ಬ್ಲೇಡ್ ನಿಂದ ಕತ್ತು ಹಾಗೂ ಕೈ ಕೊಯ್ದುಕೊಂಡು ಠಾಣೆಯ ಎದುರೇ ವಿಕೃತಿ ಮೆರೆದ ಯುವಕ…!

(ನ್ಯೂಸ್ ಕಡಬ) newskadaba.com ಕುಣಿಗಲ್, ಜು. 08. ಕುಟುಂಬ ಕಲಹದಿಂದ ಬೇಸತ್ತ ಯುವಕನೋರ್ವ ಕುಣಿಗಲ್ ಪೊಲೀಸ್ ಠಾಣೆ ಎದುರೇ ಬ್ಲೇಡ್ ನಿಂದ ಕತ್ತು ಹಾಗೂ ಕೈ ಕೊಯ್ದುಕೊಂಡು ಹುಚ್ಚಾಟ ಮೆರೆದ ಘಟನೆ ಶುಕ್ರವಾರದಂದು ನಡೆದಿದೆ.


ಹುಚ್ಚಾಟ ಮೆರೆದ ಯುವಕನನ್ನು ಕುಣಿಗಲ್ ತಾಲೂಕಿನ ಕಸಬಾ ಹೋಬಳಿ ಬಿಳಿದೇವಾಲಯ ಗ್ರಾಮದ ನಿವಾಸಿ ಅಬ್ರಾಜ್ ಎಂದು ಗುರುತಿಸಲಾಗಿದೆ. ಕೌಟುಂಬಿಕ ಕಲಹದಿಂದಾಗಿ ಅಬ್ರಾಜ್ ನ ವಿರುದ್ದ ಪತ್ನಿ ಕುಣಿಗಲ್ ಪೊಲೀಸ್ ಠಾಣೆಯಲ್ಲಿ ದೂರು ನೀಡಲು ಬಂದಿದ್ದು, ಈ ವೇಳೆ ಅಲ್ಲಿಗೆ ಬಂದ ಅಬ್ರಾಜ್ ಶೆರ್ಟ್ ಬಿಚ್ಚಿ‌, ಬ್ಲೇಡ್ ನಿಂದ ಕತ್ತು ಹಾಗೂ ಕೈ ಕೊಯ್ದುಕೊಂಡು ಹುಚ್ಚಾಟ ಮೆರೆದಿದ್ದಾನೆ. ಇದೀಗ ಆತನೇ ಸ್ವತಃ ಸರ್ಕಾರಿ ಆಸ್ಪತ್ರೆಗೆ ತೆರಳಿ ಚಿಕಿತ್ಸೆ ಪಡೆಯುತ್ತಿದ್ದಾನೆ ಎಂದು ತಿಳಿದುಬಂದಿದೆ.

Also Read  ಕಾಸರಗೋಡಿನ ಪ್ರಥಮ ಮಹಿಳಾ S. P ಯಾಗಿ ಕನ್ನಡತಿ ➤ ಡಿ.ಶಿಲ್ಫಾ ನೇಮಕ

error: Content is protected !!
Scroll to Top