ಮುನಿರತ್ನ ಕೇಸ್- ಮೂವರಿಗೆ ನಿರೀಕ್ಷಣಾ ಜಾಮೀನು

(ನ್ಯೂಸ್ ಕಡಬ) newskadaba.com ಅ. 15. ಶಾಸಕ ಮುನಿರತ್ನ ವಿರುದ್ಧ ದಾಖಲಾಗಿರುವ ಅತ್ಯಾಚಾರ ಪ್ರಕರಣದ ಮೂವರು ಆರೋಪಿಗಳಿಗೆ 82ನೇ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯವು ನಿರೀಕ್ಷಣಾ ಜಾಮೀನು ಮಂಜೂರು ಮಾಡಿದೆ. 4ನೇ ಆರೋಪಿಯಾಗಿರುವ ಕಿರಣ್‌ ಕುಮಾರ್‌, ಆತನ ಸ್ನೇಹಿತರಾದ ಎ5 ಲೋಹಿತ್‌ ಕುಮಾರ್‌, ಎ6 ಮಂಜುನಾಥ್‌ಗೆ ಜಾಮೀನು ಮಂಜೂರಾಗಿರುವುದಾಗಿ ತಿಳಿದುಬಂದಿದೆ.


ಜೊತೆಗೆ ತನಿಖೆಗೆ ಸಹಕಾರ ನೀಡಬೇಕು ಎಂದು ಕೋರ್ಟ್‌ ಷರತ್ತು ವಿಧಿಸಿದೆ. ಆರೋಪಿ ಕಿರಣ್‌ ಕುಮಾರ್‌ ತನ್ನನ್ನು ಮುನಿರತ್ನ ಸಂಬಂಧಿ ಎಂದು ಸಂತ್ರಸೆಗೆ ಪರಿಚಯಿಸಿಕೊಂಡಿದ್ದಾನೆ. ಬಳಿಕ ಸ್ನೇಹಿತರಾದ ಲೋಹಿತ್‌ ಕುಮಾರ್‌, ಮಂಜುನಾಥ್‌ ಜತೆ ತಂಡ ಕಟ್ಟಿಕೊಂಡು ಕೆಲವು ನಾಯಕರ ಹನಿಟ್ರ್ಯಾಪ್‌ ಮಾಡುವ ಉದ್ದೇಶದಿಂದ ರೆಸಾರ್ಟ್‌ ವೊಂದಕ್ಕೆ ಹೋಗಿ, ನಿರ್ದಿಷ್ಟ ಕೊಠಡಿಯಲ್ಲಿ ರಹಸ್ಯ ಕ್ಯಾಮರಾ ಇರಿಸಿದ್ದರು. ಜೊತೆಗೆ ಹನಿಟ್ರ್ಯಾಪ್‌ಗೆ ಬಳಸಿಕೊಂಡಿದ್ದ ಮಹಿಳೆಯರ ಅಶ್ಲೀಲ ವೀಡಿಯೋ ಚಿತ್ರೀಕರಿಸಿಕೊಂಡಿದ್ದರು. ಮೂವರ ವಿರುದ್ಧ ಅತ್ಯಾಚಾರ ಮತ್ತು ಹನಿಟ್ರ್ಯಾಪ್‌ಗೆ ಸಹಕಾರ ನೀಡಿದ ಆರೋಪದಡಿ ಸಂತ್ರಸ್ತೆ ಕಗ್ಗಲೀಪುರ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದರು.

error: Content is protected !!

Join the Group

Join WhatsApp Group