(ನ್ಯೂಸ್ ಕಡಬ) newskadaba.com ಜೂ. 21. ಜೂನ್ ತಿಂಗಳಲ್ಲಿ ನಂದಿ ಬೆಟ್ಟದಲ್ಲಿ ನಡೆಯಬೇಕಾಗಿದ್ದ ರಾಜ್ಯ ಸಚಿವ ಸಂಪುಟ ಸಭೆಯನ್ನು ಕಾರಣಾಂತರಗಳಿಂದ ಮುಂದೂಡಲಾಗಿದ್ದು, ಇದೀಗ ಆ ಸಭೆಯನ್ನು ಜುಲೈ 3 ರಂದು ನಡೆಸಲು ನಿರ್ಧರಿಸಿರುವುದಾಗಿ ತಿಳಿದುಬಂದಿದೆ.
ಆಗಸ್ಟ್ 11 ರಿಂದ ವಿಧಾನ ಮಂಡಲದ ಮುಂಗಾರು ಅಧಿವೇಶನ ನಡೆಯಲಿದ್ದು, ಎರಡು ವಾರಗಳ ಕಾಲ ಅದು ನಡೆಯಲಿದೆ.













