ಕಡಬ: ಮೂರನೇ ವರ್ಷದ ಜನೌಷಧಿ ದಿನಾಚರಣೆ ಹಿನ್ನೆಲೆ ➤ ತಾಲೂಕಿನ ವಿವಿಧೆಡೆ ಉಚಿತ ರಕ್ತದೊತ್ತಡ ಹಾಗೂ ಮಧುಮೇಹ ತಪಾಸಣಾ ಶಿಬಿರ

(ನ್ಯೂಸ್ ಕಡಬ) newskadaba.com ಕಡಬ, ಫೆ. 26. ಮೂರನೇ ವರ್ಷದ ಜನ ಔಷಧಿ ದಿನಾಚರಣೆಯ ಪ್ರಯುಕ್ತ ದಕ್ಷಿಣ ಕನ್ನಡ ಜನೌಷಧಿ ಕೇಂದ್ರದ ಒಕ್ಕೂಟದ ವತಿಯಿಂದ ಕಡಬ ತಾಲೂಕಿನ ವಿವಿಧೆಡೆ ನಾಲ್ಕು ದಿನಗಳ ಕಾಲ ಉಚಿತ ರಕ್ತದೊತ್ತಡ ಹಾಗೂ ಮಧುಮೇಹ ತಪಾಸಣಾ ಶಿಬಿರವನ್ನು ಆಯೋಜಿಸಲಾಗಿದೆ.

 

ಮಾ. 01ರಂದು ಕಡಬದ ಜನೌಷಧಿ ಕೇಂದ್ರ, ಮಾ. 02. ಕಡಬ ಕೃಷಿ ಪತ್ತಿನ ಸಹಕಾರಿ ಸಂಘದ ಮರ್ಧಾಳ ಶಾಖೆ, ಮಾ. 03ರಂದು ಕಡಬ ಕೃ.ಪ.ಸ. ಸಂಘದ ನೂಜಿಬಾಳ್ತಿಲ ಶಾಖೆ, ಮಾ. 04ರಂದು ಕಡಬ ಕೃ.ಪ.ಸ. ಸಂಘದ ಕೊಣಾಜೆ ಶಾಖೆಯಲ್ಲಿ ಉಚಿತ ರಕ್ತದೊತ್ತಡ ಹಾಗೂ ಮಧುಮೇಹ ಶಿಬಿರ ನಡೆಯಲಿದೆ‌.

Also Read  ಅರಂತೋಡು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶ್ರಮದಾನ

error: Content is protected !!
Scroll to Top