Big Breaking news ಪೇಜಾವರ ಶ್ರೀ ಮಠಕ್ಕೆ ಸ್ಥಳಾಂತರ: ಭಾರೀ ಪೊಲೀಸ್ ಭದ್ರತೆ

ಉಡುಪಿ, ಡಿ.29: ಕಳೆದ ಎಂಟು ದಿನಗಳಿಂದ ಕೆಎಂಸಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಪೇಜಾವರ ಮಠದ ಶ್ರೀ ವಿಶ್ವೇಶ ತೀರ್ಥ ಸ್ವಾಮೀಜಿಯನ್ನು ರವಿವಾರ ಬೆಳಗ್ಗೆ ಮಠಕ್ಕೆ ಕರೆತರಲಾಗಿದ್ದು, ವೆಂಟಿಲೇಟರ್ ಮೂಲಕ ಚಿಕಿತ್ಸೆ ಮುಂದುವರಿದಿದೆ.

ಮಠ ಹಾಗೂ ಉಡುಪಿಯಲ್ಲಿ ಭಾರಿ ಪೊಲೀಸ್ ಭದ್ರತೆ ಒದಗಿಸಲಾಗಿದೆ. ಸುಮಾರು 700 ಪೊಲೀಸ್ ಸಿಬ್ಬಂದಿ ಭದ್ರತೆಗಾಗಿ ನಿಯೋಜಿಸಲಾಗಿದೆ ಎಂದು ತಿಳಿದು ಬಂದಿದೆ. ಪಲಿಮಾರು ಶ್ರೀ, ಕಿರಿಯ ಶ್ರೀ, ರಾಮಚಂದ್ರ ಮಠದ ರಾಫವೇಂದ್ರ ಶ್ರೀ, ಬಿಜೆಪಿ ಹಿರಿಯ ನಾಯಕಿ ಉಮಾಭಾರತಿ, ಸಂಸದೆ ಶೋಭಾ ಕರಂದ್ಲಾಜೆ, ಉಡುಪಿ ಶಾಸಕ ರಘುಪತಿ ಭಟ್ ಮಠದಲ್ಲಿದ್ದು ಪ್ರತಿಕ್ಷಣದ ಮಾಹಿತಿ ಪಡೆಯುತ್ತಿದ್ದಾರೆ.

error: Content is protected !!

Join the Group

Join WhatsApp Group