ಕರಾವಳಿ

ಮುಸ್ಲಿಂ ಮನೆಗಳಲ್ಲಿ ಬಿಜೆಪಿ ಪಕ್ಷದ ಮತ ಯಾಚನೆಯ ವೀಡಿಯೋ ಬಗ್ಗೆ ಈಗಾಗಲೇ ಕ್ಷಮೆ ಕೇಳಲಾಗಿದೆ ➤ ಇನ್ಮುಂದೆ ಸಾಮಾಜಿಕ ಜಾಲತಾಣಗಳಲ್ಲಿ ಹರಡುವವರ ವಿರುದ್ಧ ಕಡಬ ಬಿಜೆಪಿಯಿಂದ ಕಾನೂನು ಕ್ರಮದ ಎಚ್ಚರಿಕೆ

(ನ್ಯೂಸ್ ಕಡಬ) newskadaba.com ಕಡಬ, ಎ.12. ಲೋಕಸಭಾ ಚುನಾವಣಾ ಪ್ರಚಾರಕ್ಕೆ ತೆರಳಿದ್ದ ಬಿಜೆಪಿ ಕಾರ್ಯಕರ್ತರು ಕಡಬದ ಕೊರುಂದೂರು ಪರಿಸರದ ಕೆಲವು ಮುಸ್ಲಿಂ ಸಮುದಾಯದ ಮನೆಗಳಲ್ಲಿ ಮತ ಯಾಚಿಸುವ ದೃಶ್ಯ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದರಿಂದ ಸಾರ್ವಜನಿಕ ವಲಯದಿಂದ ತೀವ್ರ ಆಕ್ಷೇಪ ವ್ಯಕ್ತವಾದ ಹಿನ್ನೆಲೆಯಲ್ಲಿ ಸಭೆ ಸೇರಿದ ಬಿಜೆಪಿ ಪ್ರಮುಖರು ಸಂಬಂಧಪಟ್ಟವರಲ್ಲಿ ಸಾರ್ವಜನಿಕವಾಗಿ ಕ್ಷಮೆ ಕೇಳಿ ಪ್ರಕರಣವನ್ನು ಮುಗಿಸಿದ್ದು, ಇನ್ಮುಂದೆ ಅದೇ ದೃಶ್ಯವನ್ನು ಪಸರಿಸಿದ್ದಲ್ಲಿ ಕಾನೂನು ಕ್ರಮ ಕೈಗೊಳ್ಳುವುದಾಗಿ ಎಚ್ಚರಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಕಡಬದ ಬಿಜೆಪಿ ಧುರೀಣ ಸತೀಶ್ […]

ಮುಸ್ಲಿಂ ಮನೆಗಳಲ್ಲಿ ಬಿಜೆಪಿ ಪಕ್ಷದ ಮತ ಯಾಚನೆಯ ವೀಡಿಯೋ ಬಗ್ಗೆ ಈಗಾಗಲೇ ಕ್ಷಮೆ ಕೇಳಲಾಗಿದೆ ➤ ಇನ್ಮುಂದೆ ಸಾಮಾಜಿಕ ಜಾಲತಾಣಗಳಲ್ಲಿ ಹರಡುವವರ ವಿರುದ್ಧ ಕಡಬ ಬಿಜೆಪಿಯಿಂದ ಕಾನೂನು ಕ್ರಮದ ಎಚ್ಚರಿಕೆ Read More »

ಕರಾವಳಿ

ಕಡಬದ ಮುಸ್ಲಿಂ ಮನೆಗಳಲ್ಲಿ ಬಿಜೆಪಿ ಮತ ಯಾಚನೆಯ ವೀಡಿಯೋ ವೈರಲ್ ➤ ಬಿಜೆಪಿ ಪಕ್ಷದ ಮುಖಂಡರಿಂದ ಸಾರ್ವಜನಿಕ ಕ್ಷಮೆ ಯಾಚನೆ

(ನ್ಯೂಸ್ ಕಡಬ) newskadaba.com ಕಡಬ, ಎ.10. ಲೋಕಸಭಾ ಚುನಾವಣಾ ಪ್ರಚಾರಕ್ಕೆ ತೆರಳಿದ್ದ ಬಿಜೆಪಿ ಕಾರ್ಯಕರ್ತರು ಕಡಬದ ಕೊರುಂದೂರು ಪರಿಸರದ ಕೆಲವು ಮುಸ್ಲಿಂ ಸಮುದಾಯದ ಮನೆಗಳಲ್ಲಿ ಮತ ಯಾಚಿಸುವುದನ್ನು ವೀಡಿಯೋ ಮಾಡಿ ಸಾಮಾಜಿಕ ಜಾಲತಾಣಗಳಿಗೆ ಹಾಕಿದ್ದರಿಂದ ಅದೀಗ ವೈರಲ್ ಆಗಿದ್ದು, ಈ ಬಗ್ಗೆ ಸಾರ್ವಜನಿಕ ವಲಯದಿಂದ ತೀವ್ರ ಆಕ್ಷೇಪ ವ್ಯಕ್ತವಾಗುತ್ತಿದೆ. ಈ ಹಿನ್ನೆಲೆಯಲ್ಲಿ ಕಡಬದ ಬಿಜೆಪಿ ಧುರೀಣ ಸತೀಶ್ ನಾಯಕ್, ಆದಂ ಕುಂಡೋಳಿ, ಪುತ್ತು ಮೇಸ್ತ್ರಿ ಸಾರ್ವಜನಿಕವಾಗಿ ಕ್ಷಮೆ ಯಾಚಿಸಿದ್ದು, ಕಡಬದ ಕೊರುಂದೂರು ಪರಿಸರದ ಮುಸ್ಲಿಂ ಸಮುದಾಯದ ಮನೆಗಳಿಗೆ

ಕಡಬದ ಮುಸ್ಲಿಂ ಮನೆಗಳಲ್ಲಿ ಬಿಜೆಪಿ ಮತ ಯಾಚನೆಯ ವೀಡಿಯೋ ವೈರಲ್ ➤ ಬಿಜೆಪಿ ಪಕ್ಷದ ಮುಖಂಡರಿಂದ ಸಾರ್ವಜನಿಕ ಕ್ಷಮೆ ಯಾಚನೆ Read More »

ಕರಾವಳಿ

ಸುಬ್ರಹ್ಮಣ್ಯ: ಕುಮಾರಧಾರಾ ನದಿಯಲ್ಲಿ ಅಪರಿಚಿತ ಮಹಿಳೆಯ ಮೃತದೇಹ ಪತ್ತೆ

(ನ್ಯೂಸ್ ಕಡಬ) newskadaba.com ಸುಬ್ರಹ್ಮಣ್ಯ, ಎ.09. ಇಲ್ಲಿನ ಕುಮಾರಧಾರ ನದಿಯಲ್ಲಿ ಅಪರಿಚಿತ ಮಹಿಳೆಯರೋರ್ವರ ಮೃತದೇಹವೊಂದು ತೇಲುತ್ತಿದ್ದ ಸ್ಥಿತಿಯಲ್ಲಿ ಮಂಗಳವಾರದಂದು ಪತ್ತೆಯಾಗಿದ್ದು, ಸುಬ್ರಹ್ಮಣ್ಯ ಪೊಲೀಸರು ತನಿಖೆ ಆರಂಭಿಸಿದ್ದಾರೆ. ಇಂದು ಮಧ್ಯಾಹ್ನ ನದಿಯಲ್ಲಿ ಶವವೊಂದು ತೇಲುತ್ತಿರುವುದನ್ನು ಕಂಡು ಸಾರ್ವಜನಿಕರು ತಕ್ಷಣ ಸುಬ್ರಹ್ಮಣ್ಯ ಪೊಲೀಸರಿಗೆ ಮಾಹಿತಿಯನ್ನು ನೀಡಿದ್ದಾರೆ. ಸ್ಥಳಕ್ಕಾಗಮಿಸಿದ ಸುಬ್ರಹ್ಮಣ್ಯ ಪೊಲೀಸರು ನೀರಿನಲ್ಲಿ ತೇಲುತ್ತಿದ್ದ ಮೃತದೇಹವನ್ನು ಮೇಲಕ್ಕೆತ್ತಿದ್ದು, ಪತ್ತೆ ಕಾರ್ಯ ಮುಂದುವರಿಸಿದ್ದಾರೆ. ಮಹಿಳೆಗೆ ಸುಮಾರು 45 ವರ್ಷ ಪ್ರಾಯವಾಗಿರಬಹುದೆಂದು ಅಂದಾಜಿಸಲಾಗಿದ್ದು, ಕೊಲೆಯೋ ಆತ್ಮಹತ್ಯೆಯೋ ಎಂದು ಇನ್ನಷ್ಟೇ ತಿಳಿದುಬರಬೇಕಿದೆ.

ಸುಬ್ರಹ್ಮಣ್ಯ: ಕುಮಾರಧಾರಾ ನದಿಯಲ್ಲಿ ಅಪರಿಚಿತ ಮಹಿಳೆಯ ಮೃತದೇಹ ಪತ್ತೆ Read More »

ಕರಾವಳಿ

ಬಂಟ್ವಾಳ: ಕಾರು – ಆಟೋ ರಿಕ್ಷಾ ನಡುವೆ ಢಿಕ್ಕಿ ➤ ಸಹೋದರಿಯರಿಬ್ಬರು ಮೃತ್ಯು, ಇಬ್ಬರು ಗಂಭೀರ

(ನ್ಯೂಸ್ ಕಡಬ) newskadaba.com ಬಂಟ್ವಾಳ, ಎ.8. ಕಾರು ಮತ್ತು ರಿಕ್ಷಾ ನಡುವೆ ಮುಖಾಮುಖಿ ಢಿಕ್ಕಿಯಾಗಿ ರಿಕ್ಷಾದಲ್ಲಿದ್ದ ಸಹೋದರಿಯರಿಬ್ಬರು ಮೃತಪಟ್ಟ ದಾರುಣ ಘಟನೆ ಸೋಮವಾರದಂದು ಬಂಟ್ವಾಳ ಸಮೀಪದ ಸಜೀಪ ಎಂಬಲ್ಲಿ ಸಂಭವಿಸಿದೆ. ಮೃತ ಮಹಿಳೆಯರನ್ನು ಮಂಚಿ ನಿವಾಸಿಗಳಾದ ಝೊಹರಾ(55) ಹಾಗೂ ಝೈನಬಾ(45) ಎಂದು ಗುರುತಿಸಲಾಗಿದೆ. ಝೊಹರಾರಿಗೆ ಅಸೌಖ್ಯವಿದ್ದ ಹಿನ್ನೆಲೆಯಲ್ಲಿ ಸಹೋದರಿ ಝೈನಬಾರವರ ಜೊತೆ ರಿಕ್ಷಾದಲ್ಲಿ ಆಸ್ಪತ್ರೆಗೆ ತೆರಳುತ್ತಿದ್ದ ವೇಳೆ ಸಜೀಪ ಸಮೀಪದ ಕಂಚಿಲ ಎಂಬಲ್ಲಿ ಇನ್ನೊಂದು ವಾಹನವನ್ನು ಓವರ್ ಟೇಕ್ ಮಾಡುವ ಭರದಲ್ಲಿ ಕಾರೊಂದು ಅತೀ ವೇಗವಾಗಿ ಬಂದು

ಬಂಟ್ವಾಳ: ಕಾರು – ಆಟೋ ರಿಕ್ಷಾ ನಡುವೆ ಢಿಕ್ಕಿ ➤ ಸಹೋದರಿಯರಿಬ್ಬರು ಮೃತ್ಯು, ಇಬ್ಬರು ಗಂಭೀರ Read More »

ಕರಾವಳಿ

ಕಡಬ ಕಂದಾಯ ನಿರೀಕ್ಷಕ ಕೊರಗಪ್ಪ ಹೆಗ್ಡೆಯವರಿಗೆ ಸುಳ್ಯಕ್ಕೆ ವರ್ಗಾವಣೆ ➤ ನೂತನ ಕಂದಾಯ ನಿರೀಕ್ಷಕರಾಗಿ ಅವಿನ್ ರಂಗತಮಲೆ

(ನ್ಯೂಸ್ ಕಡಬ) newskadaba.com ಕಡಬ, ಎ.08. ಕಡಬದಲ್ಲಿ ಕಂದಾಯ ನಿರೀಕ್ಷಕರಾಗಿದ್ದ ಕೊರಗಪ್ಪ ಹೆಗ್ಡೆಯವರನ್ನು ಸುಳ್ಯಕ್ಕೆ ವರ್ಗಾಯಿಸಲಾಗಿದ್ದು, ಕಡಬದ ನೂತನ ಕಂದಾಯ ನಿರೀಕ್ಷಕರಾಗಿ ಅವಿನ್ ರಂಗತ್ತಮಲೆಯವರನ್ನು ನೇಮಕಗೊಳಿಸಲಾಗಿದೆ. ಕಡಬ ಕಂದಾಯ ನಿರೀಕ್ಷಕರಾಗಿದ್ದ ಕೊರಗಪ್ಪ ಹೆಗ್ಡೆಯವರು ರಜೆಯಲ್ಲಿದ್ದು, ಅವರ ಸ್ಥಾನಕ್ಕೆ ಕಳೆದ ಮೂರು ವರ್ಷಗಳಿಂದ ಸುಳ್ಯದಲ್ಲಿ ಕಂದಾಯ ನಿರೀಕ್ಷಕರಾಗಿ ಕರ್ತವ್ಯ ನಿರ್ವಹಿಸುತ್ತಿದ್ದ ಅವಿನ್ ರಂಗಮಲೆಯವರನ್ನು ವರ್ಗಾಯಿಸಲಾಗಿದೆ. ಕೊರಗಪ್ಪ ಹೆಗ್ಡೆಯವರು ಕರ್ತವ್ಯಕ್ಕೆ ಹಾಜರಾಗುವವರೆಗೆ ಪಂಜ ಹೋಬಳಿ ಕಂದಾಯ ನಿರೀಕ್ಷಕ ದೀಪಕ್‌ರವರು ಸುಳ್ಯದಲ್ಲಿ ಚಾರ್ಜ್ ನಲ್ಲಿರುತ್ತಾರೆ.

ಕಡಬ ಕಂದಾಯ ನಿರೀಕ್ಷಕ ಕೊರಗಪ್ಪ ಹೆಗ್ಡೆಯವರಿಗೆ ಸುಳ್ಯಕ್ಕೆ ವರ್ಗಾವಣೆ ➤ ನೂತನ ಕಂದಾಯ ನಿರೀಕ್ಷಕರಾಗಿ ಅವಿನ್ ರಂಗತಮಲೆ Read More »

ಕರಾವಳಿ

ನಾಳೆ ಕಡಬದಲ್ಲಿ ಉಚಿತ ಮಧುಮೇಹ ಚಿಕಿತ್ಸಾ ಶಿಬಿರ ➤ ಜೇಸಿಐ ಕಡಬ ಕದಂಬ ಮತ್ತು ನಾಡೋಳಿ ಡಯಗ್ನಾಸ್ಟಿಕ್ ಸಹಯೋಗ

(ನ್ಯೂಸ್ ಕಡಬ) newskadaba.com ಕಡಬ, ಎ.06. ಜೇಸಿಐ ಕಡಬ ಕದಂಬ ಘಟಕ, ಅನುಯಾಶ್ ಆರೋಗ್ಯ ಸಂಸ್ಥೆ ಮತ್ತು ನಾಡೋಳಿ ಡಯಗ್ನಾಸ್ಟಿಕ್ ಸೆಂಟರ್ ಸಹಯೋಗದಲ್ಲಿ ರಾಷ್ಟ್ರೀಯ ಆರೋಗ್ಯ ದಿನಾಚರಣೆಯ ಪ್ರಯುಕ್ತ ಏಪ್ರಿಲ್ 7 ಭಾನುವಾರದಂದು ಕಡಬದಲ್ಲಿ ಉಚಿತ ಮಧುಮೇಹ ತಪಾಸಣಾ ಶಿಬಿರ ನಡೆಯಲಿದೆ. ಕಡಬದ ನಾಡೋಳಿ ಡಯಗ್ನಾಸ್ಟಿಕ್ ಬೆಳಗ್ಗೆ 08 ರಿಂದ 12ರ ವರೆಗೆ ಉಚಿತ ಶಿಬಿರ ನಡೆಯಲಿದೆ ಎಂದು ಜೇಸಿಐ ಕಡಬ ಕದಂಬ ಘಟಕಾಧ್ಯಕ್ಷ Jc. HGF. ರವಿಚಂದ್ರ ಪಡಬೆಟ್ಟು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ನಾಳೆ ಕಡಬದಲ್ಲಿ ಉಚಿತ ಮಧುಮೇಹ ಚಿಕಿತ್ಸಾ ಶಿಬಿರ ➤ ಜೇಸಿಐ ಕಡಬ ಕದಂಬ ಮತ್ತು ನಾಡೋಳಿ ಡಯಗ್ನಾಸ್ಟಿಕ್ ಸಹಯೋಗ Read More »

ಕರಾವಳಿ

ಬಂಟ್ವಾಳ: ತಂದೆಯಿಂದಲೇ ಅಪ್ರಾಪ್ತ ಮಗಳ ಮೇಲೆ ನಿರಂತರ ಅತ್ಯಾಚಾರ ➤ ತನಿಖೆಯಲ್ಲಿ ಬಯಲಾಯ್ತು ಆಘಾತಕಾರಿ ವಿಚಾರ ➤ ಅಕ್ಕನ ಗಂಡನಿಂದಲೂ ನಡೆಯಿತು ಬಲಾತ್ಕಾರ

(ನ್ಯೂಸ್ ಕಡಬ) newskadaba.com ಬಂಟ್ವಾಳ, ಎ.06. ತಂದೆಯೇ ತನ್ನ 17 ವರ್ಷ ಪ್ರಾಯದ ಮಗಳ ಮೇಲೆ ನಿರಂತರ ಅತ್ಯಾಚಾರ ಎಸಗಿರುವ ಘಟನೆ ಬಂಟ್ವಾಳದಲ್ಲಿ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. ಅಪ್ರಾಪ್ತ ಯುವತಿಯೋರ್ವಳನ್ನು ಆಕೆಯ ಅಕ್ಕನ ಗಂಡ ಅತ್ಯಾಚಾರ ಎಸಗಿದ ಬಗ್ಗೆ ಪೊಲೀಸ್ ದೂರು ದಾಖಲಾದ ಹಿನ್ನೆಲೆಯಲ್ಲಿ ಚೈಲ್ಡ್ ಹೆಲ್ಪ್ ಲೈನ್ ನವರು ಸಂತ್ರಸ್ತೆ ಯುವತಿಯನ್ನು ವಿಚಾರಣೆ ನಡೆಸಿದಾಗ ತನ್ನ ತಂದೆಯೂ ನಿರಂತರ ಅತ್ಯಾಚಾರ ಎಸಗುತ್ತಿದ್ದ ಆಘಾತಕಾರಿ ಘಟನೆ ಬೆಳಕಿಗೆ ಬಂದಿದೆ. ನಾಲ್ಕು ಮದುವೆಯಾಗಿರುವ ಆರೋಪಿ ದಾವೂದ್ ತನ್ನ

ಬಂಟ್ವಾಳ: ತಂದೆಯಿಂದಲೇ ಅಪ್ರಾಪ್ತ ಮಗಳ ಮೇಲೆ ನಿರಂತರ ಅತ್ಯಾಚಾರ ➤ ತನಿಖೆಯಲ್ಲಿ ಬಯಲಾಯ್ತು ಆಘಾತಕಾರಿ ವಿಚಾರ ➤ ಅಕ್ಕನ ಗಂಡನಿಂದಲೂ ನಡೆಯಿತು ಬಲಾತ್ಕಾರ Read More »

ಕರಾವಳಿ

ಐತ್ತೂರು: ಭಾರೀ ಗಾಳಿ ಮಳೆಗೆ ದೂರಕ್ಕೆ ಹಾರಿದ ಮನೆಯ ಮೇಲ್ಛಾವಣಿ ➤ ವಿದ್ಯುತ್ ತಂತಿಯ ಮೇಲೆ ಮರಗಳು ಉರುಳಿದ್ದರಿಂದ‌ ಲಕ್ಷಾಂತರ ರೂ. ನಷ್ಟ

(ನ್ಯೂಸ್ ಕಡಬ) newskadaba.com ಕಡಬ, ಎ.06. ಪರಿಸರದಲ್ಲಿ ಶುಕ್ರವಾರ ರಾತ್ರಿ ಸುರಿದ ಭಾರೀ ಗಾಳಿ ಮಳೆಗೆ ಹಲವು ಮನೆಗಳಿಗೆ, ಅಪಾರ ಕೃಷಿಗೆ ಹಾನಿಯಾಗಿದ್ದು, ಲಕ್ಷಾಂತರ ರೂ. ನಷ್ಟ ಉಂಟಾಗಿದೆ. ಶುಕ್ರವಾರ ರಾತ್ರಿ ಸುರಿದ ಭಾರೀ ಗಾಳಿ ಮಳೆಗೆ ಕಡಬ ತಾಲೂಕಿನ ಐತ್ತೂರು ಗ್ರಾಮದ ಕಲ್ಲಾಜೆ ನಿವಾಸಿ ಪುಟ್ಟಣ್ಣ ಗೌಡ ಎಂಬವರ ಮನೆಯ ಮೇಲ್ಛಾವಣಿ ಹಾರಿ ಹೋಗಿದ್ದು, ಅಪಾರ ನಷ್ಟ ಅಂದಾಜಿಸಲಾಗಿದೆ. ಇನ್ನುಳಿದಂತೆ ಕಲ್ಲಾಜೆ ಪರಿಸರದಲ್ಲಿ ಹಲವಾರು ಮರಗಳು ಧರೆಗೆ ಉರುಳಿದ್ದರಿಂದ ವಿದ್ಯುತ್ ಕಂಬಗಳು ನೆಲಕ್ಕುರುಳಿದ್ದು, ವಿದ್ಯುತ್ ವ್ಯತ್ಯಯ

ಐತ್ತೂರು: ಭಾರೀ ಗಾಳಿ ಮಳೆಗೆ ದೂರಕ್ಕೆ ಹಾರಿದ ಮನೆಯ ಮೇಲ್ಛಾವಣಿ ➤ ವಿದ್ಯುತ್ ತಂತಿಯ ಮೇಲೆ ಮರಗಳು ಉರುಳಿದ್ದರಿಂದ‌ ಲಕ್ಷಾಂತರ ರೂ. ನಷ್ಟ Read More »

ಕರಾವಳಿ

ಕಡಬ: ಕೇವಳದಲ್ಲಿ ಗಾಳಿ ಮಳೆಗೆ ಮುರಿದು ಬಿದ್ದ ಮರ ➤ ಮನೆ, ಆಟೋ ರಿಕ್ಷಾ ಬೈಕ್ ಜಖಂ

(ನ್ಯೂಸ್ ಕಡಬ) newskadaba.com ಕಡಬ, ಎ.06. ಇಲ್ಲಿನ ಕೇವಳ ಎಂಬಲ್ಲಿ ಮನೆಯೊಂದಕ್ಕೆ ಮರ ಬಿದ್ದ ಪರಿಣಾಮ ಮನೆಯ ಮೇಲ್ಛಾವಣಿ ಹಾಗೂ ಅಟೋ ರಿಕ್ಷಾ, ಬೈಕ್ ಜಖಂಗೊಂಡ ಘಟನೆ ಶುಕ್ರವಾರ ರಾತ್ರಿ ವೇಳೆ ನಡೆದಿದೆ. ಕೇವಳ ನಿವಾಸಿ ವಿಶ್ವನಾಥ ಗೌಡರ ಮನೆಯ ಸಮೀಪ ಇರುವ ಮಾವಿನ ಮರದ ಬೃಹತ್ ಗೆಲ್ಲು ಮುರಿದು ಬಿದ್ದು ಮನೆಯ ಮೇಲ್ಛಾವಣಿ ಹಾರಿ ಹೋಗಿದೆ. ಅಲ್ಲದೆ ಮನೆಯ ವರಾಂಡದಲ್ಲಿ ನಿಲ್ಲಿಸಲಾಗಿದ್ದ ಅಟೋ ರಿಕ್ಷಾ ಹಾಗೂ ಬೈಕ್ ಸಂಪೂರ್ಣ ಜಖಂಗೊಂಡಿದೆ. ಈ ಸಂದರ್ಭದಲ್ಲಿ ಮನೆಯವರು ಮನೆಯೊಳಗೆ

ಕಡಬ: ಕೇವಳದಲ್ಲಿ ಗಾಳಿ ಮಳೆಗೆ ಮುರಿದು ಬಿದ್ದ ಮರ ➤ ಮನೆ, ಆಟೋ ರಿಕ್ಷಾ ಬೈಕ್ ಜಖಂ Read More »

ಕರಾವಳಿ

ಕೃಷಿ ಯಂತ್ರೋಪಕರಣಗಳ ರಿಪೇರಿ ಕೇಂದ್ರ ಕಿಸಾನ್ ಆಗ್ರೋ ಟೂಲ್ಸ್ ➤ ನೂತನ ತಂತ್ರಜ್ಞಾನದೊಂದಿಗೆ ಮರ್ಧಾಳದಲ್ಲಿ ಶುಭಾರಂಭ

(ನ್ಯೂಸ್ ಕಡಬ) newskadaba.com ಕಡಬ, ಎ.06. ಕೃಷಿ ಕ್ಷೇತ್ರದಲ್ಲಿ ದಿನೇ ದಿನೇ ಕೂಲಿ ಕಾರ್ಮಿಕರ ಸಂಖ್ಯೆ ಕ್ಷೀಣಿಸುತ್ತಿರುವ ಸಂದರ್ಭದಲ್ಲಿ ಇದೀಗ ಕೃಷಿ ಸಂಬಂಧಿತ ಯಂತ್ರೋಪಕರಣಗಳು ಮಾರುಕಟ್ಟೆಗೆ ಲಗ್ಗೆ ಇಡುತ್ತಿದ್ದು, ‘ಕಿಸಾನ್ ಆಗ್ರೋ ಟೂಲ್ಸ್’ ಕೃಷಿ ಯಂತ್ರೋಪಕರಣಗಳ ನೂತನ ಮಳಿಗೆಯು ಮರ್ಧಾಳದಲ್ಲಿ ಶುಭಾರಂಭಗೊಂಡಿದೆ. ಮರ್ಧಾಳದ ಮುಖ್ಯ ರಸ್ತೆಯ ಎಂ.ಎಚ್.ಕೆ. ಕಾಂಪ್ಲೆಕ್ಸ್ ನ ಪ್ರಥಮ ಮಹಡಿಯಲ್ಲಿ ಆರಂಭಗೊಂಡಿರುವ ಕೃಷಿ ಯಂತ್ರೋಪಕರಣ ಮಳಿಗೆಯಲ್ಲಿ ಕೃಷಿ ಸಂಬಂಧಿತ ಕಳೆಕೊಚ್ಚುವ, ಮರ ಕತ್ತರಿಸುವ,ತೋಟಕ್ಕೆ ಮದ್ದು ಸಿಂಪಡಿಸುವ ಯಂತ್ರಗಳನ್ನು ಹಾಗೂ ಪವರ್ ಟೂಲ್ಸ್ ಗಳನ್ನು ನೂತನ

ಕೃಷಿ ಯಂತ್ರೋಪಕರಣಗಳ ರಿಪೇರಿ ಕೇಂದ್ರ ಕಿಸಾನ್ ಆಗ್ರೋ ಟೂಲ್ಸ್ ➤ ನೂತನ ತಂತ್ರಜ್ಞಾನದೊಂದಿಗೆ ಮರ್ಧಾಳದಲ್ಲಿ ಶುಭಾರಂಭ Read More »

ಕರಾವಳಿ
Scroll to Top