ಗೇರು ಬೀಜ ಕಾರ್ಖಾನೆಯಲ್ಲಿ ಕಳ್ಳತನ ಪ್ರಕರಣ ➤ ಇಬ್ಬರು ಆರೋಪಿಗಳ ಬಂಧನ

(ನ್ಯೂಸ್ ಕಡಬ) newskadaba.com ಉಡುಪಿ . 30: ಗೇರು ಬೀಜ ಕಾರ್ಖಾನೆಯಲ್ಲಿನ ಕಳ್ಳತನದ ಪ್ರಕರನಣಕ್ಕೆ ಸಂಬಂಧಿಸಿದಂತೆ ಇಬ್ಬರನ್ನು ಬಂಧಿಸಿದ್ದಾರೆ.  ಬಂಧಿತರನ್ನು ಪುತ್ತೂರಿನ ಮೊಟ್ಟೆತಡ್ಕ ಸೈಯದ್ ಮೊಹಮ್ಮದ್ (37) ಬಂಟ್ವಾಳ ಮಿತ್ತೂರು ಉಮರ್ ಫಾರೂಕ್ (36) ಬಂಧಿತರಿಂದ ಮಾರುತಿ ಸುಝುಕಿ ಕಾರು, ಮತ್ತು ಕಾರ್ಖಾನೆಯಿಂದ ಕಳವಾದ 1.40 ಲಕ್ಷ ಮೌಲ್ಯದ 32 ಗೇರು ಬೀಜ ಡಬ್ಬ ಮೂರು ಮೊಬೈಲ್ ವಶಪಡಿಸಿಕೊಳ್ಳಲಾಗಿದೆ.

ಆರೋಪಿಗಳನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರು ಪಡಿಸಿ ಪೊಲೀಸ್ ಕಸ್ಟಡಿಗೆ ಪಡೆಯಲಾಗಿದೆ. ಆರೋಪಿಗಳ ವಿರುದ್ಧ ಉಡುಪಿ ಹೆಬ್ರಿ ಮತ್ತು ಅಜೆಕಾರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಕಾರ್ಯಾಚರಣೆಯಲ್ಲಿ ಬ್ರಹ್ಮಾಹರ ಠಾಣೆಯ ಪೊಲೀಸ್ ಉಪ ನಿರೀಕ್ಷಕರು, ಸಿಬ್ಬಂದಿಗಳು ಸಹಕರಿಸಿದ್ದಾರೆ.

 

 

 

 

 

error: Content is protected !!

Join the Group

Join WhatsApp Group