ತಲಪಾಡಿಯಲ್ಲಿ ಸೇತುವೆ ಢಿಕ್ಕಿ ಹೊಡೆದ ಪಿಕಪ್: ಚಾಲಕನಿಗೆ ಗಾಯ

ಉಳ್ಳಾಲ, ಮಾ.3: ಚಾಲಕನ ನಿಯಂತ್ರಣ ತಪ್ಪಿದ ಮೀನು ಸಾಗಾಟದ ಪಿಕಪ್ ವಾಹನ ಸೇತುವೆಗೆ ಢಿಕ್ಕಿ ಹೊಡೆದ ಘಟನೆ ರಾಷ್ಟ್ರೀಯ ಹೆದ್ದಾರಿ 66 ರಲ್ಲಿರುವ ಕೆ.ಸಿ.ರೋಡು ಉಚ್ಚಿಲ ಸೇತುವೆ ಬಳಿ ಇಂದು ಬೆಳಗ್ಗೆ ನಡೆದಿದೆ.

ಚಾಲಕ ನಿದ್ರೆ ಮಂಪರಿನಲ್ಲಿದ್ದುದೇ ಘಟನೆಗೆ ಕಾರಣ ಎನ್ನಲಾಗಿದ್ದು, ಪಿಕಪ್ ಮಂಗಳೂರಿನಿಂದ ಕೇರಳಕ್ಕೆ ಮೀನು ಸಾಗಾಟ ಮಾಡುವ ಸಂದರ್ಭ ಈ ದುರ್ಘಟನೆ ನಡೆದಿದ್ದು, ವಾಹನ ಸಂಪೂರ್ಣ ನಜ್ಜುಗುಜ್ಜಾಗಿದೆ. ಘಟನೆಯಲ್ಲಿ ಪಿಕಪ್ ಚಾಲಕ ಗಾಯಗೊಂಡಿದ್ದಾರೆ.

ಸೇತುವೆ ಕೆಳಗೆ ಹಲವು ಅಡಿ ಆಳಕ್ಕೆ ಬೀಳದೆ ಸೇತುವೆಯಲ್ಲೇ ಸಿಲುಕಿಕೊಂಡಿದ್ದರಿದ ದೊಡ್ಡ ದುರಂತ ತಪ್ಪಿದೆ. ಘಟನೆ ಬಳಿಕ ಕ್ರೇನ್ ಮೂಲಕ ವಾಹನ ಮೇಲೆತ್ತಲಾಯಿತು. ಈ ಬಗ್ಗೆ ಮಂಗಳೂರು ನಾಗುರಿ ಸಂಚಾರಿ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

error: Content is protected !!

Join the Group

Join WhatsApp Group