ವಿಟ್ಲ: ಕಂಬಳಬೆಟ್ಟು ಬಳಿ ಯುವಕನಿಗೆ ಹಲ್ಲೆ- ದೂರು ದಾಖಲು
(ನ್ಯೂಸ್ ಕಡಬ) newskadaba.com ವಿಟ್ಲ, ಮಾ. 09. ಯುವಕನೋರ್ವನಿಗೆ ಪೋನ್ ನಲ್ಲಿ ಮಾತನಾಡುವಾಗ ಅವಾಚ್ಯವಾಗಿ ನಿಂದಿಸಿ ಹಲ್ಲೆ ನಡೆಸಿರುವ ಬಗ್ಗೆ ವಿಟ್ಲ ಠಾಣೆಯಲ್ಲಿ ಕೇಸ್ ದಾಖಲಾಗಿದೆ. ಮೊಹಮ್ಮದ್ ಅನ್ವರ್ ಎಂಬವರು ಕೇಸ್ ದಾಖಲಿಸಿದ್ದಾರೆ. ಕಂಬಳಬೆಟ್ಟು ದರ್ಗಾದ ಬಳಿ ಅನ್ವರ್ ಫೋನ್ ನಲ್ಲಿ ಮಾತನಾಡುವಾಗ ದ್ವಿಚಕ್ರವಾಹನದಲ್ಲಿ ಬಂದ ಸಿನಾನ್, ಸಿಯಾಬ್, ರಾಬಿ ಎಂಬವರು ಅನ್ವರ್ ಗೆ ಅವಾಚ್ಯವಾಗಿ ನಿಂದಿಸಿದ್ದಲ್ಲದೇ ಬಳಿಕ ಅಲ್ಲೆ ಇದ್ದ ಕಬ್ಬಿಣದ ರಾಡ್ ನಿಂದ ಕತ್ತು ಹಾಗೂ ಮೊಣಕೈಗೆ ಹಲ್ಲೆ ನಡೆಸಿ ಆರೋಪಿಗಳು ಪರಾರಿಯಾಗಿದ್ದಾರೆ ಎಂದೆನ್ನಲಾಗಿದೆ.
ವಿಟ್ಲ: ಕಂಬಳಬೆಟ್ಟು ಬಳಿ ಯುವಕನಿಗೆ ಹಲ್ಲೆ- ದೂರು ದಾಖಲು Read More »
ಕರಾವಳಿ, ಕ್ರೈಮ್ ನ್ಯೂಸ್



