ಕ್ರೈಮ್ ನ್ಯೂಸ್

ವಿಟ್ಲ: ಕಂಬಳಬೆಟ್ಟು ಬಳಿ ಯುವಕನಿಗೆ ಹಲ್ಲೆ- ದೂರು ದಾಖಲು

(ನ್ಯೂಸ್ ಕಡಬ) newskadaba.com ವಿಟ್ಲ, ಮಾ. 09. ಯುವಕನೋರ್ವನಿಗೆ ಪೋನ್ ನಲ್ಲಿ ಮಾತನಾಡುವಾಗ ಅವಾಚ್ಯವಾಗಿ ನಿಂದಿಸಿ ಹಲ್ಲೆ ನಡೆಸಿರುವ ಬಗ್ಗೆ ವಿಟ್ಲ ಠಾಣೆಯಲ್ಲಿ ಕೇಸ್ ದಾಖಲಾಗಿದೆ. ಮೊಹಮ್ಮದ್ ಅನ್ವರ್ ಎಂಬವರು ಕೇಸ್ ದಾಖಲಿಸಿದ್ದಾರೆ. ಕಂಬಳಬೆಟ್ಟು ದರ್ಗಾದ ಬಳಿ ಅನ್ವರ್ ಫೋನ್ ನಲ್ಲಿ ಮಾತನಾಡುವಾಗ ದ್ವಿಚಕ್ರವಾಹನದಲ್ಲಿ ಬಂದ ಸಿನಾನ್, ಸಿಯಾಬ್, ರಾಬಿ ಎಂಬವರು ಅನ್ವರ್ ಗೆ ಅವಾಚ್ಯವಾಗಿ‌ ನಿಂದಿಸಿದ್ದಲ್ಲದೇ ಬಳಿಕ ಅಲ್ಲೆ ಇದ್ದ ಕಬ್ಬಿಣದ ರಾಡ್ ನಿಂದ ಕತ್ತು ಹಾಗೂ ಮೊಣಕೈಗೆ ಹಲ್ಲೆ ನಡೆಸಿ ಆರೋಪಿಗಳು ಪರಾರಿಯಾಗಿದ್ದಾರೆ ಎಂದೆನ್ನಲಾಗಿದೆ.

ವಿಟ್ಲ: ಕಂಬಳಬೆಟ್ಟು ಬಳಿ ಯುವಕನಿಗೆ ಹಲ್ಲೆ- ದೂರು ದಾಖಲು Read More »

ಕರಾವಳಿ, ಕ್ರೈಮ್ ನ್ಯೂಸ್

ಆಟವಾಡಲು ತೆರಳಿದ್ದ ಶಾಲಾ ಬಾಲಕ ಆತ್ಮಹತ್ಯೆ ಸ್ಥಿತಿಯಲ್ಲಿ ಪತ್ತೆ

(ನ್ಯೂಸ್ ಕಡಬ) newskadaba.com ಕಾಸರಗೋಡು, ಮಾ. 09. ಆಟವಾಡಲು ತೆರಳಿದ್ದ ವಿದ್ಯಾರ್ಥಿಯೋರ್ವ ಶಾಲಾ ಸಮೀಪ ಆತ್ಮಹತ್ಯೆ ಸ್ಥಿತಿಯಲ್ಲಿ ಪತ್ತೆಯಾದ ಘಟನೆ ಕಾಸರಗೋಡು ಬೇಡಡ್ಕ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ಮೃತ ಬಾಲಕನನ್ನು ಕುಂಡಂಗುಳಿ ನಿವಾಸಿ ವಿನೋದ್ ಎಂಬವರ ಪುತ್ರ ಅಭಿನವ್ (17)ದು ಗುರುತಿಸಲಾಗಿದೆ. ಅಭಿನವ್ ಶಾಲೆಯಿಂದ ಮನೆಗೆ ಬಂದು ಸಂಜೆ ಆಟವಾಡಲು ಹೋಗುವುದಾಗಿ ಹೇಳಿ ಹೋಗಿದ್ದ. ಆ ಬಳಿಕ ಸಂಜೆಯಾದರೂ ಮನೆಗೆ ವಾಪಸ್‌ ಬಾರದ ಹಿನ್ನೆಲೆಯಲ್ಲಿ ಮನೆಯವರು ಹುಡುಕಾಟ ನಡೆಸಿದ್ದಾರೆ. ಈ ವೇಳೆ ಮನೆ ಸಮೀಪದ ಶಾಲೆಯ ಹಿಂದೆ

ಆಟವಾಡಲು ತೆರಳಿದ್ದ ಶಾಲಾ ಬಾಲಕ ಆತ್ಮಹತ್ಯೆ ಸ್ಥಿತಿಯಲ್ಲಿ ಪತ್ತೆ Read More »

ಕ್ರೈಮ್ ನ್ಯೂಸ್, ರಾಷ್ಟ್ರೀಯ ನ್ಯೂಸ್

ಪಾಕಿಸ್ತಾನದಲ್ಕಿ ಭಾರತೀಯ ವೈದ್ಯನ ಕತ್ತು ಸೀಳಿ ಹತ್ಯಗೈದ ಚಾಲಕ

(ನ್ಯೂಸ್ ಕಡಬ)newskadaba.com  ನವದೆಹಲಿ, ಮಾ.09. ಭಾರತೀಯ ಮೂಲದ ವೈದ್ಯನನ್ನು ಚಾಲಕ ಮನೆಯಲ್ಲೇ ಕತ್ತು ಸೀಳಿ ಹತ್ಯೆಗೈದ ಘಟನೆ ಪಾಕಿಸ್ತಾನದಲ್ಲಿ ನಡೆದಿದೆ. ಪಾಕಿಸ್ತಾನದ ಹೈದರಾಬಾದ್ ನ ಕೈಪುರ್ ನಲ್ಲಿ ವೈದ್ಯ ಧರಮ್ ದೇವಿ ರಾತಿ ಎಂಬುವವರ ಹತ್ಯೆ ಆಗಿದ್ದು, ಅವರ ಕಾರಿನ ಚಾಲಕ ಹನೀಫ್ ಲಗಾರಿ ಕೊಲೆ ಮಾಡಿದ ಆರೋಪಿ. ಹನೀಫ್ ಲಗಾರಿಯನ್ನು ಘಟನೆ ನಡೆದ 24 ಗಂಟೆಯಲ್ಲಿ ಪೊಲೀಸರು ಬಂಧಿಸಿದ್ದು, ಮೃತರ ಕುಟುಂಬಕ್ಕೆ ಸೂಕ್ತ ನ್ಯಾಯ ಕೊಡಿಸುವುದಾಗಿ ಪೊಲೀಸರು ಭರವಸೆ ನೀಡಿದ್ದಾರೆ.    

ಪಾಕಿಸ್ತಾನದಲ್ಕಿ ಭಾರತೀಯ ವೈದ್ಯನ ಕತ್ತು ಸೀಳಿ ಹತ್ಯಗೈದ ಚಾಲಕ Read More »

ಕ್ರೈಮ್ ನ್ಯೂಸ್, ರಾಷ್ಟ್ರೀಯ ನ್ಯೂಸ್

ಫೋನ್ ರಿಸೀವ್ ಮಾಡಿಲ್ಲ ಎಂದು ಮಹಿಳೆಯನ್ನೇ ಕೊಲೆಗೈದ ಕ್ಯಾಬ್ ಚಾಲಕ

(ನ್ಯೂಸ್ ಕಡಬ) newskadaba.com ಬೆಂಗಳೂರು, ಮಾ. 09. ಫೋನ್‌ ರಿಸೀವ್‌ ಮಾಡದೇ ಇದ್ದುದಕ್ಕೆ ಕ್ಯಾಬ್‌ ಚಾಲಕನೋರ್ವ ಕೆಲ ತಿಂಗಳಿಂದ ಪರಿಚಯವಾಗಿದ್ದ ಮಹಿಳೆಯನ್ನು ಕೊಲೆ ಮಾಡಿ, ಮೃತದೇಹವನ್ನು ಚರಂಡಿಗೆಸೆದಿರುವ ಭಯಾನಕ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ಕೊಲೆಯಾದವರನ್ನು ದೀಪಾ ಎಂದು ಗುರುತಿಸಲಾಗಿದೆ. ಕ್ಯಾಬ್‌ ಚಾಲಕ ಭೀಮರಾಯ ಅಲಿಯಾಸ್ ಭೀಮಾ ಕೊಲೆ ಆರೋಪಿ. ವೃತ್ತಿಯಲ್ಲಿ ಕ್ಯಾಬ್‌ ಚಾಲಕನಾಗಿದ್ದ ಭೀಮಾ, ಕ್ಷುಲ್ಲಕ ಕಾರಣಕ್ಕೆ ದೀಪಾ ಎಂಬವರನ್ನು ಕತ್ತು ಹಿಸುಕಿ ಕೊಂದು ಮೃತದೇಹವನ್ನು ಚರಂಡಿಗೆಸೆದಿದ್ದಾನೆ. ಸಾರ್ವಜನಿಕರು ಕೊಳೆತ ಶವದ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಿದಾಗ

ಫೋನ್ ರಿಸೀವ್ ಮಾಡಿಲ್ಲ ಎಂದು ಮಹಿಳೆಯನ್ನೇ ಕೊಲೆಗೈದ ಕ್ಯಾಬ್ ಚಾಲಕ Read More »

ಕರ್ನಾಟಕ, ಕ್ರೈಮ್ ನ್ಯೂಸ್
Theft, crime, Robbery

ಬಂಟ್ವಾಳ: ನಿಲ್ಲಿಸಿದ್ದ ಆಟೋ ಕದ್ದೊಯ್ದ ಕಳ್ಳರು..!

(ನ್ಯೂಸ್ ಕಡಬ) newskadaba.com ಬಂಟ್ವಾಳ, ಮಾ. 09. ಪ್ರತಿಭಟನೆಯಲ್ಲಿ ಭಾಗವಹಿಸಲು ಬಂದ ವ್ಯಕ್ತಿಯೋರ್ವರ ಆಟೋ ರಿಕ್ಷಾವನ್ನು ಹಾಡುಹಗಲೇ ಕಳ್ಳರು ಕದ್ದೊಯ್ದ ಘಟನೆ ಬಿಸಿರೋಡ್ ನಲ್ಲಿ ನಡೆದಿದೆ. 400 ಕೆವಿ ವಿದ್ಯುತ್ ಮಾರ್ಗವನ್ನು ವಿರೋಧಿಸಿ ಬಂಟ್ವಾಳ ತಾಲೂಕು ಕಛೇರಿ ಎದುರು ರೈತಸಂಘವು ಆಯೋಜಿಸಿದ್ದ ಪ್ರತಿಭಟನೆಗೆ ಬಂದ ವಿಟ್ಲದ ವ್ಯಕ್ತಿಯೋರ್ವರು ಬಿಸಿರೋಡ್ ಲಯನ್ಸ್ ಕ್ಲಬ್ ಭವನದ ಬಳಿ ತನ್ನ ಆಟೋವನ್ನು ನಿಲ್ಲಿಸಿದ್ದರು. ಬಳಿಕ ಪ್ರತಿಭಟನೆ ಮುಗಿಸಿ ಹಿಂತಿರುಗಿ ಬಂದು ನೋಡಿದಾಗ ಆಟೋ ಕಾಣದೇ ಇದ್ದು ಯಾರೋ ಕಿಡಿಗೇಡಿಗಳು ಕಳವುಗೈದಿದ್ದಾರೆ ಎಂದು

ಬಂಟ್ವಾಳ: ನಿಲ್ಲಿಸಿದ್ದ ಆಟೋ ಕದ್ದೊಯ್ದ ಕಳ್ಳರು..! Read More »

ಕರಾವಳಿ, ಕ್ರೈಮ್ ನ್ಯೂಸ್

ಸಾವಿರಕ್ಕೂ ಅಧಿಕ ಬೀದಿನಾಯಿಗಳಿಗೆ ಆಹಾರ ನೀಡದೇ ಉಪವಾಸ ಕೆಡವಿ ಹತ್ಯೆಗೈದ ವ್ಯಕ್ತಿ

(ನ್ಯೂಸ್ ಕಡಬ)newskadaba.com  ಸಿಯೋಲ್, ಮಾ.09. ಬೀದಿ ನಾಯಿಗಳನ್ನು ಸಾಕುವ ನೆಪದಲ್ಲಿ ಸಾವಿರಕ್ಕೂ ಅಧಿಕ ನಾಯಿಗಳನ್ನು ದತ್ತುಪಡೆದ ವ್ಯಕ್ತಿಯೊಬ್ಬ ಬಳಿಕ ಉಪವಾಸ ಕೆಡವಿ ಹತ್ಯೆ ಮಾಡಿರುವ ಅಮಾನವೀಯ ಪ್ರಕರಣ ದಕ್ಷಿಣ ಕೊರಿಯಾದ ಯಾಂಗ್ಪೆಯಂಗ್ ಪ್ರಾಂತದಲ್ಲಿ ವರದಿಯಾಗಿದೆ. ನಾಯಿ ಸಾಕುವವರಿಂದ ಸಾಕುವುದಾಗಿ ಹೇಳಿ ನಾಯಿಮರಿಗಳನ್ನು ಪಡೆಯುವ ಈ ವ್ಯಕ್ತಿ, ಪ್ರತೀ ನಾಯಿಮರಿಯ ಪೋಷಣೆಗಾಗಿ ಸುಮಾರು 700 ರೂ. ಪಡೆಯುತ್ತಿದ್ದ. ಆದರೆ ಬಳಿಕ ಅವನ್ನು ಒಂದು ರೂಮಿನಲ್ಲಿ ಕೂಡಿಹಾಕಿ ಉಪವಾಸ ಕೆಡವಿ ಸಾಯಿಸುತ್ತಿದ್ದ. ಕಳೆದ 2 ವರ್ಷದಿಂದ ಈತ ಈ ಕೃತ್ಯ

ಸಾವಿರಕ್ಕೂ ಅಧಿಕ ಬೀದಿನಾಯಿಗಳಿಗೆ ಆಹಾರ ನೀಡದೇ ಉಪವಾಸ ಕೆಡವಿ ಹತ್ಯೆಗೈದ ವ್ಯಕ್ತಿ Read More »

ಕ್ರೈಮ್ ನ್ಯೂಸ್, ರಾಷ್ಟ್ರೀಯ ನ್ಯೂಸ್

➤ಕಾಸರಗೋಡು ವಿದ್ಯಾರ್ಥಿಯ ಅನುಮಾನಸ್ಪದ ಸಾವು..!

(ನ್ಯೂಸ್ ಕಡಬ) newskadaba.com. ಕಾಸರಗೋಡು,ಮಾ.9   ಹೈಯರ್ ಸೆಕೆಂಡರಿ ಶಾಲೆಯ ವಿದ್ಯಾರ್ಥಿಯೋರ್ವ ಶಾಲೆಯ ಸಮೀಪ ಆತ್ಮಹತ್ಯೆಗೈದ ಸ್ಥಿತಿಯಲ್ಲಿ ಪತ್ತೆಯಾದ ಘಟನೆ ನಡೆದಿದೆ.  ಕುಂಡಂಗುಳಿ ನಿವಾಸಿ ವಿನೋದ್ ,ಶಾಲಿನಿ ದಂಪತಿಗಳ ಪುತ್ರ ಅಭಿನವ್ (17) ನಿಗೂಢವಾಗಿ ಸಾವನ್ನಪ್ಪಿದ ಪ್ಲಸ್ ವನ್ ಹೈಯರ್ ಸೆಕೆಂಡರಿ ವಿದ್ಯಾರ್ಥಿಯಾಗಿದ್ದಾನೆ. ಮಾರ್ಚ್ 7 ರಂದು ಅಭಿನವ್ ತರಗತಿ ಮುಗಿಸಿ ಸಂಜೆ ಮನೆಗೆ ಬಂದು ಆಟವಾಡಲು ಹೋಗುವುದಾಗಿ ಹೇಳಿದ್ದ. ಸಂಜೆಯಾದರೂ ವಾಪಸ್‌ ಬಾರದ ಹಿನ್ನೆಲೆಯಲ್ಲಿ ಕುಟುಂಬಸ್ಥರು ಹುಡುಕಾಟ ನಡೆಸಿದ್ದಾರೆ. ರಾತ್ರಿ 8 ಗಂಟೆ ಸುಮಾರಿಗೆ ಮನೆ ಸಮೀಪದ

➤ಕಾಸರಗೋಡು ವಿದ್ಯಾರ್ಥಿಯ ಅನುಮಾನಸ್ಪದ ಸಾವು..! Read More »

ಕ್ರೈಮ್ ನ್ಯೂಸ್

ಬಂಟ್ವಾಳ: ಮೂರ್ಛೆ ರೋಗಕ್ಕೆ ಒಳಗಾದ ಚಾಲಕ ➤ ಹಲವು ವಾಹನಗಳಿಗೆ ಲಾರಿ ಢಿಕ್ಕಿ

(ನ್ಯೂಸ್ ಕಡಬ) newskadaba.com ಬಂಟ್ವಾಳ, ಮಾ. 09. ಲಾರಿ ಚಾಲನೆಯಲ್ಲಿರುವಾಗಲೇ ಚಾಲಕನಿಗೆ ಮೂರ್ಚೆ ರೋಗ ಬಾಧಿಸಿದ ಪರಿಣಾಮ ರಸ್ತೆ ಬದಿಯಲ್ಲಿ ನಿಲ್ಲಿಸಿದ್ದ ವಾಹನಗಳಿಗೆ ಢಿಕ್ಕಿ ಹೊಡೆದು ಬಳಿಕ ಪೆಟ್ರೋಲ್ ಬಂಕ್ ಗೆ ನುಗ್ಗಿದ ಘಟನೆ ಬಿ.ಸಿ.ರೋಡಿನಲ್ಲಿ ನಡೆದಿದೆ. ಮಂಗಳೂರು ಕಡೆಯಿಂದ ಹಾಸನದ ಕಡೆಗೆ ತೆರಳುತ್ತಿದ್ದ ಲಾರಿಯು ಬಿಸಿರೋಡಿನ ಪೆಟ್ರೋಲ್ ಪಂಪ್ ಬಳಿ ತಲುಪುತ್ತಿದ್ದಂತೆಯೇ ಚಾಲಕನಿಗೆ ಮೂರ್ಚೆ ರೋಗ ಬಾಧಿಸಿ ಈ ಘಟನೆ ನಡೆದಿದೆ ಎನ್ನಲಾಗಿದೆ. ಚಾಲಕ ಲಕ್ಷ್ಮಣ್ ಎಂಬವರನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಲಾರಿಯು ಪೆಟ್ರೋಲ್ ಪಂಪ್ ನಲ್ಲಿ

ಬಂಟ್ವಾಳ: ಮೂರ್ಛೆ ರೋಗಕ್ಕೆ ಒಳಗಾದ ಚಾಲಕ ➤ ಹಲವು ವಾಹನಗಳಿಗೆ ಲಾರಿ ಢಿಕ್ಕಿ Read More »

ಕರಾವಳಿ, ಕರ್ನಾಟಕ, ಕ್ರೈಮ್ ನ್ಯೂಸ್
crime, arrest, suspected

ಪುತ್ತೂರು: ತಲೆಮರೆಸಿಕೊಂಡಿದ್ದ ಇಬ್ಬರು ವಾರಂಟ್ ಆರೋಪಿಗಳ ಅರೆಸ್ಟ್

(ನ್ಯೂಸ್ ಕಡಬ) newskadaba.com ಪುತ್ತೂರು, ಮಾ. 09. ಕೌಕ್ರಾಡಿಯ ದಡ್ಡಲಪಲ್ಕೆ ಎಂಬಲ್ಲಿ ಸಂಭವಿಸಿದ ಅಪಘಾತ ಪ್ರಕರಣಕ್ಕೆ ಸಂಬಂಧಿಸಿ ಕಳೆದೈದು ವರ್ಷಗಳಿಂದ ನ್ಯಾಯಾಲಯದ ವಿಚಾರಣೆಗೆ ಹಾಜರಾಗದ ಆರೋಪಿಗಳನ್ನು ಪುತ್ತೂರು ಸಂಚಾರ ಪೊಲೀಸರು ಬಂಧಿಸಿದ ಘಟನೆ ವರದಿಯಾಗಿದೆ. ಬಂಧಿತ ಆರೋಪಿಯನ್ನು ಕುಣಿಗಲ್ ಮೂಲದ ಮೂರ್ತಿ ಹಾಗೂ ತೆಂಕಿಲ ನಿವಾಸಿ ಪವನ್ ಎಂದು ಗುರುತಿಸಲಾಗಿದೆ. ಮೂರ್ತಿ ಬಸ್ ಚಾಲಕನಾಗಿದ್ದು, 2014ರ ಮೇನಲ್ಲಿ ದಡ್ಡಲಪಲ್ಕೆ ಎಂಬಲ್ಲಿ ಬಸ್, ಆಟೋ ರಿಕ್ಷಾಕ್ಕೆ ಡಿಕ್ಕಿ ಹೊಡೆದಿತ್ತು. ಇದೀಗ ಬೆಂಗಳೂರಿನ ಹೊಸಕೋಟೆಯಲ್ಲಿ ಮೂರ್ತಿಯನ್ನು ಪೊಲೀಸರು ಬಂಧಿಸಿ ನ್ಯಾಯಾಲಯಕ್ಕೆ

ಪುತ್ತೂರು: ತಲೆಮರೆಸಿಕೊಂಡಿದ್ದ ಇಬ್ಬರು ವಾರಂಟ್ ಆರೋಪಿಗಳ ಅರೆಸ್ಟ್ Read More »

ಕರಾವಳಿ, ಕ್ರೈಮ್ ನ್ಯೂಸ್

➤ ತಲೆಮರೆಸಿಕೊಂಡಿದ್ದ ಇಬ್ಬರು ವಾರಂಟ್ ಆರೋಪಿಗಳ ಬಂಧನ

(ನ್ಯೂಸ್ ಕಡಬ) newskadaba.com. ಪುತ್ತೂರು, ಮಾ 9.  ಕಳೆದ ಐದುವರ್ಷಗಳ ಹಿಂದೆ ಕೌಕ್ರಾಡಿಯ ದಡ್ಡಲಪಲ್ಕೆಯಲ್ಲಿ ಸಂಭವಿಸಿದ ಅಪಘಾತ ಪ್ರಕರಣಕ್ಕೆ ಸಂಬಂಧಿಸಿದಂತೆ ನ್ಯಾಯಾಲಯದ ವಿಚಾರಣೆಗೆ ಹಾಜರಾಗದ ಆರೋಪಿಗಳನ್ನು ಪುತ್ತೂರು ಸಂಚಾರ ಪೊಲೀಸರು ಬಂಧಿಸಿದ್ದಾರೆ. ಕುಣಿಗಲ್ ಮೂಲದ ಮೂರ್ತಿ ಹಾಗೂ ತೆಂಕಿಲ ನಿವಾಸಿ ಪವನ್ ಬಂಧಿತ ಆರೋಪಿಗಳು. ಮೂರ್ತಿ ಬಸ್ ಚಾಲಕನಾಗಿದ್ದು, 2014ರ ಮೇನಲ್ಲಿ ದದ್ದಲಪಲ್ಕೆ ಎಂಬಲ್ಲಿ ಚಾಲನೆ ಮಾಡುತ್ತಿದ್ದ ಬಸ್ ಆಟೋ ರಿಕ್ಷಾಕ್ಕೆ ಡಿಕ್ಕಿ ಹೊಡೆದಿತ್ತು. ಬೆಂಗಳೂರಿನ ಹೊಸಕೋಟೆಯಲ್ಲಿ ಮೂರ್ತಿಯನ್ನು ಪೊಲೀಸರು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ. ತೆಂಕಿಲ ನಿವಾಸಿ

➤ ತಲೆಮರೆಸಿಕೊಂಡಿದ್ದ ಇಬ್ಬರು ವಾರಂಟ್ ಆರೋಪಿಗಳ ಬಂಧನ Read More »

ಕರಾವಳಿ, ಕ್ರೈಮ್ ನ್ಯೂಸ್
Scroll to Top