ವಿದ್ಯುತ್ ತಂತಿ ಸ್ಪರ್ಶ- 10ರ ಬಾಲಕನ ದುರಂತ ಅಂತ್ಯ..!

(ನ್ಯೂಸ್ ಕಡಬ) newskadaba.com ತುಮಕೂರು, ಸೆ. 18. ಆಟವಾಡುತ್ತಿದ್ದ ವೇಳೆ ವಿದ್ಯುತ್‌ ತಂತಿ ಸ್ಪರ್ಶಿಸಿ ಬಾಲಕನೋರ್ವ ಮೃತಪಟ್ಟ ಘಟನೆ ಕುಣಿಗಲ್ ಪಟ್ಟಣದಲ್ಲಿ ವರದಿಯಾಗಿದೆ.

ಮೃತ ಬಾಲಕನನ್ನು ಋತ್ವಿಕ್‌ (10) ಎಂದು ಗುರುತಿಸಲಾಗಿದೆ.ರವಿವಾರದಂದು ಮನೆ ಸಮೀಪದ ನಿವೇಶನ ಒಂದರಲ್ಲಿ ಆಟವಾಡುತ್ತಿದ್ದ ಋತ್ವಿಕ್ ಸಮೀಪದಲ್ಲಿದ್ದ ವಿದ್ಯುತ್ ತಂತಿಯನ್ನು ಮೆಟ್ಟಿದ್ದ. ಆಗ ವಿದ್ಯುತ್ ಪ್ರವಹಿಸಿ ದುರಂತ ಸಂಭವಿಸಿದೆ ಎನ್ನಲಾಗಿದೆ. ಕುಣಿಗಲ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.

Also Read  ಮಂಗಳೂರು : ತಡರಾತ್ರಿ ತಲವಾರ್ ಹಿಡಿದು ದಾಂಧಲೆ

error: Content is protected !!
Scroll to Top