ಕಾರ್ಕಳ: ಮಹಿಳೆಯನ್ನು ಅಪಹರಿಸಿ ಕೊಲೆ

ಕಾರ್ಕಳ, ಡಿ.23: ಮಹಿಳೆಯನ್ನು ದುಷ್ಕರ್ಮಿಗಳು ಅಪಹರಿಸಿ ಕೊಲೆ ಮಾಡಿ ಹಾಳೆಕಟ್ಟೆ ಎಂಬಲ್ಲಿ ಖಾಸಗಿ ವ್ಯಕ್ತಿಯೊಬ್ಬರಿಗೆ ಸೇರಿದ ಬಾವಿಗೆ ಎಸೆದಿರುವ ಬಗ್ಗೆ ಡಿ. 22ರಂದು ವರದಿಯಾಗಿದೆ.

 

ಕೊಲೆಯಾದ ಮಹಿಳೆಯನ್ನು ಬೆಳ್ಮಣ್‌ನ ಬೃಂದಾವನ ಮನೆ ನಿವಾಸಿ ದಿವಂಗತ ಹರಿದಾಸ ಉಡುಪರವರ ಪತ್ನಿ ಬಿ.ಭರತ ಲಕ್ಷ್ಮೀ ಎಂದು ಗುುರುತಿಸಲಾಗಿದೆ. ದುಷ್ಕರ್ಮಿಗಳು ಮಹಿಳೆಯನ್ನು ಕೊಲೆಗೈದು ಪ್ಲಾಸ್ಟಿಕ್ ಕವರ್‌ನಲ್ಲಿ ಪ್ಯಾಕ್ ಮಾಡಿ ಹಾಳೆಕಟ್ಟೆ ಎಂಬಲ್ಲಿ ಖಾಸಗಿ ವ್ಯಕ್ತಿಯೊಬ್ಬರಿಗೆ ಸೇರಿದ ಬಾವಿ ಎಸೆದಿದ್ದಾರೆನ್ನಲಾಗಿದೆ. ಡಿಸೆಂಬರ್ 2೦ರಂದು ಬೆಳಿಗ್ಗೆ 7ರಿಂದ ರಾತ್ರಿ 8ರ ಮಧ್ಯಾವಧಿಯಲ್ಲಿ ಇವರು ನಾಪತ್ತೆಯಾಗಿರುವ ಕುರಿತು ಅವರ ಮಗ ಶ್ರೀನಾಥ ಗ್ರಾಮಾಂತರ ಠಾಣೆಗೆ ದೂರು ಸಲ್ಲಿಸಿದ್ದರು. ಈ ಕುರಿತು ಕಾರ್ಕಳ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Also Read  ಅದೃಷ್ಟ ಬದಲಾಗಬೇಕು ನೀವು ಹೋಗುವ ಕೆಲಸ ನಿಮ್ಮಂತೆ ಯಾಗಬೇಕು ಎಂದರೆ ಈ ಒಂದು ವಿಧಾನ ಮಾಡಿ ಕಷ್ಟಗಳು ಪರಿಹಾರವಾಗುತ್ತದೆ

 

error: Content is protected !!
Scroll to Top