ಬಂಟ್ವಾಳ: ಗುತ್ತಿಗೆ ಕರಾರು ಪ್ರಕಟಣೆ

(ನ್ಯೂಸ್ ಕಡಬ) newskadaba.com ಬಂಟ್ವಾಳ,ಫೆ.02.ಕರ್ನಾಟಕ ರಾಜ್ಯ ಪತ್ರ ಪ್ರಕಟಣೆ ಸಂ.ವ್ಶಿ22 ಶಾಸನ 2016 ಬೆಂಗಳೂರು ದಿನಾಂಕ 20-06-2017ರಲ್ಲಿ ಪ್ರಕಟಿಸಿದಂತೆ ಪಂಚಾಯತ್‍ನಿಂದ ಕೈಗೊಳ್ಳುವ ಸಿವಿಲ್ ಕಾಮಗಾರಿಗಳಲ್ಲಿ ಅನುಸೂಚಿತ ಜಾತಿಗೆ ಶೇ.17.15 ಹಾಗೂ ಅನುಸೂಚಿತ ಪಂಗಡಕ್ಕೆ 6.95 ನೋಂದಾಯಿತ ಗುತ್ತಿಗೆದಾರರಿಗೆ ಮೀಸಲಿರಿಸಲಾಗಿದೆ.

ನೋಂದಾಯಿತ ಗುತ್ತಿಗೆ ಪರವಾನಿಗೆಯನ್ನು ಹೊಂದಿರುವ ಪ.ಜಾತಿ ಮತ್ತು ಪ.ಪಂಗಡದವರು ಈ ಪ್ರಕಟಣೆ ಹೊರಡಿಸಿದ ದಿನಾಂಕದಿಂದ 15 ದಿನಗಳೊಳಗೆ ಮೇರಮಜಲು ಗ್ರಾಮ ಪಂಚಾಯತ್ ಕಚೇರಿಯನ್ನು ಸಂಪರ್ಕಿಸಬಹುದು ಎಂದು ಅಧ್ಯಕ್ಷರು/ಪಂಚಾಯತ್ ಅಭಿವೃದ್ಧಿ ಅಧಿಕಾರಿ, ಮೇರಮಜಲು ಗ್ರಾಮಪಂಚಾಯತ್, ಮೇರಮಜಲು ಅಂಚೆ, ಮೇರಮಜಲು ಗ್ರಾಮ, ಬಂಟ್ವಾಳ ತಾಲೂಕು, ದಕ್ಷಿಣ ಕನ್ನಡ 574143 ಇವರ ಪ್ರಕಟಣೆ ತಿಳಿಸಿದೆ.

error: Content is protected !!

Join the Group

Join WhatsApp Group