ಕರಾವಳಿ

ಮಿಷನ್ ಇಂದ್ರಧನುಷ್ ಲಸಿಕಾ ಅಭಿಯಾನದ ಉದ್ಘಾಟನಾ ಕಾರ್ಯಕ್ರಮ

(ನ್ಯೂಸ್ ಕಡಬ) newskadaba.com, ಮಂಗಳೂರು, ಡಿ.3  ಮಿಷನ್ ಇಂದ್ರ ಧನುಷ್ ಲಸಿಕಾ ಅಭಿಯಾನದ ಉದ್ಘಾಟನಾ ಕಾರ್ಯಕ್ರಮ ಡಿಸೆಂಬರ್ 2 ರಂದು ನಗರ ಆರೋಗ್ಯ ಕೇಂದ್ರ ಪಡೀಲ್, ವ್ಯಾಪ್ತಿಯ ಕಣ್ಣೂರಿನ ಮಾನೆಲ್ ಗಾಣಾಬೆಟ್ಟು ಅಂಗನವಾಡಿ ಕೇಂದ್ರದಲ್ಲಿ ನಡೆಯಿತು. ಕಾರ್ಯಕ್ರಮದ ಉದ್ಘಾಟನೆಯನ್ನು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ| ಎಂ. ರಾಮಕೃಷ್ಣ ರಾವ್ ಉದ್ಘಾಟಿಸಿ ಮಿಷನ್ ಇಂದ್ರಧನುಷ್ ಲಸಿಕಾ ಅಭಿಯಾನದ ಉದ್ದೇಶದ ಬಗ್ಗೆ ತಿಳಿಸಿದರು. ಡಾ| ರಾಜೇಶ್ ಬಿ.ವಿ ಜಿಲ್ಲಾ ಆರ್.ಸಿ.ಹೆಚ್ ಅಧಿಕಾರಿಗಳು ಸಾರ್ವತ್ರಿಕ ಲಸಿಕಾಕರಣದ ಬಗ್ಗೆ […]

ಮಿಷನ್ ಇಂದ್ರಧನುಷ್ ಲಸಿಕಾ ಅಭಿಯಾನದ ಉದ್ಘಾಟನಾ ಕಾರ್ಯಕ್ರಮ Read More »

ಕರಾವಳಿ

ವಿದ್ಯಾರ್ಥಿ ವೇತನ – ಆಧಾರ್ ಜೋಡಣೆ ಕಡ್ಡಾಯ

  (ನ್ಯೂಸ್ ಕಡಬ) newskadaba.com, ಮಂಗಳೂರು, ಡಿ.3   2019-20ನೇ ಸಾಲಿಗೆ ಹಿಂದುಳಿದ ವರ್ಗಗಳ ಹಾಗೂ ಅಲೆಮಾರಿ/ಅರೆ ಅಲೆಮಾರಿ ವಿದ್ಯಾರ್ಥಿಗಳಿಂದ ಮೆಟ್ರಿಕ್ ನಂತರದ ವಿದ್ಯಾರ್ಥಿವೇತನ, ಶುಲ್ಕ ವಿನಾಯಿತಿ, ವಿದ್ಯಾಸಿರಿ-ಊಟ ಮತ್ತು ವಸತಿ ಸಹಾಯ ಯೋಜನೆ ಮತ್ತು ನರ್ಸಿಂಗ್ ವಿದ್ಯಾರ್ಥಿಗಳಿಗೆ ಶಿಷ್ಯವೇತನ ಸೌಲಭ್ಯಕ್ಕಾಗಿ ಆನ್‍ಲೈನ್ ಮೂಲಕ ಅರ್ಜಿ ಸಲ್ಲಿಸಿದ ಹಿಂದುಳಿದ ವರ್ಗಗಳ ವಿದ್ಯಾರ್ಥಿಗಳು, ಆನ್‍ಲೈನ್‍ನಲ್ಲಿ ಅಪ್‍ಲೋಡ್ ಮಾಡಿದ ಬ್ಯಾಂಕ್ ಖಾತೆಯ ಸಂಖ್ಯೆಗೆ ಮಾತ್ರ ಆಧಾರ್ ಸಂಖ್ಯೆಯನ್ನು ಡಿಸೆಂಬರ್ 7 ರೊಳಗೆ ಜೋಡಣೆ (ಆಧಾರ್ ಸೀಡಿಂಗ್) ಮಾಡಿಸಬೇಕು. ಇದನ್ನು ಹೊರತು ಪಡಿಸಿ

ವಿದ್ಯಾರ್ಥಿ ವೇತನ – ಆಧಾರ್ ಜೋಡಣೆ ಕಡ್ಡಾಯ Read More »

ಕರಾವಳಿ

ತುಳು ಅಕಾಡೆಮಿ ವತಿಯಿಂದ ಮಾಸಾಶನಕ್ಕೆ ಅರ್ಜಿ ಆಹ್ವಾನ

(ನ್ಯೂಸ್ ಕಡಬ) newskadaba.com, ಮಂಗಳೂರು, ಡಿ.3   ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ ಅನುಷ್ಠಾನಗೊಂಡು ಕಲಾವಿದರಿಗೆ ಮಾಸಾಶನ ಯೋಜನೆಗೆ ಅರ್ಜಿ ಆಹ್ವಾನಿಸಲಾಗಿದ್ದು, ತುಳು ಸಾಹಿತ್ಯ, ಜಾನಪದ, ದೈವಾರಾಧನೆ, ಪಾಡ್ದನ, ಮುಂತಾದ ಕ್ಷೇತ್ರದಲ್ಲಿ ಸೇವೆ ಸಲ್ಲಿಸಿದ 60 ವರ್ಷ ವಯಸ್ಸು ದಾಟಿದ ಕಲಾವಿದರು ಮಾಸಾಶನ ಅರ್ಜಿ ಸಲ್ಲಿಸಬಹುದು. ಅರ್ಜಿ ಸಲ್ಲಿಸುವ ಸಂದರ್ಭದಲ್ಲಿ ತಮ್ಮ ಕಲಾಸೇವೆಯ ವಿವರ, ಭಾವಚಿತ್ರ, ಆದಾಯ ಪ್ರಮಾಣ ಪತ್ರ, ಆಧಾರ್ ಕಾರ್ಡ್ ಪ್ರತಿ, ಶಾಲಾ ವರ್ಗಾವಣೆ ಪ್ರತಿ, ಇವುಗಳ ದಾಖಲೆ ವಿವರಗಳನ್ನು ಅಧ್ಯಕ್ಷರು, ಕರ್ನಾಟಕ ತುಳು

ತುಳು ಅಕಾಡೆಮಿ ವತಿಯಿಂದ ಮಾಸಾಶನಕ್ಕೆ ಅರ್ಜಿ ಆಹ್ವಾನ Read More »

ಕರಾವಳಿ

 ಡಿ. 3 ರಿಂದ 6 ರವರೆಗೆ ಮೀನುಗಾರರು ಸಮುದ್ರಕ್ಕಿಳಿಯದಂತೆ ಎಚ್ಚರಿಕೆ

(ನ್ಯೂಸ್ ಕಡಬ) newskadaba.com, ಮಂಗಳೂರು, ಡಿ.3   ಹವಾಮಾನ ಇಲಾಖೆ, ಬೆಂಗಳೂರು, ಇವರು ನೀಡಿದ ಹವಾಮಾನ ಮುನ್ಸೂಚನೆಯಂತೆ ಡಿಸೆಂಬರ್ 3, 4, 5 ಮತ್ತು 6 ರಂದು ಅರಬ್ಬೀ ಸಮುದ್ರವು ಪ್ರಕ್ಷುಬ್ಧವಾಗುವ ಸಾಧ್ಯತೆ ಇದೆ. ಈ ಹಿನ್ನೆಲೆಯಲ್ಲಿ ಅನಾಹುತವನ್ನು ತಡೆಯುವ ಸಲುವಾಗಿ ಮೀನುಗಾರರು ಸಮುದ್ರಕ್ಕಿಳಿಯದಂತೆ ಹಾಗೂ ಮೀನುಗಾರಿಕೆಗೆ ತೆರಳಿರುವ ಎಲ್ಲಾ ಮೀನುಗಾರಿಕೆ ದೋಣಿಗಳು ಕೂಡಲೇ ದಡ ಸೇರುವಂತೆ ಈ ಮೂಲಕ ಎಲ್ಲಾ ಮೀನುಗಾರರಿಗೆ ಮುನ್ನೆಚ್ಚರಿಕೆ ನೀಡಲಾಗಿದೆ ಎಂದು ಮೀನುಗಾರಿಕೆ ಉಪನಿರ್ದೇಶಕರ ಪ್ರಕಟಣೆ ತಿಳಿಸಿದೆ.  

 ಡಿ. 3 ರಿಂದ 6 ರವರೆಗೆ ಮೀನುಗಾರರು ಸಮುದ್ರಕ್ಕಿಳಿಯದಂತೆ ಎಚ್ಚರಿಕೆ Read More »

ಕರಾವಳಿ

ಮಂಗಳೂರು ವಿವಿಯ ಬಿಬಿಎ ಪರೀಕ್ಷೆ ➤ಉಪ್ಪಿನಂಗಡಿಯ ಶಬಾನಾಗೆ 4ನೇ ರ್ಯಾಂಕ್

(ನ್ಯೂಸ್ ಕಡಬ) newskadaba.com, ಉಪ್ಪಿನಂಗಡಿ, ಡಿ.3  ಮಂಗಳೂರು ವಿಶ್ವವಿದ್ಯಾಲಯ ವ್ಯಾಪ್ತಿಯ 2019ರ ಎಪ್ರಿಲ್/ ಮೇ ತಿಂಗಳಲ್ಲಿ ನಡೆದ ಬ್ಯಾಚುಲರ್ ಆಫ್ ಬ್ಯುಸ್‍ನೆಸ್ ಅಡ್ಮೀನಿಸ್ಟ್ರೇಷನ್ (ಬಿಬಿಎ) ಪರೀಕ್ಷೆಯಲ್ಲಿ ಉಪ್ಪಿನಂಗಡಿ ನಿವಾಸಿ ಶಬಾನಾ ಅವರು ಶೇ.88.66 ಅಂಕ ಪಡೆದು 4ನೇ ರ್ಯಾಂಕ್ ಗಳಿಸಿದ್ದಾರೆ. ಪುತ್ತೂರಿನ ಸೈಂಟ್ ಫಿಲೋಮಿನಾ ಕಾಲೇಜಿನ ವಿದ್ಯಾರ್ಥಿನಿಯಾಗಿರುವ ಈಕೆ ಉಪ್ಪಿನಂಗಡಿ ಬಳಿಯ ಗಾಂಧಿಪಾರ್ಕ್ ನಿವಾಸಿಯಾಗಿದ್ದು, ನೂರ್ ಮೊಹಮ್ಮದ್ ಮತ್ತು ಫರೀದಾ ಬೇಗಂ ದಂಪತಿಯ ಪುತ್ರಿ.  

ಮಂಗಳೂರು ವಿವಿಯ ಬಿಬಿಎ ಪರೀಕ್ಷೆ ➤ಉಪ್ಪಿನಂಗಡಿಯ ಶಬಾನಾಗೆ 4ನೇ ರ್ಯಾಂಕ್ Read More »

ಕರಾವಳಿ

ಕರಾಟೆಯಲ್ಲಿ ಸನ್ವಿತ್‍ಗೆ ಯಲ್ಲೋ ಬೆಲ್ಟ್

(ನ್ಯೂಸ್ ಕಡಬ) newskadaba.com, ಕಲ್ಲುಗುಡ್ಡೆ, ಡಿ.3  ಮಂಗಳೂರಿನ ಹಂಪನಕಟ್ಟೆ ಮಿಲಾಗ್ರೀಸ್ ವಿದ್ಯಾಸಂಸ್ಥೆಯಲ್ಲಿ ನವೆಂಬರ್ ನಲ್ಲಿ ನಡೆದ ರಾಷ್ಟ್ರಮಟ್ಟದ ಮುಕ್ತ ಕರಾಟೆ ಚಾಂಪಿಯನ್‍ಶಿಪ್ 2019ರ ಸ್ಪರ್ದೆಯಲ್ಲಿ ರೆಂಜಿಲಾಡಿ ಸಾಂತೋಮ್ ವಿದ್ಯಾನಿಕೇತನ್ ಶಾಲೆಯ 6ನೇ ತರಗತಿಯ ವಿದ್ಯಾರ್ಥಿ ಸನ್ವಿತ್ ಎಸ್. ವೈಯಕ್ತಿಕ ಕುಮಿಟೆಯ 11ನೇ ವಯೋಮಾನ ವಿಭಾಗದಲ್ಲಿ ಯಲ್ಲೋ ಬೆಲ್ಟ್ ಪ್ರಶಸ್ತಿಯನ್ನು ಪಡೆದುಕೊಂಡಿದ್ದಾರೆ. ಇವರು ರೆಂಜಿಲಾಡಿ ಗ್ರಾಮದ ಸಂಕೇಶ ಪುರುಷೋತ್ತಮ ಹಾಗೂ ವಾರಿಜ ದಂಪತಿ ಪುತ್ರ. ಇವರು ಕರಾಟೆ ಶಿಕ್ಷಕ ಚಂದ್ರಶೇಖರ್ ಸುಳ್ಯ ಇವರಿಂದ ತರಭೇತಿ ಪಡೆದಿರುತ್ತಾರೆ.  

ಕರಾಟೆಯಲ್ಲಿ ಸನ್ವಿತ್‍ಗೆ ಯಲ್ಲೋ ಬೆಲ್ಟ್ Read More »

ಕರಾವಳಿ

ಕಡ್ಯ ಕೊಣಾಜೆ: ಕಿರು ಸೇತುವೆಗೆ ಶಂಕುಸ್ಥಾಪನೆ

(ನ್ಯೂಸ್ ಕಡಬ) newskadaba.com, ಕಲ್ಲುಗುಡ್ಡೆ, ಡಿ.3   ಕಡ್ಯ ಕೊಣಾಜೆ ಗ್ರಾಮ ಪಂಚಾಯತ್ ವ್ಯಾಪ್ತಿಯ ಕುಮೇರು ಎಂಬಲ್ಲಿ ನಿರ್ಮಿಸಲು ಉದ್ದೇಶಿಸಿರುವ ಕಿರು ಸೇತುವೆಗೆ ಶಂಕುಸ್ಥಾಪನೆ ನೆರವೇರಿಸಲಾಯಿತು. ಕಡ್ಯ ಕೊಣಾಜೆ ಗ್ರಾ.ಪಂ. ವ್ಯಾಪ್ತಿಯ ಪಟ್ಟೆ ಮೂಡಾಲ ಎಸ್.ಸಿ. ಕಾಲೋನಿ ಸಂಪರ್ಕಿಸುವ ಕುಮೇರು ಎಂಬಲ್ಲಿ ಹರಿಯುತ್ತಿರುವ ತೋಡಿಗೆ ತಾ.ಪಂ.ನ ರೂ 2 ಲಕ್ಷ ಹಾಗೂ ಗ್ರಾ.ಪಂ.ನ ರೂ. 4 ಲಕ್ಷ ಅನುದಾನದಲ್ಲಿ ಕಿರು ಸೇತುವೆ ನಿರ್ಮಿಸಲು ತಾ.ಪಂ. ಸದಸ್ಯೆ ಪಿ.ವೈ.ಕುಸುಮ ಅವರು ಶಂಕುಸ್ಥಾಪನೆ ನೆರವೇರಿಸಿ, ಶೀಘ್ರ ಕೆಲಸ ನಡೆಯಲಿ ಎಂದು ಪ್ರಾರ್ಥಿಸಿದರು.

ಕಡ್ಯ ಕೊಣಾಜೆ: ಕಿರು ಸೇತುವೆಗೆ ಶಂಕುಸ್ಥಾಪನೆ Read More »

ಕರಾವಳಿ

ಕಡ್ಯ ಕೊಣಾಜೆ: ಕಬಡ್ಡಿ ಪಂದ್ಯಾಟ

(ನ್ಯೂಸ್ ಕಡಬ) newskadaba.com, ಕಲ್ಲುಗುಡ್ಡೆ , ಡಿ.3  ರಾಮನಗರ ಯುವಕ ಮಂಡಲದ ವತಿಯಿಂದ ಕಡ್ಯ ಕೊಣಾಜೆ ಶಾಲಾ ಕ್ರೀಡಾಂಗಣದಲ್ಲಿ 6ನೇ ವರ್ಷದ ದೀಪಾವಳಿ ಪ್ರಯುಕ್ತ ಕಬಡ್ಡಿ ಪಂದ್ಯಾಟ ಇತ್ತೀಚೆಗೆ ನಡೆಯಿತು. ಕಡ್ಯ ಹಾಲು ಉತ್ಪಾದಕರ ಸಹಕಾರ ಸಂಘದ ಅಧ್ಯಕ್ಷ ಗಂಗಾಧರ ಗೌಡ ದೊಡ್ಡಮನೆ ಪಂದ್ಯಾಟ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಗ್ರಾ.ಪಂ. ಉಪಾಧ್ಯಕ್ಷ ಯಶೋಧರ ಗೌಡ ಉಪಸ್ಥಿತರಿದ್ದರು. ಸಮಾರೋಪ ಸಮಾರಂಭದ ಅಧ್ಯಕ್ಷತೆಯನ್ನು ಶ್ರೀ ರಾಮನಗರ ಯುವಕ ಮಂಡಲದ ಅಧ್ಯಕ್ಷ ಪುಂಡರೀಕಾಕ್ಷ ವಹಿಸಿದ್ದರು. ಹೊನ್ನಪ್ಪ ಗೌಡ ಕಲ್ಲೂರು, ಗಂಗಾಧರ ಗೌಡ ದೊಡ್ಡಮನೆ,

ಕಡ್ಯ ಕೊಣಾಜೆ: ಕಬಡ್ಡಿ ಪಂದ್ಯಾಟ Read More »

ಕರಾವಳಿ

ಎಸ್ ಬಿ ಕಾಲೇಜ್ ನೆಲ್ಯಾಡಿಯಲ್ಲಿ ನಾಳೆ ಪ್ರತಿಭೆಗಳ ಹಬ್ಬ – ಕಲಾ ಪರ್ವ 2k19

(ನ್ಯೂಸ್ ಕಡಬ) newskadaba.com, ನೆಲ್ಯಾಡಿ, ಡಿ.2  ಕಲೆ, ಸಂಸ್ಕೃತಿ ಉಳಿಸುವ ನಿಟ್ಟಿನಲ್ಲಿ ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳಲ್ಲಿ ಪ್ರತಿಭೆಗಳನ್ನ ಹೊರಸೂಸುವ ಉದ್ದೇಶದಿಂದ ಆಯೋಜಿಸಿದ ಕಲಾ ಪರ್ವ 2k19 ಹಬ್ಬವನ್ನು ದಿನಾಂಕ 3-12-2019 ಆಚರಿಸಲಾಗುತ್ತಿದೆ. ಈ ಕಾರ್ಯಕ್ರಮದಲ್ಲಿ ಬೇರೆ ಬೇರೆ ಕಾಲೇಜಿನ ವಿದ್ಯಾರ್ಥಿಗಳು ಭಾಗವಹಿಲಿದ್ದಾರೆ. ಈ ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಯಕ್ಷದರುವ ಫೌಂಡೇಶನ್‍ನ ಶ್ರೀ ಸತೀಶ್ ಪಾಟ್ಲಾ ಭಾಗವಹಿಸಲಿದ್ದಾರೆ. ಕಾರ್ಯಕ್ರಮದಲ್ಲಿ ಸಂಸ್ಥೆಯ ಅಧ್ಯಕ್ಷರೂ, ಪ್ರಾಂಶುಪಾಲರೂ ಆದ ರೆ|ಫಾ|ಡಾ| ವರ್ಗೀಸ್ ಕೈಪನಡುಕ್ಕ ಒಐಸಿ ಜ್ಞಾನೋದಯ ಬೆಥನಿ ಪಿಯು ಕಾಲೇಜಿನ ಪ್ರಾಂಶುಪಾಲರಾದ ರೆ|ಫಾ|

ಎಸ್ ಬಿ ಕಾಲೇಜ್ ನೆಲ್ಯಾಡಿಯಲ್ಲಿ ನಾಳೆ ಪ್ರತಿಭೆಗಳ ಹಬ್ಬ – ಕಲಾ ಪರ್ವ 2k19 Read More »

ಕರಾವಳಿ

“ಅನಾಥ ಮಕ್ಕಳ ರಹಿತ ಭಾರತ ನಮ್ಮದಾಗಬೇಕು”

(ನ್ಯೂಸ್ ಕಡಬ) newskadaba.com, ಮಂಗಳೂರು, ಡಿ.2  ಇತ್ತೀಚೆಗೆ ಸೌಜನ್ಯ ಮಹಿಳಾ ಮಂಡಲ(ರಿ) ಹೊೈಗೆಬೈಲ್ ಇವರು “ಇನ್ನರ್ ವೀಲ್ ಕ್ಲಬ್ ಮಂಗಳೂರು ಉತ್ತರ” ಇವರೊಂದಿಗೆ ಜಂಟಿಯಾಗಿ ಹಮ್ಮಿಕೊಂಡ ಕಾರ್ಯಕ್ರಮದಲ್ಲಿ ಇನ್ನರ್ ವೀಲ್ ಕ್ಲಬ್‍ನ ಮಾಜಿ ಅಧ್ಯಕ್ಷೆ ಹಾಗೂ ಮಿಶನ್ ಮಮತಾದ ಸಂಯೋಜಕಿ ರಮಾಮಣಿ ಭಟ್ ಇವರು ಸೌಜನ್ಯದ ಸದಸ್ಯೆಯರನ್ನು ಉದ್ದೇಶಿಸಿ ಮಾತನಾಡುತ್ತಾ “ಅನಾಥ ಮಕ್ಕಳ ರಹಿತ ಭಾರತ ನಮ್ಮದಾಗಬೇಕು.” ಮಿಶನ್ ಮಮತಾ ಯೋಜನೆಯ ಮೂಲಕ ಸರಕಾರದ ಸಹಕಾರದೊಂದಿಗೆ ಈ ಕೆಲಸವನ್ನು ಆರಂಭಿಸಲಿದ್ದೇವೆ, ಈಗಾಗಲೇ ಅದಕ್ಕೆ ಬೇಕಾದ ಸಿದ್ಧತೆಗಳನ್ನು ಮಾಡಿಕೊಂಡು ನಾವು

“ಅನಾಥ ಮಕ್ಕಳ ರಹಿತ ಭಾರತ ನಮ್ಮದಾಗಬೇಕು” Read More »

ಕರಾವಳಿ
Scroll to Top