ನೆಲ್ಯಾಡಿ ಶಾಲಾ ವಿದ್ಯಾರ್ಥಿ ನಾಪತ್ತೆ

(ನ್ಯೂಸ್ ಕಡಬ) newskadaba.comವೇಣೂರು, ಫೆ.12.ನೆಲ್ಯಾಡಿ ಖಾಸಗಿ ಶಾಲಾ 9ನೇ ತರಗತಿ ವಿದ್ಯಾರ್ಥಿ ಶಾಲೆಗೆಂದು ಹೋದವನು ನಾಪತ್ತೆಯಾದ ಘಟನೆ ಉಪ್ಪಿನಂಗಡಿ ಪೊಲೀಸ್ ಠಾಣೆ ಯಿಂದ ವರದಿಯಾಗಿದೆ.ನಾಪತ್ತೆಯಾದ ವಿದ್ಯಾರ್ಥಿಯನ್ನು ಪುತ್ತೂರು ತಾಲೂಕು, ಕೊಣಾಲು ಗ್ರಾಮದ ಆರ್ಲ ನಿವಾಸಿ ಜಾರ್ಜ್‌ ಕುಟ್ಟಿ ಎಂಬವರ ಪುತ್ರ ಸೆಬಾಸ್ಟಿನ್ ಜಿ. ವಿ. ಎಂದು ಗುರುತಿಸಲಾಗಿದೆ.

 

 

ಸೋಮವಾರ ಮನೆಯಿಂದ ಬೆಳಗ್ಗೆ ಶಾಲಾ ಸಮವಸ್ತ್ರವನ್ನು ಧರಿಸಿಕೊಂಡು ಸ್ಕೂಲ್ ಬ್ಯಾಗಿನೊಂದಿಗೆ ಶಾಲೆಗೆಂದು ಹೋದವನು ಮನೆಗೆ  ಬರಲೇ ಇಲ್ಲ .ಪೋಷಕರು ಶಾಲಾ ಶಿಕ್ಷಕರಲ್ಲಿ ವಿಚಾರಿಸಿದಾಗ  ಸೆಬಾಸ್ಟಿನ್ ಜಿ. ವಿ ಎಂಬವನು ಶಾಲೆಗೆ  ಬಂದಿಲ್ಲ ಎಂದು ಹೇಳಿದರು.ಪೋಷಕರು ಎಷ್ಟು ಹುಡುಕಾಡಿದರೂ ಸೆಬಾಸ್ಟಿನ್ ಪತ್ತೆಯಾಗಿರುವುದಿಲ್ಲ. ಈ ಬಗ್ಗೆ ಉಪ್ಪಿನಂಗಡಿ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.

error: Content is protected !!

Join the Group

Join WhatsApp Group