ಭೀಕರ ರಸ್ತೆ ಅಪಘಾತ ➤ ಮೂವರು ಸ್ಥಳದಲ್ಲೇ ಮೃತ್ಯು

(ನ್ಯೂಸ್ ಕಡಬ) newskadaba.com ಆನೇಕಲ್, ಡಿ.13. ಕೆಲಸ ಮುಗಿಸಿ ಮನೆಗೆ ಹಿಂತಿರುಗುತ್ತಿದ್ದ ಪಾದಾಚಾರಿಗಳಿಗೆ ಹಿಂದಿನಿಂದ ವೇಗವಾಗಿ ಬಂದ ಐಷರ್ ವಾಹನವೊಂದು  ಢಿಕ್ಕಿ ಹೊಡೆದ ಪರಿಣಾಮ ಮೂವರು ಸ್ಥಳದಲ್ಲೇ ಮೃತಪಟ್ಟ ಘಟನೆ ಬೆಂಗಳೂರು ಹೊರವಲಯದ  ಆನೇಕಲ್ –ಅತ್ತಿಬೆಲೆ ರಸ್ತೆಯ ಮಾಯಾಸಂದ್ರದ ಬಳಿ ನಡೆದಿದೆ.

 ಮೃತಪಟ್ಟವರನ್ನು ಚಂದನ್ ದಾಸ್ (25), ಆಸಿಮ್ ದೆಯರಿ (25) ಮತ್ತು ಕರಣ್ ಬಿಸುಮತರಿ (27) ಎಂದು ಗುರುತಿಸಲಾಗಿದೆ. ಇವರು ಕೆಲಸ ಮುಗಿಸಿ ಮನೆಗೆ ಹಿಂತಿರುಗುತ್ತಿದ್ದ ವೇಳೆ ಈ ದುರ್ಘಟನೆ ಸಂಭವಿಸಿದೆನ್ನಲಾಗಿದೆ. ಮೃತಪಟ್ಟವರೆಲ್ಲ ಅಸ್ಸಾಂ ಮೂಲದವರಾಗಿದ್ದು, ಮಾಯಸಂದ್ರದ ಬಾಡಿಗೆ ಮನೆಯಲ್ಲಿ ವಾಸವಿದ್ದರು ಎನ್ನಲಾಗಿದೆ.

error: Content is protected !!

Join the Group

Join WhatsApp Group