ಜಾನುವಾರು ಹಾಗೂ ನಗದು ದೋಚಿ ಪರಾರಿಯಾಗಿದ್ದ ಆರು ಆರೋಪಿಗಳು ಅರೆಸ್ಟ್..!!!

 (ನ್ಯೂಸ್ ಕಡಬ) newskadaba.com ಆಂಧ್ರಪ್ರದೇಶ, ಜ.03.  ದನಕರುಗಳನ್ನು ಖರೀದಿ ಮಾಡಿದ ವಾಹನದಲ್ಲಿ ಸಾಗಿಸುತ್ತಿದ್ದ ವೇಳೆ ವಾಹನವನ್ನು ಅಡ್ಡಗಟ್ಟಿ ದೊಣ್ಣೆ ಹಾಗೂ ಮಾರಕಾಸ್ತ್ರಗಳಿಂದ ಹಲ್ಲೆ ಮಾಡಿ,ರೂ.51 ಸಾವಿರ ಹಾಗೂ ಏಳು ದನಕರುಗಳನ್ನು ದೋಚಿ ಪರಾರಿಯಾಗಿದ್ದ ಆರು ಆರೋಪಿಗಳನ್ನು ಪೊಲೀಸರು ಬಂಧಿಸಿರುವ ಘಟನೆ ಆಂಧ್ರಪ್ರದೇಶದ ಬಾಗೇಪಲ್ಲಿ ವರದಿಯಾಗಿದೆ.

ಬಂಧಿತರನ್ನು ಚಿಂತಮಾಕಲದಿನ್ನೆಯ ನವೀನ್, ಇಂದೋಕೊರೊಳ್ಳಪಲ್ಲಿಯ ಅಭಿ, ಕಲ್ಲಿಪಲ್ಲಿಯ ಮಹೇಶ್, ಸಜ್ಜಲವಾರಿಪಲ್ಲಿಯ ಮಣಿಕಂಠ, ದೇವನಹಳ್ಳಿಯ ಗಣೇಶ್ ಗಾಹೂ ಸುಧಾಕರ್ ಎಂದು ಗುರುತಿಸಲಾಗಿದೆ.

ಚಿಂತಾಮಣಿ ತಾಲೂಕಿನ ಭತ್ತಲಪಲ್ಲಿ ಗ್ರಾಮದ ಸುರೇಶ, ಶ್ರೀರಾಮಪ್ಪ, ಶ್ರೀನಿವಾಸ ಎಂಬುವರು ಆಂಧ್ರಪ್ರದೇಶದ ಗೋರಂಟ್ಲ ಸಂತೆಯಲ್ಲಿ ಏಳು ದನಕರುಗಳನ್ನು ಖರೀದಿಸಿ, ಅವುಗಳನ್ನು ಟಾಟಾ ಏಸ್ ವಾಹನದಲ್ಲಿ ಸಾಗಿಸುತ್ತಿದ್ದ ವೇಳೆ ತಾಲೂಕಿನ ಗೂಳೂರು ಬಳಿ ಇರುವ ನರಸಾಪುರ ಗ್ರಾಮದ ರಸ್ತೆಯಲ್ಲಿ ದ್ವಿಚಕ್ರ ವಾಹನಗಳಲ್ಲಿ ಬಂದ ದುಷ್ಕರ್ಮಿಗಳು ದನ ಸಾಗಿಸುತ್ತಿದ್ದ ವಾಹನವನ್ನು ಆಡ್ಡಗಟ್ಟಿದ್ದಾರೆ ಎನ್ನಲಾಗಿದೆ.

error: Content is protected !!

Join the Group

Join WhatsApp Group