ಬೆಳ್ಳಾರೆ: ಫೇಸ್ ಬುಕ್ ನಲ್ಲಿ ಪ್ರವಾದಿ ನಿಂದನೆ ➤ ಆರೋಪಿ ಬಂಧನ

(ನ್ಯೂಸ್ ಕಡಬ) newskadaba.com ಸುಳ್ಯ, ನ. 16. ಫೇಸ್‌ಬುಕ್‌ ನಲ್ಲಿ ಪ್ರವಾದಿಯನ್ನು ಅಶ್ಲೀಲ ಪದಗಳಿಂದ ನಿಂದನೆಗೈದ ಆರೋಪಕ್ಕೆ‌ ಸಂಬಂಧಿಸಿ ಯುವಕನೋರ್ವನನ್ನು ಬೆಳ್ಳಾರೆ ಪೊಲೀಸರು ಬಂಧಿಸಿದ್ದಾರೆ.


ಬಂಧಿತನನ್ನು ಐವರ್ನಾಡು ಗ್ರಾಮದ ಕೈವಲಡ್ಕ ನಿವಾಸಿ ಜಗದೀಶ್ ಕೈವಲ್ತಡ್ಕ ಎಂದು ಗುರುತಿಸಲಾಗಿದೆ. ಈತ ಒಂದು ವಾರದ ಹಿಂದೆ ತನ್ನ ಫೇಸ್‌ಬುಕ್ ಖಾತೆಯಲ್ಲಿ ಅವಹೇಳನಕಾರಿ ಪದವನ್ನು ಬಳಸಿ ಪ್ರವಾದಿಯವರನ್ನು ನಿಂದಿಸಿದ್ದನು. ಈ ಕುರಿತು ಬೆಳ್ಳಾರೆ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

error: Content is protected !!
Scroll to Top