(ನ್ಯೂಸ್ ಕಡಬ) newskadaba.com ಜೂ.19 ಕುಮಟಾದಿಂದ ತಿರುಪತಿ-ಕಾಚಿಗುಡ ರೈಲು ಸೇವೆ, 2ನೇ ಪ್ಲಾಟ್ಫಾರ್ಮ್ ಹಾಗೂ ಗೋಕರ್ಣ, ಭಟ್ಕಳ, ಮುರ್ಡೇಶ್ವರ ನಿಲ್ದಾಣಗಳ ಪ್ರಯಾಣಿಕ ಸೌಲಭ್ಯಗಳ ಉದ್ಘಾಟನೆ ಜೂನ್ 20ರಂದು ಮಧ್ಯಾಹ್ನ 2.30ಕ್ಕೆ ಕುಮಟಾ ನಿಲ್ದಾಣದಲ್ಲಿ ನಡೆಯಲಿದೆ.
ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ, ಶಾಸಕ ದಿನಕರ ಶೆಟ್ಟಿ ಹಾಗೂ ಕೊಂಕಣ ರೈಲ್ವೆ ಸಿಎಂಡಿ ಸಂತೋಷಕುಮಾರ ಝಾ ಉಪಸ್ಥಿತರಿರಲಿದ್ದಾರೆ.ಈ ರೈಲು ಪ್ರತಿ ಬುಧವಾರ ಮತ್ತು ಶನಿವಾರ ಕುಮಟಾದಿಂದ ಸಂಚರಿಸಲಿದ್ದು, ಭಕ್ತರಿಗೆ ಹಾಗೂ ಪ್ರವಾಸಿಗರಿಗೆ ನೇರ ಸಂಪರ್ಕ ಕಲ್ಪಿಸಲಿದೆ.
2ನೇ ಪ್ಲಾಟ್ಫಾರ್ಮ್ ಉದ್ಘಾಟನೆಯಿಂದ ಕುಮಟಾ ರೈಲು ನಿಲ್ದಾಣವು ಇನ್ಮುಂದೆ ಪ್ರಮುಖ ಟರ್ಮಿನಲ್ ಆಗಿ ಬದಲಾಗಲಿದೆ.ಜನಪ್ರತಿನಿಧಿಗಳ ವಿಶೇಷ ಶ್ರಮದಿಂದಾಗಿ ಮುರ್ಡೇಶ್ವರದವರೆಗೆ ಬರುತ್ತಿದ್ದ ಈ ರೈಲನ್ನು ಈಗ ಕುಮಟಾದವರೆಗೆ ವಿಸ್ತರಿಸಲಾಗಿದ್ದು, ಜಿಲ್ಲೆಯ ಜನತೆ ಹರ್ಷ ವ್ಯಕ್ತಪಡಿಸಿದ್ದಾರೆ.









