ಪ್ರಾಣದೇವರ ಅನುಗ್ರಹದಿಂದ ಇಂದಿನ ದ್ವಾದಶ ರಾಶಿಗಳ ಫಲವನ್ನು ನೋಡೋಣ.

ಶ್ರೀ ಆಂಜನೇಯಸ್ವಾಮಿ ಅನುಗ್ರಹದಿಂದ ಈ ದಿನದ ದ್ವಾದಶ ರಾಶಿಗಳ ಫಲಾಫಲಗಳ ಬಗ್ಗೆ ತಿಳಿಯೋಣ.
ಖ್ಯಾತ ಜ್ಯೋತಿಷ್ಯರು ಶ್ರೀ ಗಿರಿಧರ ಭಟ್
ವಿದ್ಯೆ, ಉದ್ಯೋಗ, ವ್ಯಾಪಾರ, ವ್ಯವಹಾರ, ಪ್ರೇಮ ವಿಚಾರ, ದಾಂಪತ್ಯ ಕಲಹ, ಸಂತಾನ, ಆರೋಗ್ಯ, ಆರ್ಥಿಕ, ಸಾಲಬಾದೆ, ಶತ್ರುಬಾಧೆ, ಇನ್ನಿತರ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ನಿಶ್ಚಿತ.
ಸಮಸ್ಯೆ ನಿಮ್ಮದು ಪರಿಹಾರ ನಮ್ಮದು
ಭವಿಷ್ಯದ ಕನಸು ನನಸಾಗಲು ಇಂದೇ ಕರೆ ಮಾಡಿ
9945410150

ಮೇಷ ರಾಶಿ
ಕೆಲವರನ್ನು ನಂಬಿ ಪ್ರಸ್ತುತ ವಿಚಾರಗಳಲ್ಲಿ ಸಿಲುಕಬಹುದು ಎಚ್ಚರವಿರಲಿ. ಅಡ್ಡದಾರಿ ಹಿಡಿಯುವ ಯೋಜನೆ ಒಳ್ಳೆಯದಲ್ಲ. ಬಂದಿರುವ ಅವಕಾಶವನ್ನು ಪರಿಶೀಲಿಸಿ ತೆಗೆದುಕೊಳ್ಳುವುದು ಒಳ್ಳೆಯದು. ದೈಹಿಕ ಕ್ಷಮತೆ ಕುಂದಬಹುದು ಆದಷ್ಟು ವ್ಯಾಯಾಮ ಮಾಡುವುದು ಒಳಿತು. ಹಳೆಯ ಸಮಸ್ಯೆಗಳಲ್ಲಿ ಕಾಲಹರಣ ಮಾಡುವುದು ಬೇಡ. ಮುಂದಿನ ದಾರಿ ನೋಡಿಕೊಳ್ಳಿ.
ಜ್ಯೋತಿಷ್ಯರು ಗಿರಿಧರ ಭಟ್
9945410150
ಮಾಹಿತಿಗಾಗಿ ಕರೆ ಮಾಡಿ

ವೃಷಭ ರಾಶಿ
ಹಳೆಯ ಸ್ನೇಹಿತರು ಭೇಟಿಯಾಗುವ ಸಾಧ್ಯತೆ ಕಂಡುಬರುತ್ತದೆ. ನಿಮ್ಮ ಕೆಲವು ಆಲೋಚನೆಗಳು ಬದಲಾವಣೆ ಮಾಡಿಕೊಳ್ಳಬಹುದಾಗಿದೆ. ಕೆಲಸದ ವಿಚಾರವಾಗಿ ವೈಮನಸ್ಸು ಸೃಷ್ಟಿಯಾಗಬಹುದು. ಪೋಷಕರ ವಿಚಾರಗಳನ್ನು ರೂಢಿಸಿಕೊಳ್ಳುವುದು ಒಳಿತು. ಹಳೆಯ ತಪ್ಪುಗಳು ಮರುಕಳಿಸದಂತೆ ನೋಡಿಕೊಳ್ಳಿ. ನಿಮ್ಮ ಶಕ್ತಿ ಹಾಗೂ ಯುಕ್ತಿಯನ್ನು ನಂಬಿ ಕಾರ್ಯಗಳಲ್ಲಿ ಪಾಲ್ಗೊಳ್ಳಿ.
ಜ್ಯೋತಿಷ್ಯರು ಗಿರಿಧರ ಭಟ್
9945410150
ಮಾಹಿತಿಗಾಗಿ ಕರೆ ಮಾಡಿ

ಮಿಥುನ ರಾಶಿ
ಇನ್ನೊಬ್ಬರ ವಿಚಾರಗಳಲ್ಲಿ ಅನಗತ್ಯವಾಗಿ ಪ್ರವೇಶಿಸುವುದು ಒಳಿತಲ್ಲ. ನಿಮಗೆ ಪ್ರೋತ್ಸಾಹ ನೀಡಬಹುದಾದ ಕದನ, ಕಲಹ ದಂತಹ ವಿಷಯಗಳಿಗೆ ಆದಷ್ಟು ಎಚ್ಚರವಿರಲಿ. ಸುಖಾಸುಮ್ಮನೆ ವಾಗ್ದಾನ ನೀಡಿ ಸಿಲುಕಬೇಡಿ. ಮಾನಸಿಕ ಆರೋಗ್ಯವನ್ನು ಸರಿಪಡಿಸಿಕೊಳ್ಳಿ. ಸಂಗಾತಿಯೊಡನೆ ಇರುವ ಭಿನ್ನಾಭಿಪ್ರಾಯವನ್ನು ಆದಷ್ಟು ಸರಿಪಡಿಸಲು ಹಿರಿಯರ ಮಾರ್ಗದರ್ಶನ ಪಡೆಯಿರಿ. ಆರ್ಥಿಕ ವ್ಯವಹಾರಗಳ ಬಗ್ಗೆ ಎಚ್ಚರವಿರಲಿ. ಭಯಗ್ರಸ್ಥ ವಾತಾವರಣವನ್ನು ತೆಗೆದುಹಾಕಿ.
ಜ್ಯೋತಿಷ್ಯರು ಗಿರಿಧರ ಭಟ್
9945410150
ಮಾಹಿತಿಗಾಗಿ ಕರೆ ಮಾಡಿ

ಕರ್ಕಾಟಕ ರಾಶಿ
ಮಾತಿಗಿಂತ ಕೃತಿ ಬಹುಮುಖ್ಯ ಎಂಬುದನ್ನು ನೆನಪಿಡಿ. ಯಶಸ್ವಿಗೆ ಶ್ರಮ ಅಗತ್ಯವಿದೆ, ಆದಷ್ಟು ಸೋಮಾರಿತನವನ್ನು ತೆಗೆದುಹಾಕಿ. ಕೆಲವರು ಹೊಗಳಬಹುದು ಅಥವಾ ನಿಮ್ಮನ್ನು ನೀವೇ ಉತ್ತಮ ದರ್ಜೆಯಲ್ಲಿ ತೋರ್ಪಡಿಸಿ ಕೊಳ್ಳಬಹುದು ಇವುಗಳು ಶಾಶ್ವತವಲ್ಲ ಬದುಕಿನ ಗೆಲುವಿಗೆ ನಿರಂತರ ಹೋರಾಟ ಅನಿವಾರ್ಯ. ನಿಮ್ಮಲ್ಲಿನ ಬೇಜವಾಬ್ದಾರಿತನದಿಂದ ಇಂದು ಕೆಲವು ಸಂಕಷ್ಟಗಳು ಈಡಾಗಬಹುದು ಎಚ್ಚರ. ಕೆಲವು ಆಮಂತ್ರಣಗಳು ನಿಮಗೆ ಸಭೆ-ಸಮಾರಂಭಗಳಲ್ಲಿ ಪಾಲ್ಗೊಳ್ಳುವ ಮನಸ್ಥಿತಿ ತರಲಿದೆ. ಆದಷ್ಟು ನಿಮ್ಮ ಕೆಲಸವನ್ನು ನೀವೇ ಮೊದಲು ಮಾಡಲು ಮುಂದಾಗಿ.
ಜ್ಯೋತಿಷ್ಯರು ಗಿರಿಧರ ಭಟ್
9945410150
ಮಾಹಿತಿಗಾಗಿ ಕರೆ ಮಾಡಿ

ಸಿಂಹ ರಾಶಿ
ನೀವು ಈ ದಿನ ಪರಿಶ್ರಮ ಹಾಗೂ ಹೆಚ್ಚಿನ ಒತ್ತಡ ಅನುಭವಿಸುತ್ತೀರಿ. ಕೆಲವು ವ್ಯವಹಾರಗಳು ನಿಮ್ಮ ಇಚ್ಛೆಯ ವಿರುದ್ಧವಾಗಿ ನಡೆಯಬಹುದು. ಹಣಕಾಸಿನಲ್ಲಿ ಸ್ವಲ್ಪಮಟ್ಟಿಗೆ ಹಿನ್ನಡೆಯಾಗಲಿದೆ. ನಿಮ್ಮ ಮನಸ್ಸು ಗೊಂದಲ ಮತ್ತು ಅಸಮತೋಲನದಿಂದ ವರ್ತಿಸಬಹುದು ಆದಷ್ಟು ನೀವು ಮಾನಸಿಕ ವ್ಯಾಯಾಮ ಮಾಡುವುದು ಒಳ್ಳೆಯದು. ಸಣ್ಣಪುಟ್ಟ ವಿಷಯಗಳನ್ನು ಹೆಚ್ಚಾಗಿ ಚರ್ಚಿಸಿ ಅಥವಾ ಚಿಂತೆಗೆ ತೆಗೆದುಕೊಂಡು ಕೊರಗುವುದು ಸರಿಯಲ್ಲ. ಪತ್ನಿಯ ಹಿತನುಡಿಗಳು ಹಾಗೂ ಪ್ರೇಮಭರಿತ ನೋಟವು ನಿಮಗೆ ಸಮಾಧಾನ ತರಲಿದೆ.
ಜ್ಯೋತಿಷ್ಯರು ಗಿರಿಧರ ಭಟ್
9945410150
ಮಾಹಿತಿಗಾಗಿ ಕರೆ ಮಾಡಿ

ಕನ್ಯಾ ರಾಶಿ
ನಿಮ್ಮ ಕಾರ್ಯಕ್ರಮವನ್ನು ವ್ಯವಸ್ಥಿತವಾಗಿ ದಾರಿತಪ್ಪಿಸುವ ಜನರಿದ್ದಾರೆ ಎಚ್ಚರವಿರಲಿ. ಉತ್ತಮ ಸ್ನೇಹಿತರ ಸಹವಾಸ ಮಾಡುವುದು ಒಳಿತು. ಈ ದಿನ ರಾಜಿಸಂಧಾನಗಳಲ್ಲಿ ನೀವು ಪಾಲ್ಗೊಳ್ಳದಿರುವುದು ಸೂಕ್ತ, ಇಲ್ಲದಿದ್ದಲ್ಲಿ ಪಕ್ಷಪಾತಿ ಎಂಬ ಹಣೆಪಟ್ಟಿ ಬರಬಹುದು ಎಚ್ಚರ. ಹಣಕಾಸಿನ ವಿಚಾರಗಳು ಸ್ಥಿರತೆಯಿಂದ ಕೂಡಿದ್ದು ಯಾವುದೇ ತೊಂದರೆಗಳಿಲ್ಲದೆ ನಡೆಯಲಿದೆ. ಕೆಲವರು ತಮ್ಮ ಇಚ್ಛೆಯಂತೆ ನಿಮ್ಮ ಮೇಲೆ ಒತ್ತಡ ತರಬಹುದು ಆದಷ್ಟು ತಾವು ಒಪ್ಪಿಕೊಳ್ಳದಿರುವುದು ಸೂಕ್ತ.
ಜ್ಯೋತಿಷ್ಯರು ಗಿರಿಧರ ಭಟ್
9945410150
ಮಾಹಿತಿಗಾಗಿ ಕರೆ ಮಾಡಿ

ತುಲಾ ರಾಶಿ
ಮನಸ್ಸಿನ ಚಂಚಲತೆಗೆ ಆಸ್ಪದ ನೀಡಬೇಡಿ. ನಿಮ್ಮಲ್ಲಿ ಮೂಡುವ ಆಲೋಚನೆಗಳು ಉತ್ತಮವಾಗಿರಲಿ ಅದನ್ನು ಸಕಾರಾತ್ಮಕ ಗೊಳಿಸಲು ಧೈರ್ಯದಿಂದ ಮುನ್ನಡೆಯಿರಿ. ವೈಯಕ್ತಿಕ ಸಮಸ್ಯೆಗಳಿಂದ ನಿಮ್ಮಲ್ಲಿ ಕಳಾಹೀನ ವಾಗಬಹುದು ಸಮಸ್ಯೆಗಳಿಗೆ ಪರಿಹಾರ ಇದೆ ಅವುಗಳನ್ನು ಹುಡುಕಿ. ಸ್ನೇಹಿತರೊಡನೆ ಮನಸ್ತಾಪ ವಾಗುವ ಬರಬಹುದು ಆದಷ್ಟು ವಿವೇಚನೆಯಿಂದ ವರ್ತಿಸಿ.
ಜ್ಯೋತಿಷ್ಯರು ಗಿರಿಧರ ಭಟ್
9945410150
ಮಾಹಿತಿಗಾಗಿ ಕರೆ ಮಾಡಿ

ವೃಶ್ಚಿಕ ರಾಶಿ
ಆತ್ಮೀಯರು ನಿಮಗೆ ನೋವು ತರಬಹುದಾಗಿದೆ. ನಿಮ್ಮ ವಿಚಾರಗಳನ್ನು ಬೇರೆಯ ರೀತಿಯಲ್ಲಿ ಅರ್ಥೈಸಿಕೊಳ್ಳಬಹುದು. ಉದ್ಯೋಗದಲ್ಲಿ ಮುಜುಗರ ತರುವಂಥ ಪ್ರಸಂಗಗಳು ನಡೆಯಬಹುದು. ಆದಷ್ಟು ಈ ದಿನ ವಿವೇಚನೆಯಿಂದ ವರ್ತಿಸುವುದು ಒಳಿತು. ಸಾಂಪ್ರದಾಯಿಕ ಕರಕುಶಲಕರ್ಮಿಗಳಿಗೆ ಲಾಭದಾಯಕ ದಿನವಿದು.
ಜ್ಯೋತಿಷ್ಯರು ಗಿರಿಧರ ಭಟ್
9945410150
ಮಾಹಿತಿಗಾಗಿ ಕರೆ ಮಾಡಿ

ಧನಸ್ಸು ರಾಶಿ
ಆತುರದ ನಿರ್ಣಯಗಳಿಂದ ಸಮಸ್ಯೆಗಳಲ್ಲಿ ಸಿಲುಕುವಿರಿ. ನಿಮ್ಮ ನಿರ್ಧಾರಗಳನ್ನು ಆದಷ್ಟು ಪರಿಶೀಲಿಸಿ ಮುಂದುವರಿಯುವುದು ಸೂಕ್ತ. ಹಿರಿಯರ ಉದಾತ್ತ ಗುಣಗಳನ್ನು ಪಾಲಿಸುವುದು ಒಳಿತು. ಕೆಲಸದಲ್ಲಿ ತಪ್ಪಾಗದಂತೆ ಕಾರ್ಯವನ್ನು ಮಾಡಿರಿ.
ಜ್ಯೋತಿಷ್ಯರು ಗಿರಿಧರ ಭಟ್
9945410150
ಮಾಹಿತಿಗಾಗಿ ಕರೆ ಮಾಡಿ

ಮಕರ ರಾಶಿ
ದುಷ್ಟರ ಸಹವಾಸದಿಂದ ನಿಮ್ಮ ಹೆಸರಿಗೆ ಕಳಂಕಬರಬಹುದು ಎಚ್ಚರವಿರಲಿ, ಆದಷ್ಟು ಸ್ನೇಹವನ್ನು ಅಳೆದು-ತೂಗಿ ಮಾಡುವುದು ಒಳ್ಳೆಯದು. ಆರ್ಥಿಕ ವ್ಯವಹಾರಗಳಲ್ಲಿ ಜಾಗ್ರತೆಯಿಂದ ವರ್ತಿಸಿ. ಕುಲದೇವತಾರಾದನೆ ಮಾಡುವುದು ಒಳ್ಳೆಯದು. ಸಂಗಾತಿಯಿಂದ ವಿಶೇಷ ಸಂಗತಿಗಳನ್ನು ಕಲಿಯಲಿದ್ದೀರಿ.
ಜ್ಯೋತಿಷ್ಯರು ಗಿರಿಧರ ಭಟ್
9945410150
ಮಾಹಿತಿಗಾಗಿ ಕರೆ ಮಾಡಿ

ಕುಂಭ ರಾಶಿ
ಈ ದಿನ ಸಮಸ್ಯೆಗಳನ್ನು ಸೂಕ್ತವಾಗಿ ಪರಿಹರಿಸಿಕೊಂಡು ನಿರಾಳರಾಗುವಿರಿ. ಅನಿರೀಕ್ಷಿತವಾಗಿ ಆರ್ಥಿಕ ಮೂಲಗಳು ವೃದ್ಧಿಯಾಗಲಿದೆ. ಹಿರಿಯರಿಂದ ಭವಿಷ್ಯಕ್ಕೆ ಬೇಕಾಗುವ ಅನುಕೂಲಗಳು ಪ್ರಾಪ್ತಿಯಾಗುತ್ತದೆ. ಸಹೋದರ ವರ್ಗದಲ್ಲಿ ಮನಸ್ತಾಪ ಬರಬಹುದು. ಸಂಗಾತಿಯೊಡನೆ ಪ್ರವಾಸ ಮಾಡುವ ಚಿಂತನೆ ನಡೆಸುವಿರಿ.
ಜ್ಯೋತಿಷ್ಯರು ಗಿರಿಧರ ಭಟ್
9945410150
ಮಾಹಿತಿಗಾಗಿ ಕರೆ ಮಾಡಿ

ಮೀನ ರಾಶಿ
ನಿಮ್ಮ ಆಂತರಿಕ ಮನಸ್ಸಿನಲ್ಲಿ ಯಾವುದೋ ಅನಗತ್ಯವಾಗಿ ಚಿಂತೆಗಳು ಕಿರಿಕಿರಿ ಮಾಡುತ್ತದೆ. ಕೆಲವು ಕೆಲಸ ಅಥವಾ ಸಂಬಂಧಗಳಲ್ಲಿ ಹಿನ್ನಡೆ ಕಾಣಬಹುದು. ಕೋಪದ ಸ್ವಭಾವ ಹಾನಿ ಮಾಡಬಹುದು ಎಚ್ಚರವಿರಲಿ. ಮಕ್ಕಳ ವರ್ತನೆ ಬೇಸರ ತರಿಸಲಿದೆ. ಕೆಲಸದಲ್ಲಿ ಅನಗತ್ಯವಾಗಿ ಕಿರಿಕಿರಿ ಹೆಚ್ಚಾಗುತ್ತದೆ. ಹಿರಿಯರ ಆರೋಗ್ಯದಲ್ಲಿ ಎಚ್ಚರಿಕೆ ವಹಿಸಿ. ಸಂಜೆಯ ವೇಳೆಗೆ ಧನಾಗಮನ ಸುದ್ದಿಯು ಸಂತೋಷ ತರಿಸುತ್ತದೆ.
ಜ್ಯೋತಿಷ್ಯರು ಗಿರಿಧರ ಭಟ್
9945410150
ಮಾಹಿತಿಗಾಗಿ ಕರೆ ಮಾಡಿ

ಜ್ಯೋತಿಷ್ಯರು ಗಿರಿಧರ ಭಟ್
ನಿಮ್ಮ ಇಷ್ಟಾರ್ಥ ಕಾರ್ಯಸಿದ್ದಿ ಆಗಲು, ಸಮಸ್ಯೆಗಳಿಂದ ವಿಮುಕ್ತ ರಾಗಲು, ಭವಿಷ್ಯದ ಕನಸು ನನಸಾಗಲು ಇಂದೇ ಕರೆ ಮಾಡಿ.
9945410150

error: Content is protected !!

Join the Group

Join WhatsApp Group