ನದಿ ದಡದಲ್ಲಿದ್ದ ಪಂಪ್ ಸೆಟ್ ಕಳವು – ನಾಲ್ವರು ಅರೆಸ್ಟ್

(ನ್ಯೂಸ್ ಕಡಬ)newskadaba.com ಬೈಲಹೊಂಗಲ, ಆ.05. ಮಲಪ್ರಭಾ ನದಿಯ ದಡದಲ್ಲಿ ರೈತರು ಅಳವಡಿಸಿದ್ದ ವಿದ್ಯುತ್‌ ಪಂಪ್ ಸೆಟ್‌ ಗಳ ಕಳ್ಳತನ ಮಾಡಿದ ನಾಲ್ವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಆರೋಪಿಗಳಿಂದ ಪಂಪ್‌ಸೆಟ್‌ ಹಾಗೂ ವಾಹನ ಸೇರಿ ₹5ಲಕ್ಷ ಮೌಲ್ಯದ ವಸ್ತುಗಳನ್ನೂ ವಶಕ್ಕೆ ಪಡೆಯಲಾಗಿದೆ ಎನ್ನಲಾಗಿದೆ.


ಮಲಪ್ರಭಾ ನದಿಯ ದಂಡೆಯ ಜಾಕ್‌ವೆಲ್ ಹತ್ತಿರ ಹೊಸೂರು ಗ್ರಾಮದ ರೈತರು ಈ ಪಂಪ್‌ ಸೆಟ್‌ಗಳನ್ನು ಅಳವಡಿಸಿದ್ದರು. ಈಚೆಗೆ ಕಳ್ಳತನ ಮಾಡಿದ ಬಗ್ಗೆ ಮುರಗೋಡೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದರು. ತನಿಖೆ ಕೈಗೊಂಡ ಮುರಗೋಡ ಪೊಲೀಸರು ಸಾಮಗ್ರಿಗಳ ಸಮೇತ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾದರು.

Also Read  ಡಿ. 5ರಿಂದ 9ರ ವರೆಗೆ ಕಾಣಿಯೂರು ಪ್ರಗತಿ ವಿದ್ಯಾಸಂಸ್ಥೆಯಲ್ಲಿ ರಜತ ಸಂಭ್ರಮ

error: Content is protected !!
Scroll to Top