2024-25ನೇ ಸಾಲಿನ ತುಳುಕೂಟದ ಅಧ್ಯಕ್ಷರಾಗಿ ಜಯಕರ ಶೆಟ್ಟಿ ಇಂದ್ರಾಳಿ ಆಯ್ಕೆ



(ನ್ಯೂಸ್ ಕಡಬ) newskadaba.com ಉಡುಪಿ, ಸೆ. 23. ಸಾಂಸ್ಕೃತಿಕ ಸಂಘಟನೆ ತುಳುಕೂಟ, ಉಡುಪಿ ಇದರ 2024-25ನೇ ಸಾಲಿನ ನೂತನ ಅಧ್ಯಕ್ಷರಾಗಿ ಜಯಕರ ಶೆಟ್ಟಿ ಇಂದ್ರಾಳಿ ಆಯ್ಕೆಯಾಗಿದ್ದಾರೆ. ಉಡುಪಿಯ ಜಗನ್ನಾಥ ಸಭಾಭವನದಲ್ಲಿ ನಡೆದ ಸಂಸ್ಥೆಯ ವಾರ್ಷಿಕ ಮಹಾಸಭೆಯಲ್ಲಿ ನೂತನ ಪದಾಧಿಕಾರಿಗಳನ್ನು ನೇಮಿಸಲಾಯಿತು.







ಸಂಸ್ಥೆಯ ಇತರ ಪದಾಧಿಕಾರಿಗಳಾದ ಸಂಸ್ಥಾಪಕ ಅಧ್ಯಕ್ಷ ಡಾ.ಭಾಸ್ಕರಾನಂದ್ ಕುಮಾರ್, ಪ್ರಧಾನ ಕಾರ್ಯದರ್ಶಿ ಗಂಗಾಧರ ಕೆಡಿಯೂರು, ಖಜಾಂಚಿ ಚೈತನ್ಯ ಎಂ.ಜಿ, ಉಪಾಧ್ಯಕ್ಷರಾದ ಭುವನಪ್ರಸಾದ್ ಹೆಗ್ಡೆ, ಮನೋಹರ್ ಶೆಟ್ಟಿ ತೋನ್ಸೆ, ದಿವಾಕರ ಸನಿಲ್, ರಶ್ಮಿ ಶೆಣೈ, ಜಂಟಿ ಕಾರ್ಯದರ್ಶಿಗಳಾದ ಜ್ಯೋತಿ ಎಸ್.ದೇವಾಡಿಗ, ಸಂತೋಷ್ ಕುಮಾರ್, ಪ್ರಸನ್ನಕುಮಾರ್ ಇದ್ದರು. , ಸಂಘಟನಾ ಕಾರ್ಯದರ್ಶಿಗಳಾದ ಮೋಹನ್ ಶೆಟ್ಟಿ ಮೂಡನಿಡಂಬೂರು, ವಿದ್ಯಾ ಸರಸ್ವತಿ, ಉದಯ ಕುಮಾರ್ ತೆಂಕನಿಡಿಯೂರು.ಸಂಸ್ಥೆಯ ಸಲಹಾ ಮಂಡಳಿಯಲ್ಲಿ ವಿಶ್ವನಾಥ ಶೆಣೈ, ಮುರಳೀಧರ ಉಪಾಧ್ಯ, ಡಾ.ಗಣಂತ್ ಎಕ್ಕಾರ್, ಎಸ್.ಎ.ಕೃಷ್ಣಯ್ಯ, ಬನ್ನಂಜೆ ಬಾಬು ಅಮೀನ್, ಮನೋರಮಾ ಶೆಟ್ಟಿ, ಎಸ್.ವಿ.ಭಟ್, ರವಿಶಂಕರ್ ರೈ, ಶಾಂತಾರಾಮ ಶೆಟ್ಟಿ ಭಾಗವಹಿಸಿದ್ದು, ಕಾರ್ಯಕಾರಿ ಸಮಿತಿಗೆ 40 ಸದಸ್ಯರನ್ನು ಆಯ್ಕೆ ಮಾಡಲಾಗಿದೆ.






 

error: Content is protected !!
Scroll to Top