ಪುಣ್ಚತ್ತಾರು: ಗಾಳಿ ಮಳೆಗೆ ಮುರಿದಿದ್ದ ಮರದ ಕೊಂಬೆ ➤ ತೋಟದಲ್ಲಿ ನಡೆಯುವಾಗ ತಲೆಗೆ ಬಿದ್ದು ಕಡಬದ ವ್ಯಕ್ತಿ ಮೃತ್ಯು

(ನ್ಯೂಸ್ ಕಡಬ) newskadaba.com ಕಡಬ, ಎ.03. ಮಂಗಳವಾರದಂದು ಸಂಜೆ ಸುರಿದ ಮಳೆಗೆ ಮುರಿದು ಬಿದ್ದಿದ್ದ ಮರವೊಂದು ತಲೆಗೆ ಬಿದ್ದು ಕಡಬದ ವ್ಯಕ್ತಿಯೋರ್ವರು ಆಸ್ಪತ್ರೆಗೆ ಸಾಗಿಸುವ ಹಾದಿ ಮಧ್ಯೆ ಮೃತಪಟ್ಟ ಘಟನೆ ಬುಧವಾರದಂದು ಸಂಭವಿಸಿದೆ.

ಮೃತ ವ್ಯಕ್ತಿಯನ್ನು ಕಡಬ ಗ್ರಾಮದ ಪಣೆಮಜಲು ನಿವಾಸಿ ದಿನೇಶ ಯಾನೆ ನಿತ್ಯಾನಂದ ಗೌಡ(35) ಎಂದು ಗುರುತಿಸಲಾಗಿದೆ. ಕಾಣಿಯೂರು ಸಮೀಪದ ಪುಣ್ಚತ್ತಾರಿನಲ್ಲಿ ಗ್ಯಾರೇಜು ಹೊಂದಿದ್ದ ಇವರು ತನ್ನ ಪತ್ನಿಯ ಮನೆಯಲ್ಲಿದ್ದರೆನ್ನಲಾಗಿದೆ. ಮಂಗಳವಾರದಂದು ಸುರಿದ ಭಾರೀ ಗಾಳಿ – ಮಳೆಗೆ ತೋಟದಲ್ಲಿ ಮುರಿದು ಬಿದ್ದಿದ್ದ ಮರದ ಹತ್ತಿರದಿಂದ ಇಂದು ತೆರಳುತ್ತಿದ್ದಾಗ ತಲೆಗೆ ಮರ ಬಿದ್ದು ಗಂಭೀರ ಗಾಯಗೊಂಡಿದ್ದು, ಆಸ್ಪತ್ರೆಗೆ ಸಾಗಿಸುವ ಹಾದಿ ಮಧ್ಯೆ ಮೃತಪಟ್ಟಿದ್ದಾರೆ ಎನ್ನಲಾಗಿದೆ.

Also Read  ಉಡುಪಿ ಡಿಸಿ ನೇತೃತ್ವದಲ್ಲಿ ದಾಳಿ ➤ ಅಕ್ರಮವಾಗಿ ದಾಸ್ತಾನು ಮಾಡಿದ್ದ ಅನ್ನಭಾಗ್ಯ ಅಕ್ಕಿ ವಶಕ್ಕೆ

error: Content is protected !!
Scroll to Top