು ಹೆದರಿ ಮೂರು ತಿಂಗಳ ಹಿಂದೆಯಷ್ಟೇ ಮದುವೆಯಾಗಿದ್ದ ನವವಿವಾಹಿತೆ ಯುವತಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಸಂಭವಿಸಿದೆ. ದಕ್ಷಿಣ ಸಾಲ್ಮರ ಪೊಲೀಸ್ ಠಾಣಾ ವ್ಯಾಪ್ತಿಯ ಕಮರ್ ಪದ ಗ್ರಾಮದ ನಿವಾಸಿ ಮಹಿಳೆ ಆತ್ಮಹತ್ಯೆ ಮಾಡಿಕೊಂಡವರು. ಅಸ್ಸಾಂ ಸರ್ಕಾರ ಬಾಲ್ಯವಿವಾಹ ವಿರುದ್ಧ ಕಾರ್ಯಾಚರಣೆ ನಡೆಸಿ ಸಾವಿರಾರು ಮಂದಿಯನ್ನು ಬಂಧಿಸಿದ್ದರು.ಈ  ಕುರಿತು ತನ್ನ ಪತಿಯನ್ನು ಬಂಧಿಸುತ್ತಾರೆ ಎಂದು ಹೆದರಿ 3 ತಿಂಗಳ ಹಿಂದೆಯಷ್ಟೇ ಮದುವೆಯಾದ ವಿವಾಹಿತೆ ಆತ್ಮಹತ್ಯೆಗೆ ಶರಣಾಗಿದ್ದಾಳೆ. ಮೃತದೇಹವನ್ನು ಇದೀಗ

ಬಂಧನದ ಭೀತಿಯಿಂದ ನವವಿವಾಹಿತೆ ಯುವತಿ ಆತ್ಮಹತ್ಯೆ! Read More »

ರಾಷ್ಟ್ರೀಯ ನ್ಯೂಸ್

➤ ಹೆಚ್ಚಿನ ಪ್ರಮಾಣದ ವಿದ್ಯುತ್ಕಾಂತೀಯ ವಿಕಿರಣ ಬಳಕೆ ➤ ಬೆಂಗಳೂರಿನ 10 ಮೊಬೈಲ್‌ ಕಂಪನಿಗಳಿಗೆ ₹4.45 ಕೋಟಿ ದಂಡ

ನ್ಯೂಸ್ ಕಡಬ) newskadaba.com. ಬೆಂಗಳೂರು. ಫೆ.13. ಬೇಸ್‌ ಟ್ರಾನ್ಸೀವರ್‌ ಸ್ಟೇಷನ್‌ಗಳಲ್ಲಿ (ಬಿಟಿಎಸ್‌) ಅನುಮತಿ ನೀಡಿದ್ದಕ್ಕಿಂತ ಹೆಚ್ಚು ವಿದ್ಯುತ್ಕಾಂತೀಯ ವಿಕಿರಣ ಹೊರಸೂಸುತ್ತಿರುವ ಹಿನ್ನೆಲೆಯಲ್ಲಿ ನಗರದ 10 ಮೊಬೈಲ್‌ ಕಂಪನಿಗಳಿಗೆ ಕೇಂದ್ರ ಸರಕಾರ ದಂಡ ವಿಧಿಸಿದೆ. 10 ಮೊಬೈಲ್‌ ಕಂಪೆನಿಗಳಿಗೆ ದಂಡ ವಿಧಿಸಿರುವುದನ್ನು ಕೇಂದ್ರ ಸರಧಿಕಾರ ಒಪ್ಪಿಕೊಂಡಿದ್ದು, ಒಟ್ಟು 4.45 ಕೋಟಿ ರೂ. ದಂಡ ಸಂಗ್ರಹಿಸಲಾಗಿದೆ ಎಂದು ವಿವರ ನೀಡಿದೆ. ಇತ್ತೀಚಿನ ಮಾಹಿತಿ ಪ್ರಕಾರ, ದೇಶಾದ್ಯಂತ ದೂರಸಂಪರ್ಕ ಇಲಾಖೆಯ ಪರವಾನಗಿ ಪಡೆದ ಸೇವಾ ಪ್ರದೇಶದ (ಎಲ್‌ಎಸ್‌ಎ) 11,61,281 ಬಿಟಿಎಸ್‌ಗಳ ವಿದ್ಯುತ್ಕಾಂತೀಯ

➤ ಹೆಚ್ಚಿನ ಪ್ರಮಾಣದ ವಿದ್ಯುತ್ಕಾಂತೀಯ ವಿಕಿರಣ ಬಳಕೆ ➤ ಬೆಂಗಳೂರಿನ 10 ಮೊಬೈಲ್‌ ಕಂಪನಿಗಳಿಗೆ ₹4.45 ಕೋಟಿ ದಂಡ Read More »

ಕರ್ನಾಟಕ, ತಂತ್ರಜ್ಞಾನ, ರಾಷ್ಟ್ರೀಯ ನ್ಯೂಸ್

 ಟರ್ಕಿ ಬಳಿಕ ಭಾರತದಲ್ಲಿ ಲಘು ಭೂಕಂಪನ!

(ನ್ಯೂಸ್ ಕಡಬ) newskadaba.com ಅಸ್ಸಾಂ, ಫೆ.13. ;ಅಸ್ಸಾಂನ ನಾಗಾನ್ ಪ್ರದೇಶದಲ್ಲಿ ಗಂಟೆ 18 ಭೂಕಂಪ ಉಂಟಾಗಿದೆ. ರಿಕ್ಟರ್ ಮಾಪಕದಲ್ಲಿ ಕಂಪನದ ತೀವ್ರತೆ 4ರಷ್ಟು ತೀವ್ರತೆ ದಾಖಲಾಗಿದೆ. ಸಿಕ್ಕಿಂನ ಯುಕ್ಸೋಮ್ ಸುತ್ತಮುತ್ತ ಭೂಕಂಪನ ಸಂಭವಿಸಿದ್ದು, ರಿಕ್ಟರ್ ಮಾಪಕದಲ್ಲಿ 4.3 ರಷ್ಟು ತೀವ್ರತೆ ದಾಖಲಾಗಿದೆ. ಸಿಕ್ಕಿಂನ ಯುಕ್ಸೋಮ್ನ ವಾಯುವ್ಯಕ್ಕೆ 70 ಕಿ.ಮೀ ದೂರದಲ್ಲಿ  ಭೂಕಂಪ ಉಂಟಾಗಿದೆ, ರಿಕ್ಟರ್ ಮಾಪಕದಲ್ಲಿ 4.3ರಷ್ಟು ತೀವ್ರತೆ ದಾಖಲಾಗಿದೆ ಎಂದು ರಾಷ್ಟ್ರೀಯ ಭೂಕಂಪಶಾಸ್ತ್ರ ಕೇಂದ್ರ ತಿಳಿಸಿದೆ.

 ಟರ್ಕಿ ಬಳಿಕ ಭಾರತದಲ್ಲಿ ಲಘು ಭೂಕಂಪನ! Read More »

ರಾಷ್ಟ್ರೀಯ ನ್ಯೂಸ್
Scroll to Top