ಕಡಬ: ‘ಸುಂದರ್ ಸೆಲೆಕ್ಷನ್’ ಹವಾನಿಯಂತ್ರಿತ ವಸ್ತ್ರ ಮಳಿಗೆ ಶುಭಾರಂಭ

(ನ್ಯೂಸ್ ಕಡಬ) newskadaba.com ಕಡಬ, ಎ.03. ಇಲ್ಲಿನ ಮಹಾಗಣಪತಿ ದೇವಸ್ಥಾನ ರಸ್ತೆಯ ಸೌರಭ ಟವರ್ಸ್ ನಲ್ಲಿ ಸುಂದರ್ ಸೆಲೆಕ್ಷನ್ ಹವಾನಿಯಂತ್ರಿತ ವಸ್ತ್ರ ಮಳಿಗೆಯು ಇತ್ತೀಚೆಗೆ ಶುಭಾರಂಭಗೊಂಡಿತು.

ನೂತನ ಮಳಿಗೆಯನ್ನು ಆರಿಕ್ಕೋಡಿ ಶ್ರೀ ಚಾಮುಂಡೇಶ್ವರಿ ಕ್ಷೇತ್ರದ ಧರ್ಮದರ್ಶಿಗಳಾದ ಹರೀಶ್ ದೀಪ ಬೆಳಗಿಸುವ ಮೂಲಕ ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಸುಂದರ್ ಸೆಲೆಕ್ಷನ್ ನ ಮಾಲಕರ ಮಾತೃಶ್ರೀ ಶ್ರೀಮತಿ ಗೌರಿ, ಉದಯಗಿರಿ ಟ್ರೇಡರ್ಸ್ ನ ಮಾಲಕರಾದ ಪದ್ಮರಾಜ್ ಗೌಡ, ಶ್ರೀ ದುರ್ಗಾ ಎಲೆಕ್ಟ್ರಿಕಲ್ಸ್ ಮಾಲಕರಾದ ಸುನಿಲ್‌ ಕೆ., ಸಂತೃಪ್ತಿ ಇಮಿಟೇಶನ್ ಜ್ಯುವೆಲ್ಲರಿ‌ ಮಾಲಕರಾದ ರಾಮಚಂದ್ರ ಭಟ್, ನ್ಯೂ ಅಶ್ವಿನಿ ಇಲೆಕ್ಟ್ರಾನಿಕ್ಸ್ ಉಪ್ಪಿನಂಗಡಿಯ ಮಾಲಕರಾದ ಗಣೇಶ್ ಬಿ., ಆರ್.ಎಚ್.ಸೆಂಟರ್ ಮ್ಯಾನೇಜರ್ ಉಮೇಶ್, ಉಪ್ಪಿನಂಗಡಿ ಠಾಣಾ ಹೆಡ್ ಕಾನ್ಸ್‌ಟೇಬಲ್ ಪ್ರವೀಣ್ ಕೆ.ಎಲ್., ಬಾಲಾಜಿ ಪವರ್ ಸಿಸ್ಟಮ್ ಮಾಲಕರಾದ ವೆಂಕಟೇಶ್ ಪಾಡ್ಲ, ರಮ್ಯಾ ವೆಂಕಟೇಶ್ ಪಾಡ್ಲ, ಮಾ| ಕೃತನ್ ಪಾಡ್ಲ, ಮಾ| ಅಧ್ವೀಶ್ ಪಾಡ್ಲ, ಪ್ರಮುಖರಾದ ಬಾಲಕೃಷ್ಣ ಗೌಡ, ಶ್ರೀನಿವಾಸ ಗೌಡ, ಬಾಬು ಗೌಡ, ಶಾಂತಪ್ಪ ಗೌಡ, ಪ್ರಸಾದ್ ಗೌಡ, ನಿತೀಶ್ ಎನ್ಕಾಜೆ, ಕಾರ್ತಿಕ್, ಮನೋಜ್ ವಿಷ್ಣು ಡೆಕೊರ್, ಸೋಹನ್ ಗೌಡ, ಸೋನಿಕ, ಶ್ರೇಯಾ, ನವೀನ್ ಗೌಡ, ಶೋಭಾ, ಭಾರತಿ, ಚಂದ್ರಾವತಿ, ವಸಂತಿ, ರಾಜೇಶ್, ಸೇವಂತಿ, ನವ್ಯಶ್ರೀ ಮೊದಲಾದವರು ಉಪಸ್ಥಿತರಿದ್ದರು.

ಸಂಸ್ಥೆಯ ಮಾಲಕರಾದ ಚೇತನ್ ಗೌಡ, ಚಂದ್ರ ಮೋಹನ್ ಗೌಡ, ಕಿರಣ್ ಗೌಡ ಅತಿಥಿಗಳನ್ನು ಸ್ವಾಗತಿಸಿದರು. ನೂತನ ಸಂಸ್ಥೆಯಲ್ಲಿ ಪುರುಷರ, ಮಹಿಳೆಯರ ಹಾಗೂ ಮಕ್ಕಳ ಎಲ್ಲಾ ತರಹದ ಸಿದ್ಧ ಉಡುಪುಗಳು ಮಿತ ದರದಲ್ಲಿ ಒಂದೇ ಸೂರಿನಡಿ ದೊರೆಯಲಿದೆ. ಸ್ಪೋರ್ಟ್ಸ್ ಟಿ-ಶರ್ಟ್ಸ್, ಕಲರ್ ಕೋಡ್ ವಸ್ತ್ರಗಳಿಗಾಗಿ 9880360823 ಸಂಖ್ಯೆಯನ್ನು ಸಂಪರ್ಕಿಸಬಹುದಾಗಿದೆ.

Also Read  ಕುಕ್ಕೆ ಶ್ರೀ ಸುಬ್ರಹ್ಮಣ್ಯ ಕ್ಷೇತ್ರಕ್ಕೆ ತೆರಳುತ್ತಿದ್ದ ಪಾದಯಾತ್ರಿಕರಿಗೆ ► ಕುಂತೂರು ಶ್ರೀ ಶಾರದಾ ಭಜನಾ ಮಂದಿರದಲ್ಲಿ ಮಧ್ಯಾಹ್ನದ ಭೋಜನದ ವ್ಯವಸ್ಥೆ

error: Content is protected !!
Scroll to Top