ಕರಾವಳಿ

ಚಾರ್ವಾಕ ಗ್ರಾಮವನ್ನು 5 ದಿನಗಳಿಂದ ಕತ್ತಲಲ್ಲಿಟ್ಟ ಮೆಸ್ಕಾಂ ಆಲಂಕಾರು ಶಾಖೆ ► ಗ್ರಾಮಸ್ಥರ ಪ್ರತಿಭಟನೆಗೆ ಮಣಿದು ಮರು ಸಂಪರ್ಕ ನೀಡಿದ ಶಾಖಾಧಿಕಾರಿ

(ನ್ಯೂಸ್ ಕಡಬ) newskadaba.com ಕಡಬ, ಜ.15. ಚಾರ್ವಾಕ ಗ್ರಾಮಕ್ಕೆ ಸರಬರಾಜಾಗುವ ವಿದ್ಯುತ್ ಸಂಪರ್ಕವನ್ನು ಕಳೆದ 5 ದಿನಗಳಿಂದ ಕಡಿತಗೊಳಿಸಿ ಕಾರಣ ಕೇಳಿದ ಸಾರ್ವಜನಿಕರಿಗೆ ಉಡಾಫೆಯ ಉತ್ತರವನ್ನು ನೀಡಿ ಉದ್ದಟತನವನ್ನು ಪ್ರದರ್ಶಿಸಿದ್ದಾರೆ ಎಂದು ಶಾಖಾಧಿಕಾರಿಗೆ ಪ್ರತಿಭಟನೆಯ ಮೂಲಕ ಬಿಸಿ ಮುಟ್ಟಿಸಿದ ಘಟನೆ ಆಲಂಕಾರಿನ ಮೆಸ್ಕಾಂ ಶಾಖಾ ಕಚೇರಿಯಲ್ಲಿ ಸೋಮವಾರದಂದು ನಡೆದಿದೆ. ಆಲಂಕಾರು ಮೆಸ್ಕಾಂ ಕಾರ್ಯ ವ್ಯಾಪ್ತಿಯ ಪೆರಾಬೆ ಗ್ರಾಮದ ಇಡಾಳದ ಬಳಿಯಿಂದ ಚಾರ್ವಾಕ ಗ್ರಾಮದ ಮೂರು ವಿದ್ಯುತ್ ಪರಿವರ್ತಕಗಳಿಗೆ  ವಿದ್ಯುತ್ ಸಂಪರ್ಕವನ್ನು ಕಳೆದ 15 ವರ್ಷಗಳಿಂದ ನೀಡಲಾಗುತ್ತಿತ್ತು. ಆದರೆ […]

ಚಾರ್ವಾಕ ಗ್ರಾಮವನ್ನು 5 ದಿನಗಳಿಂದ ಕತ್ತಲಲ್ಲಿಟ್ಟ ಮೆಸ್ಕಾಂ ಆಲಂಕಾರು ಶಾಖೆ ► ಗ್ರಾಮಸ್ಥರ ಪ್ರತಿಭಟನೆಗೆ ಮಣಿದು ಮರು ಸಂಪರ್ಕ ನೀಡಿದ ಶಾಖಾಧಿಕಾರಿ Read More »

ಕರಾವಳಿ

ಕೂಳೂರು ಸೇತುವೆಗೆ ಢಿಕ್ಕಿಯಾಗಿ ತಡೆಗೋಡೆಯಲ್ಲಿ ಸಿಕ್ಕಿಹಾಕಿಕೊಂಡ ಖಾಸಗಿ ಬಸ್ ► ತಪ್ಪಿದ ಭಾರೀ ಅನಾಹುತ

(ನ್ಯೂಸ್ ಕಡಬ) newskadaba.com ಮಂಗಳೂರು, ಜ.15. ಎದುರಿನಿಂದ ಹೋಗುತ್ತಿದ್ದ ವಾಹನವನ್ನು ಓವರ್ ಟೇಕ್ ಮಾಡುವ ಭರದಲ್ಲಿ ಚಾಲಕನ ನಿಯಂತ್ರಣ ತಪ್ಪಿದ ಖಾಸಗಿ ಬಸ್ಸೊಂದು ಸೇತುವೆಯ ತಡೆಗೋಡೆಗೆ ಢಿಕ್ಕಿ ಹೊಡೆದು ಅರ್ಧದಲ್ಲಿ ಸಿಲುಕಿಕೊಂಡ ಪರಿಣಾಮ ದೊಡ್ಡ ಅನಾಹುತವೊಂದು ಸ್ವಲ್ಪದರಲ್ಲೇ ತಪ್ಪಿದ ಘಟನೆ ಕೂಳೂರಿನಲ್ಲಿ ಸೋಮವಾರದಂದು ನಡೆದಿದೆ. ಸುರತ್ಕಲ್‌ – ಸ್ಟೇಟ್ ಬ್ಯಾಕ್ ಮಧ್ಯೆ ಸಂಚರಿಸುವ ಖಾಸಗಿ ಬಸ್ ಬೇರೊಂದು ವಾಹನವನ್ನು ಓವರ್ ಟೇಕ್ ಮಾಡುವಾಗ ಸೇತುವೆಯ ತಡೆಗೋಡೆಗೆ ಢಿಕ್ಕಿ ಹೊಡೆದಿದ್ದು, ತಡೆಗೋಡೆ ಮುರಿದು ಬಸ್ಸಿನ ಅರ್ಧ ಭಾಗ ಸೇತುವೆಯಲ್ಲಿ

ಕೂಳೂರು ಸೇತುವೆಗೆ ಢಿಕ್ಕಿಯಾಗಿ ತಡೆಗೋಡೆಯಲ್ಲಿ ಸಿಕ್ಕಿಹಾಕಿಕೊಂಡ ಖಾಸಗಿ ಬಸ್ ► ತಪ್ಪಿದ ಭಾರೀ ಅನಾಹುತ Read More »

ಕರಾವಳಿ

ಆಕಾಶ ಭವನ ಬಶೀರ್ ಕೊಲೆ ಪ್ರಕರಣ ► ಇನ್ನಿಬ್ಬರು ಆರೋಪಿಗಳ ಬಂಧನ

(ನ್ಯೂಸ್ ಕಡಬ) newskadaba.com ಮಂಗಳೂರು, ಜ.15. ಇತ್ತೀಚೆಗೆ ನಗರದಲ್ಲಿ ನಡೆದ ದೀಪಕ್ ರಾವ್ ಹತ್ಯೆಗೆ ಪ್ರತೀಕಾರವಾಗಿ ಕಾವೂರು ಪೊಲೀಸ್ ಠಾಣಾ ವ್ಯಾಪ್ತಿಯ ಕೊಟ್ಟಾರ ಚೌಕಿಯಲ್ಲಿ ಬಶೀರ್ ಎಂಬವರ ಕೊಲೆಯಲ್ಲಿ ಭಾಗಿಯಾದ ಇನ್ನಿಬ್ಬರು ಆರೋಪಿಗಳನ್ನು ಬಂಧಿಸುವಲ್ಲಿ ಮಂಗಳೂರು ನಗರ ಸಿಸಿಬಿ ಪೊಲೀಸರು ಯಶಸ್ವಿಯಾಗಿದ್ದಾರೆ. ಬಂಧಿತರನ್ನು ಕಾಸರಗೋಡು ಮೊಗ್ರಾಲ್ ನಿವಾಸಿ ಗೋಪಾಲ್ ಎಂಬವರ ಪುತ್ರ ಲತೀಶ್(24), ಕಾಸರಗೋಡು ಸ್ಕೌಟ್ ಭವನ ವಿದ್ಯಾನಗರ ನಿವಾಸಿ ದಿ| ಉಮೇಶ್ ಆಚಾರ್ಯ ಎಂಬವರ ಪುತ್ರ ಪುಷ್ಪರಾಜ್(23) ಎಂದು ಗುರುತಿಸಲಾಗಿದೆ. ಇವರು ಮಂಗಳೂರಿನ ಕೊಟ್ಟಾರ ಚೌಕಿ

ಆಕಾಶ ಭವನ ಬಶೀರ್ ಕೊಲೆ ಪ್ರಕರಣ ► ಇನ್ನಿಬ್ಬರು ಆರೋಪಿಗಳ ಬಂಧನ Read More »

ಕರಾವಳಿ

ಮಂಗಳೂರು: ಜ.16 ರಂದು ಬಡವರಿಗೆ‌ ಲಾಟರಿ ಮೂಲಕ ಫ್ಲ್ಯಾಟ್ ಹಂಚಿಕೆ

(ನ್ಯೂಸ್ ಕಡಬ) newskadaba.com ಮಂಗಳೂರು, ಜ.14. ಮಂಗಳೂರು ಮಹಾನಗರದಲ್ಲಿ ವಸತಿ ರಹಿತ ಬಡವರಿಗೆ ಇದೇ ಮೊದಲ ಬಾರಿಗೆ ಫ್ಲಾಟ್ ಅಪಾರ್ಟ್‍ಮೆಂಟ್‍ಗಳನ್ನು ನಿರ್ಮಿಸಿಕೊಡಲು ಮಹಾನಗರಪಾಲಿಕೆ ಮುಂದಾಗಿದ್ದು, ಮಂಗಳವಾರ(ಜ.16) ಮಂಗಳೂರು ಪುರಭವನದಲ್ಲಿ ಫಲಾನುಭವಿಗಳಿಗೆ ಲಾಟರಿ ಮೂಲಕ ಫ್ಲಾಟ್‍ಗಳ ಹಂಚಿಕೆಯಾಗಲಿದೆ. ಹಲವು ವರ್ಷಗಳ ಬಳಿಕ ನಗರ ಮಂಗಳೂರು ಮಹಾನಗರದಲ್ಲಿ ಬಡವರಿಗೆ ಬೃಹತ್ ಸಂಖ್ಯೆಯಲ್ಲಿ ಮನೆಗಳನ್ನು ನಿರ್ಮಿಸಿಕೊಡುವ ಯೋಜನೆ ಜಾರಿಗೆ ಬರುತ್ತಿದೆ. ನಗರದಲ್ಲಿ ಮನೆಗಳಿಗಾಗಿ ವಸತಿ ರಹಿತರಿಂದ ಮನೆಗಳಿಗಾಗಿ ಸಾಕಷ್ಟು ಬೇಡಿಕೆಯಿದ್ದು, ನಗರ ವ್ಯಾಪ್ತಿಯಲ್ಲಿ ಜಾಗದ ಸಮಸ್ಯೆಯಿಂದ ವಸತಿ ಯೋಜನೆಗೆ ತೀವ್ರ ಅಡ್ಡಿಯಾಗಿತ್ತು.

ಮಂಗಳೂರು: ಜ.16 ರಂದು ಬಡವರಿಗೆ‌ ಲಾಟರಿ ಮೂಲಕ ಫ್ಲ್ಯಾಟ್ ಹಂಚಿಕೆ Read More »

ಕರಾವಳಿ

ಕಡಬ: ಆರೆಸ್ಸೆಸ್ ವತಿಯಿಂದ ಮಕರ ಸಂಕ್ರಮಣ ಉತ್ಸವ ಆಚರಣೆ ► ಗಣವೇಷಧಾರಿ ಕಾರ್ಯಕರ್ತರಿಂದ ಕಡಬ ಪೇಟೆಯಲ್ಲಿ ಪಥಸಂಚಲನ

(ನ್ಯೂಸ್ ಕಡಬ) newskadaba.com ಕಡಬ, ಜ.14. ದೇಶ ಸುಭದ್ರವಾಗಿದ್ದರೆ ಮಾತ್ರ ದೇಶವಾಸಿಗಳು ಸುಖವಾಗಿರಬಹುದು. ದೇಶವನ್ನು ಮಾತೆಯೆಂದು ಪೂಜಿಸುವವರು ನಾವು. ದೇಶದ ಮೇಲಿನ ಪ್ರೀತಿಯೇ ನಮ್ಮ ಉಸಿರಾಗಿರಲಿ ಎಂದು ರಾಷ್ಟ್ರೀಯ ಸ್ವಯಂ ಸೇವಕ ಸಂಘ (ಆರೆಸ್ಸೆಸ್) ದ ಜಿಲ್ಲಾ ಕಾರ್ಯವಾಹ ಶ್ರೀನಿವಾಸ ಉಬರಡ್ಕ ಅವರು ಅಭಿಪ್ರಾಯಪಟ್ಟರು. ಅವರು ರವಿವಾರ ಕಡಬದ ಸರಸ್ವತೀ ವಿದ್ಯಾಲಯದ ಸಭಾಂಗಣದಲ್ಲಿ ಆರೆಸ್ಸೆಸ್ ನ ಕಡಬ ಹಾಗೂ ಬಿಳಿನೆಲೆ ಮಂಡಲದ ವತಿಯಿಂದ ಜರಗಿದ ಮಕರ ಸಂಕ್ರಮಣ ಉತ್ಸವದಲ್ಲಿ ಪ್ರಧಾನ ಭಾಷಣ ಮಾಡಿದರು.  ದೇಶ ಇಂದು ಬಾಹ್ಯ ಶತ್ರುಗಳ

ಕಡಬ: ಆರೆಸ್ಸೆಸ್ ವತಿಯಿಂದ ಮಕರ ಸಂಕ್ರಮಣ ಉತ್ಸವ ಆಚರಣೆ ► ಗಣವೇಷಧಾರಿ ಕಾರ್ಯಕರ್ತರಿಂದ ಕಡಬ ಪೇಟೆಯಲ್ಲಿ ಪಥಸಂಚಲನ Read More »

ಕರಾವಳಿ

ಧಗಧಗನೆ ಉರಿದ ಕೈಕಂಬ ಗುಡ್ಡೆ ► ಸುಮಾರು 4 ಎಕರೆ ಗುಡ್ಡೆ ಬೆಂಕಿಗಾಹುತಿ

(ನ್ಯೂಸ್ ಕಡಬ) newskadaba.com ಬಂಟ್ವಾಳ, ಜ.14. ಮಂಗಳೂರು – ಬೆಂಗಳೂರು ರಾಷ್ಟ್ರೀಯ ಹೆದ್ದಾರಿಗೆ ತಾಗಿಕೊಂಡಿರುವ ಕೈಕಂಬದ ಪೂಂಜಾ ಸ್ಟೇಡಿಯಂನಲ್ಲಿ ಹಠಾತ್ತನೆ ಬೆಂಕಿ ಕಾಣಿಸಿಕೊಂಡು ಸ್ಥಳೀಯರನ್ನು ಭಯ ಭೀತರನ್ನಾಗಿಸಿದ ಘಟನೆ ಭಾನುವಾರ ಮಧ್ಯಾಹ್ನ ನಡೆದಿದೆ. ಬಂಟ್ವಾಳ ಸಮೀಪದಲ್ಲಿರುವ ಪೂಂಜಾ ಸ್ಟೇಡಿಯಂನ ಸುಮಾರು 4 ಎಕರೆ ಪ್ರದೇಶವು ಬೆಂಕಿಗಾಹುತಿಯಾಗಿದೆ. ಯಾರೋ ಸ್ಥಳೀಯರು ಹುಲ್ಲುಗಳನ್ನು ನಾಶ ಮಾಡಲು ಬೆಂಕಿಯನ್ನು ಕೊಟ್ಟ ಪರಿಣಾಮ ಬೆಂಕಿ ಸಂಪೂರ್ಣ ಗುಡ್ಡೆಯನ್ನು ಆವರಿಸಿಕೊಂಡಿತ್ತು. ತಕ್ಷಣವೇ ಬಂಟ್ವಾಳ ಅಗ್ನಿಶಾಮಕದಳದವರು ಸ್ಥಳಕ್ಕೆ ಭೇಟಿ ನೀಡಿ ಸ್ಥಳೀಯರೊಂದಿಗೆ ಸೇರಿ ಬೆಂಕಿಯನ್ನು ನಂದಿಸುವಲ್ಲಿ

ಧಗಧಗನೆ ಉರಿದ ಕೈಕಂಬ ಗುಡ್ಡೆ ► ಸುಮಾರು 4 ಎಕರೆ ಗುಡ್ಡೆ ಬೆಂಕಿಗಾಹುತಿ Read More »

ಕರಾವಳಿ

ಟಾರ್ಗೆಟ್ ಗ್ರೂಪ್‌ನ ಇಲ್ಯಾಸ್ ಹತ್ಯೆ ಪ್ರಕರಣ ► ಆರೋಪಿಗಳ ಸುಳಿವು ಲಭ್ಯ

(ನ್ಯೂಸ್ ಕಡಬ) newskadaba.com ಮಂಗಳೂರು, ಜ.14. ಟಾರ್ಗೆಟ್ ಗುಂಪಿನಲ್ಲಿ ಗುರುತಿಸಿಕೊಂಡಿದ್ದ ಕುಡ್ಪಾಡಿಯ ಇಲ್ಯಾಸ್ ಹತ್ಯೆಯ ಆರೋಪಿಗಳ ಸುಳಿವು ಲಭ್ಯವಾಗಿದ್ದು, ಆರೋಪಿಗಳನ್ನು ಶೀಘ್ರದಲ್ಲೇ ಬಂಧಿಸುವುದಾಗಿ ನಗರ ಪೊಲೀಸ್ ಆಯುಕ್ತ ಟಿ.ಆರ್.ಸುರೇಶ್ ತಿಳಿಸಿದ್ದಾರೆ. ಎರಡು ಗುಂಪುಗಳಾಗಿ ವಿಭಾಗಿಸಲ್ಪಟ್ಟ ಟಾರ್ಗೆಟ್ ಗ್ರೂಪ್‌ನ ಒಂದು ಬಣದಿಂದ ದ್ವೇಷದ ಹಿನ್ನೆಲೆಯಲ್ಲಿ ಈ ಕೃತ್ಯ ನಡೆದಿರುವ ಬಗ್ಗೆ ಶಂಕೆ ಇದ್ದು, ಈ ಬಗ್ಗೆ ತನಿಖೆ ನಡೆಯುತ್ತಿದೆ ಎಂದರು. ಇಲ್ಯಾಸ್ ಟಾರ್ಗೆಟ್ ಗ್ರೂಪ್‌ನಲ್ಲಿ ಗುರುತಿಸಿಕೊಂಡಿದ್ದ. ಬಳಿಕ ಈ ಗ್ರೂಪ್‌ ದಾವೂದ್ ಹಾಗೂ ಸಫ್ವಾನ್ ಎಂಬ ಗುಂಪು ಪ್ರತ್ಯೇಕಗೊಂಡು

ಟಾರ್ಗೆಟ್ ಗ್ರೂಪ್‌ನ ಇಲ್ಯಾಸ್ ಹತ್ಯೆ ಪ್ರಕರಣ ► ಆರೋಪಿಗಳ ಸುಳಿವು ಲಭ್ಯ Read More »

ಕರಾವಳಿ

ರಾಮಕುಂಜದ ದೀಪಕ್ ಕೆ.ಟಿ‌.ಯವರಿಗೆ ಪಿ.ಎಚ್.ಡಿ ಪದವಿ

(ನ್ಯೂಸ್ ಕಡಬ) newskadaba.com ಕಡಬ, ಜ.14. ಪುತ್ತೂರು ವಿವೇಕಾನಂದ ಇಂಜೀನಿಯರಿಂಗ್ ಕಾಲೇಜಿನ ಮೆಕ್ಯಾನಿಕಲ್ ವಿಭಾಗದ ಸಹಾಯಕ ಪ್ರಾಧ್ಯಾಪಕ ದೀಪಕ್ ಕೆ.ಟಿ ಅವರಿಗೆ ಬೆಂಗಳೂರು ವಿಶ್ವೇಶ್ವರಯ್ಯ ಟೆಕ್ನಾಲಜಿಕಲ್ ವಿಶ್ವವಿದ್ಯಾಲಯ ಪಿ.ಎಚ್.ಡಿ ಪದವಿ ನೀಡಿದೆ. ಸುಳ್ಯ ಕೆ.ವಿಜಿ ಇಂಜಿನಿಯರಿಂಗ್ ಕಾಲೇಜಿನ ಪ್ರಿನ್ಸಿಪಾಲ್ ಡಾ|ಜ್ಞಾನೇಶ್ ಅವರ ಮಾರ್ಗದರ್ಶನದಲ್ಲಿ ದೀಪಕ್ ಅವರು ಮಂಡಿಸಿರುವ ಇನ್ವೆಸ್ಟಿಗೇಷನ್ ಆನ್ ಡೆನ್ಸಿಫೈಡ್ ಬಂiೆÆೕಮಾಸ್ ಬ್ರಿಕೇಟ್ ಡೆವಲಪ್ಡ್ ಯೂಸಿಂಗ್ ಅರೆಕನಟ್ ಲೀವ್ಸ್‌ ಆ್ಯಂಡ್ ಕೋಕನಟ್ ಲೀವ್ಸ್‌ ಆ್ಯಸ್ ಎ ಸೋರ್ಸ್ ಆಫ್ ರಿನ್ಯೂವೆಬೆಲ್ ಎನರ್ಜಿ ಎಂಬ ಮಹಾ ಪ್ರಬಂಧಕ್ಕೆ

ರಾಮಕುಂಜದ ದೀಪಕ್ ಕೆ.ಟಿ‌.ಯವರಿಗೆ ಪಿ.ಎಚ್.ಡಿ ಪದವಿ Read More »

ಕರಾವಳಿ

ಮರ್ಧಾಳ: ಅಪರಿಚಿತ ವಾಹನ ಬೈಕಿಗೆ ಢಿಕ್ಕಿ ಹೊಡೆದು ಪರಾರಿ ► ಬೈಕ್ ಸವಾರ ಗಂಭೀರ

(ನ್ಯೂಸ್ ಕಡಬ) newskadaba.com ಕಡಬ, ಜ.13. ಅಪರಿಚಿತ ವಾಹನವೊಂದು ಬೈಕಿಗೆ ಢಿಕ್ಕಿ ಹೊಡೆದು ಪರಾರಿಯಾದ ಘಟನೆ ಧರ್ಮಸ್ಥಳ – ಸುಬ್ರಹ್ಮಣ್ಯ ರಾಜ್ಯ ಹೆದ್ದಾರಿಯ ಮರ್ಧಾಳ ಸಮೀಪದ ಮಿತ್ತೋಡಿ ಎಂಬಲ್ಲಿ ಶನಿವಾರ ಮಧ್ಯಾಹ್ನ ನಡೆದಿದೆ‌. ಘಟನೆಯಲ್ಲಿ ಬೈಕ್ ಸವಾರ ಬೆತ್ತೋಡಿ ಸಿ ಆರ್ ಸಿ ನಿವಾಸಿ ಸತ್ಯರಾಜ್(27) ಗಂಭೀರ ಗಾಯಗೊಂಡಿದ್ದು, ಕಡಬ ಸಮುದಾಯ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ನೀಡಿ ಹೆಚ್ಚಿನ ಚಿಕಿತ್ಸೆಗಾಗಿ ಪುತ್ತೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.

ಮರ್ಧಾಳ: ಅಪರಿಚಿತ ವಾಹನ ಬೈಕಿಗೆ ಢಿಕ್ಕಿ ಹೊಡೆದು ಪರಾರಿ ► ಬೈಕ್ ಸವಾರ ಗಂಭೀರ Read More »

ಕರಾವಳಿ

ಉಪ್ಪಿನಂಗಡಿ: ನೇತ್ರಾವತಿ ನದಿ ಕಿನಾರೆಯಲ್ಲಿ ಅಪರಿಚಿತ ಗಂಡಸಿನ ಮೃತದೇಹ ಪತ್ತೆ

(ನ್ಯೂಸ್ ಕಡಬ) newskadaba.com ಉಪ್ಪಿನಂಗಡಿ, ಜ.13. ಇಲ್ಲಿನ ಶ್ರೀ ಸಹಸ್ರಲಿಂಗೇಶ್ವರ – ಮಹಾಕಾಳಿ ದೇವಸ್ಥಾನದ ಬಳಿಯ ನೇತ್ರಾವತಿ ನದಿ ಕಿನಾರೆಯಲ್ಲಿ ಅಪರಿಚಿತ ವ್ಯಕ್ತಿಯೋರ್ವರು ಮಲಗಿದ್ದಲ್ಲಿಯೇ ಮೃತಪಟ್ಟ ಸ್ಥಿತಿಯಲ್ಲಿ ಶುಕ್ರವಾರದಂದು ಕಂಡುಬಂದಿದೆ. ಸುಮಾರು 38ರಿಂದ 40ರ ಹರೆಯದ ವಿಕಲಾಂಗ ವ್ಯಕ್ತಿಯೋರ್ವರು ಇಲ್ಲಿನ ನದಿ ಕಿನಾರೆಯಲ್ಲಿ ಮಲಗಿದ್ದು, ನಿದ್ರಿಸಿದಾಗಲೇ ಇವರು ಮೃತಪಟ್ಟಿದ್ದಾರೆ. ಶುಕ್ರವಾರದಂದು ಈ ಘಟನೆ ಬೆಳಕಿಗೆ ಬಂದಿದ್ದು, ಇವರು ನಸು ನೀಲಿ ಬಣ್ಣದ ಉದ್ದ ಕೈ ತೋಳಿನ ಶರ್ಟ್ ಹಾಗೂ ನೀಲಿ ಚೌಕುಳಿ ಇರುವ ಪಂಚೆಯನ್ನು ಧರಿಸಿದ್ದರು. ಕಾಯಿಲೆ ಅಥವಾ

ಉಪ್ಪಿನಂಗಡಿ: ನೇತ್ರಾವತಿ ನದಿ ಕಿನಾರೆಯಲ್ಲಿ ಅಪರಿಚಿತ ಗಂಡಸಿನ ಮೃತದೇಹ ಪತ್ತೆ Read More »

ಕರಾವಳಿ
Scroll to Top