ಖ್ಯಾತ ಸ್ವಾಮೀಜಿಯ ವಿರುದ್ಧ ಲೈಂಗಿಕ ಕಿರುಕುಳ ಆರೋಪ: ದೂರು ಕೊಡಲು ಹೋದ ಮಹಿಳೆ ನಾಪತ್ತೆ

 (ನ್ಯೂಸ್ ಕಡಬ) newskadaba.com ರಾಯಚೂರು(ಸೆ.25): ರಾಜ್ಯದ ಖ್ಯಾತ ಸ್ವಾಮೀಜಿಯೊಬ್ಬರ ವಿರುದ್ಧ ಲೈಂಗಿಕ ಕಿರುಕುಳ ‌ಆರೋಪ ಕೇಳಿಬಂದಿದೆ. ಈ ಬಗ್ಗೆ ಸ್ವಾಮೀಜಿ ವಿರುದ್ಧ ದೂರು ಕೊಡಲು ವಿವಿಧ ಪೊಲೀಸ್ ಠಾಣೆಗೆ 6 ತಿಂಗಳ ಕಾಲ ಅಲೆದಾಡಿದರೂ ಪೊಲೀಸರು ದೂರು ದಾಖಲಿಸಿಕೊಂಡಿಲ್ಲ. ಇದೀಗ ಪ್ರಕರಣ ಬಯಲಾಗುತ್ತಿದ್ದಂತೆ ಸಂತ್ರಸ್ತ ಮಹಿಳೆ ಹಾಗೂ ಆಕೆಯ ಮಗಳು ನಾಪತ್ತೆ ಆಗಿದ್ದಾರೆ.

ರಾಯಚೂರು ಜಿಲ್ಲೆ ದೇವದುರ್ಗತಾ ಸುಲ್ತಾನಪುರ ಮಠದ ಸ್ವಾಮೀಜಿ ವಿರುದ್ಧ ಲೈಂಗಿಕ ಕಿರುಕುಳ ನೀಡಿದ ಆರೋಪ ಕೇಳಿಬಂದಿದೆ. ಸ್ವಾಮೀಜಿ ವಿರುದ್ಧ ದೂರು ನೀಡಲು‌ ಮಹಿಳೆ ಪೊಲೀಸ್ ಠಾಣೆಗಳಿಗೆ ಅಲೆದಾಡಿದ್ದಾರೆ. ಪೊಲೀಸ್ ಠಾಣೆಯ ವಿಜಿಟರ್  ರಿಜಿಸ್ಟರ್‌ನ ಬುಕ್ ಮೂಲಕ ಪ್ರಕರಣ ಬೆಳಕಿಗೆ ಬಂದಿದೆ. ಸ್ವಾಮೀಜಿ ವಿರುದ್ಧ ದೂರು ನೀಡಲು ಬಂದಿರುವುದಾಗಿ ರಿಜಿಸ್ಟರ್‌ನಲ್ಲಿ ಮಹಿಳೆ ದಾಖಲು ಮಾಡಿದ್ದಾಳೆ. ಸುಲ್ತಾನಪುರ ಮಠದ ಸ್ವಾಮೀಜಿ ಶ್ರೀ ಶಂಭು ಸೋಮನಾಥ ಶಿವಾಚಾರ್ಯ ಸ್ವಾಮೀಜಿ ವಿರುದ್ಧ ದೂರು ಕೊಡಲು ಬಂದಿದ್ದಾಗಿ ಮಾಹಿತಿ ಲಭ್ಯವಾಗಿದೆ.

error: Content is protected !!

Join the Group

Join WhatsApp Group