ದಂಪತಿಗಳ ನಡುವೆ ಕಲಹ ➤‌ ಪತಿಯ ಗುಂಡೇಟಿಗೆ ಪತ್ನಿ ಬಲಿ..!!

(ನ್ಯೂಸ್ ಕಡಬ) newskadaba.com ಮಡಿಕೇರಿ, ಆ. 10. ದಂಪತಿಯ ನಡುವೆ ಕಲಹವೇರ್ಪಟ್ಟು, ಪತಿ ಹಾರಿಸಿದ ಗುಂಡು ತಗುಲಿ ಪತ್ನಿ ಮೃತಪಟ್ಟ ಘಟನೆ ಕುಶಾಲನಗರ ತಾಲೂಕಿನ ಚೆಟ್ಟಳ್ಳಿಯ ಚೇರಳ ಶ್ರೀಮಂಗಲ ಗ್ರಾಮದಲ್ಲಿ ನಡೆದಿದೆ.

 

ಮೃತಪಟ್ಟವರನ್ನು ಬಟ್ಟೀರ ಷಷ್ಮ (44) ಎಂದು ಗುರುತಿಸಲಾಗಿದೆ. ಪತಿ ಬಟ್ಟೀರ ಗೋಪಾಲ (ಕಿಶನ್) ಗುಂಡು ಹಾರಿಸಿದ ಆರೋಪಿ. ಇವರಿಬ್ಬರ ನಡುವೆ ಮಂಗಳವಾರದಂದು ರಾತ್ರಿ ಗಲಾಟೆ ನಡೆದು, ಈ ದುರ್ಘಟನೆ ಸಂಭವಿಸಿದೆನ್ನಲಾಗಿದೆ. ಘಟನೆಯ ಕುರಿತು ಮಡಿಕೇರಿ ಗ್ರಾಮಾಂತರ ಪೊಲೀಸರು ಆರೋಪಿ ಗೋಪಾಲನನ್ನು ವಶಕ್ಕೆ ಪಡೆದು ತನಿಖೆ ಮುಂದುವರೆಸಿರುವುದಾಗಿ ತಿಳಿದುಬಂದಿದೆ.

Also Read  ಶ್ರೀ ಕಾರ್ಯಸಿದ್ದಿ ಆಂಜನೇಯ ಸ್ವಾಮಿ ಜ್ಯೋತಿಷ್ಯಂ - ದಿನ ಭವಿಷ್ಯ

error: Content is protected !!
Scroll to Top