ಕಡಬ ತಾಲೂಕು ಉದ್ಘಾಟನಾ ಪ್ರಕ್ರಿಯೆಯ ಹಿನ್ನೆಲೆ ► ಭೂಮಿ ಕೇಂದ್ರದಲ್ಲಿ ಸೆ.03 ರ ವರೆಗೆ ಪಹಣಿ ಪತ್ರ ನಿಲುಗಡೆ

(ನ್ಯೂಸ್ ಕಡಬ) newskadaba.com ಕಡಬ, ಆ.28. ನೂತನ ಕಡಬ ತಾಲೂಕು ಉದ್ಘಾಟನೆಗೊಳ್ಳಲಿರುವ ಕಾರಣ ಸುಳ್ಯ ಹಾಗೂ ಪುತ್ತೂರಿನ ಕೆಲವು ಗ್ರಾಮಗಳನ್ನು ಕಡಬ ಭೂಮಿ ಕೇಂದ್ರಕ್ಕೆ ಸೇರ್ಪಡೆ ಗೊಳಿಸಲಿರುವುದರಿಂದ ಸಾಫ್ಟ್‌ವೇರ್ ಅಳವಡಿಸುವ ಪ್ರಕ್ರಿಯೆ ನಡೆಯುತ್ತಿದ್ದು ಆಗಸ್ಟ್ 28 ರಿಂದ ಸೆಪ್ಟೆಂಬರ್ 03 ರ ವರೆಗೆ ಕಡಬ ಭೂಮಿ ಕೇಂದ್ರದಲ್ಲಿ ಪಹಣಿ ಪತ್ರ ದೊರೆಯುವುದಿಲ್ಲ.

ಈ ಬಗ್ಗೆ ಸಾರ್ವಜನಿಕರು ಸಹಕರಿಸಬೇಕೆಂದು ಕಡಬ ತಾಲೂಕು ತಹಶೀಲ್ದಾರರಾದ ಜಾನ್ ಪ್ರಕಾಶ್ ರೊಡ್ರಿಗಸ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

error: Content is protected !!

Join the Group

Join WhatsApp Group