ಪ್ರಧಾನಮಂತ್ರಿ ಉಜ್ವಲ ಯೋಜನೆ- ಎಲ್‌ಪಿಜಿ ಸಂಪರ್ಕ ಒದಗಿಸುವ ಕಾರ್ಯಕ್ರಮ



(ನ್ಯೂಸ್ ಕಡಬ) newskadaba.com.ಮಂಗಳೂರು,ಜ.24.ಪ್ರಧಾನಮಂತ್ರಿ ಉಜ್ವಲ ಯೋಜನೆ- 2ರ ಫಲಾನುಭವಿಗಳಿಗೆ ಎಲ್‌ಪಿಜಿ ಸಂಪರ್ಕ ಒದಗಿಸುವ ಕಾರ್ಯಕ್ರಮವನ್ನು ತೈಲ ಕಂಪೆನಿಗಳು ಜ. 25ರಂದು ಬಿ.ಸಿ. ರೋಡ್‌ನ‌ಲ್ಲಿ ಏರ್ಪಡಿಸಿವೆ.ಬೆಳಗ್ಗೆ 10 ರಿಂದ ಮಧ್ಯಾಹ್ನ 1 ಗಂಟೆ ತನಕ ನಡೆಯುವ ಸಮಾರಂಭದಲ್ಲಿ ಕೇಂದ್ರ ಪೆಟ್ರೋಲಿಯಂ ಖಾತೆಯ ಸಚಿವ ಧರ್ಮೇಂದ್ರ ಪ್ರಧಾನ್‌, ಸಚಿವ ಯು.ಟಿ. ಖಾದರ್‌, ಕೇಂದ್ರ ಕುಡಿಯುವ ನೀರು ಮತ್ತು ಶೌಚಾಲಯ ಅಭಿವೃದ್ಧಿ ಖಾತೆ ರಾಜ್ಯ ಸಚಿವ ರಮೇಶ್‌ ಜಿಗಜಿಣಗಿ, ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸ್ಥಾಯೀ ಸಮಿತಿಯ ಅಧ್ಯಕ್ಷ ಪ್ರಹ್ಲಾದ ಜೋಷಿ, ದಕ್ಷಿಣ ಕನ್ನಡ ಸಂಸದ ನಳಿನ್‌ ಕುಮಾರ್‌ ಕಟೀಲು ಮತ್ತು ಜಿಲ್ಲೆಯ ಎಲ್ಲ ಶಾಸಕರು ಭಾಗವಹಿಸಲಿದ್ದಾರೆ.







2019 ಜನವರಿ 4ರಂದು ಜಿಲ್ಲೆಯಲ್ಲಿ ಪ್ರಧಾನ ಮಂತ್ರಿ ಉಜ್ವಲ ಯೋಜನೆ- 2 ಘೋಷಣೆಯಾದ ಬಳಿಕ ಸುಮಾರು 10,000 ಫಲಾನುಭವಿಗಳು ನೋಂದಾಯಿಸಿದ್ದು, ಅವರಿಗೆ ಉಚಿತ ಗ್ಯಾಸ್‌ ಸಂಪರ್ಕ ಕಲ್ಪಿಸುವ ಬಗ್ಗೆ ಔಪಚಾರಿಕ ಉದ್ಘಾಟನೆ ಅಂದು ನಡೆಯಲಿದೆ.ಪಡಿತರ ಚೀಟಿ, ಆಧಾರ್‌ ನಂಬರ್‌, ಕುಟುಂಬದ ಸದಸ್ಯರ ವಿವರ, ಬ್ಯಾಂಕ್‌ ಖಾತೆ ವಿವರ ಮತ್ತು 14 ಅಂಶ ಘೋಷಣೆಯೊಂದಿಗೆ ಸಮೀಪದ ಗ್ಯಾಸ್‌ ಏಜೆನ್ಸಿಗೆ ವಿವರ ಸಲ್ಲಿಸಿದ ಫಲಾನುಭವಿಗಳು ಹಾಜರಾಗುವಂತೆ ಸೂಚಿಸ ಲಾಗಿದೆ.






error: Content is protected !!
Scroll to Top