101 ಕೆ.ಜಿ ಜೋಳದ ಚೀಲ ಹೊತ್ತು ಅಂಜನಾದ್ರಿ ಬೆಟ್ಟವೇರಿದ ಹನುಮ ಭಕ್ತ.!

(ನ್ಯೂಸ್ ಕಡಬ)newskadaba.com ಕೊಪ್ಪಳ, ಮಾ. 30  ಹನುಮ ಭಕ್ತನೊಬ್ಬ, ಬರೋಬ್ಬರಿ 101 ಕೆಜಿ ಜೋಳದ ಚೀಲ ಹೊತ್ತು ಅಂಜನಾದ್ರಿ ಬೆಟ್ಟವೇರಿದ್ದಾರೆ.ಕೊಪ್ಪಳ ತಾಲೂಕಿನ ಹನುಮನ ಹಳ್ಳಿ ಬಳಿಯ ಪುರಾಣ ಪ್ರಸಿದ್ಧ ಅಂಜನಾದ್ರಿ ಬೆಟ್ಟವನ್ನು ಹನುಮ ಜನ್ಮಭೂಮಿ ಎಂದೇ ಹೇಳಲಾಗುತ್ತದೆ.

ಅಂತಹ ಅಂಜನಾದ್ರಿ ಬೆಟ್ಟವನ್ನು ಹೀಗೆ 101 ಕೆಜಿ ಭಾರದ ಚೀಲ ಹೊತ್ತು ಏರಿದ ಭಕ್ತನ ಹೆಸರು ರಾಯಪ್ಪ ದಪೇದಾರ್ (46). ಇವರು ಬಾಗಲಕೋಟೆ ಜಿಲ್ಲೆ ಜಮಖಂಡಿ ತಾಲೂಕಿನ ಹುನ್ನೂರು ಗ್ರಾಮದವರು.ಇವರು 1 ಗಂಟೆ 10 ನಿಮಿಷದಲ್ಲಿ 575 ಮೆಟ್ಟಿಲುಗಳನ್ನ ಹತ್ತಿ ಸಾಹಸ ಮೆರೆದಿದ್ದಾರೆ.

 

 

error: Content is protected !!

Join the Group

Join WhatsApp Group