ವೃದ್ದೆಗೆ ಮೋಸ; ಚಿನ್ನಾಭರಣ ಕಳವು

(ನ್ಯೂಸ್ ಕಡಬ)newskadaba.com ಪಾವಗಡ, ಆ.05. ಇಲ್ಲ ಸಲ್ಲದ ಸಬೂಬು ಹೇಳಿ ಚಿನ್ನದ ಆಭರಣ ಪಡೆದು ಕಳ್ಳರು ಪರಾರಿಯಾಗಿದ್ದಾರೆ ಎಂದು ವರದಿಯಾಗಿದೆ.

ಗ್ರಾಮದ ಹೊರ ವಲಯದಲ್ಲಿ ಕುರಿ ಮೇಯಿಸುತ್ತಿದ್ದಾಗ ದ್ವಿಚಕ್ರ ವಾಹನದಲ್ಲಿ ಬಂದ ಇಬ್ಬರು ನಿಮ್ಮ ಮಗ ಸಾಲ ಪಾವತಿಸಿಲ್ಲ. ಈ ಕೂಡಲೇ ಹಣ ಕೊಡಬೇಕು, ಇಲ್ಲವಾದಲ್ಲಿ ಚಿನ್ನದ ಆಭರಣ ನೀಡಿ ಎಂದಿದ್ದಾರೆ. ನಿಮ್ಮ ಮಗ ಮಾತನಾಡುತ್ತಿದ್ದಾನೆ ಮಾತನಾಡಿ, ಎಂದು ವೃದ್ಧೆಗೆ ಮೊಬೈಲ್ ನೀಡಿದ್ದಾರೆ. ವೃದ್ಧೆಯ ಮಗನ ಧ್ವನಿಯಲ್ಲಿ ಮಾತನಾಡಿ 6 ಗ್ರಾಂ ತೂಕದ ಚಿನ್ನದ ಕಿವಿಯೋಲೆ, ಚೈನ್ ಪಡೆದು ಪರಾರಿಯಾಗಿದ್ದಾರೆ ಎನ್ನಲಾಗಿದೆ.

 

error: Content is protected !!

Join the Group

Join WhatsApp Group