ನಾಪತ್ತೆಯಾಗಿದ್ದ ಬಾಲಕ ಸೆಫ್ಟಿಂಕ್ ಟ್ಯಾಂಕ್‌ ನಲ್ಲಿ ಶವವಾಗಿ ಪತ್ತೆ..!

Crime

(ನ್ಯೂಸ್ ಕಡಬ) newskadaba.com ಅ. 14 . ಸ್ನೇಹಿತರ ಜೊತೆ ಆಟವಾಡುತ್ತಿದ್ದ ಬಾಲಕ ನಾಪತ್ತೆಯಾಗಿ ಮೂರು ದಿನಗಳ ಬಳಿಕ ಮೃತದೇಹ ಪತ್ತೆಯಾಗಿರುವ ಘಟನೆ ಕಲಬುರಗಿ ನಗರ ಹೊರವಲಯದ ಕೋಟನೂರ (ಡಿ)ಗ್ರಾಮದಲ್ಲಿ ನಡೆದಿದೆ.

ಮೃತ ಬಾಲಕನನ್ನು ನಾಲ್ಕನೇ ತರಗತಿಯ ಹೇರೂರು(ಬಿ) ಗ್ರಾಮದ ಶೇಖರ ಶಾಣಪ್ಪ ಎಂದು ಗುರುತಿಸಲಾಗಿದೆ. ಕೋಟನೂರ(ಡಿ) ಗ್ರಾಮದಲ್ಲಿ ಅಪಾರ್ಟಮೆಂಟ್‌ ಗಳ ನಿರ್ಮಾಣಕ್ಕಾಗಿ ಹಾಕಲಾಗಿರುವ ಖಾಲಿ ಲೇಔಟ್ ನಲ್ಲಿ ನಿರ್ಮಾಣ ಮಾಡಲಾಗಿದ್ದ ಸೆಪ್ಟಿಂಕ್ ಟ್ಯಾಂಕ್‌ ಒಳಗೆ ಬಾಲಕನ ಮೃತದೇಹ ಪತ್ತೆಯಾಗಿರುವುದಾಗಿ ತಿಳಿದುಬಂದಿದೆ. ಮೃತ ಬಾಲಕ ಮೂಲತಃ ಹೇರೂರ (ಬಿ) ಗ್ರಾಮದವರಾಗಿದ್ದು, ಸದ್ಯ ಕೂಲಿ ಕೆಲಸಕ್ಕೆಂದು ತನ್ನ ತಂದೆ ತಾಯಿಯೊಂದಿಗೆ ಬಂದು ಕಲಬುರಗಿಯ ಕೋಟನೂರ (ಡಿ) ಗ್ರಾಮದ ಹತ್ತಿರದಲ್ಲಿ ವಾಸವಾಗಿದ್ದ ಎನ್ನಲಾಗಿದೆ. ಮೃತ ಶೇಖರ್, ತನ್ನ ಇಬ್ಬರು ಸಹೋದರರೊಂದಿಗೆ ಆಟವಾಡುತ್ತ ಮನೆಯಿಂದ ಹೊರಹೋದವನು ವಾಪಸ್ ಮನೆಗೆ ಬಾರದೇ ಇರುವುದರಿಂದ ಮೃತನ ತಂದೆ ಶಾಣಪ್ಪ ನೀಡಿರುವ ದೂರಿನಂತೆ ವಿಶ್ವವಿದ್ಯಾಲಯ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು. ಸ್ಥಳಕ್ಕೆ ಭೇಟಿ ನೀಡಿದ ವಿವಿ ಠಾಣೆಯ ಪೊಲೀಸರು ಸ್ಥಳ ಪರಿಶೀಲನೆ ಮಾಡಿ, ಮುಂದಿನ ಕ್ರಮ ಕೈಗೊಳ್ಳುವುದಾಗಿ ತಿಳಿಸಿದ್ದಾರೆ.

error: Content is protected !!

Join WhatsApp Group

WhatsApp Share