ಕಬ್ಬಿನ ಟ್ರ್ಯಾಕ್ಟರ್‌ ಗೆ ಕಾರು ಡಿಕ್ಕಿ ; 4 ಮಂದಿ ಸಾವು



(ನ್ಯೂಸ್ ಕಡಬ) newskadaba.com, ಡಿ.03 : ಜಮಖಂಡಿತಾಲ್ಲೂಕಿನ ಸಿದ್ದಾಪೂರ ಗ್ರಾಮದ ಪ್ರಭುಲಿಂಗೇಶ್ವರ ಸಕ್ಕರೆ ಕಾರ್ಖಾನೆ ಹತ್ತಿರ ಹೋಗುತ್ತಿರುವ ಕಬ್ಬಿನ ಟ್ರ್ಯಾಕ್ಟರ್‌ ಗೆ ಹಿಂಬದಿಯಲ್ಲಿ ಕಾರು ಡಿಕ್ಕಿ ಹೊಡೆದ ಪರಿಣಾಮ ಕಾರಿನಲ್ಲಿದ್ದ 4 ಜನ ಯುವಕರು ತಡರಾತ್ರಿ ಸಾವನಪ್ಪಿದ ಧಾರುಣ ಘಟನೆ ಸಂಭವಿಸಿದೆ.





ತಾಲೂಕಿನ ಸಿದ್ದಾಪೂರ ಗ್ರಾಮದ 4 ಜನ ಯುವಕರಾದ ವಿಶ್ವನಾಥ ಕುಂಬಾರ(17), ಪ್ರವೀಣ ಶೇಡಬಾಳ(22), ಗಣೇಶ ಅಳ್ಳಿಮಟ್ಟಿ( 20), ಪ್ರಜ್ವಲ್‌ ಶೇಡಬಾಳ(17) ಸಾವನಪ್ಪಿದ ದುರ್ದೈವಿಗಳು.ಸಿದ್ದಾಪೂರ ಗ್ರಾಮದಿಂದ ನಾಲ್ಕು ಜನ ಸ್ನೇಹಿತರು ಸೇರಿಕೊಂಡು ರಾತ್ರಿ ಶಿರೋಳ ಗ್ರಾಮದ ಕಾಡಸಿದ್ದೇಶ್ವರ ದೇವರ ಜಾತ್ರೆಗೆ ಹೋಗುತ್ತಿರುವ ಸಮಯದಲ್ಲಿ ಈ ಘಟನೆ ಸಂಭವಿಸಿದೆ ಎಂದು ಮಾಹಿತಿ ಲಭ್ಯವಾಗಿದೆ.






ಘಟನಾ ಸ್ಥಳಕ್ಕೆ ಜಮಖಂಡಿ ಗ್ರಾಮೀಣ ಪೋಲಿಸ್‌ ರು ಭೇಟಿ ನೀಡಿ ತನಿಖೆ ಮುಂದುವರಿಸಿದ್ದಾರೆ.4 ಜನ ಯುವಕರ ಶವಗಳನ್ನು ಜಮಖಂಡಿ ಸರಕಾರಿ ಉಪವಿಭಾಗಾಧ ಆಸ್ಪತ್ರೆಗೆ ಶವ ಪರಿಕ್ಷೇಗೆ ರವಾನಿಸಲಾಗಿದೆ.ಸರಕಾರಿ ಉಪವಿಭಾಗ ಆಸ್ಪತ್ರೆಗೆ ಜಿಲ್ಲಾ ಎಸ್‌ ಪಿ. ಸಿದ್ಧಾರ್ಥ ಗೋಯಲ್‌ ಅವರು ಭೇಟಿ ನೀಡಿ. ತನಿಖೆಯನ್ನು ಮುಂದುವರಿಸಿದ್ದಾರೆ.

ಮಾಜಿ ಶಾಸಕ ಆನಂದ ನ್ಯಾಮಗೌಡ ಸರಕಾರಿ ಆಸ್ಪತ್ರೆಗೆ ಭೇಟಿ ಕುಟುಂಬಸ್ಥರಿಗೆ ಸಾಂತ್ವನ ತಿಳಿಸಿದರು.ಸಿದ್ದಾಪೂರದಲ್ಲಿ 4 ಜನ ಯುವಕರು ಸಾವನ್ನಪ್ಪಿದ ಹಿನ್ನೆಲೆಯಲ್ಲಿ ಇಡೀ ಗ್ರಾಮವೇ ನಿರವ ಮೌನ ಆವರಿಸಿದೆ.ಕುಟುಂಬಸ್ಥರ ಅಕ್ರಂದಣ ಮುಗಿಲು ಮುಟ್ಟುವಂತೆ ಇತ್ತು.

 

 

error: Content is protected !!
Scroll to Top