ಕರಾವಳಿ

ಪೆರ್ನೆ: ಬೈಕ್ – ರಿಕ್ಷಾ ಢಿಕ್ಕಿ ► ಬೈಕ್ ಸವಾರ ಮೃತ್ಯು

(ನ್ಯೂಸ್ ಕಡಬ) newskadaba.com ವಿಟ್ಲ, ನ.12. ಬೈಕ್ ಮತ್ತು ಗೂಡ್ಸ್ ರಿಕ್ಷಾ ನಡುವೆ ಢಿಕ್ಕಿ ಸಂಭವಿಸಿದ ಪರಿಣಾಮ ಬೈಕ್ ಸವಾರ ಮೃತಪಟ್ಟ ಘಟನೆ ಮಂಗಳೂರು – ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯ ಪೆರ್ನೆಯಲ್ಲಿ ನಡೆದಿದೆ. ಉಪ್ಪಿನಂಗಡಿಯಿಂದ ಮಂಗಳೂರು ಕಡೆಗೆ ತೆರಳುತ್ತಿದ್ದ ಬೈಕ್ ಮತ್ತು ಪೆರ್ನೆಯಿಂದ ಉಪ್ಪಿನಂಗಡಿ ಕಡೆಗೆ ತೆರಳುತ್ತಿದ್ದ ಗೂಡ್ಸ್ ರಿಕ್ಷಾ ನಡುವೆ ಪೆರ್ನೆ ಸಮೀಪದ ದೋರ್ಮೆ ಎಂಬಲ್ಲಿ ಮುಖಾಮುಖಿ ಢಿಕ್ಕಿಯಾಗಿ ಈ ದುರ್ಘಟನೆ ಸಂಭವಿಸಿದೆ. ಘಟನೆಯಲ್ಲಿ ಗಂಭೀರ ಗಾಯಗೊಂಡ ಬೈಕ್ ಸವಾರ ಬುಡೋಳಿ ಸಮೀಪ್ ಶೇರಾ ನಿವಾಸಿ […]

ಪೆರ್ನೆ: ಬೈಕ್ – ರಿಕ್ಷಾ ಢಿಕ್ಕಿ ► ಬೈಕ್ ಸವಾರ ಮೃತ್ಯು Read More »

ಕರಾವಳಿ

ಶಿರಾಡಿ: 80 ಅಡಿ ಆಳಕ್ಕೆ ಉರುಳಿದ ಕಾರು ► ಚಾಲಕ ಮೃತ್ಯು

(ನ್ಯೂಸ್ ಕಡಬ) newskadaba.com ಉಪ್ಪಿನಂಗಡಿ, ನ.12. ಚಾಲಕನ ನಿಯಂತ್ರಣ ತಪ್ಪಿದ ಕಾರೊಂದು ಸುಮಾರು 80 ಅಡಿ ಆಳದ ಪ್ರಪಾತಕ್ಕೆ ಉರುಳಿ ಬಿದ್ದ ಪರಿಣಾಮ ಚಾಲಕ ಮೃತಪಟ್ಟ ಘಟನೆ ಮಂಗಳೂರು – ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯ ಬರ್ಚಿನಹಳ್ಳ ಸಮೀಪ ನಡೆದಿದೆ. ಮೃತ ಚಾಲಕನನ್ನು ತಮಿಳುನಾಡಿನ ಹೊಸೂರು ತಾಲೂಕಿನ ಮುತ್ತಪ್ಪ ಎಂಬವರ ಪುತ್ರ ವೆಂಕಟರಾಜು ಎಂದು ಗುರುತಿಸಲಾಗಿದೆ. ಕುಕ್ಕೆ ಸುಬ್ರಹ್ಮಣ್ಯಕ್ಕೆ ಆಗಮಿಸಿದ್ದ ಅವರು ಶನಿವಾರದಂದು ಪೂಜೆ ಮುಗಿಸಿ ವಾಪಸ್ ಊರಿಗೆ ಹಿಂತಿರುಗುತ್ತಿದ್ದಾಗ ಈ ದುರ್ಘಟನೆ ಸಂಭವಿಸಿದ್ದು, ಭಾನುವಾರದಂದು ಬೆಳಕಿಗೆ ಬಂದಿದೆ.

ಶಿರಾಡಿ: 80 ಅಡಿ ಆಳಕ್ಕೆ ಉರುಳಿದ ಕಾರು ► ಚಾಲಕ ಮೃತ್ಯು Read More »

ಕರಾವಳಿ

ಉಜಿರೆ: ಮುಖಕ್ಕೆ ಟೇಪ್ ಸುತ್ತಿದ ಸ್ಥಿತಿಯಲ್ಲಿ ಅಪರಿಚಿತ ಯುವಕನ ಮೃತದೇಹ ಪತ್ತೆ

(ನ್ಯೂಸ್ ಕಡಬ) newskadaba.com ಬೆಳ್ತಂಗಡಿ, ನ.11. ಕುತ್ತಿಗೆಗೆ ಹಗ್ಗ ಬಿಗಿದು ಕೊಲೆಗೈದ ಸ್ಥಿತಿಯಲ್ಲಿ ಯುವಕನೋರ್ವನ ಮೃತದೇಹವು ಬೆಳ್ತಂಗಡಿ ತಾಲೂಕಿನ ಉಜಿರೆಯಲ್ಲಿ ಭಾನುವಾರದಂದು ಕಂಡುಬಂದಿದೆ. ಅಂದಾಜು 30 ವರ್ಷ ವಯಸ್ಸಿನ ಯುವಕನ ಮುಖಕ್ಕೆ ಟೇಪ್ ಹಾಕಿ, ಕಾಲು ಕಟ್ಟಿದ್ದಲ್ಲದೆ ಕುತ್ತಿಗೆಗೆ ಹಗ್ಗ ಬಿಗಿದು ಕೊಲೆ ಮಾಡಿದ ಸ್ಥಿತಿಯಲ್ಲಿ ಉಜಿರೆಯ ಗುರಿಪಳ್ಳ ಕ್ರಾಸ್ ನ ಅಳಕೆ ರಸ್ತೆಯ ಸಮೀಪ ಮೃತದೇಹ ಪತ್ತೆಯಾಗಿದ್ದು, ಬೇರೆ ಕಡೆ ಕೊಲೆ‌ ಮಾಡಿ ಇಲ್ಲಿ ಎಸೆದು ಹೋಗಿರುವ ಶಂಕೆ ವ್ಯಕ್ತವಾಗಿದೆ. ಸ್ಥಳಕ್ಕೆ ಬೆಳ್ತಂಗಡಿ ಠಾಣಾ ಪೊಲೀಸರು

ಉಜಿರೆ: ಮುಖಕ್ಕೆ ಟೇಪ್ ಸುತ್ತಿದ ಸ್ಥಿತಿಯಲ್ಲಿ ಅಪರಿಚಿತ ಯುವಕನ ಮೃತದೇಹ ಪತ್ತೆ Read More »

ಕರಾವಳಿ

ಟಿಪ್ಪು ಜಯಂತಿ ಆಚರಣೆಯ ಹಿನ್ನೆಲೆ ► ದಕ್ಷಿಣ ಕನ್ನಡ ಜಿಲ್ಲೆಯಾದ್ಯಂತ ನಾಳೆಯವರೆಗೆ 144 ನಿಷೇಧಾಜ್ಞೆ ಜಾರಿ

(ನ್ಯೂಸ್ ಕಡಬ) newskadaba.com ಮಂಗಳೂರು, ನ.10. ಹಜರತ್ ಟಿಪ್ಪು ಸುಲ್ತಾನ್ ಜಯಂತಿಯನ್ನು ಸರ್ಕಾರದ ಕಾರ್ಯಕ್ರಮವಾಗಿ ಆಚರಿಸಲಾಗುತ್ತಿದ್ದು, ಕಾರ್ಯಕ್ರಮ ಸುಸೂತ್ರವಾಗಿ ನಡೆಯಲು ಹಾಗೂ ಕಾನೂನು ಸುವ್ಯವಸ್ಥೆಗೆ ಭಂಗ ಬಾರದ ರೀತಿಯಲ್ಲಿ ಜಿಲ್ಲೆಯಾದ್ಯಂತ ಅಕ್ಟೋಬರ್ 09 ಸಂಜೆ 6 ಗಂಟೆಯಿಂದ ದಿನಾಂಕ ಅಕ್ಟೋಬರ್ 11 ಮಧ್ಯರಾತ್ರಿ 12 ಗಂಟೆಯವರೆಗೆ ಯಾವುದೇ ಸಾರ್ವಜನಿಕ ರಾಜಕೀಯ ಮುಂತಾದ ಬಹಿರಂಗ ಸಭೆ ಸಮಾರಂಭ, ಜಾಥಾ ಮತ್ತು ಮೆರವಣಿಗೆಗಳನ್ನು ನಿರ್ಬಂಧಿಸಿ ದಂಡ ಪ್ರಕ್ರಿಯೆ ಸಂಹಿತೆ 144 ರನ್ವಯ ನಿಷೇಧಾಜ್ಞೆ ವಿಧಿಸಿ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ದಂಡಾಧಿಕಾರಿ

ಟಿಪ್ಪು ಜಯಂತಿ ಆಚರಣೆಯ ಹಿನ್ನೆಲೆ ► ದಕ್ಷಿಣ ಕನ್ನಡ ಜಿಲ್ಲೆಯಾದ್ಯಂತ ನಾಳೆಯವರೆಗೆ 144 ನಿಷೇಧಾಜ್ಞೆ ಜಾರಿ Read More »

ಕರಾವಳಿ

ಕುಂತೂರು: ಸರಣಿ ಅಪಘಾತ ► ಬೈಕ್ ಸವಾರನಿಗೆ ಗಾಯ

(ನ್ಯೂಸ್ ಕಡಬ) newskadaba.com ಕಡಬ, ನ.09. ಮಾರುತಿ ರಿಟ್ಝ್ ಕಾರು, ಯಮಹಾ ಎಫ್ ಝಡ್ ಬೈಕ್ ಹಾಗೂ ದ್ವಿಚಕ್ರ ವಾಹನದ ನಡುವೆ ಸರಣಿ ಅಪಘಾತ ಸಂಭವಿಸಿದ ಪರಿಣಾಮ ಬೈಕ್ ಸವಾರ ಗಾಯಗೊಂಡ ಘಟನೆ ಉಪ್ಪಿನಂಗಡಿ – ಸುಬ್ರಹ್ಮಣ್ಯ ರಾಜ್ಯ ಹೆದ್ದಾರಿಯ ಕುಂತೂರು ಎಂಬಲ್ಲಿ ಶುಕ್ರವಾರದಂದು ನಡೆದಿದೆ. ಉಪ್ಪಿನಂಗಡಿಯಿಂದ ಕಡಬ ಕಡೆಗೆ ತೆರಳುತ್ತಿದ್ದ ರಿಟ್ಝ್ ಕಾರು ವಿರುದ್ಧ ದಿಕ್ಕಿನಿಂದ ಆಗಮಿಸುತ್ತಿದ್ದ ಎಫ್ ಝಡ್ ಬೈಕ್ ಮತ್ತು ಸ್ಕೂಟಿಯೊಂದರ‌ ನಡುವೆ ಕುಂತೂರು ಕೋಚಕಟ್ಟೆ ಮಧ್ಯದ ಸೇತುವೆಯ ಮೇಲೆ ಅಪಘಾತ ಉಂಟಾಗಿ

ಕುಂತೂರು: ಸರಣಿ ಅಪಘಾತ ► ಬೈಕ್ ಸವಾರನಿಗೆ ಗಾಯ Read More »

ಕರಾವಳಿ

ಕೊಯಿಲ: ಪಶು ವೈದ್ಯಕೀಯ ಕಾಲೇಜು ಕಟ್ಟಡ ನಿರ್ಮಾಣ ಸಾಮಾಗ್ರಿಗಳ ಕಳ್ಳತನ

(ನ್ಯೂಸ್ ಕಡಬ) newskadaba.com ಕಡಬ, ನ.08. ಕೊಯಿಲ ಸರಕಾರಿ ಪಶು ವೈದ್ಯಕೀಯ ಕಾಲೇಜು ಕಟ್ಟಡದ ನಿರ್ಮಾಣಕ್ಕೆಂದು ದಾಸ್ತಾನು ಇರಿಸಲಾಗಿದ್ದ ಸೆಂಟ್ರಿಂಗ್ ಸಾಮಗ್ರಿಗಳನ್ನು ಕಳವುಗೈದಿರುವ ಬಗ್ಗೆ ಕಡಬ ಠಾಣೆಗೆ ದೂರು ನೀಡಲಾಗಿದೆ. ಕೊಯಿಲ ಗ್ರಾಮದ ಕೊಯಿಲ ಪಶುಸಂಗೋಪನಾ (K.C. ಫಾರಂ.) ಇಲಾಖೆಯ ಜಮೀನಿನಲ್ಲಿ ಕರ್ನಾಟಕ ಸರಕಾರದ ಪಶು ವೈದ್ಯಕೀಯ ಕಾಲೇಜು ಕಟ್ಟಡವನ್ನು ಬೆಂಗಳೂರಿನ ಸ್ಟಾರ್ ಬಿಲ್ಡರ್ರ್ಸ್ ಸಂಸ್ಥೆಯು ಗುತ್ತಿಗೆಯ ಆಧಾರದಲ್ಲಿ 2 ವರ್ಷಗಳಿಂದ ಕಟ್ಟಡ ಕಾಮಗಾರಿ ಕೆಲಸವನ್ನು  ಮಾಡುತ್ತಿದ್ದು, ಕಟ್ಟಡ ಕಾಮಗಾರಿಗಾಗಿ ದಾಸ್ತಾನು  ಇರಿಸಿದ್ದ 500 ಕಬ್ಬಿಣದ ಜಾಕ್ ಪೈಪ್, 700 ಕಬ್ಬಿಣದ ಸೆಂಟ್ರಿಂಗ್ ಪ್ಲೇಟ್

ಕೊಯಿಲ: ಪಶು ವೈದ್ಯಕೀಯ ಕಾಲೇಜು ಕಟ್ಟಡ ನಿರ್ಮಾಣ ಸಾಮಾಗ್ರಿಗಳ ಕಳ್ಳತನ Read More »

ಕರಾವಳಿ

ರಾಷ್ಟ್ರೀಯ ಮತದಾರರ ದಿನಾಚರಣೆ ಹಿನ್ನೆಲೆ ► ವಿದ್ಯಾರ್ಥಿಗಳಿಗೆ ಜಿಲ್ಲಾಮಟ್ಟದ ಪ್ರಬಂಧ, ಕ್ವಿಝ್ ಸ್ಪರ್ಧೆ

(ನ್ಯೂಸ್ ಕಡಬ) newskadaba.com ಮಂಗಳೂರು, ನ.08. ಪ್ರತಿ ವರ್ಷ ಜನವರಿ 25 ರಂದು ರಾಷ್ಟ್ರೀಯ ಮತದಾರರ ದಿನಾಚರಣೆಯನ್ನು ಆಚರಿಸಲಾಗುತ್ತಿದ್ದು, ಈ ಹಿನ್ನೆಲೆಯಲ್ಲಿ 9ನೇ ತರಗತಿಯ ಮೇಲ್ಪಟ್ಟ ಮಕ್ಕಳಿಗೆ ಜಿಲ್ಲಾ ಮಟ್ಟದಲ್ಲಿ ಸ್ಪರ್ಧಾತ್ಮಕ ಚಟುವಟಿಕೆಗಳು ನಡೆಯಲಿವೆ. 9 ರಿಂದ 10ನೇ ತರಗತಿಯ ವಿದ್ಯಾರ್ಥಿಗಳಿಗೆ ಎಸ್ಸೆ ರೈಟಿಂಗ್(ಪ್ರಬಂಧ), ಪದವಿ ಪೂರ್ವ ಕಾಲೇಜು/ ಪಾಲಿಟೆಕ್ನಿಕ್ ವಿದ್ಯಾರ್ಥಿಗಳಿಗೆ ಎಸ್ಸೆ ರೈಟಿಂಗ್(ಪ್ರಬಂಧ), ಕಾಲೇಜು/ವಿಶ್ವವಿದ್ಯಾಲಯ/ತಾಂತ್ರಿಕ ಸಂರ್ಸತೆಯ ವಿದ್ಯಾರ್ಥಿಗಳಿಗೆ ಎಸ್ಸೆ ರೈಟಿಂಗ್(ಪ್ರಬಂಧ), ಆರ್ಟ್ಸ್ ಮತ್ತು ಡ್ರಾಯಿಂಗ್ ಶಾಲೆಯ ಮಕ್ಕಳಿಗೆ ಪೋಸ್ಟರ್ ರಚನೆ, ಆರ್ಟ್ಸ್ ಮತ್ತು ಡ್ರಾಯಿಂಗ್ ಶಾಲೆಯ

ರಾಷ್ಟ್ರೀಯ ಮತದಾರರ ದಿನಾಚರಣೆ ಹಿನ್ನೆಲೆ ► ವಿದ್ಯಾರ್ಥಿಗಳಿಗೆ ಜಿಲ್ಲಾಮಟ್ಟದ ಪ್ರಬಂಧ, ಕ್ವಿಝ್ ಸ್ಪರ್ಧೆ Read More »

ಕರಾವಳಿ

ಕಡಬ: ಕೆಎಸ್ಸಾರ್ಟಿಸಿ ಬಸ್ ನಿರ್ವಾಹಕನಿಗೆ ದೊರೆತ ಸಾವಿರಾರು ರೂ. ನಗದು ► ಮೂಲ ವಾರಸುದಾರರಿಗೆ ಹಸ್ತಾಂತರ

(ನ್ಯೂಸ್ ಕಡಬ) newskadaba.com ಕಡಬ, ನ.07. ಕಡಬದಿಂದ ಪಂಜ ಕಡೆಗೆ ತೆರಳುತ್ತಿದ್ದ ಕೆಎಸ್ಸಾರ್ಟಿಸಿ ಬಸ್ ನಲ್ಲಿ ನಿರ್ವಾಹಕರಿಗೆ ದೊರೆತಿದ್ದ 37 ಸಾವಿರ ರೂ. ನಗದನ್ನು ಬುಧವಾರದಂದು ವಾರಸುದಾರರಿಗೆ ಹಸ್ತಾಂತರಿಸಲಾಯಿತು. ಅಕ್ಟೋಬರ್ 23 ರಂದು ಕಡಬದಿಂದ ಪಂಜಕ್ಕೆ ತೆರಳುತ್ತಿದ್ದ ಧರ್ಮಸ್ಥಳ ಘಟಕದ ಕೆಎಸ್ಸಾರ್ಟಿಸಿ KA.19.F.3060 ಬಸ್ ನ ನಿರ್ವಾಹಕ ಹನುಮಂತ ಹೊಡ್ಡಾರ್ ಎಂಬವರಿಗೆ ಬಸ್ಸಿನಲ್ಲಿ ದೊರೆತಿದ್ದ 37 ಸಾವಿರ ರೂ‌. ನಗದನ್ನು ಘಟಕ ವ್ಯವಸ್ಥಾಪಕರಲ್ಲಿ ಇರಿಸಿದ್ದರು. ಹಣದ ವಾರೀಸುದಾರರು ಬಾರದ ಹಿನ್ನೆಲೆಯಲ್ಲಿ ಘಟಕ ವ್ಯವಸ್ಥಾಪಕರ ಮೂಲಕ ಕಡಬ ಠಾಣೆಗೆ

ಕಡಬ: ಕೆಎಸ್ಸಾರ್ಟಿಸಿ ಬಸ್ ನಿರ್ವಾಹಕನಿಗೆ ದೊರೆತ ಸಾವಿರಾರು ರೂ. ನಗದು ► ಮೂಲ ವಾರಸುದಾರರಿಗೆ ಹಸ್ತಾಂತರ Read More »

ಕರಾವಳಿ

ಚೈತ್ರಾ ಕುಂದಾಪುರ ಮತ್ತು ಸಹಚರರಿಗೆ ಜಾಮೀನು ಮಂಜೂರು ► ಜಾಮೀನು ದೊರೆತರೂ ಬುಧವಾರ ಜೈಲಿನಿಂದ ಹೊರ ಬರುವ ಸಾಧ್ಯತೆ..!!

(ನ್ಯೂಸ್ ಕಡಬ) newskadaba.com ಪುತ್ತೂರು, ನ.05. ಇತ್ತೀಚೆಗೆ ಸುಬ್ರಹ್ಮಣ್ಯದಲ್ಲಿ ನಡೆದ ಹೊಡೆದಾಟ ಪ್ರಕರಣದಲ್ಲಿ ನ್ಯಾಯಾಂಗ ಬಂಧನದಲ್ಲಿದ್ದ ಚೈತ್ರಾ ಕುಂದಾಪುರ ಮತ್ತು ಸಹಚರರಿಗೆ ಪುತ್ತೂರಿನ 5 ನೇ ಹೆಚ್ಚುವರಿ ಜಿಲ್ಲಾ ನ್ಯಾಯಾಲಯವು ಜಾಮೀನು ಮಂಜೂರು ಮಾಡಿದೆ. ಕುಕ್ಕೇ ಸುಬ್ರಹ್ಮಣ್ಯ ದೇವಸ್ಥಾನ ಮತ್ತು ಮಠದಲ್ಲಿ ನಡೆಯುವ ಸರ್ಪ ಸಂಸ್ಕಾರದ ವಿಚಾರದಲ್ಲಿ ಪರಸ್ಪರ ವಾಗ್ವಾದ ಉಂಟಾಗಿ ಹೊಡೆದಾಟ ನಡೆದು ನ್ಯಾಯಾಂಗ ಬಂಧನದಲ್ಲಿದ್ದ ಚೈತ್ರಾ ಕುಂದಾಪುರ ಮತ್ತು ಸಹಚರರಾದ ಸುದಿನ, ಹರೀಶ, ನಿಖಿಲ್, ವಿನಯ್, ಮಣಿಕಂಠ ಹಾಗೂ ಹರೀಶ ಎಂಬವರಿಗೆ ಸೋಮವಾರ ಸಂಜೆ

ಚೈತ್ರಾ ಕುಂದಾಪುರ ಮತ್ತು ಸಹಚರರಿಗೆ ಜಾಮೀನು ಮಂಜೂರು ► ಜಾಮೀನು ದೊರೆತರೂ ಬುಧವಾರ ಜೈಲಿನಿಂದ ಹೊರ ಬರುವ ಸಾಧ್ಯತೆ..!! Read More »

ಕರಾವಳಿ

ಕಡಬ: ಸಾವಿರಾರು ರೂ. ನಗದನ್ನು ಪೊಲೀಸ್ ಠಾಣೆಗೆ ತಲುಪಿಸಿದ ಕೆಎಸ್ಸಾರ್ಟಿಸಿ ನಿರ್ವಾಹಕ ► ಹಣ ಕಳೆದುಕೊಂಡವರು ಸೂಕ್ತ ದಾಖಲೆ ನೀಡಿ ಕಡಬ ಠಾಣೆಯನ್ನು ಸಂಪರ್ಕಿಸುವಂತೆ ಕೋರಿಕೆ

(ನ್ಯೂಸ್ ಕಡಬ) newskadaba.com ಕಡಬ, ನ.04. ಕಡಬದಿಂದ ಪಂಜ ಕಡೆಗೆ ತೆರಳುತ್ತಿದ್ದ ಕೆಎಸ್ಸಾರ್ಟಿಸಿ ಬಸ್ ನಲ್ಲಿ 37 ಸಾವಿರ ರೂ. ನಗದು ಬಸ್ ನಿರ್ವಾಹಕರಿಗೆ ದೊರೆತಿದ್ದು, ಹಣದ ವಾರೀಸುದಾರರು ಬಾರದ ಹಿನ್ನೆಲೆಯಲ್ಲಿ ಘಟಕ ವ್ಯವಸ್ಥಾಪಕರ ಮೂಲಕ ಕಡಬ ಠಾಣೆಗೆ ಹಸ್ತಾಂತರಿಸಿದ್ದಾರೆ. ಅಕ್ಟೋಬರ್ 23 ರಂದು ಕಡಬದಿಂದ ಪಂಜಕ್ಕೆ ತೆರಳುತ್ತಿದ್ದ ಧರ್ಮಸ್ಥಳ ಘಟಕದ ಕೆಎಸ್ಸಾರ್ಟಿಸಿ KA.19.F.3060 ಬಸ್ ನ ನಿರ್ವಾಹಕ ಹನುಮಂತ ಹೊಡ್ಡಾರ್ ಎಂಬವರಿಗೆ ಬಸ್ಸಿನಲ್ಲಿ 37 ಸಾವಿರ ರೂ‌. ನಗದು ದೊರೆತಿದೆ. ನಗದನ್ನು ಘಟಕ ವ್ಯವಸ್ಥಾಪಕರಿಗೆ ಹಸ್ತಾಂತರಿಸಿದ

ಕಡಬ: ಸಾವಿರಾರು ರೂ. ನಗದನ್ನು ಪೊಲೀಸ್ ಠಾಣೆಗೆ ತಲುಪಿಸಿದ ಕೆಎಸ್ಸಾರ್ಟಿಸಿ ನಿರ್ವಾಹಕ ► ಹಣ ಕಳೆದುಕೊಂಡವರು ಸೂಕ್ತ ದಾಖಲೆ ನೀಡಿ ಕಡಬ ಠಾಣೆಯನ್ನು ಸಂಪರ್ಕಿಸುವಂತೆ ಕೋರಿಕೆ Read More »

ಕರಾವಳಿ
Scroll to Top